ಹರಿತಲೇಖನಿ ದಿನಕ್ಕೊಂದು ಕಥೆ; ಒಬ್ಬರ ಕೂಳು ಇನ್ನೊಬ್ಬರ ಕುತ್ತು

ಹಿಂದೆ ಕಳಿಂಗ ರಾಜ್ಯದಲ್ಲಿ ಯಾರೂ ಯೋಚನೆ ಮಾಡದಷ್ಟು ತೀವ್ರವಾದ ಬರಗಾಲ ಬಂದು, ಅಲ್ಲಿನ ಜನ ಊಟ ತಿಂಡಿಗೆ ಪರಿತಪಿಸುವಂತಾಗಿತ್ತು‌. ಎಲ್ಲರೂ ಆಹಾರ ಹುಡುಕುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಡಲು ಆರಂಭ ಮಾಡಿದರು. ಹೀಗಿರುವಾಗ ರಾಜನ ಒಂಟೆಯೊಂದು ತಪ್ಪಿಸಿಕೊಂಡು ಎತ್ತಲೋ ಮಾಯವಾಗಿ ಹೋಯಿತು. ಆ ಒಂಟೆಯನ್ನು ಹುಡುಕಲು ರಾಜ ತನ್ನ ಭಟರಿಗೆ ಆಜ್ಞೆ ಮಾಡಿದನು.

ರಾಜ ಭಟರು ಒಂಟೆಯನ್ನು ಹುಡುಕಿಕೊಂಡು ಆ ಊರಿನಲ್ಲಿ ವಾಸವಾಗಿದ್ದ ಒಬ್ಬಳು ಹೆಂಗಸಿನ ಮನೆ ಮುಂದೆ ಬಂದರು. ಆ ಹೆಂಗಸಿಗೆ ಮೂವರು ಗಂಡು ಮಕ್ಕಳು. ಅವರಲ್ಲಿ ಮೊದಲನೆಯವನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ಎರಡನೆಯವನು ತನ್ನಲ್ಲಿರುವ ತೋಟ ನೋಡಿಕೊಳ್ಳುತ್ತಿದ್ದ. ಮೂರನೆಯ ಮಗ ಮನೆಯಲ್ಲಿ ಬಟ್ಟೆಗಳನ್ನು ನೇಯ್ಗೆ ಮಾಡುತ್ತಿದ್ದ.

ತಪ್ಪಿಸಿಕೊಂಡು ಬಂದ ಒಂಟೆ ಇವರಿರುವ ಮನೆಯ ಬಳಿ ಬಂದಿತ್ತು. ಅದನ್ನು ನೋಡಿದ ಮೂವರು ಸಹೋದರರು ಒಂಟೆಯನ್ನು ಕಟ್ಟಿಹಾಕಿ ಹೊಡೆದು ಕೊಂದು ಹಾಕಿದ್ದರು.

ಒಂಟೆಯ ಮಾಂಸವನ್ನು ಜಾಡಿನಲ್ಲಿ ಮುಚ್ಚಿಟ್ಟು ಅದರ ಮೂಳೆ–ಚರ್ಮವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕಿದ್ದರು. ಮಕ್ಕಳ ಈ ಗುಣವನ್ನು ಅವರ ತಾಯಿ ಕಣ್ಣಾರೆ ನೋಡುತ್ತಿದ್ದಳು. ಇದನ್ನು ಗಮನಿಸಿದ ಮಕ್ಕಳು ‘ನಮ್ಮ ತಾಯಿ ನಾವು ಮಾಡಿರುವ ಕೆಟ್ಟ ಕೆಲಸವನ್ನು ಯಾರಲ್ಲಾದರೂ ಬಾಯಿಬಿಟ್ಟರೆ ನಮಗೇ ಕಷ್ಟ’ ಎಂದು ಮಾತನಾಡಿಕೊಂಡರು.

ತಾಯಿಯ ಬಾಯಲ್ಲಿ ಯಾವ ಗುಟ್ಟೂ ನಿಲ್ಲುವುದಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ಒಂದು ಉಪಾಯ ಮಾಡಿದರು. ಮೂವರೂ ತಾಯಿ ಬಳಿ ಬಂದು, ‘ಅಮ್ಮ, ಈ ದಿನ ನಾವು ನಿನ್ನನ್ನು ಮದುಮಗಳನ್ನಾಗಿ ಮಾಡುತ್ತೇವೆ. ಅದಕ್ಕೆ ಒಂಟೆಯನ್ನು ಕೊಂದು ಅದರ ಮಾಂಸವನ್ನು ಜಾಡಿಗಳಲ್ಲಿ ಮುಚ್ಚಿಟ್ಟಿದ್ದೇವೆ. ಆ ಮಾಂಸದಿಂದ ನಿನಗೆ ಇಂದು ಔತಣ ಬಡಿಸುತ್ತೇವೆ’ ಎಂದರು. ಆ ತಾಯಿ ಬುದ್ಧಿಮಾಂದ್ಯಳಾಗಿದ್ದಳು. ಮಕ್ಕಳು ಹೇಳಿದ್ದು ಸರಿಯೆಂದು ನಂಬಿದಳು.

ರಾಜ ಭಟರು ಒಂಟೆ ಹುಡುಕಿಕೊಂಡು ಇವರಿರುವ ಮನೆಗೆ ಬಂದರು. ಕೃಷಿಯಲ್ಲಿ ತೊಡಗಿಕೊಂಡಿದ್ದ ಮೊದಲನೆಯವನಲ್ಲಿ, ‘ನಮ್ಮ ರಾಜರ ಒಂಟೆಯೊಂದು ತಪ್ಪಿಸಿಕೊಂಡು ಬಂದಿದೆ. ನಿಮ್ಮ ಹೊಲದ ಬಳಿ ಏನಾದರೂ ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಜೋರು ದನಿಯಲ್ಲಿ ಉತ್ತರಿಸಿದ ಮೊದಲನೆಯವ, ‘ನಿಮಗೆ ಕಾಣಿಸುತ್ತಿಲ್ಲವೇ? ನಾನು ಹೊಲ ಉಳುತ್ತಿದ್ದೇನೆ’ ಎಂದ. ಅವನಿಗೆ ತಮ್ಮ ಮಾತು ಅರ್ಥವಾಗಿಲ್ಲವೆಂದು ತಿಳಿದ ರಾಜ ಭಟರು ಮತ್ತೆ ಅವನಲ್ಲಿ, ‘ಹೌದು, ಕಾಣಿಸುತ್ತಿದೆ. ನಮ್ಮ ರಾಜರ ಒಂಟೆ ತಪ್ಪಿಸಿಕೊಂಡಿದೆ. ಇಲ್ಲಿ ಅದು ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಉತ್ತರವಾಗಿ ಆತ, ‘ಪ್ರತಿದಿನ ಎಷ್ಟು ಎಕರೆ ಹೊಲ ಉಳುತ್ತೇನೆಂದು ಹೇಳಲು ಖಂಡಿತ ಸಾಧ್ಯವಿಲ್ಲ. ಒಂದು ದಿನ ಒಂದು ಎಕರೆ ಉಳುವುದಕ್ಕೆ ಆಗುತ್ತದೆ. ಇನ್ನೊಂದು ದಿನ ಅಷ್ಟು ಆಗುವುದಿಲ್ಲ, ಕಡಿಮೆ ಉಳುತ್ತೇನೆ’ ಎಂದ. ರಾಜ ಭಟರು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಕೊಡದೆ ಅವರನ್ನು ಕಕ್ಕಾಬಿಕ್ಕಿ ಮಾಡಿದ. ಕೊನೆಯಲ್ಲಿ ರಾಜ ಭಟರು ಇವನ್ಯಾರೋ ತಲೆ ಸರಿಯಿಲ್ಲದವನೆಂದು ಭಾವಿಸಿ ಅಲ್ಲಿಂದ ಹೊರಟರು.

ಭಟರು ತೋಟದಲ್ಲಿ ಕೆಲಸ ಮಾಡುತ್ತಿದ್ದವನ ಬಳಿ ಬಂದು, ‘ನಮ್ಮ ರಾಜರ ಒಂಟೆ ಕಾಣೆಯಾಗಿದೆ. ನೀನು ಅದನ್ನು ನೋಡಿದ್ದೀಯಾ’ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಅವನು, ‘ನಿಮಗೆ ಕಾಣಿಸುತ್ತಿಲ್ಲವೇ? ಮರದಿಂದ ಮಾವಿನ ಕಾಯಿ ಇಳಿಸುತ್ತಿದ್ದೇನೆ’ ಎಂದನು.

ರಾಜ ಭಟರು, ‘ನೋಡು, ನಾವು ಮಾವಿನ ಕಾಯಿ ಕೇಳಿಲ್ಲ. ತಪ್ಪಿಸಿಕೊಂಡು ಬಂದ ಒಂಟೆ ಇಲ್ಲಿಗೆ ಬಂದಿದೆಯಾ ಎಂದು ಕೇಳಿದೆವು’ ಎಂದರು. ಅದಕ್ಕೆ ಉತ್ತರವಾಗಿ ಈತ ‘ಈ ಮರದಲ್ಲಿ ಫಸಲು ಕಡಿಮೆ. ಪಕ್ಕದ ಮರದಲ್ಲಿ ದೊಡ್ಡ ದೊಡ್ಡ ಮಾವಿನ ಕಾಯಿಗಳಿವೆ. ಬೇಕೆಂದರೆ ಮರದಿಂದ ಇಳಿಸಿ ಕೊಡುವೆ’ ಎಂದನು. ರಾಜ ಭಟರು ಇವನ ಉತ್ತರ ಕೇಳಿ ಇವನು ಸಹ ಮೊದಲಿನವನಂತೆಯೇ ಮೂರ್ಖನಿರಬೇಕು ಎಂದು ಭಾವಿಸಿ ಅಲ್ಲಿಂದ ಹೊರಟರು.

ಬಟ್ಟೆ ನೇಯುತ್ತಿದ್ದ ಮೂರನೆಯವನ ಬಳಿ ಬಂದ ರಾಜ ಭಟರು, ‘ರಾಜರ ಒಂಟೆ ತಪ್ಪಿಸಿಕೊಂಡು ಹೋಗಿದೆ. ನೀನು ನೋಡಿದಿಯಾ’ ಎಂದು ಪ್ರಶ್ನಿಸಿದರು. ಮೂರನೆಯವ ಸಹ ವಿರುದ್ಧ ಉತ್ತರ ಕೊಡಲು ಪ್ರಾರಂಭ ಮಾಡಿದ. ‘ಕೆಲವೊಮ್ಮೆ ನೇಯ್ಗೆ ಚೆನ್ನಾಗಿರುತ್ತದೆ. ಒಂದೊಂದು ದಿನ ಮಾತು ಮಾತಿಗೂ ತುಂಡಾಗಿ ಹೋಗುತ್ತದೆ’ ಎಂದನು! ರಾಜ ಭಟರು ಅವನ ಮಾತಿಗೆ ಸಿಟ್ಟಾಗಿ ‘ನೀನು ರಾಜನ ಒಂಟೆ ನೋಡಿದಿಯಾ ತಿಳಿಸು. ಇದೇನು ನಿನ್ನ ಉತ್ತರ’ ಎಂದು ಗುಡುಗಿದರು. ಮೂರನೆಯವನು ಆ ಮಾತಿಗೆ, ‘ನನಗೆ ಮದುವೆ ಸಮಯದಲ್ಲಿ ನೇಯ್ಗೆ ಕೆಲಸ ಜಾಸ್ತಿಯಿರುತ್ತದೆ. ಆಗ ಕೈಯಲ್ಲಿ ಸ್ವಲ್ಪ ಹಣವಿರುತ್ತದೆ. ಬೇರೆ ದಿನಗಳಲ್ಲಿ ಜೀವನ ನೆಡೆಸುವುದು ತುಂಬಾ ಕಷ್ಟ. ವರ್ತಕರು ನಮ್ಮನ್ನು ತುಳಿದು ಹಾಕುತ್ತಾರೆ’ ಎಂದನು.

ಇವನು ಸಹ ಉಳಿದಿಬ್ಬರಂತೆಯೇ ತಲೆಕೆಟ್ಟವ ಎಂದು ಭಾವಿಸಿ ಅಲ್ಲಿಯೇ ಇದ್ದ ಈ ಮೂವರ ತಾಯಿಯ ಬಳಿ ಬಂದರು. ‘ಅಮ್ಮಾ, ನಮ್ಮ ಮಹಾರಾಜರ ಒಂಟೆಯನ್ನು ನೋಡಿದ್ದೀರಾ’ ಎಂದು ವಿಚಾರಿಸಿದರು. ಆ ತಾಯಿಯು ‘ಹೌದು, ನೋಡಿದ್ದೇನೆ. ನನ್ನ ಮಕ್ಕಳು ಆ ಒಂಟೆಯನ್ನು ಹೊಡೆದು ಕೊಂದು, ಬಚ್ಚಿಟ್ಟಿದ್ದಾರೆ’ ಎಂದಳು. ರಾಜ ಭಟರಿಗೆ ಅವಳ ಉತ್ತರ ಕೇಳಿ ತವಕ ಹೆಚ್ಚಾಯಿತು. ಮಹಾರಾಜರ ಒಂಟೆ ಬಗ್ಗೆ ಕೊನೆಗೂ ತಿಳಿಯಿತು ಎಂದುಕೊಂಡರು.

‘ಹೌದಾ?! ಎಲ್ಲಿ? ಯಾವಾಗ? ತಿಳಿಸು’ ಎಂದರು. ರಾಜ ಭಟರಿಗೆ ಆ ತಾಯಿಯು ‘ಮೂವರು ಮಕ್ಕಳು ಸೇರಿ ನನ್ನನ್ನು ಮದುಮಗಳಾಗಿ ಮಾಡಿದ ದಿನ!’ ಎಂದಳು. ರಾಜ ಭಟರು ಇಲ್ಲಿರುವ ಜನರೆಲ್ಲಾ ಮೂರ್ಖರಿರಬೇಕೆಂದು, ಅವಳನ್ನು ವಿಚಾರಿಸಿ ಪ್ರಯೋಜನವಿಲ್ಲವೆಂದು ಅಲ್ಲಿಂದ ಮುಂದೆ ಹೊರಟರು. ಎಲ್ಲಿಯೂ ಒಂಟೆಯ ಸುಳಿವು ಸಿಗದೆ ಅರಮನೆ ಕಡೆಗೆ ಪಯಣ ಹೊರಟರು.

ಕೃಪೆ: ವೇದಾವತಿ ( ಸಾಮಾಜಿಕ ಜಾಲತಾಣ)

ರಾಜಕೀಯ

ಸಿಎಂ, ಡಿಸಿಎಂಗೆ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ: ಬಿ.ವೈ. ವಿಜಯೇಂದ್ರ

ಸಿಎಂ, ಡಿಸಿಎಂಗೆ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ: ಬಿ.ವೈ. ವಿಜಯೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ದೂರುದಾರನಿಗೆ ಮಾಸ್ಕ್ ಹಾಕಿಸಿದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಇದೀಗ ತಾವೇ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ

[ccc_my_favorite_select_button post_id="112958"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!