ಮಾನವೀಯತೆ ಮರೆತ ವ್ಯಾಪಾರಿಗಳಿಗೆ ಜನರ ಹಿಡಿ ಶಾಪ..!

ಮುಖ್ಯಾಂಶಗಳು

ಕರೊನಾ ಸಂಕಷ್ಟದಲ್ಲಿ ದುಡ್ಡು ಮಾಡುವ ದುರಾಸೆಗಿಳಿದ ಆಸೆ ಬುರುಕ ವ್ಯಾಪಾರಿಗಳು.

ಸಾಮಗ್ರಿಗಳ ಕೊರತೆ ಇದೆ ಎಂಬ ನೆಪ / ಚಿತೆಯಲ್ಲಿ ಬೀಡಿ ಅಂಟಿಸಿಕೊಳ್ಳುವ ದುರಾಲೋಚನೆ

ಅನಿವಾರ್ಯವಾಗಿ ಖರೀದಿಸಬೇಕಾದ ಜನತೆಯಿಂದ ಹಿಡಿ ಶಾಪ 

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ಬಡವರು

ದೊಡ್ಡಬಳ್ಳಾಪುರ : ಕರೊನಾ ಸೋಂಕಿನ ಹಿನ್ನಲೆ ಘೋಷಿಸಲಾದ ಲಾಕ್ ಡೌನ್ ಕಾರಣ ತರಕಾರಿ-ದಿನಸಿ ಸಾಮಗ್ರಿಗಳ ಬೆಲೆ ಹೆಚ್ಚಳದಿಂದ ಜನ ಪರಿತಪಿಸುವಂತಾಗಿದೆ.

ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಕೊರತೆ ಇದೆ ಎಂಬ ನೆಪದಲ್ಲಿ ಮಾರಾಟಗಾರರು ಹಣ್ಣು,ತರಕಾರಿ, ಪಲ್ಯ, ದಿನಸಿ,ಕೋಳಿ ಸಾಮಗ್ರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ.ಅನಿವಾರ್ಯವಾಗಿ ಜನರು ಹೆಚ್ಚಿನ ದರ ನೀಡಿ ಖರೀದಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದ್ದು,ಒಂದೆಡೆ ಕರೊನಾ ಹಾಗೂ ಇನ್ನೊಂದೆಡೆ ಮಾನವೀಯತೆ ಮರೆತು ದರ ಹೆಚ್ಚಳ ಮಾಡಿರುವ ವ್ಯಾಪಾರಸ್ಥರಿಗೆ ಜನ ಹಿಡಿಶಾಪ ಹಾಕತೊಡಗಿದ್ದಾರೆ.

5 – 15 ರೂ. ಬೆಲೆ ಏರಿಕೆ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ ಎಂಬ ನೆಪವೊಡ್ಡಿ ಸಗಟು ಮಾರಾಟಗಾರ 1ರೂ ಬೆಲೆ ಏರಿಕೆ ಮಾಡಿದರೆ.ಚಿಲ್ಲರೆ ಮಾರಾಟಗಾರರು 5 ರಿಂದ 10ರೂ ಬೆಲೆ ಏರಿಕೆ ಮಾಡಿ ಜನತೆ ಸಂಕಷ್ಟದಲ್ಲಿ ಬಸವಳಿಯುತ್ತಿದ್ದರೆ,ಇಂತಹ ಸಂದರ್ಭದಲ್ಲಿ ಮಾನವೀಯತೆ ಮರೆತು ದುಡ್ಡು ಮಾಡುವ ದಂದೆಗಿಳಿದಿದ್ದಾರೆ.

ಪ್ರಸ್ತುತ ಪ್ರತಿ ಕೆಜಿಗೆ ಸಕ್ಕರೆ 4-5ರೂ,ತೊಗರಿ ಬೇಳೆ 4-8 ರೂ, ಎಣ್ಣೆ 10-15 ರೂ, ರವಾ-ಅಕ್ಕಿ ಸೇರಿದಂತೆ ಎಲ್ಲವೂ ಕೆಜಿಗೆ 5 ರಿಂದ 15 ರೂ. ಗಳವರೆಗೆ ಏರಿಕೆ ಕಂಡಿವೆ. ಇನ್ನು ತರಕಾರಿಯೂ ತುಟ್ಟಿಯಾಗಿದ್ದು, ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ಕಿತ್ತಳೆ 80 ರೂ. ಕೆಜಿ, ದ್ರಾಕ್ಷಿ 80-100 ರೂ.ಗಳು, ಕರಬೂಜ 50 ರೂ. ಗಳಿಗೆ ಒಂದು, ಕಲ್ಲಂಗಡಿ ಸಣ್ಣದು 50ರೂ. ಹಾಗೂ ದೊಡ್ಡದು 80-100 ರೂ., ಸೇಬು 80-150 ರೂ.ಗಳು, ಯಾಲಕ್ಕಿ ಬಾಳೆ ಕೆಜಿ 60 ರೂ.ಗಳಿಗೆ ಮಾರಾಟವಾಗ್ತಿವೆ.

ಸಿಗರೇಟ್ ಮಾರಾಟದಲ್ಲಿ ಸುಲಿಗೆ

ಆಹಾರ ಪದಾರ್ಥ,ಮತ್ತೊಂದೆಡೆ ಮದ್ಯ ಮಾರಾಟದಲ್ಲಿ ಬೆಲೆ ಏರಿಕೆಯಾದರೆ ಅಲ್ಲೊಂದು ಆಕ್ರಂದನ ಯಾರಿಗೂ ಕೇಳಿಸದಾಗಿದೆ.ಲಾಕ್ ಡೌನ್ ಆರಂಭವಾದಾಗಿನಿಂದ ಧೂಮಪಾನಿಗಳ ಜೇಬನ್ನು ಹಾಡು ಹಗಲೆ ಕತ್ತರಿ ಹಾಕುತ್ತಿರುವ ಸಿಗರೇಟ್ ಮಾರಾಟಗಾರರು.10 ರ ಬೆಲೆಗೆ 20,16ರ ಬೆಲೆಯ ಸಿಗರೇಟಿಗೆ 30ರೂಗೆ ಮಾರುವ ಮೂಲಕ ರಾಜಾರೋಶವಾಗಿ ಹಗಲು ಸುಲಿಯನ್ನು ನಡೆಸುತ್ತಿದ್ದರು ಧೂಮಪಾನಿಗಳು ಮಾತ್ರ ಯಾರಿಗೂ ಹೇಳಲಾಗದೆ ಮೌನ ವ್ಯಥೆ ಪಡುತ್ತಿದ್ದಾರೆ.

ಇಡೀ ದೇಶವೇ ಸಂಕಷ್ಟದಲ್ಲಿರುವಾಗ.ಚಿತೆಯಲ್ಲಿ ಬೀಡಿ ಅಂಟಿಸಿಕೊಳ್ಳುವ ದುರಾಲೋಚನೆಗೆ ಇಳಿದಿರುವ ವ್ಯಾಪಾರಿಗಳಿಗೆ ಜನರ ಶಾಪ ತಟ್ಟದೇ ಇರುವುದೆ…?

ನುಂಗಲಾರದ ತುತ್ತಾಗಿದೆ.

ಕರೊನಾ ಸೋಂಕು ತಡೆಗೆ ಹೋರಾಟ ನಡೆಸುತ್ತಿರುವಾಗಲೇ ಬೆಲೆ ಏರಿಕೆ ಎನ್ನುವುದು ಸಾರ್ವಜನಿಕರನ್ನು ಬಾಧಿಸತೊಡಗಿದೆ. ಏನೇ ಖರೀದಿಸಲು ಹೋದರೂ ಈ ಹಿಂದಿಗಿಂತಲೂ ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು – ರಾಜ್‌ವಡ್ಡಳ್ಳಿ,ಸಾರ್ವಜನಿಕ,ದೊಡ್ಡಬಳ್ಳಾಪುರ

ಸಾರಿಗೆ ವೆಚ್ಚ ಹೆಚ್ಚು.

ಎಲ್ಲೆಡೆ ಲಾಕ್‌ಡೌನ್ ಆಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳ ಓಡಾಟ ಇಲ್ಲವಾಗಿದೆ. ಇದರಿಂದ ಇರುವಷ್ಟು ದಾಸ್ತಾನು ಖಾಲಿ ಮಾಡಲಾಗುತ್ತಿದ್ದು, ಜೊತೆಯಲ್ಲಿಯೇ ಎಪಿಎಂಸಿಯಿಂದ ದಾಸ್ತಾನು ತರಿಸಿಕೊಳ್ಳಬೇಕು. ಇದಕ್ಕಾಗಿ ಸಣ್ಣ ವಾಹನದ ಮೊರೆ ಹೋಗುತ್ತಿದ್ದು, ಅವರು ಬಾಡಿಗೆ ದರವನ್ನು ಏರಿಸಿದ್ದಾರೆ. ಒಂದು ಟನ್‌ಗೆ ಸುಮಾರು 50-100 ರೂ.ಗಳವರೆಗೆ ಏರಿಕೆ ಮಾಡಿದ್ದು, ಇದರಿಂದ ಅನಿವಾರ್ಯವಾಗಿ ಬೆಲೆ ಏರಿಕೆಯಾಗುತ್ತಿದೆ. ಇದು ಕೂಡಾ ಗ್ರಾಹಕರ ಮೇಲೆ ಬೀಳುತ್ತಿದೆ – ಹೆಸರು ಹೇಳಲಿಚ್ಛಿಸದ ವ್ಯಾಪಾರಿ

ರಾಜಕೀಯ

ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ಜೆಡಿಎಸ್

ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಿದ ಜೆಡಿಎಸ್

ಜೆಡಿಎಸ್ (JDS) ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ನಾಳೆಯಿಂದ (ಜೂನ್‌ 16) ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಸೋಮವಾರ ತುಮಕೂರು ಜಿಲ್ಲೆಯಿಂದ ಅಧಿಕೃತ ಆರಂಭ..

[ccc_my_favorite_select_button post_id="109279"]
RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಆರ್ ಅಶೋಕ ಪತ್ರ

RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಆರ್ ಅಶೋಕ

IPL ಕಪ್ ಗೆದ್ದ RCB ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಅನಾಹುತ ತಡೆಯಬಹುದಾದ ದುರಂತವಾಗಿತ್ತು ತುರ್ತು ಮಧ್ಯಸ್ಥಿಕೆ

[ccc_my_favorite_select_button post_id="109057"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಆಸ್ತಿಗಾಗಿ ಜೀವಂತ ತಾಯಿಯ ಡೆತ್ ಸರ್ಟಿಫಿಕೇಟ್ ಪಡೆದ ಪುತ್ರನ ಬಂಧನ!

ಆಸ್ತಿಗಾಗಿ ಜೀವಂತ ತಾಯಿಯ ಡೆತ್ ಸರ್ಟಿಫಿಕೇಟ್ ಪಡೆದ ಪುತ್ರನ ಬಂಧನ!

ಹೆತ್ತ ತಾಯಿ ಬದುಕಿರುವಾಗಲೇ ಸುಳ್ಳು ಅರ್ಜಿ ನೀಡಿ ಮರಣ ಪ್ರಮಾಣಪತ್ರ (Death certificate) ಪಡೆದು ಆಸ್ತಿ ಕಬಳಿಸಲು ಪ್ರಯತ್ನಿಸಿದ ಪುತ್ರನ ಪೊಲೀಸರು ಬಂಧಿಸಿರುವ ಘಟನೆ

[ccc_my_favorite_select_button post_id="109202"]
ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ದೊಡ್ಡಬಳ್ಳಾಪುರ: ಕಾರು ಡಿಕ್ಕಿ.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ರಸ್ತೆ ಬದಿ ಸಾಗುತ್ತಿದ್ದವರಿಗೆ ಡಿಕ್ಕಿ ಹೊಡೆದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಟ್ರಂಚ್‌ಗೆ ಡಿಕ್ಕಿ ಹೊಡೆದ ಅಪಘಾತದಲ್ಲಿ (Accident)

[ccc_my_favorite_select_button post_id="109282"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]