ಹರಿತಲೇಖನಿ ದಿನಕ್ಕೊಂದು ಕಥೆ: ರೈತ ಮತ್ತು ದೇವರು..!

ಅತೀ ವೃಷ್ಟಿ ಹಾಗೂ ಅನಾವೃಷ್ಟಿ ಗಳಿಂದ ನೊಂದ ರೈತನೊಬ್ಬನಿಗೆ,ಭಗವಂತನ ಮೇಲೆ ತುಂಬಾ ಬೇಸರವಾಯ್ತ. ಭಗವಂತ ಅವನ ಎದುರಿಗೆ ಬಂದು ,ನಾನೇನು ಮಾಡಬೇಕು ಹೇಳು ಎಂದ.

ವ್ಯವಸಾಯದ ಬಗ್ಗೆ ನೀನಗೇನು ಗೊತ್ತು, ಭಗವಂತ, ನಮ್ಮಂಥ ರೈತರನ್ನು ಕೇಳಿ ನೀನು, ಮಳೆ ಬಿಸಿಲನ್ನು ನೀಡಬೇಕು, ಅಕಾಲಿಕ ಮಳೆ, ಬರಗಾಲದಿಂದ ಕಷ್ಟ ಅನುಭವಿಸುವವರು ನಾವೇ ತಾನೇ ಎಂದ ರೈತ.

ಭಗವಂತ ನಗುತ್ತಾ, ಈ ಒಂದು ವರ್ಷ ನೀನು ಹೇಳಿದ ರೀತಿಯಲ್ಲೇ ಮಳೆ ಬಿಸಿಲನ್ನು  ನೀಡುತ್ತೇನೆ, ನಿನಗೆ ಒಂದು ವರ್ಷ ಅವಕಾಶವಿದೆ ಅದನ್ನು ಉಪಯೋಗಿಸಿಕೊ ಎಂದು ಹೇಳಿ ಹೋದ.

ರೈತನಿಗೆ ತುಂಬಾ ಖುಷಿಯಾಯಿತು, ರೈತ ಯಾವಾಗ ಬಿಸಿಲು ಬಯಸಿದನೋ ಆಗ ಬಿಸಿಲು ಬಂತು, ಮಳೆ ಬಯಸಿದಾಗ ಮಳೆ ಬಂತು, ಸ್ವಲ್ಪ ಕೊಡಾ ಹೆಚ್ಚು ಕಡಿಮೆ ಆಗಲಿಲ್ಲ. ಬತ್ತದ ಪೈರುಗಳೆಲ್ಲಾ ಎತ್ತರವಾಗಿ ಬೆಳೆದು ನಿಂತವು, ನೋಡಲು ತುಂಬಾ ಸೊಗಸಾಗಿ ಕಾಣುತ್ತಿದ್ದವು, ರೈತನಿಗೆ ತುಂಬಾ ಸಂತೋಷವಾಗಿತ್ತು.

ರೈತ ಅಂದುಕೊಂಡ ಪರಮಾತ್ಮನಿಗೆ ಈಗ ಗೊತ್ತಾಗುತ್ತದೆ, ಅದೆಷ್ಟು ಸಮಯದಿಂದ ವ್ಯರ್ಥವಾಗಿ ರೈತರನ್ನು ಸಮಸ್ಯೆಯಲ್ಲಿ ಸಿಲುಕಿಸುತ್ತಿದ್ದ, ಯಾರಾದರೂ ಒಬ್ಬ ರೈತನನ್ನು ಕೇಳಿದ್ದರೆ, ಈ ರೀತಿಯ ಸಮಸ್ಯೆ ಯೇ ಆಗುತ್ತಿರಲಿಲ್ಲ, ಈಗ ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ, ಅಂದುಕೊಂಡ.

ಭತ್ತದ ಫಸಲೇನೊ ಚೆನ್ನಾಗಿ ಬೆಳೆದಿದ್ದವು, ನೋಡಲು ತುಂಬಾ ಚೆನ್ನಾಗಿದ್ದವು. ಆದರೆ ಅದರಲ್ಲಿ ಕಾಳುಗಳು ಇರದೆ ಬರೀ ಜೊಳ್ಳಾಗಿದ್ದವು, ರೈತ ಎದೆ ಬಡಿದು ಕೊಳ್ಳುತ್ತಾ ಹೇ, ಪರಮಾತ್ಮ, ಇದೇಕೆ  ಹೀಗಾಯಿತು ಎಂದು ಕಿರುಚಿದ.

ಭಗವಂತ ಬಂದು ಹೇಳಿದ, ನೀನು ಬಿರುಗಾಳಿ, ಮಿಂಚು, ಗುಡುಗು, ಸಿಡಿಲು ಬರಲು ಬಿಡಲಿಲ್ಲ, ಅವು ಎಲ್ಲಾ ಒಟ್ಟು ಗೂಡಿ  ಘರ್ಷಣೆ ಆಗಲು ಬಿಡಲಿಲ್ಲ, ಫಸಲು ಚೆನ್ನಾಗೇನೋ ಬೆಳೆದವು, ಆದರೆ ಅವು ಸತ್ವಯುತವಾಗಲಿಲ್ಲ, ಬಿರುಗಾಳಿ  ಗುಡುಗು, ಮಿಂಚು, ಇವುಗಳ ಘರ್ಷಣೆಯಿಂದ  ಸಸ್ಯಗಳು ತಮ್ಮ ಬಲದಿಂದ ಸೆಟೆದು  ನಿಲ್ಲುತ್ತವೆ. ಹೇಗಾದರೂ ಎದ್ದು ನಿಲ್ಲಬೇಕೆಂಬ  ಮನೋಭಾವ ಅವುಗಳಲ್ಲಿ ಬಂದು ಅವು ಸತ್ವಯುತವಾಗುತ್ತವೆ. ಹಾಗೇ ಗಟ್ಟಿಯಾಗಿ ಕಾಳುಕಟ್ಟುತ್ತವೆ, ಸಂಘರ್ಷದಲ್ಲೇ ಶಕ್ತಿ, ಸುಪ್ತವಾಗಿರುವುದು ಎಂದು ರೈತನಿಗೆ ಭಗವಂತ ತಿಳಿ ಹೇಳಿದ.

ನೋವಿನಿಂದಲೇ ಅಲ್ಲವೇ, ಎಲ್ಲಾ ಹೊಸತುಗಳ ಹುಟ್ಟು. ಕಹಿಯ ಕಲ್ಮಶವೆಲ್ಲಾ ಉರಿದು ಸುಟ್ಟಾಗಲೇ ಹೊಸರೂಪ‌, ಹೊಸತೇಜಸ್ಸು ಉಂಟಾಗುವುದು. ಹಾಗೆಯೇ, ತಾಯಿಗೆ ಪ್ರಸವ ಯಾತನೆ ಇಲ್ಲದೇ ಇದ್ದರೆ, ಮಗುವಿನ ಜನನವಾಗುವುದಿಲ್ಲ. ಆದ್ದರಿಂದಲೇ ತಾಯಿಗೆ ಮಗುವಿನ ಬಗ್ಗೆ ಅಪಾರವಾದ  ಪ್ರೀತಿಯಿರುತ್ತದೆ. ಎಲ್ಲವೂ ಸುಲಭವಾಗಿ ದೊರೆಯುವಂತಿದ್ದರೆ, ನಮಗೆ ಅದರಲ್ಲಿ ಯಾವ ಆನಂದವೂ ಇರುವುದಿಲ್ಲ, ಕಷ್ಟ ಅನುಭವಿಸಿದಾಗಲೇ, ಸುಖದ ಆನಂದವಿರುವುದು.
   

ಕೃಪೆ:
ಸುವರ್ಣಾ ಮೂರ್ತಿ. 

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]