ದೊಡ್ಡಬಳ್ಳಾಪುರ, (ಜುಲೈ.24); ತಾಲೂಕಿನ ಸಾಸಲು ಹೋಬಳಿಯ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿ ಕಂಡು ಬರುತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಬುಧವಾರದ ಮಧ್ಯಾಹ್ನ ತಾಲೂಕಿನ ದೊಡ್ಡಗುಂಡಪ್ಪನಾಯನಹಳ್ಳಿ ಹೊರವಲಯದಲ್ಲಿನ ಜಮೀನನಲ್ಲಿ ಮೇಯುತ್ತಿದ್ದ ಮೇಕೆ ಹಿಂಡಿನ ಮೇಲೆ ದಾಳಿ ಮಾಡಿದೆ.
ಈ ವೇಳೆ ದೇವರಾಜ್ ಎನ್ನುವ ರೈತನ ಸುಮಾರು 16ರಿಂದ 20 ಸಾವಿರ ಮೌಲ್ಯದ ತುಂಬಾಗಿದ್ದ ಮೇಕೆ, ಕೆಲವೇ ದಿನಗಳಲ್ಲಿ ಎರಡು ಮರಿಗಳಿಗೆ ಜನ್ಮನೀಡುತ್ತಿತ್ತು. ಆದರೆ ಚಿರತೆ ದಾಳಿ ನಡೆಸಿ, ಹೊಟ್ಟೆ ಬಗೆದು ಕೊಂದು ಹಾಕಿದೆ.
ಘಟನೆಯಿಂದಾಗಿ ದೊಡ್ಡಗುಂಡಪ್ಪನಾಯಕನಹಳ್ಳಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಚಿರತೆ ಸೆರೆಗೆ ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….