ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಭಾನುವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 42 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು,ಸೋಂಕಿತರಿಬ್ಬರು ತೀವ್ರ ಉಸಿರಾಟದ ತೊಂದರೆ ಹಾಗೂ ಸಕ್ಕರೆಕಾಯಿಲೆಯಿಂದಾಗಿ ಸಾವನಪ್ಪಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ,ಭಾನುವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 34 ಪುರುಷರು ಹಾಗೂ 8 ಮಹಿಳೆಯರು ಸೇರಿ 42 ಜನರಿಗೆ ಸೋಂಕು ದೃಡಪಟ್ಟಿದ್ದು,14 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಹರಿತಲೇಖನಿಗೆ ದೊರೆತಿರುವ ಮಾಹಿತಿಯಂತೆ. ಸೋಂಕಿಗೆ ಒಳಗಾಗಿ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೂಬಗೆರೆಯ 56 ವರ್ಷದ ಪುರುಷ ಹಾಗೂ ದೊಡ್ಡಬಳ್ಳಾಪುರ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಚ್ಚಪ್ಪನ ಪೇಟೆಯ 60ವರ್ಷದ ಮಹಿಳೆ ಸಾವನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಉಳಿದಂತೆ ಕುಚ್ಚಪ್ಪನಪೇಟೆ, ಕೋರ್ಟ್ ರಸ್ತೆ 3, ವಡ್ಡರಪೇಟೆ,ವಿದ್ಯಾ ನಗರ, ಖಾಸ್ ಭಾಗ್, ಬಾಶೆಟ್ಟಿಹಳ್ಳಿ, ಶ್ರೀನಗರ, ಶಾಂತಿನಗರ, ಮಲ್ಲತ್ ಹಳ್ಳಿಯಲ್ಲಿ ತಲಾ 2, ಮುತ್ಯಾಲಮ್ಮ ದೇವಸ್ಥಾನದ ರಸ್ತೆ, ಗಂಗಾಧರಪುರ ಲೇಔಟ್, ಸರ್ಕಾರಿ ಆಸ್ಪತ್ರೆ ಕ್ವಾಟ್ರಸ್, ಕಚೇರಿ ಪಾಳ್ಯ, ಸುಭಾಷ್ ನಗರ, ಮುತ್ತೂರು, ಮೆಳೇಕೋಟೆ, ಗುಂಡಮಗೆರೆ, ಚೈತನ್ಯನಗರ, ಡಿಕ್ರಾಸ್, ಪೊಲೀಸ್ ಕ್ವಾಟ್ರಸ್, ತಿಪ್ಪೂರು, ರೋಜಿಪುರ, ಬ್ಯಾಂಕ್ ಸರ್ಕಲ್, ಮಾರುತಿ ನಗರ, ಸೋತೇನಹಳ್ಳಿ, ದೇವರಾಜನಗರ, ದರ್ಗಾಜೋಗಹಳ್ಳಿ, ವಿನಾಯಕನಗರ, ತೂಬಗೆರೆ ಹಾಗೂ ಜಿಂಕೆಬಿದರಹಳ್ಳಿಯಲ್ಲಿ ತಲಾ ಒಬ್ಬರಲ್ಲಿ ಸೊಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 1379 ಮಂದಿಗೆ ಸೋಂಕು ತಗುಲಿದ್ದು, 894 ಮಂದಿ ಗುಣಮುಖರಾಗಿದ್ದರೆ 43 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 386 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.