ಚೇಳೂರು, (ಆಗಸ್ಟ್.28): ಕೆಸರಿನ ಗದ್ದೆಯಲ್ಲಿ ಉಳುಮೆ ಮಾಡುವ ವೇಳೆ ಟ್ರ್ಯಾಕ್ಟರ್ ಉರುಳಿದ ಪರಿಣಾಮ ಕೆಳಗೆ ಸಿಕ್ಕಿಕೊಂಡು ರೈತ ಮೃತ ಪಟ್ಟಿರುವ ಘಟನೆ ಚೇಳೂರು ತಾಲೂಕಿನ ಚಾಕವೇಲು ಗ್ರಾಮ ಪಂಚಾಯತಿ ವ್ಯಾಪ್ತಿಯ ದಿಗವಪ್ಯಾಯಲ ಪಲ್ಲಿ ಗ್ರಾಮ ದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಪ್ರಗತಿಪರ ರೈತ ಶಂಕರರೆಡ್ಡಿ (48) ಎಂದು ಗುರುತಿಸಲಾಗಿದೆ.
ಭತ್ತ ಬೆಳೆಯುವ ಸಲುವಾಗಿ ಜಮೀನು ಸಮತಟ್ಟು ಮಾಡಿ ನೀರು ಹರಿಸಿ ಕೆಸರಿನ ಗದ್ದೆಯಲ್ಲಿ ಟ್ರ್ಯಾಕ್ಟರ್ನಿಂದ ಉಳುಮೆ ಮಾಡುತ್ತಿರುವಾಗ ಟ್ರ್ಯಾಕ್ಟರ್ ಕೆಸರಿನಲ್ಲಿ ಸಿಕ್ಕಿಕೊಂಡಿದೆ.
ಆಗ ಚಾಲಕ ರೈತ ಟ್ರ್ಯಾಕ್ಟರ್ ಮುಂದೆ ಒಡಿಸಲು ಗೇರ್ ಬದಲಾಯಿಸುತ್ತಾ ಒತ್ತಡ ಹಾಕಿದ್ದಾಗ ಏಕಾಏಕಿ ಟ್ರ್ಯಾಕರ್ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ರೈತ ಟ್ರ್ಯಾಕ್ಟರ್ ಅಡಿಯಲ್ಲಿ ಸಿಲುಕಿ ಕೆಸರಿನಲ್ಲಿ ಹೂತು ಹೋಗಿದ್ದಾನೆ.
ಇದನ್ನು ನೋಡಿದ ಅಲ್ಲಿದ್ದ ಮಕ್ಕಳು ಕೂಗಿಕೊಂಡಾಗ ಅಕ್ಕಪಕ್ಕದ ರೈತರು ಓಡಿಬಂದು ರೈತನ್ನು ಹೊರ ತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಜೆಸಿಬಿ ಯಂತ್ರ ತರಿಸಿ ಹೊರೆ ತೆಗೆದರಾ ದರೂ ಅಷ್ಟೊತ್ತಿ ಗಾಗಲೇ ರೈತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಚೇಳೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….