ಪುಣೆ: ಬವ್ಧಾನ್ ಬುದ್ರುಕ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡ ಪರಿಣಾಮವಾಗಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದರು.
ಕೆಕೆ ಬಿಲ್ಡರ್ಸ್ ಒಡೆತನದ ಬೆಟ್ಟದ ಮೇಲೆ ಈ ದುರ್ಘಟನೆ ಸಂಭವಿಸಿದ್ದು, ಈ ಪ್ರದೇಶದಲ್ಲಿ ದಟ್ಟ ಮಂಜು ಕವಿದಿರುವುದು ಇದಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಮೃತರನ್ನು ಪೈಲಟ್ಗಳಾದ ಪರಂಜೀತ್ ಸಿಂಗ್, ಜಿ.ಕೆ. ಪಿಳ್ಳೆ ಹಾಗೂ ಎಂಜಿನಿಯರ್ ಪ್ರೀತಂ ಭಾರದ್ವಾಜ್ ಎಂದು ಗುರುತಿಸಲಾಗಿದೆ.
Helicopter Crash in Pune Bavhan Claims Three Lives
— Pune Pulse (@pulse_pune) October 2, 2024
Pune, October 2, 2024 – A tragic helicopter crash occurred in Pune's Bavdhan Budruk area, resulting in the deaths of three individuals. The accident took place on a hill owned by KK Builders, with initial reports suggesting that… pic.twitter.com/Qizmac1Hr6
ಅಪಘಾತದ ಕುರಿತು ಹಿಂಗೇವಾಡಿ ಪೊಲೀಸ್ ನಿಯಂತ್ರಣ ಕೊಠಡಿಗೆ ಸುಮಾರು 6:45 AM ಕ್ಕೆ ವರದಿಯಾಗಿದೆ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ವಾಹನಗಳು ಮತ್ತು ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವೆಗಳನ್ನು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸಲು ಘಟನಾ ಸ್ಥಳಕ್ಕೆ ರವಾನಿಸಲಾಯಿತು.
ಅಪಘಾತಕ್ಕೆ ಸ್ವಲ್ಪ ಮೊದಲು ಹೆಲಿಕಾಪ್ಟರ್ ಆಕ್ಸ್ಫರ್ಡ್ ಗಾಲ್ಫ್ ಕ್ಲಬ್ನಲ್ಲಿರುವ ಹೆಲಿಪ್ಯಾಡ್ನಿಂದ ಟೇಕಾಫ್ ಆಗಿತ್ತು. ಪ್ರತ್ಯಕ್ಷದರ್ಶಿಗಳು ಮಂಜಿನಿಂದಾಗಿ ಆವಸಿರುವ ಕಾರಣ ದುರ್ಘಟನೆ ಕಾರಣ ಎಂದಿದ್ದಾರೆ.
ಸ್ಥಳೀಯ ಅಗ್ನಿಶಾಮಕ ಇಲಾಖೆ ಮತ್ತು ಪುಣೆ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಪಿಎಂಆರ್ಡಿಎ) ನಾಲ್ಕು ಅಗ್ನಿಶಾಮಕ ವಾಹನಗಳನ್ನು ಕಳುಹಿಸಿದರೆ, ಸರ್ಕಾರಿ ಆಂಬ್ಯುಲೆನ್ಸ್, 108 ತಕ್ಷಣದ ವೈದ್ಯಕೀಯ ಬೆಂಬಲವನ್ನು ಒದಗಿಸಿದೆ.
ಅಪಘಾತಕ್ಕೆ ನಿಖರವಾದ ಕಾರಣವನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಮತ್ತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುವುದನ್ನು ಮುಂದುವರೆಸಿದ್ದಾರೆ.