ದೊಡ್ಡಬಳ್ಳಾಪುರ, (ಜೂ.19): ಕೇಂದ್ರ ಸರಕಾರದ ಎಲ್ಲಾ ಯೋಜನೆ, ನೀತಿ, ನಿಯಮಗಳು ರೈತರಿಗಲ್ಲದೆ ಕೇವಲ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಹುನ್ನಾವಾಗಿದೆ ಎಂದು ರಾಜ್ಯ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮುಖಂಡ ಪ್ರಸನ್ನ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಫಸಲ್ ವಿಮೆ ಯೋಜನೆಯಲ್ಲಿ ಹಣ ಕಟ್ಟಿದ ರೈತರಿಗೆ ಅನ್ಯಾಯವಾಗಿದೆ ಎಂಬ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆ, ಕೃಷಿ ಕಾಯ್ದೆ, ಫಸಲ್ ವಿಮಾ ಯೋಜನೆ, ರಸ ಗೊಬ್ಬರ, ಬಿತ್ತನೆ ಬೀಜ ಹೀಗೆ ರೈತನಿಗೆ ಯಾವುದರ ಮೇಲೆಯೂ ನಿಯಂತ್ರಣವಿಲ್ಲದೆ ಖಾಸಗಿಯವರ ಪಾಲಾಗಿದೆ.
ಬರದಿಂದಾಗಿ ಬೆಳೆ ಕಳೆದುಕೊಂಡಿರುವ ರೈತರು, ಸರಕಾರ, ಕೃಷಿ ಇಲಾಖೆಯ ಜಾಹಿರಾತುಗಳಿಗೆ ಮನಸೋತು, ಸಾಲಸೋಲ ಮಾಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಹಣ ಕಟ್ಟಿದ 15 ಸಾವಿರ ಜನರಲ್ಲಿ ವಿಮೆ ಬಂದಿರೋದು ಕೇವಲ 4 ಸಾವಿರ ಮಂದಿಗೆ ಉಳಿದ ಹಣ ಏನಾಯ್ತು… ಆ ರೈತರ ಜಮೀನಿಗೆ ಮಾತ್ರ ಮಳೆ ಸುರಿದಿದೆಯೇ ಎಂದು ಬೇಸರ ವ್ಯಕ್ತಪಡಿಸಿದರು.
ಫಸಲ್ ವಿಮೆ ಯೋಜನೆಯಲ್ಲಿ ರೈತರಿಗೆ ಉಂಟಾಗುತ್ತಿರುವ ಅನ್ಯಾಯದ ಕುರಿತು ಶೀಘ್ರದಲ್ಲೇ ನಿರ್ಣಯಕೈಗೊಂಡು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ರೈತ ಸಂಘ ಮಾಡಲಿದೆ.. ನುಣುಚಿಕೊಳ್ಳುವ ಸ್ಥಳೀಯ ಅಧಿಕಾರಿಗಳ ಜವಬ್ದಾರಿ ಏನೆಂಬುದು ಶೀಘ್ರವೇ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದು ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….