ದೊಡ್ಡಬಳ್ಳಾಪುರ (Doddaballapura): ಗೌರಿಬಿದನೂರು ಮತ್ತು ದೇವರಪಲ್ಲಿ ರೈಲು ನಿಲ್ದಾಣಗಳ ನಡುವಿನ ವಿದುರಾಶ್ವತ್ಥ ಸಮೀಪ ಸುಮಾರು 60 ವರ್ಷದ ಅಪರಿಚಿತ ವೃದ್ಧೆ ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ.
ಈ ಕುರಿತು ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 11/2025 ಕಲಂ 194 BNSS ರೀತ್ಯಾ ಪ್ರಕರಣ ಧಾಖಲು ಮಾಡಿಕೊಂಡಿದ್ದು ಮೃತಳ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.
ಮೃತರ ಚಹರೆ 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡನೆಯ ಮುಖ, ತಲೆಯಲ್ಲಿ ಸುಮಾರು ಒಂದು ಅಡಿ ಉದ್ದದ ಕಪ್ಪು- ಬಿಳಿ ಮಿಶ್ರಿತ ತಲೆ ಕೂದಲು ಇದ್ದು, ಸಾಧಾರಣವಾದ ಮೈಕಟ್ಟು ಹೊಂದಿರುತ್ತಾರೆ.
ಮೃತಳು ಬಳಿ ಒಂದು ಎಲೆ ಅಡಿಕೆ ಚೀಲ ಇರುತ್ತದೆ.
ಬಟ್ಟೆಗಳು: ಪಿಂಕ್ ಕುಂಕಮ ಬಣ್ಣದ ಜಾಕೆಟ್, ನೀಲಿ-ಬಿಳಿ ಮಿಶ್ರಿತ ಹೂ ಡಿಸೈನ್ ವುಳ್ಳ ಬಿಸ್ಕತ್ ಕಲರ್ ಸೀರೆ ಉಟ್ಟಿದ್ದು ಕಾಲಿನಲ್ಲಿ ಬಿಳಿಯ ಒಂದು ಜೊತೆ ಚಪ್ಪಲಿ ಇರುತ್ತದೆ.
ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, 9902193960 ಸಂಪರ್ಕಿಸಲು ಪ್ರಕಟಣೆ ಕೋರಿದೆ.