ಬಸವ ಭವನದಿಂದ ಇಸ್ಲಾಂಪುರದವರೆಗಿನ ರಸ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ ಡಿ.ಸಿ.ಶಶಿಧರ್ ಆಗ್ರಹ / ರತ್ನಮ್ಮಜಯರಾಂ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸರ್ವ ಸದಸ್ಯರ ಸಭೆ

ದೊಡ್ಡಬಳ್ಳಾಪುರ: ನಗರದಲ್ಲಿ ಬಸವ ಭವನದಿಂದ ಇಸ್ಲಾಂಪುರದವರೆಗಿನ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಜನ ತಿರುಗಾಡುವ ರಸ್ತೆಯನ್ನು ₹2 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಡಾಂಬರು ಹಾಕಿದ ಎರಡೇ ವಾರದಲ್ಲಿ ಮತ್ತೆ ಕಿತ್ತು ಹೋಗಿದೆ. ತಜ್ಞರಿಂದ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್ ಆಗ್ರಹಿಸಿದರು. 

ಅವರು ಮಂಗಳವಾರ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮಜಯರಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಸುಮಾರು ಎರಡು ವರ್ಷಗಳಿಂದಲು ಸಹ ಈ ರಸ್ತೆಯ ಕೆಲಸ ನಡೆಯುತ್ತಲೇ ಇದೆ. ಕಾಮಗಾರಿ ಮಾತ್ರ ಇನ್ನು ಪೂರ್ಣವಾಗಿಲ್ಲ. ರಸ್ತೆ ಬದಿಯಲ್ಲಿ ನಿರ್ಮಿಸಲಾಗಿರುವ ಮಳೆ ನೀರು ಚರಂಡಿಗಳು ಅವೈಜ್ಞಾನಿಕವಾಗಿದ್ದು ಅಲ್ಪಸ್ವಲ್ಪ ಮಳೆಯಾದರು ಚರಂಡಿಯಲ್ಲಿ ಹೋಗುವುದಕ್ಕಿಂತಲು ಹೆಚ್ಚಿನ ಮಳೆ ನೀರು ರಸ್ತೆ ಮೇಲೆಯೇ ಹರಿದು ಹೋಗುತ್ತಿವೆ. ಹೀಗಾದರೆ ರಸ್ತೆ ಎಷ್ಟು ದಿನ ಬಾಳಿಕೆ ಬರಲು ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದ ಅವರು ಗುತ್ತಿಗೆದಾರರಿಗೆ ಅಂತಿಮ ಬಿಲ್ ಪಾವತಿ ಮಾಡುವ ಮುನ್ನ ಗುಣಮಟ್ಟವನ್ನು ಪರಿಶೀಲನೆ ಮಾಡಬೇಕು ಎಂದರು.

ಸದಸ್ಯ ಕಣಿವೇಪುರ ಸುನಿಲ್ ಕುಮಾರ್ ಮಾತನಾಡಿ, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ರಸ್ತೆಯ ಬದಿಯಲ್ಲಿ ಸಾಕಷ್ಟು ಮರಗಳು ಒಣಗಿ ನಿಂತಿದ್ದು ಜೋರಾಗಿ ಮಳೆ,ಗಾಳಿ ಬಂದರೆ ಮುರಿದು ಬೀಳುತ್ತಿವೆ. ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಒಣಗಿ ನಿಂತಿರುವ ಮರಗಳು ಹಾಗೂ ರಸ್ತೆ ಮೇಲೆ ಬಂದಿರುವ ದೊಡ್ಡ ರಂಬೆಗಳನ್ನು ತೆರವುಗೊಳಿಸಬೇಕು ಎಂದರು.

ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಸದಸ್ಯ ಜಿ.ಶಂಕರಪ್ಪ, ತಾಲ್ಲೂಕಿನಲ್ಲಿ 78 ಅಂಗನವಾಡಿಗಳ ದುರಸ್ಥಿ ಹಾಗೂ ವಿದ್ಯುತ್ ಸಂಪರ್ಕ ನೀಡುವ ಸಲುವಾಗಿ ಕಾಮಗಾರಿ ಆರಂಭವಾಗಿ 2018-19ನೇ ಸಾಲಿನಲ್ಲೇ ಗುತ್ತಿಗೆ ನೀಡಿದ್ದರು ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಅಂಗನವಾಡಿಗಳಲ್ಲಿ ಬೇಸಿಗೆಯಲ್ಲಿ ಮಕ್ಕಳಿಗೆ ಫ್ಯಾನ್ ಸೌಲಭ್ಯ, ಆನ್ಕಲಿಯಂತಕ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಹಣ ನೀಡಿದ್ದರು ಕೆಲಸ ಮಾತ್ರ ಮಾಡದೇ ಇರುವುದು ಸರಿಯಾದ ಕ್ರಮ ಅಲ್ಲ. ಈಗ ಮತ್ತೆ ಇದೇ ಅಂಗನವಾಡಿಗಳಿಗೆ 2020-21ನೇ ಸಾಲಿನಲ್ಲಿ ಅನುದಾನ ಏಕೆ ನೀಡಬೇಕು ಎಂದು ಪ್ರಶ್ನಿಸಿದರು.

ಅಕ್ಕತಮ್ಮನಹಳ್ಳಿ, ಭೂಚನಹಳ್ಳಿ ಸೇರಿದಂತೆ ಈ ಭಾಗದ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ.ಕೊಳವೆ ಬಾವಿಗಳು ಇದ್ದರು ಸಹ ಮೋಟರ್ ಅಳವಡಿಸದೆ ಇರುವುದು ತೊಂದರೆಯಾಗಿದೆ. ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಂಡು ಕುಡಿಯುವ ನೀರಿನ ಬವಣೆ ನೀಗಿಸಬೇಕು ಎಂದು ಸದಸ್ಯರಾದ ಯಶೋಧಮ್ಮ ಆಗ್ರಹಿಸಿದರು.

ನಗರದ ಅಂಚಿನಲ್ಲೇ ಇರುವ ಪಾಲನಜೋಗಹಳ್ಳಿಯಲ್ಲಿ ಜನ ಸಂಖ್ಯೆಯು ಹೆಚ್ಚಾಗಿದೆ. ಈ ಭಾಗದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಬೇಕು. ಅಲ್ಲದೆ ಈಗಾಗಲೇ ಕೊರೆಯಲಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ, ಮೋಟರ್ ಅಳವಡಿಸಿ ನೀರು ಸರಬರಾಜು ಆರಂಭಿಸಬೇಕು ಎಂದು ಸದಸ್ಯ ಹಸನ್ಘಟ್ಟರವಿ ಮನವಿ ಮಾಡಿದರು. 

ತೋಟಗಾರಿಕೆ ಇಲಾಖೆ ಸಹಕಾಯ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಲಾಕ್ಡೌನ್ ಜಾರಿಯಿಂದ ಸಂಕಷ್ಟಕ್ಕೆ ಒಳಗಾಗಿದ್ದ ಹೂವು ಬೆಳೆಗಾರರಿಗೆ ₹21.58 ಲಕ್ಷ ನೆರವನ್ನು ರಾಜ್ಯ ಸರ್ಕಾರ ಆನ್ಲೈನ್ಮೂಲಕ ಹೂವು ಬೆಳೆಗಾರ ರೈತರ ಖಾತೆಗಳಿಗೆ ಜಮೆ ಮಾಡಿದೆ. ಪಹಣಿಯಲ್ಲಿ ಹೂವು ಬೆಳೆ ನಮೋದು ಆಗದೆ ಇರುವ ರೈತರಿಗೆ ಇನ್ನು ಪರಿಹಾರ ಬಂದಿಲ್ಲ. ಬಾಳೆ ಬೆಳೆಗೆ ನೀಡಲಾಗುವ ಪ್ರೋತ್ಸಾಹಕ್ಕೆ ಈಗಷ್ಟೆ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದಲ್ಲದೆ ಶಾಲೆ, ವಿದ್ಯಾರ್ಥಿ ನಿಲಯಗಳ ಆವರಣದಲ್ಲಿ ತರಕಾರಿ ಕೈ ತೋಟಗಳನ್ನು ಅಭಿವೃದ್ಧಿಪಡಿಸಿಕೊಡುವ ಯೋಜನೆ ಜಾರಿಗೆ ಬಂದಿದೆ. ಸ್ಥಳಾವಕಾಶ ಇರುವ ಶಾಲೆಗಳಲ್ಲಿ ಕೈ ತೋಟ ಅಭಿವೃದ್ಧಿ ಪಡಿಸಿಕೊಡಲಾಗುವುದು.ಇದಲ್ಲದೆ ಈ ಬಾರಿ ಮಿನಿ ಟ್ರ್ಯಾಕ್ಟರ್, ಹೂವು, ಹಣ್ಣುಗಳ ಸಂಗ್ರಹಕ್ಕೆ  ಅಗತ್ಯ ಇರುವ ಶೀತಲ ಕೊಠಡಿಗಳ ನಿರ್ಮಾಣ ಸೇರಿದ ವಿವಿಧ ಯೋಜನೆಗಳ ಕುರಿತಂತೆ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.     

ಕೃಷಿ ಇಲಾಖೆ ತಾಲ್ಲೂಕು ಸಹಕಾಯ ನಿರ್ದೇಶಕಿ ಸುಶೀಲಮ್ಮ ಮಾತನಾಡಿ, ನೀಲಗಿರಿ ತೆರವಿನಿಂದಾಗಿ ಈ ಬಾರಿ ರಾಗಿ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಅಲ್ಲದೆ ಹದವಾಗಿ ಮಳೆಯು ಆಗಿದೆ. ಇಡೀ ರಾಜ್ಯದಲ್ಲಿ ಸ್ವಯಂ  ಬೆಳೆ ಸಮೀಕ್ಷೆ ನಡೆಯುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗನ್ನು ಮೊಬೈಲ್ ಮೂಲಕ ಆಪ್ಲೋಡ್ ಮಾಡಬೇಕು. ಪಹಣಿಯಲ್ಲಿ ಬೆಳೆ ನಮೋದಾಗಿದ್ದರೆ ಮಾತ್ರ ಸರ್ಕಾರದ ಸೌಲಭ್ಯ ಅಥವಾ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಜೋಳ ಖರೀದಿಗೆ ಸಾಧ್ಯವಾಗಲಿದೆ. ಸ್ವಯಂ ಬೆಳೆ ಸಮೀಕ್ಷೆಯ ಅವಧಿಯನ್ನು ಇನ್ನು ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದರು.

ಸಾಮಾಜಿಕ ಅರಣ್ಯ ಇಲಾಖೆ ಅರಣ್ಯ ಅಧಿಕಾರಿ ಲಕ್ಷ್ಮೀನಾರಾಯಣ್ ಸಭೆಗೆ ಮಾಹಿತಿ ನೀಡಿ, ತಾಲ್ಲೂಕಿನ ವಿವಿಧ ಕೆರೆ ಅಂಗಳದಲ್ಲಿ ದಟ್ಟವಾಗಿ ಬೆಳೆದಿದ್ದ ಜಾಲಿ ಮರಗಳು ಅಂತರ್ಜಲಕ್ಕೆ ಹಾನಿಯುಂಟು ಮಾಡುತ್ತಿವೆ ಎನ್ನುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ಹರಾಜು ನಡೆಸಲಾಗಿತ್ತು.ಹರಾಜಿನಿಂದ ಬಂದ ಶೇ 50 ರಷ್ಟು ಹಣವನ್ನು ಗ್ರಾಮ ಪಂಚಾಯಿತಿಗಳು ಅರಣ್ಯ ಇಲಾಖೆಗೆ ನೀಡಿಲ್ಲ.ಇದರಿಂದಾಗಿ ಗ್ರಾಮ ಪಂಚಾಯಿತಿಗಳಿಗೆ ಅರಣ್ಯ ಇಲಾಖೆವತಿಯಿಂದ ನೀಡಲಾಗುವ ಸೌಲಭ್ಯಗಳು ಇಲ್ಲದಾಗಲಿವೆ. ಅರಳುಮಲ್ಲಿಗೆ ಕೆರೆಯ ₹13 ಲಕ್ಷ, ತಿರುಮಗೊಂಡನಹಳ್ಳಿ ಗ್ರಾಮದ ಕೆರೆಯ ₹16 ಲಕ್ಷ, ಹೊಸಹಳ್ಳಿ ಕೆರೆಯ  ₹2 ಲಕ್ಷ ಹಾಗೂ ಹಣಬೆ ಕೆರೆಯ 11 ಲಕ್ಷ ಬಾಕಿ ಹಣವನ್ನು ತಕ್ಷಣ ಅರಣ್ಯ ಇಲಾಖೆಗೆ ಪಾವತಿಸಬೇಕು ಎಂದರು. 

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಸಾಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮರಾಮಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ ಇದ್ದರು.  

ಹರಿತಲೇಖನಿ ಕಂಡ ಸಭೆಯ ವಿಶೇಷ

1

‘ಯಾವುದಾದರು ಭಾಗ್ಯ ಇದ್ದರೆ ತಿಳಿಸಿ’ ಪಶು ಇಲಾಖೆಯಿಂದ ರಾಸುಗಳ ರೋಗ ತಡೆಗೆ ಲಸಿಕೆಗಳನ್ನು ಹಾಕಿಸುವ ಕುರಿತಂತೆ ಸಭೆಗೆ ಮಾಹಿತಿ ನೀಡುವುದೇ ಇರುತ್ತದೆ. ರೈತರಿಗೆ ಕೊಡುವಂತಹ ಯಾವುದಾದರು ಭಾಗ್ಯದ ಯೋಜನಗಳು ಇದ್ದರೆ ತಿಳಿಸಿ ವೈದ್ಯರೆ ಎಂದು ಸದಸ್ಯರಾದ ಶ್ರೀವತ್ಸ ಅವರು ಕೇಳುತಿದ್ದಂತೆ ಸಭೆಗೆ ಉತ್ತರ ನೀಡಲು ಎದ್ದು ನಿಂತ ಪಶು ಇಲಾಖೆಯ ವಿಧ್ಯಾ ಡಾ.ವಿಶ್ವನಾಥ್ ಕ್ಷಣ ಕಾಲ ತಬ್ಬಿಬ್ಬಾಗುವಂತಾಯಿತು.

2

ಮಹಿಳೆಯರು ಮನೆಯಲ್ಲಿ ಜೋರು ಮಾಡುತ್ತೀರ. ಆದರೆ ಸಭೆಯಲ್ಲಿ ಮಾತ್ರ ಏನು ಮಾತನಾಡುವುದೇ ಇಲ್ಲ. ಹೀಗಾದರೆ ನಿಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಬಗೆಹರಿಯುವುದಾದರು ಹೇಗೆ. ಮಹಿಳಾ ಸದಸ್ಯರು ಮಾತನಾಡಬೇಕು ಎಂದು ಸದಸ್ಯ ಜಿ.ಶಂಕರಪ್ಪ ಹೇಳುತ್ತಿದ್ದಂತೆ ಮಹಿಳಾ ಸದಸ್ಯರು ಒಬ್ಬೊಬ್ಬರಾಗಿ ಮಾತನಾಡಲು ಆರಂಭಿಸಿದರು.

ರಾಜಕೀಯ

ವಿಜಯೇಂದ್ರಗೆ ಮುಖಭಂಗ.. ಪಟ್ಟು ಸಾಧಿಸಿದ ಡಾ.ಕೆ ಸುಧಾಕರ್‌..!

ವಿಜಯೇಂದ್ರಗೆ ಮುಖಭಂಗ.. ಪಟ್ಟು ಸಾಧಿಸಿದ ಡಾ.ಕೆ ಸುಧಾಕರ್‌..!

ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷರಾಗಿ ಸಂದೀಪ್ ರೆಡ್ಡಿ ನೇಮಕಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸಂಸದ ಡಾ.ಕೆ.ಸುಧಾಕರ್, ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ವಿಜಯೇಂದ್ರ ಬಣದ ನಾಯಕರು ಸಹ ಸುಧಾಕ‌ರ್ ವಿರುದ್ಧ ಟೀಕಾಪ್ರಹಾರ

[ccc_my_favorite_select_button post_id="102551"]
ವಿಜಯೇಂದ್ರನ ತೆಗೆದುಬಿಡ್ತಾರೆ ಅಂತ ಕೆಲ ನ್ಯೂಸ್ ಚಾನಲ್ ಬಾಸ್‌ಗಳಿಗೆ ಚಿಂತೆಯಾಗಿದೆ; ಯತ್ನಾಳ್ ಲೇವಡಿ

ವಿಜಯೇಂದ್ರನ ತೆಗೆದುಬಿಡ್ತಾರೆ ಅಂತ ಕೆಲ ನ್ಯೂಸ್ ಚಾನಲ್ ಬಾಸ್‌ಗಳಿಗೆ ಚಿಂತೆಯಾಗಿದೆ; ಯತ್ನಾಳ್ ಲೇವಡಿ

ನ್ಯೂಸ್ ಚಾನಲ್ ನಲ್ಲಿ ಸೇರ್ಕೊಂಡು ಅವನ ಪರವಾಗಿಯೇ ಸುದ್ದಿ ಮಾಡ್ತಾ ಇದ್ದಾರೆ. ಅವರನ್ನ ಗಮನಿಸಿದ್ದಾರೆ. ನಿಮ್ದ್ ನೀವ್ ಹೊಡಿತಾ ಇರಿ, ನಮ್ದ್ ನಾವ್ ಮಾಡ್ತಾ ಇರ್ತೀವಿ ಎಂದರು. bjp

[ccc_my_favorite_select_button post_id="102468"]
MahaKumbhamela: ಮಹಾ ಕುಂಭಮೇಳದಲ್ಲಿ ಮಿಂದೆದ್ದ ರಾಷ್ಟ್ರಪತಿ| Video

MahaKumbhamela: ಮಹಾ ಕುಂಭಮೇಳದಲ್ಲಿ ಮಿಂದೆದ್ದ ರಾಷ್ಟ್ರಪತಿ| Video

ರಾಷ್ಟ್ರಪತಿ ದೌಪದಿ ಮುರ್ಮು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನದ ಬಳಿಕ ತ್ರಿವೇಣಿ ಸಂಗಮದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. Maha Kumbhamela

[ccc_my_favorite_select_button post_id="102507"]

Aero India 2025: ಏರ್‌ಶೋಗೆ ಇಂದು ಚಾಲನೆ..

[ccc_my_favorite_select_button post_id="102489"]

ಹರ ಹರ ಮಹಾದೇವ!: ಕುಂಭಮೇಳದಲ್ಲಿ ಡಿಸಿಎಂ‌ ಡಿಕೆ

[ccc_my_favorite_select_button post_id="102476"]

ಗುಂಡಿನ ಚಕಮಕಿ: 31 ಮಂದಿ ನಕ್ಸಲರ ಹತ್ಯೆ..

[ccc_my_favorite_select_button post_id="102472"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
Doddaballapura: ಕೌಟುಂಬಿಕ ಕಲಹ.. ಯುವತಿ ಆತ್ಮಹತ್ಯೆ..!

Doddaballapura: ಕೌಟುಂಬಿಕ ಕಲಹ.. ಯುವತಿ ಆತ್ಮಹತ್ಯೆ..!

ಮನೆಯಲ್ಲಿ ನೇಣಿಗೆ ಬಿಗಿದುಕೊಂಡಿದ್ದ ಯುವತಿಯನ್ನು ಆಸ್ಪತ್ರೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. Suicide

[ccc_my_favorite_select_button post_id="102538"]
ಚಾಲಕನಿಗೆ ಮೂರ್ಛೆ. ಮರಕ್ಕೆ KSRTC ಬಸ್‌ ಡಿಕ್ಕಿ..!

ಚಾಲಕನಿಗೆ ಮೂರ್ಛೆ. ಮರಕ್ಕೆ KSRTC ಬಸ್‌ ಡಿಕ್ಕಿ..!

ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೇ ಹೋಗಿದ್ದರೆ ಚಾಲಕನ ನಿಯಂತ್ರಣ ಕಳೆದುಕೊಂಡು ಎಡಭಾಗಕ್ಕೆ ಪಲ್ಟಿಯಾಗಿ ಅಪಾರ ಸಾವು-ನೋವು ಆಗುತ್ತಿತ್ತು KSRTC

[ccc_my_favorite_select_button post_id="102495"]

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು

[ccc_my_favorite_select_button post_id="102325"]

Doddaballapura: ಬಸ್ ಅಪಘಾತ News update.. ಚಿಕಿತ್ಸೆ

[ccc_my_favorite_select_button post_id="102061"]

Doddaballapura: ಮತ್ತದೇ ಜಾಗದಲ್ಲಿ KSRTC ಬಸ್ ಅಪಘಾತ..!

[ccc_my_favorite_select_button post_id="102046"]

ಆರೋಗ್ಯ

ಸಿನಿಮಾ

ಸೆಲೆಬ್ರಿಟಿಗಳಿಗೆ ಕ್ಷಮೆ ಕೋರಿದ ದರ್ಶನ್.. ಕಾರಣವೇನು..? video ನೋಡಿ

ಸೆಲೆಬ್ರಿಟಿಗಳಿಗೆ ಕ್ಷಮೆ ಕೋರಿದ ದರ್ಶನ್.. ಕಾರಣವೇನು..? video ನೋಡಿ

ಜನ್ಮದಿನದ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ಸೆಲೆಬ್ರಿಟಿಗಳಿಗೆ ದರ್ಶನ್ ಸಂದೇಶ ನೀಡಿದ್ದಾರೆ. ಇದೇ ವೇಳೆ ಹಲವ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. Darshan

[ccc_my_favorite_select_button post_id="102428"]
error: Content is protected !!