ದೊಡ್ಡಬಳ್ಳಾಪುರ, (ಜುಲೈ.12); ಜಮೀನಿಗೆಂದು ತೆರಳಿದ್ದ ರೈತ ದಂಪತಿಗಳು ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಸಾವನಪ್ಪಿರುವ ಘಟನೆ ತಾಲೂಕಿನ ಮಾಕಳಿ ಸಂಭವಿಸಿದೆ.
ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ ಕೆಳಗಿನ ನಾಯಕರಂಡಹಳ್ಳಿ ಗ್ರಾಮದ ಚಂದ್ರನಾಯಕ (47 ವರ್ಷ), ಜಯ ಬಾಯಿ (43 ವರ್ಷ) ಎಂದು ಗುರುತಿಸಲಾಗಿದೆ.
ಘಾಟಿ ಗೋಶಾಲೆ ಸಮೀಪವಿರುವ ಜಮೀನಿಗೆ ತೆರಳಿದ್ದ ದಂಪತಿಗಳು, ಊಟ ಮುಗಿಸಿ ಮನೆಗೆ ಮರಳುವ ವೇಳೆ, ತಿರುವಿನಲ್ಲಿ ರೈಲು ಬರುವುದು ಕಾಣದೆ ಹಳಿ ದಾಟುವ ವೇಳೆ, ಏಕಾಏಕಿ ಬಂದ ರೈಲು ಡಿಕ್ಕಿ ಹೊಡೆದು ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….