ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಶನಿವಾರದ ಸಂಜೆಯಿಂದ ಭಾನುವಾರದ ಸಂಜೆಯವರೆಗೆ ಇಪ್ಪತ್ತೊಂದು ಜನರಿಗೆ ಕರೊನಾ ಸೊಂಕು ದೃಡಪಟ್ಟಿದ್ದು,ತಾಲೂಕಿನಲ್ಲಿ ಕರೊನಾ ಸೋಂಕಿಗೊಳಪಟ್ಟವರ ಸಂಖ್ಯೆ 804ಕ್ಕೆ ಏರಿಕೆಯಾಗಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ.ಭಾನುವಾರ ಸಂಜೆಯ ವರಗೆ ದೊಡ್ಡಬಳ್ಳಾಪುರ ತಾಲ್ಲೂಕಿನ 9 ಪುರುಷರು ಹಾಗೂ 12 ಮಂದಿ ಮಹಿಳೆಯರು ಸೇರಿ ಇಪ್ಪತ್ತೊಂದು ಜನರಿಗೆ ಸೋಂಕು ದೃಡಪಟ್ಟಿದೆ.
ಹರಿತಲೇಖನಿಗೆ ದೊರಕಿರುವ ವರದಿಯಂತೆ.ಸಂಜಯನಗರ 4, ಮೇಲಿನಜೂಗನಹಳ್ಳಿ 3, ಕೆಂಜಿಗದಹಳ್ಳಿ,ಖಾಸ್ ಭಾಗ್ ನಲ್ಲಿ ತಲಾ 2 ಹಾಗೂ ಮಜರಾಹೊಸಹಳ್ಳಿ, ಗಾಣಿಗರಪೇಟೆ, ಕೋಟೆ ರಸ್ತೆ, ಇಸ್ಲಾಂಪುರ, ವಡ್ಡರಪೇಟೆ, ದೇವರಾಜ ನಗರ, ವಾಣಿಗರಪೇಟೆ, ಕೊಡಿಗೇಹಳ್ಳಿ, ಶ್ರೀನಗರ ಮತ್ತು ಕಲಾಸಿಪಾಳ್ಯದ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 804 ಮಂದಿಗೆ ಸೋಂಕು ತಗುಲಿದ್ದು, 473 ಮಂದಿ ಗುಣಮುಖರಾಗಿದ್ದರೆ 19 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 30ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 282 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.