ಶನಿವಾರ, ಡಿಸೆಂಬರ್ 07, 2024 ದೈನಂದಿನ ರಾಶಿ ಭವಿಷ್ಯ| Astrology..
ಮೇಷ ರಾಶಿ: ವ್ಯಾಪಾರದ ಪಾಲುದಾರರು ನಿಮ್ಮ ಹೊಸ ಯೋಜನೆ ಬಗ್ಗೆ ಉತ್ಸಾಹ ತೋರಿಸುತ್ತಾರೆ. ಪ್ರೇಮಿಯ ಜತೆ ಕಾಲ ಕಳೆಯುತ್ತೀರಿ. ನೀವು ಬಯಸಿದಂತೆ ಹೆಚ್ಚಿನ ವಿಷಯಗಳು ನಡೆಯುವಾಗ ಈ ದಿನ ನಿಮಗೆ ಉತ್ತಮವಾಗಿರುತ್ತದೆ.
ವೃಷಭ ರಾಶಿ: ವಿವಾಹಿತರಾಗಿದ್ದರೆ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಕೆಲಸದ ಮೇಲೆ ಗಮನ ಹರಿಸಿ, ವ್ಯಾಜ್ಯಗಳಿಂದ ದೂರವಿರಿ. ಹೊಸ ವಸ್ತುಗಳನ್ನು ಖರೀದಿ ಮಾಡಬಹುದು. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಾನಸಿಕ ಶಾಂತಿಗಾಗಿ ನಿಮ್ಮ ಉದ್ವೇಗವನ್ನು ಕಡಿಮೆ ಮಾಡಿ.
ಮಿಥುನ ರಾಶಿ: ಆರೋಗ್ಯ ದೃಷ್ಟಿಯಿಂದ ಉತ್ತಮ ದಿನವ್ಯಾಜ್ಯಗಳನ್ನು ಸೌಹಾರ್ದತೆ ಯಿಂದ ಪರಿಹರಿಸಲು ಪ್ರಯತ್ನಿಸಿ. ಮಕ್ಕಳಿಂದ ಸಂತೋಷದ ಸುದ್ದಿ. ಇಲ್ಲಿಯವರೆಗೆ ಹೆಚ್ಚು ಯೋಚಿಸದೆ ಹಣವನ್ನು ಖರ್ಚು ಮಾಡುತ್ತಿದ್ದವರು ಜೀವನದಲ್ಲಿ ಅದರ ಮಹತ್ವವನ್ನು ಅರ್ಥಮಾಡಿ ಕೊಳ್ಳಬಹುದು.
ಏಕೆಂದರೆ ಹಣದ ತುರ್ತು ಅಗತ್ಯತೆ ಉದ್ಭವಿಸಬಹುದು.
ಕಟಕ ರಾಶಿ: ವೈಯಕ್ತಿಕ ಜೀವನದ ಜತೆಗೆ ಧರ್ಮಾರ್ಥ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಿ. ಹೆಚ್ಚಿನ ಸಾಧನೆ ಮತ್ತು ಉನ್ನತ ಅಧಿಕಾರ ಪಡೆಯುತ್ತೀರಿ. ನಿಮ್ಮ ದಾರಿಯಲ್ಲಿ ನಿಲ್ಲುವ ಪ್ರತಿಯೊಬ್ಬರು ನಿಮ್ಮ ತಾಳ್ಮೆಯ ವರ್ತನೆಯನ್ನು ಮೆಚ್ಚುತ್ತಾರೆ. ಇದು ಬರಹಗಾರರು, ಶಿಕ್ಷಕರು ಮತ್ತು ವಿಮಾ ಕ್ಷೇತ್ರದ ಜನರಿಗೆ ಅಸಾಧಾರಣ ಪ್ರಯೋಜನಕಾರಿ, ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ.
ಸಿಂಹ ರಾಶಿ: ಐಟಿ ವೃತ್ತಿಪರರಿಗೆ ತಮ್ಮ ಯೋಗ್ಯತೆ ಸಾಬೀತುಪ ಡಿಸಲು ಅವಕಾಶ ಇದೆ. ಈಶ್ವರನ ಪೂಜೆಯಿಂದ ಕುಟುಂಬ ಜೀವನ ಸಂತೋಷವಾಗಿರುತ್ತದೆ. ಮಾನಸಿಕವಾಗಿ ಸದೃಢವಾಗಿರ ಲು ಇಂದು ಯೋಗ ಮತ್ತು ಧ್ಯಾನ ಮಾಡಿ.ಕೆಲಸದಲ್ಲಿ ಇಂದು ಉತ್ತಮ ದಿನ. ಆದರೆ ಒಂದೇ ಕೆಲಸಕ್ಕೆ ಅಂಟಿಕೊಳ್ಳುವುದು ಬೇಡ. ಲಾಭದಾಯಕ ಕೆಲಸಗಳತ್ತ ಯೋಚಿಸುವುದು ಒಳಿತು.
ಕನ್ಯಾ ರಾಶಿ: ಹಳೆಯ ಸ್ನೇಹಿತ ಹಣವನ್ನು ಕೇಳಬಹುದು. ಅವರಿಗೆ ಸಹಾಯ ಮಾಡಿದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ತೊಂದರೆಗೊಳ ಗಾಗಬಹುದು ಸ್ಥಿರ ಆಸ್ತಿಗಳ ಖರೀದಿ ಮತ್ತು ಮಾರಾಟ ಇರಬಹುದು.
ತುಲಾ ರಾಶಿ: ಒತ್ತಡ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೊಸ ಕುಟುಂಬದ ಸದಸ್ಯರ ಆಗಮನದ ಸುದ್ದಿ ಕೇಳಲಿದ್ದೀರಿ. ಪತಿಪತ್ನಿಯರ ಕಲಹ. ವ್ಯಾಪಾರದಲ್ಲಿ ನಿಮ್ಮ ಮಕ್ಕಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸು ತ್ತಾರೆ. ಬಂಡವಾಳದ ಸರಿಯಾದ ಹೂಡಿಕೆಯ ಬಗ್ಗೆ ಚಿಂತಿಸಲಾಗುವುದು. ಕಲಾವಿದರಿಗೆ ದಿನವು ವಿಶೇಷವಾಗಿ ಒಳ್ಳೆಯದು.
ವೃಶ್ಚಿಕ ರಾಶಿ: ಕ್ರೀಡೆ-ಹೊರಾಂಗಣ ಚಟುವಟಿಕೆ ನಿಮ್ಮ ಚೈತನ್ಯ ಹೆಚ್ಚಿಸುತ್ತದೆ. ಸ್ನೇಹಿತರ ಸಹಾಯ. ಪ್ರೇಮಿಯ ಭೇಟಿ. ಇಂದು ಪ್ರಮುಖ ವಿಷಯಗಳನ್ನು ಸ್ನೇಹಿತರೊಂದಿಗೆ ಚರ್ಚಿಸಬ ಹುದು, ವ್ಯಾಪಾರ ವ್ಯವಹಾರ ಗಳಲ್ಲಿ ಬಹಳ ಎಚ್ಚರಿಕೆ ಅಗತ್ಯ. ನೀವು ವಿಮೆ ಅಥವಾ ಹೂಡಿಕೆಗೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ಮಾಡುತ್ತಿದ್ದರೆ, ಈ ದಿನವು ನಿಮಗೆ ಮಂಗಳಕರವಾಗಿರುತ್ತದೆ.
ಧನಸ್ಸು ರಾಶಿ: ಅನುಮಾನದ ಸ್ವಭಾವ, ಸೋಲಿಗೆ ಕಾರಣವಾಗಬ ಹುದು. ಹಣದ ಗಳಿಕೆ ಚೆನ್ನಾಗಿದೆ. ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯುತ್ತೀರಿ. ಸಂವಹನಗಳು ಮತ್ತು ಚರ್ಚೆಗಳು ಸರಿಯಾಗಿ ನಡೆಯದಿದ್ದರೆ ಶಾಂತತೆಯನ್ನು ಕಳೆದುಕೊಳ್ಳಬಹುದು. ನೀವು ಮಾತನಾಡುವ ಮೊದಲು ಯೋಚಿಸಿ.
ಮಕರ ರಾಶಿ: ಹಣವನ್ನು ಬೆಟ್ಟಿಂಗ್ನಲ್ಲಿ ಖರ್ಚು ಮಾಡುವರಿಗೆ ಇಂದು ನಷ್ಟದ ಸಾಧ್ಯತೆ. ವೈಯಕ್ತಿಕ ಮತ್ತು ಗೌಪ್ಯ ವಿಚಾರವನ್ನು ಯಾರೊಂ ದಿಗೂ ಹಂಚಿಕೊಳ್ಳಬೇಡಿ. ಪ್ರಮುಖ ಜನರೊಂದಿಗೆ ಸಂವಹನ ನಡೆಸುವಾಗ ಜಾಗರೂಕರಾಗಿರಿ. ನೀವು ಹಿರಿಯರು ಅಥವಾ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಬಹುದು.
ಕುಂಭ ರಾಶಿ: ಸಂತನಿಂದ ಅಧ್ಯಾತ್ಮಿಕ ಜ್ಞಾನ ಮತ್ತು ಸಾಂತ್ವನ ಸಿಗುವ ಸಾಧ್ಯತೆ. ಹಣದ ಪರಿಸ್ಥಿತಿಯಲ್ಲಿ ಸುಧಾರಣೆ. ನೀವು ಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ನ್ಯಾಯಾಲಯವು ಇಂದು ನಿಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.
ಮೀನ ರಾಶಿ: ನೀವು ಉಳಿಸಿರುವ ಹಣ, ದೊಡ್ಡ ಸಮಸ್ಯೆಯಿಂದ ಪಾರು ಮಾಡುತ್ತದೆ. ಪತ್ನಿಯ ಸಾಧನೆಯ ಶ್ಲಾಘನೆ ಉಪನ್ಯಾಸ-ವಿಚಾರಗೋಷ್ಠಿ ಹೆಚ್ಚಿಸಬಹುದು. ಮ್ಯಾನಿಪ್ಯುಲೇಷನ್ ಮಾಡುವ ಮೂಲಕ ಕೆಲಸ ಮಾಡುವಿರಿ. ಯಾವುದೇ ದೊಡ್ಡ ವ್ಯಾಪಾರ ಸಂಬಂಧಿತ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಕಾಲ.
ಸ್ಕಂದ – ಸುಬ್ರಹ್ಮಣ್ಯ ಷಷ್ಠೀ, ಚಂಪಾಷಷ್ಠೀ, ಮಾರ್ತಾಂಡ ಉತ್ಸವ ಸಮಾಪ್ತಿ, ಮಲ್ಹಾರಿ ಉತ್ಸವ ಸಮಾಪ್ತಿ, ಶ್ರೀಸೂಗೂರೇಶ್ವರ ಜೋಡು ರಥೋತ್ಸವ (ರಾಯಚೂರು).
ರಾಹುಕಾಲ: 09:00AM ರಿಂದ 10:30AM
ಗುಳಿಕಕಾಲ: 06:00AM ರಿಂದ 07:30AM
ಯಮಗಂಡಕಾಲ: 01:30PM ರಿಂದ 03:00PM