ದೊಡ್ಡಬಳ್ಳಾಪುರ: ಬೃಹತ್ ಹೆಬ್ಬಾವೊಂದು ಜೋಳ ಬೆಳೆದಿದ್ದ ಹೊಲದಲ್ಲಿ ಸೇರಿ ರೈತರನ್ನು ಆತಂಕಕ್ಕೆ ದೂಡಿರುವ ಘಟನೆ Doddaballapura ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ನಡೆದಿದೆ.
ಚನ್ನವೀರನಹಳ್ಳಿ ಸಮೀಪದ ಹಳೇಕೋಟೆ ಗ್ರಾಮದ ವಿಎಸ್ಎಸ್ ಎನ್ ಮಾಜಿ ಅಧ್ಯಕ್ಷ ಮುನಿಕುಮಾರ್ ಅವರ ಜೋಳದ ಹೊಲದಲ್ಲಿ ಹುಲ್ಲು ಕುಯ್ಯುವ ಸಂಧರ್ಭದಲ್ಲಿ ಅರಸರಾಜು ಎನ್ನುವವರಿಗೆ ಹೆಬ್ಬಾವು ಕಂಡು ಬಂದಿದೆ.
Doddaballapura; ಜೋಳದ ಹೊಲದಲ್ಲಿ ಬೃಹತ್ ಹೆಬ್ಬಾವು.. ರೈತರು ಕಂಗಾಲು..!#latestupdate #latedtnews pic.twitter.com/GFUDzRUYRX
— Harithalekhani (@harithalekhani) November 19, 2024
ಕೂಡಲೇ ಮುನಿಕುಮಾರ್ ಅವರ ಗಮನಕ್ಕೆ ತರಲಾಗಿದ್ದು, ಬಳಿಕ ಮುನಿಕುಮಾರ್ ಅವರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಉರಗ ತಜ್ಞ ಪ್ರಶಾಂತ್ ಅವರನ್ನು ಸ್ಥಳಕ್ಕೆ ಕರೆಯಿಸಿ ಹಾವನ್ನು ಸೆರೆಹಿಡಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅರಸರಾಜು, ಕೃಷ್ಣಮೂರ್ತಿ, ಗೋವಿಂರಾಜು, ರಮೇಶ್ ಮತ್ತಿತರರಿದ್ದರು.