ದೊಡ್ಡಬಳ್ಳಾಪುರ: ಬೆಳೆಗಳಿಗೆ ದೃಷ್ಠಿ ತಾಕದಂತೆ ಮಾಡಲು ಮನೆಯಲ್ಲಿ ಬಳಸಿ ತೂತು ಹೋಗಿರುವ ಮಣ್ಣಿನ ಕರಿ ಮಡಿಕೆಗೆ ಸುಣ್ಣ ಬಳಿದು, ಮೂಗು, ವಿಕಾರ ಕಣ್ಣುಗಳನ್ನು ತಿದ್ದಿ ರೈತರು ತಮ್ಮ ಹೊಲದಲ್ಲಿಯೇ ದೊರೆಯುವ ಕೋಲುಗಳಿಗೆ ಹಳೇ ಬಟ್ಟೆ ಸುತ್ತಿ ಬೆದರು ಬೊಂಬೆಗಳನ್ನು ನಿಲ್ಲಿಸುತ್ತಿದ್ದರು.
ಆದರೆ ಮಣ್ಣಿನ ಕರಿ ಮಡಿಕೆಗಳು ಕಣ್ಮರೆಯಾಗಿರುವ ಈ ದಿನಗಳಲ್ಲಿ ತಾವು ಬೆಳೆದ ಬೆಳಗಳಿಗೆ ದೃಷ್ಠಿ ತಾಕದಂತೆ ತಡೆಯಲು ರೈತರು ಹೈಟೆಕ್ ವಿಧಾನ (sreeleela) ಕಂಡುಕೊಂಡಿದ್ದಾರೆ.
ವಿವಿಧ ಸಿನಿಮಾ ಮೋಹಕ ತಾರೆಯರ ಹಾಗೂ ಇತ್ತೀಚೆಗೆ ರಾಮನಗರ, ಮಂಡ್ಯ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚು ಜನಪ್ರಿಯ ದೃಷ್ಠಿ ಬೊಂಬೆಯಾಗಿ ಬಳಸುತ್ತಿದ್ದು, ಸಿನಿಮಾ ನಟಿಯರ ಭಾವ ಚಿತ್ರದ ಫ್ಲೆಕ್ಸ್ಗಳನ್ನು ಬೆಳೆಗಳ ನಡುವೆ ನೇತುಹಾಕುತ್ತಿದ್ದಾರೆ.
ರಸ್ತೆಯಲ್ಲಿ ಹೋಗುವವರು ಬೆಳೆ ಹೇಗಿದೆ ಎಂದು ನೋಡುವುದಕ್ಕು ಮುನ್ನವೇ ಥಟ್ಟನೆ ಕಣ್ಣಿಗೆ ಬಿಳುತ್ತಿರುವುದೇ ಈ ಸಿನಿಮಾದ ಮೋಹಕ ತಾರೆಯರ ಫ್ಲೆಕ್ಸ್ಗಳು.
ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಆರೂಢಿ ರಸ್ತೆ ಬದಿಯಲ್ಲಿನ ಸುಂಗಧ ರಾಜ ಹೂವಿನ ಬೆಳೆಯ ನಡುವೆ ನಿಲ್ಲಿಸಲಾಗಿರುವ ಮೋಹಕ ತಾರೆ ಶ್ರೀಲೀಲಾ ಪೋಟೋ ಬಳಸಲಾಗಿದೆ.