ದೊಡ್ಡಬಳ್ಳಾಪುರ: ಮಂಗಳವಾರದ ಸಂಜೆಯ ವೇಳೆ 26 ಮಂದಿಗೆ ಸೋಂಕು ದೃಢಪಡುವ ಮೂಲಕ ತಾಲೂಕಿನಲ್ಲಿ 400ಗಡಿ ಮೀರಿ ಕರೊನಾ ಸೋಂಕಿತರ ಸಂಖ್ಯೆ ಬೆಳೆದಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ಬುಲೆಟಿನ ಅನ್ವಯ.ಮಂಗಳವಾರದ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 16 ಮಂದಿ ಗಂಡು ಹಾಗೂ 10 ಮಂದಿ ಮಹಿಳೆಯರು ಸೇರಿ ಇಪ್ಪಾತ್ತಾರು ಜನರಿಗೆ ಕರೊನಾ ಸೋಂಕು ದೃಢ ಪಟ್ಟಿದ್ದು,ನಗರದ ಗಾಣಿಗರಪೇಟೆಯ 60ವರ್ಷದ ವ್ಯಕ್ತಿ ತೀವ್ರ ಶ್ವಾಸಕೋಶ ತೊಂದರೆಯಿಂದ ಮರಣ ಹೊಂದಿದ್ದಾರೆಂದು ವರದಿಯಾಗಿದೆ.
ಹರಿತಲೇಖನಿಗೆ ದೊರಕಿರುವ ವರದಿಯನ್ವಯ ವಿನಾಯಕನಗರ 1, ಗಂಗಾಧರಪುರ 1, ಪಾರ್ವತೀಪುರ 8ನೇ ವಾರ್ಡ್ 1, ಕರೇನಹಳ್ಳಿ 1, ಭುವನೇಶ್ವರಿ ನಗರ 7, ಹೇಮಾವತಿ ಪೇಟೆ 5, ದೊಡ್ಡಬೆಳವಂಗಲ 1, ಮಲ್ಲೊಹಳ್ಳಿ 1, ವರದನಹಳ್ಳಿ 1, ಹೊಸಹುಡ್ಯ 1, ಕಮಲೂರು 2, ಹುಸ್ಕೂರು 1, ಬಾಶೆಟ್ಟಿಹಳ್ಳಿ 1 ಹಾಗೂ ಗುಂಜೂರಿನ ಇಬ್ಬರಲ್ಲಿ ಕರೊನಾ ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 409ಕರೊನಾ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿದ್ದು,137 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಸೋಂಕಿಗೆ ಒಳಗಾದ 30 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 227 ಮಂದಿಯನ್ನು ದೇವನಹಳ್ಳಿ/ಹಜ್ ಭವನ/ಖಾಸಗಿ ಆಸ್ಪತ್ರೆ /ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.