ಜಿಲ್ಲಾ ಆರೋಗ್ಯ ಇಲಾಖೆಯ ಕರೊನಾ ಮಾಹಿತಿ ಗೊಂದಲ,ಗಣ್ಯರ ಆಕ್ಷೇಪ..!

ಹರಿತಲೇಖನಿ ದೊಡ್ಡಬಳ್ಳಾಪುರ: ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಕರೊನಾ ಸೋಂಕಿನ ಮಾಹಿತಿ ನೀಡುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಮುಚ್ಚಿಟ್ಟು, ಗೊಂದಲ ಮೂಡಿಸುತ್ತಿದೆ ಎಂದು ತಾಲೂಕಿನ ಗಣ್ಯರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 40 ಕರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದರೆ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆಮಾಡಿರುವ ವರದಿಯಲ್ಲಿ ಕೇವಲ ಮೂರು ಪ್ರಕರಣಗಳೆಂದು ನಮೂದಾಗಿರುವುದಕ್ಕೆ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು,ಸರಕಾರಕ್ಕೆ ಮಾಹಿತಿ ನೀಡುವಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ಡಿಹೆಚ್‌ಒ ವಿರುದ್ದ ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಸಚಿವರಿಗೆ ದೂರು: ಕನ್ಯಾಕುಮಾರಿ ಶ್ರೀನಿವಾಸ್

ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಕನ್ಯಾಕುಮಾರಿ ಶ್ರೀನಿವಾಸ್,ಕರೊನಾ ಸೋಂಕಿನ ಕುರಿತು ರಾಜ್ಯ ಸರ್ಕಾರಕ್ಕೆ ಸಮರ್ಪಕ ವರದಿ ನೀಡುವಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಬೇಜವಬ್ದಾರಿ ತೋರುತ್ತಿದ್ದಾರೆ.ಸೂಕ್ತ ವರದಿಯನ್ನು ಸರ್ಕಾರಕ್ಕೆ ನೀಡದಿದ್ದರೆ ತಾಲೂಕಿನಲ್ಲಿ ಹೆಚ್ಚುತ್ತಿರುವ ಕರೊನಾ ನಿಯಂತ್ರಣಕ್ಕೆ ಸರಕಾರದ ಗಮನ ಸೆಳೆಯುವುದು ಅಸಾಧ್ಯ.ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಉಸ್ತುವಾರಿ ಸಚಿವರಿಗೆ ದೂರು ನೀಡಲಾಗುವುದೆಂದರು.

ವಾಸ್ತವ ವರದಿ ಸರ್ಕಾರಕ್ಕೆ ತಲುಪಿಸಿ: ಡಿ.ಸಿ.ಶಶಿಧರ್. 

ತಾಪಂ ಅಧ್ಯಕ್ಷ ಡಿ.ಸಿ.ಶಶಿಧರ್ ಮಾತನಾಡಿ,ಕರೊನಾ ಸೋಂಕು ತಾಲೂಕಿನಲ್ಲಿ ತೀವ್ರ ರೂಪ ಪಡೆಯುತ್ತಿದೆ.ಒಂದೆ ದಿನ ನಲವತ್ತು ಪ್ರಕರಣಗಳು ದೃಢಪಟ್ಟಿರುವುದರಿಂದ ಸಮಸ್ಯೆ ಮತ್ತಷ್ಟು ಆತಂಕವನ್ನು ತಂದೊಡ್ಡಿದೆ,ಆದರೆ ಸರಕಾರಕ್ಕೆ ಸಮರ್ಪಕ ಮಾಹಿತಿ ನೀಡಬೇಕಾದ ಜಿಲ್ಲಾ ಅರೋಗ್ಯ ಇಲಾಖೆ.ತಾಲೂಕು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದರು ತಲುಪಿಸದಿರುವುದು ಅನುಮಾನವನ್ನು ಉಂಟುಮಾಡಿದೆ.ಶಾಸಕ ಟಿ.ವೆಂಕಟರಮಣಯ್ಯರ ಕಾಳಜಿಯಿಂದ ತಾಲೂಕಿನ ಪ್ರತ್ಯೇಕ ಬುಲೆಟಿನ್ ನೀಡಲು ಸೂಚನೆ ನೀಡಿದ್ದರಿಂದ ವಾಸ್ತವ ಮಾಹಿತಿ ಜನತೆಗೆ ದೊರಕುತ್ತಿದೆ.ಆದರೆ,ಜಿಲ್ಲಾ ಆರೋಗ್ಯಾಧಿಕಾರಿಗಳು ಕರೊನಾ ನಿಯಂತ್ರಣಕ್ಕೆ ಸರಕಾರದಿಂದ ದೊರಕುವ ಸೌಲಭ್ಯ,ಸಲಹೆ ಪಡೆಯಲು ತಾಲೂಕಿನಲ್ಲಿ ಕರೊನಾ ಪ್ರಕರಣಗಳ ವಾಸ್ತವ ವರದಿಯನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸಮರ್ಪಕ ಮಾಹಿತಿ ಸರ್ಕಾರಕ್ಕೆ ತಲುಪದಿರುವ ಕಾರಣವೇನು: ತ.ನಾ.ಪ್ರಭುದೇವ್

ಕರೊನಾ ಸೋಂಕಿನ ವರದಿ ಸರ್ಕಾರಕ್ಕೆ ತಲುಪಿಸುವಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಎಡವಲು ಕಾರಣವೇ..? ವಾಸ್ತವ ಮಾಹಿತಿ ಸರಕಾರಕ್ಕೆ ತಲುಪದೇ ಕಡಿವಾಣ ಎಲ್ಲಿ ಆಗುತ್ತಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ಕೂಡಲೆ ಗಮನಹರಿಸಬೇಕಿದೆ.ಜನತೆ ಕರೊನಾ ಸೋಂಕಿನ ಆತಂಕದಿಂದ ಬಸವಳಿಯುತ್ತಿದ್ದಾರೆ,ಆದರೆ ಸರ್ಕಾರಕ್ಕೆ ಮಾಹಿತಿ ನೀಡುವಲ್ಲಿ ಮರೆಮಾಚುತ್ತಿರುವುದೇಕೆ ಎಂದು ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ಸುಳ್ಳುವರದಿ ಖಂಡನೀಯ: ಕಣಿವೇಪುರ ಸುನೀಲ್‌ಕುಮಾರ್

ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳುವರ್ದಿ ನೀಡುತ್ತಿದೆ ಎಂಬ ಆತಂಕ ಜನತೆಯನ್ನು ಕಾಡುತ್ತಿದೆ.ಸೂಕ್ತ ವರದಿ ನೀಡಿ ಕಾರೊನಾ ನಿಯಂತ್ರಣಕ್ಕೆ ಸರ್ಕಾರದ ನೆರವು ಪಡೆಯುವುದನ್ನು ಬಿಟ್ಟು ಈ ರೀತಿ ಮಾಹಿತಿ ಮುಚ್ಚಿಟ್ಟು ಕರೊನಾ ಪ್ರಕರಣದ ವರದಿ ದಿಕ್ಕುತಪ್ಪಿಸುತ್ತಿದೆ ಎಂದು ತಾಪಂ ಸದಸ್ಯ ಕಣಿವೇಪುರ ಸುನೀಲ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಗಂಭೀರ ಪ್ರಕರಣದಲ್ಲಿ ನಿರ್ಲಕ್ಷ್ಯ ಸಲ್ಲದು: ರಾಜಘಟ್ಟರವಿ

ಗಂಭೀರವಾದ ಪ್ರಕರಣಗಳನ್ನು ಸಮರ್ಪಕ ಕಾರ್ಯನಿರ್ವಹಿಸಬೇಕಾದ ಜಿಲ್ಲಾ ಆರೋಗ್ಯ ಇಲಾಖೆಯ ಬೇಜವಬ್ದಾರಿ ನಡೆ ಖಂಡನೀಯ.ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗದಿದ್ದರೆ ಜನರ ಜೀವದ ಜೊತೆ ಆಟವಾಡುವ ಬದಲು ಮನೆಯಲ್ಲಿರಲಿ,ಈ ಕೂಡಲೆ ವಾಸ್ತವ ವರದಿಯನ್ನು ಸರ್ಕಾರಕ್ಕೆ ತಲುಪಿಸಿ ಸೋಂಕು ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಎಚ್ಚರಿಕೆ  ನೀಡಿದ್ದಾರೆ.

ರಾಜಕೀಯ

ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆಯಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆಯಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯ ಹಣದ ಕೊರತೆಯಿಲ್ಲ. ಕಳೆದ ವರ್ಷದಂತೆ ಈ ಸಾಲಿನ ಬಜೆಟ್ ನಲ್ಲಿಯೂ ಗ್ಯಾರಂಟಿಗಳಿಗೆ ಹಣ ಮೀಸಲಿರಿಸಲಾಗಿದೆ; Cmsiddaramaiah

[ccc_my_favorite_select_button post_id="107199"]
PM E – ಡ್ರೈವ್ ಯೋಜನೆ; ಹೆಚ್ಚು ವಿದ್ಯುತ್‌ ಚಾಲಿತ ಬಸ್ಸುಗಳಿಗೆ ಬೇಡಿಕೆ ಇಟ್ಟ ಕರ್ನಾಟಕ

PM E – ಡ್ರೈವ್ ಯೋಜನೆ; ಹೆಚ್ಚು ವಿದ್ಯುತ್‌ ಚಾಲಿತ ಬಸ್ಸುಗಳಿಗೆ ಬೇಡಿಕೆ

PM E -ಡ್ರೈವ್ ಉಪಕ್ರಮದ ಅಡಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡುವಂತೆ ಕೋರಿ ಕರ್ನಾಟಕ ಸರಕಾರ ಸಲ್ಲಿಸಿದ ಮನವಿಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

[ccc_my_favorite_select_button post_id="107188"]
ಅಣ್ಣ ಬಂದಾ ಅಣ್ಣ ಬಂದಾ..: ಈ ಸರಿ ಟ್ರಂಪ್ ಹೇಳಿದ್ದೇನು ನೋಡಿ

ಅಣ್ಣ ಬಂದಾ ಅಣ್ಣ ಬಂದಾ..: ಈ ಸರಿ ಟ್ರಂಪ್ ಹೇಳಿದ್ದೇನು ನೋಡಿ

ಇತ್ತೀಚೆಗೆ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಏನ್ ಏನೋ ಮಾತಾಡುತ್ತಿದ್ದು, ಪ್ರತಿ ಭಾಷಣ ಸುದ್ದಿಗೋಷ್ಠಿಗಳಲ್ಲಿ ಭಾರತದ ಹೆಸರು ತರುತ್ತಿದ್ದಾರೆ

[ccc_my_favorite_select_button post_id="107123"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಮೇ 17ರಿಂದ IPL ಮತ್ತೆ ಆರಂಭ.. ವೇಳಾಪಟ್ಟಿ ಇಲ್ಲಿದೆ

ಮೇ 17ರಿಂದ IPL ಮತ್ತೆ ಆರಂಭ.. ವೇಳಾಪಟ್ಟಿ ಇಲ್ಲಿದೆ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಯನ್ನು ಮೇ 17ರಿಂದ ಮುಂದುವರಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ನಿರ್ಧರಿಸಿದೆ.

[ccc_my_favorite_select_button post_id="106911"]
RCB: ಬೆಂಗಳೂರಲ್ಲಿ ಮಳೆ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಮ್ ಡೇವಿಡ್ ಜಾಲಿ ಜಾಲಿ| Video ನೋಡಿ

RCB: ಬೆಂಗಳೂರಲ್ಲಿ ಮಳೆ.. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿಮ್ ಡೇವಿಡ್ ಜಾಲಿ ಜಾಲಿ| Video

ಬೆಂಗಳೂರು: ಭಾರತ - ಪಾಕ್ ನಡುವಿನ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಐಪಿಎಲ್ ಪುನಾರಂಭ, ಕಪ್ ಗೆಲ್ಲುವ ತವಕದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB )

[ccc_my_favorite_select_button post_id="107171"]
Accident: ಕೂಲ್ ಡ್ರಿಂಕ್ ವ್ಯಾನ್ ಪಲ್ಟಿ..!| Video

Accident: ಕೂಲ್ ಡ್ರಿಂಕ್ ವ್ಯಾನ್ ಪಲ್ಟಿ..!| Video

ಚಾಲಕನ ನಿಯಂತ್ರಣ ತಪ್ಪಿದ ಕೂಲ್ ಡ್ರಿಂಕ್ ಸಾಗಿಸುತ್ತಿದ್ದ ವ್ಯಾನ್ ಪಲ್ಟಿಯಾಗಿರುವ ಘಟನೆ (Accident) ಹೆದ್ದಾರಿಯಲ್ಲಿ ನಡೆದಿದೆ.

[ccc_my_favorite_select_button post_id="107015"]

ಆರೋಗ್ಯ

ಸಿನಿಮಾ

ವೇದಿಕೆಯಲ್ಲೇ ಕುಸಿದು ಬಿದ್ದ ನಟ ವಿಶಾಲ್..!| Video

ವೇದಿಕೆಯಲ್ಲೇ ಕುಸಿದು ಬಿದ್ದ ನಟ ವಿಶಾಲ್..!| Video

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ (Vishal) ಏಕಾಏಕಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="106825"]
error: Content is protected !!