ದೊಡ್ಡಬಳ್ಳಾಪುರ: ನಗರದ ಆಸ್ಪತ್ರೆಯಲ್ಲಿ 40 ಹಾಸಿಗಳಲ್ಲಿ ಕರೊನಾ ಸೋಂಕು ಚಿಕಿತ್ಸೆ ನೀಡಲು ಅವಕಾಶವಿದ್ದು ಸೋಂಕು ಹೆಚ್ಚಾದರೆ ನಗರದ ಹೊರವಲಯದ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡುವುದು ಅನಿವಾರ್ಯತೆ ಉಂಟಾಗಲಿದೆ ಎಂದು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಡಿ.ಸಿ.ಶಶಿಧರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನೆ ಸಭೆಯಲ್ಲಿ ಅವರು ಮಾಹಿತಿ ನೀಡಿ ಮಾತನಾಡಿದರು.
ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸ್ತುತ 20 ಹಾಸಿಗೆಗಳು ಕರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಲಭ್ಯತೆಯಿದೆ,ಇನ್ನು ಇಪ್ಪತ್ತು ಹಾಸಿಗೆಗಳನ್ನು ಸಿದ್ದತೆ ಮಾಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಾದರೆ ನಗರದ ಹೊರವಲಯದಲ್ಲಿರುವ ವಸತಿ ಶಾಲೆಗಳಲ್ಲಿ ಚಿಕಿತ್ಸೆ ನೀಡಬೇಕಾಗುವುದು.ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಈ ವೇಳೆ ಮಾತನಾಡಿದ ಅಧ್ಯಕ್ಷ ಡಿ.ಸಿ.ಶಶಿಧರ್,ಕರೊನಾ ಸೋಂಕು ತಡೆಗೆ ತಾಲೂಕುಪಂಚಾಯಿತಿ ಸದಸ್ಯರ ಸಂಪೂರ್ಣ ಸಹಕಾರವಿದ್ದು,ತಾಪಂವತಿಯಿಂದ ಕರೊನಾ ತಡೆಗಟ್ಟಲು ಜನಜಾಗೃತಿ ಮೂಡಿಸಲಾಗುವುದೆಂದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ತಾಲೂಕುಪಂಚಾಯಿತಿಗೆ ಅನುಬಂಧಿತ ಅನುದಾನ ಎರಡು ಕೋಟಿ ಬಂದಿದ್ದು,ಸದಸ್ಯರ ಸಲಹೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುವುದೆಂದರು.
5ಲಕ್ಷ ಅನುದಾನ ಬಳಕೆಯಾಗದೆ ವಾಪಸ್…!
ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿಗಳಿಗೆ ವಿದ್ಯುತ್ ಮೀಟರ್ ಅಳವಡಿಕೆ ಮೀಸಲಾಗಿದ್ದ 5ಲಕ್ಷ ಅನುಧಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್ ಹೋಗಿದ್ದು,ಅಧಿಕಾರಿಗಳನ ನಡುವಿನ ಸಮನ್ವಯತೆಯ ಕೊರತೆಯೋ ಅ ಬೇಜವಬ್ದಾರಿ ಕಾರಣವೋ ಎಂದು ಸದಸ್ಯರಾದ ಶಂಕರಪ್ಪ,ನಾರಾಯಣ ಗೌಡ,ಕಣಿವೇಪುರ ಸುನೀಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಅನುದಾನ ಸಿಗುವುದೇ ಕಷ್ಟ ಅಂತದರಲ್ಲಿ ಬಂದ ಅನುದಾನ ವಾಪಸ್ ತೆರಳಿರುವುದಕ್ಕೆ ಹೊಣೆಯಾರು ಎಂದು ನಾರಾಯಣಗೌಡ ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್,ಮಾ.31ರ ಒರೆಗೂ ಕಾಯದೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ತಾಲೂಕಿನ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು.
ಬಾಲ್ಯವಿವಾಹ ತಡೆಗೆ ಶ್ರಮಿಸಿ
ತಾಲೂಕಿನಲ್ಲಿ 11 ಬಾಲ್ಯವಿವಾಹ ತಡೆಯಲಾಗಿದೆ ಎಂದು ವರದಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ ಸದಸ್ಯರಾದ ನಾರಾಯಣಗೌಡ,ಕಣೀವೆಪುರ ಸುನೀಲ್ ಕುಮಾರ್ ಹಾಗೂ ಮುತ್ತುಲಕ್ಷ್ಮೀ ವೆಂಕಟೇಶ್.ತಾಲೂಕಿನಲ್ಲಿ 11ಬಾಲ್ಯವಿವಾಹ ತಡಯಲಾಗಿದೆ ಎಂದು ಸಿಡಿಪಿಒ ಅವರು ಮಾಹಿತಿ ನೀಡಿದ್ದಾರೆ ಆದರೆ ಅಷ್ಟೋಂದ್ ಪ್ರಕರಣಗಳು ಹೇಗೆ ಸಾಧ್ಯ..? ತಾಲೂಕಿನಲ್ಲಿ ಬಾಲ್ಯವಿವಾಹ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಕಾಳಜಿವಹಿಸಬೇಕು.
ಅಲ್ಲದೆ.ಬಾಲ್ಯವಿವಾಹ ತಡೆಗೆ ಕೇವಲ ದೂರು ಬಂದಾಗ ಮಾತ್ರ ಕಾರ್ಯ ಮಗ್ನರಾಗದೆ ಸ್ಥಳೀಯ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವನ್ನು ಪಡೆದು ಬಾಲ್ಯ ವಿವಾಹ ತಡೆಗೆ ಹೆಚ್ಚಿನ ಒತ್ತು ನೀಡುವಂತೆ ಸಿಡಿಪಿಒ ಅನಿತಾ ಅವರಿಗೆ ಸದಸ್ಯರು ಒತ್ತಾಯಿಸಿದರು.
ಬಿಇಒ ಬೈಯಪ್ಪರೆಡ್ಡಿ ಮಾಹಿತಿ ನೀಡಿ, ಶಾಲಾ ಆಸ್ತಿಗಳ ಬಗ್ಗೆ ತಕರಾರಿದ್ದು,ಸರ್ಕಾರಿ ಶಾಲೆಗಳು ಶೇ.60 ಶಾಲೆಯ ಹೆಸರಲ್ಲಿ ಇಲ್ಲವಾಗಿದೆ.ಕೆಲ ದಾನಿಗಳು 30/40 ವರ್ಷಗಳಿಂದೆ ಕೊಟ್ಟಿರುವುದು ನೊಂದಣಿಯಾಗದೆ ಉಳಿದಿದೆ.ದಾನ ಕೊಟ್ಟಿರುವ ಕೆಲ ಶಾಲೆಗಳಿಗೆ ದಾಖಲೆ ಇಲ್ಲ.ಇನ್ನು ದಾನ ನೀಡಿರುವವರು ಕಾಲವಾಗಿ ಪ್ರಸ್ತುತ ವಾರಸುದಾರರು ಶಾಲೆಯ ಸ್ವಾಧೀನಕ್ಕೆ ಒಪ್ಪುತ್ತಿಲ್ಲದಂತಹ ತಾಲೂಕಿನಲ್ಲಿ 80 ಪ್ರಕರಣಗಳಿವೆ.ಇದರಲ್ಲಿ 7ಪ್ರಕರಣಗಳನ್ನು ಮನ ಒಲಿಸಿ ನೊಂದಣಿಗೆ ಒಪ್ಪಿಸಲಾಗಿದೆ ಎಂದರು.
ಸಮಸ್ಯೆ ಬಗೆಹರಿಸಲು 80 ಶಾಲೆಗಳ ಪಟ್ಟಿ ಪಡೆದು ಸಿಇಒ ಮೂಲಕ ಡಿಸಿ ಅವರಿಗೆ ತಲುಪಿಸಲಾಗುವುದೆಂದು ಅಧ್ಯಕ್ಷ ಶಶಿಧರ್ ಭರವಸೆ ನೀಡಿದರು.
ಬಿಇಒ / ಟಿಹೆಚ್ಒ ಕಾರ್ಯ ಪ್ರಶಂಸನೀಯ – ಕಣಿವೇಪುರ ಸುನೀಲ್ ಕುಮಾರ್
ಕರೊನಾ ಸಂಕಷ್ಟದ ನಡುವೆಯೂ ಎಸ್.ಎಸ್.ಎಲ್.ಸಿ ಪರೀಕ್ಷೆ ನಿರ್ವಹಣೆಯಲ್ಲಿ ಬಿಇಒ ಬೈಯಪ್ಪರೆಡ್ಡಿ ಅವರ ತಂಡದ ಕಾರ್ಯ ಹಾಗೂ ಕರೊನಾ ಸೋಂಕು ನಿರ್ವಹಣೆಯಲ್ಲಿ ಆರೋಗ್ಯಾಧಿಕಾರಿ ಪರಮೇಶ್ವರ ಕಾರ್ಯ ಪ್ರಶಂಸನೀಯವಾಗಿದೆ ಎಂದು ಕಣಿವೇಪುರ ಸುನೀಲ್ ಕುಮಾರ್ ತಿಳಿಸಿದರೆ.ಸಭೆಯಲ್ಲಿದ್ದವರು ಚಪ್ಪಾಳೆ ಮೂಲಕ ಪ್ರಶಂಸೆ ವ್ಯಕ್ತಪಡಿಸಿದರು.
ಉಳಿದಂತೆ ಅರಣ್ಯ ಇಲಾಖೆವತಿಯಿಂದ ಶಾಲಾ ಕಾಲೇಜುಗಳ ವ್ಯಾಪ್ತಿಯ ಆವರಣದಲ್ಲಿ ಗಿಡ ನೆಡುವುದಕ್ಕೆ ಸೂಚನೆ.ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಬೋರ್ ವೆಲ್ ಕೊರೆಸುವುದು,ಅಥವಾ ಟ್ರಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಮತ್ತಿತರ ವಿಚಾರಗಳನ್ನು ಚರ್ಚಿಸಲಾಯಿತು.
ಈ ವೇಳೆ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ,ಇಒ ಮುರುಡಯ್ಯ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚೆನ್ನಮ್ಮರಾಮಲಿಂಗಯ್ಯ,ಸಹಾಯಕ ನಿರ್ದೇಶಕಿ ಸಿ.ಗೀತಾಮಣಿ ಸೇರಿದಂತೆ ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.