ದೊಡ್ಡಬಳ್ಳಾಪುರ, (ಜುಲೈ.25); ತಾಲ್ಲೂಕಿನ ದೊಡ್ಡಗುಂಡಪ್ಪನಾಯಕನಹಳ್ಳಿ ಗ್ರಾಮದ ಹೊರವಲಯದಲ್ಲಿ ಬುಧವಾರ ಚಿರತೆ ದಾಳಿಯಿಂದ ಮೇಕೆ ಸಾವನ್ನಪ್ಪಿದೆ.
ರೈತ ದೇವರಾಜ್ ಅವರ ಮೇಕೆ ಹಿಂಡಿನ ಮೇಲೆ ಮಧ್ಯಾಹ್ನ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿಯ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಪಶು ಆಸ್ಪತ್ರೆ ವೈದ್ಯರು ಮಹಜರ್ ನಡೆಸಿದರೆ ಸರ್ಕಾರದಿಂದ ಪರಿಹಾರ ಪಡೆಯಲು ಸಾಧ್ಯ. ಆದರೆ, ಪಶು ಆಸ್ಪತ್ರೆ ಸಿಬ್ಬಂದಿಯನ್ನು ಕೇಳಿದರೆ, ಮೇಕೆ ಕಳೇಬರವನ್ನು ಮನೆ ಬಳಿಯೇ ಇಟ್ಟುಕೊಂಡಿರಿ ಗುರುವಾರ ಬಂದು ಮಹಜರು ಮಾಡುತ್ತೇವೆ ಎನ್ನುತ್ತಾರೆ ಎಂದು ದೇವರಾಜ್ ಆರೋಪ ಮಾಡಿದ್ದರು.
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪಶು ಆಸ್ಪತ್ರೆ ವೈದ್ಯರಾದ ಡಾ.ವಿಜಯ್, ದೊಡ್ಡಬಳ್ಳಾಪುರದಲ್ಲಿ ತುರ್ತು ಸಭೆ ಇದ್ದ ಕಾರಣ ಸ್ಥಳಕ್ಕೆ ತೆರಳಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಸ್ಥಳೀಯ ಸಿಬ್ಬಂದಿಯ ಸಮರ್ಪಕವಾಗಿ ಉತ್ತರ ನೀಡದೆ ಬೇಜವಬ್ದಾರಿ ಹೇಳಿಕೆ ಗೊಂದಲಕ್ಕೆ ಕಾರಣವಾಗಿದ್ದು, ವಿಷಾದಿಸುತ್ತೇವೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿಲಾಗಿದ್ದು, ರೈತನಿಗೆ ಉಂಟಾಗಿರುವ ನಷ್ಟಕ್ಕೆ ಸರಕಾರದಿಂದ ಪರಿಹಾರ ದೊರಕಿಸಲು ಕ್ರಮಕೈಗೊಳ್ಳಲಾಗಿದೆ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….