BJP high command blocked the appointment

ತಾರಕಕ್ಕೇರಿದ ಬಿಜೆಪಿ ಬಣ ಬಡಿದಾಟ.. ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸಂಸದ ಡಾ.ಕೆ ಸುಧಾಕರ್‌

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ತಾರಕಕ್ಕೇರಿದೆ. ಸಂಸದ ಡಾ.ಕೆ.ಸುಧಾಕರ್‌ (Dr K Sudhakar) ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ವರಿಷ್ಠರಿಗೆ ದೂರನ್ನು ನೀಡಲು ಮುಂದಾಗಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರದ ಸಂಸದ ಡಾ ಕೆ ಸುಧಾಕರ್, 2019ರಲ್ಲಿ ಬಿಜೆಪಿಗೆ‌ ಮರಳು ಭೂಮಿಯಂತ ವಾತಾವರಣ ಚಿಕ್ಕಬಳ್ಳಾಪುರದಲ್ಲಿದೆ ಅಲ್ಲಿ ನನ್ನ ಇಡೀ ರಾಜಕೀಯ ಭವಿಷ್ಯವನ್ನು, ನನ್ನ ನಂಬಿರುವ ಸಾವಿರಾರು ಸಹಚರರ ಭವಿಷ್ಯವನ್ನೆಲ್ಲ ಒತ್ತೆ ಇಟ್ಟು ಬಿಜೆಪಿ ಸೇರಿದ್ದೆ ಇದು ಇತಿಹಾಸ.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿಗಳಾಗಿ ಮಾಡಬೇಕೆಂದು, ಅವತ್ತಿನ ಸಂದರ್ಭದಲ್ಲಿ ಸೆಲ್ಪ್ ರೆಸ್ಪೆಕ್ಟ್ ಗಾಗಿ ಹೋರಾಟ ಮಾಡಿ ಈ ಪಕ್ಷಕ್ಕೆ ಬಂದೆ.

ಅವರು ರಾಜೀನಾಮೆ ಕೊಟ್ಟ ನಂತರ ಬೊಮ್ಮಾಯಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ರು. ಅವರ ಜೊತೆಗೂ ನಾನು‌ ಹೆಗಲಿಗೆ ಹೆಗಲ ಕೊಟ್ಟು ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಂತಿಮವಾಗಿ ನನಗೆ ಪಕ್ಷದ ತತ್ವ, ಸಿದ್ದಾಂತ, ಆದರ್ಶ ಅಷ್ಟೇ ಮುಖ್ಯ.. ಎಂಬಂತೆ ಪಕ್ಷ ಏನ್ ಸೂಚಿಸಿದೆ ಅದನ್ನ ಮಾಡ್ಕೊಂಡ್ ಬಂದಿದ್ದೇನೆ.

ಸೋಲೇ ಇಲ್ಲದೇ ಇರುವ ಚಿಕ್ಕಬಳ್ಳಾಪುರದ ವಾತಾವರಣದಲ್ಲಿ, ಪಕ್ಷದ ನೆಲೆಯೇ ಇಲ್ಲದೆ ಇರುವ ಕಡೆ ನನಗೆ ಒಂದು ಸಾರಿ ಆಘಾತ ಆಯ್ತು. ಅದಕ್ಕೆ ಅನೇಕ ಕಾರಣಗಳಿದೆ.. ಇವತ್ ಪಕ್ಷ ಕಟ್ಟುತ್ತೀನಿ ಅಂತ ಹೊರಟಿರೋರು 2023ರಲ್ಲಿ 15-20 ಜನರನ್ನ ಟಾರ್ಗೆಟ್ ಮಾಡಿ, ಯಾವರೀತಿ ಸೋಲಿಸುವ ಪ್ರಯತ್ನ ಮಾಡಿದ್ದೀರಿ. 2019ರಲ್ಲಿ ನಮ್ಮ ವಿರುದ್ಧ ಎಷ್ಟೇಲ್ಲ ಸುಳ್ಳು ಹಬ್ಬಿಸಿದ್ದರು ತಿಳಿದಿದೆ.

ಇವತ್ತು ಪಕ್ಷದಲ್ಲಿ ಸಂಘಟನಾತ್ಮಕವಾಗಿ ನೇಮಕಾತಿಗಳು ನಡೆಯುತ್ತಿವೆ. ಆಂತರಿಕ ಪ್ರಜಾಪ್ರಭುತ್ವ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು, ಸ್ವಜನ ಪಕ್ಷಪಾತಕ್ಕೆ ಮಣೆ ಹಾಕೋದಿಲ್ಲ, ವಂಶ ಪಾರಂಪರ್ಯಕ್ಕೆ ರಾಜಕಾರಣಕ್ಕೆ ಮಣೆ ಹಾಕಲ್ಲ ಎಂಬ ಸಿದ್ದಾಂತ ನಮ್ಮ ಪಕ್ಷದಲ್ಲಿ ಇದೆ ಎಂದು ನಾನು ನಂಬಿದ್ದೆ.

ಸಂತೋಷ್, ಪ್ರಹ್ಲಾದ್ ಜೋಷಿ, ಅಶೋಕ್, ಬೊಮ್ಮಾಯಿಯವರ ಆಶೀರ್ವಾದ, ಬೆಂಬಲ ಇದ್ದಿದ್ದರಿಂದ. ಒಂದು ಸೋಲು, ಆಘಾತ ಆದರೂ ಲೋಕಸಭೆ ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಟಿಕೆಟ್ ನನಗೆ ಬರಬೇಕಿತ್ತು. ಪಕ್ಷಕ್ಕೆ ತನು,ಮನ,ದನ ಅರ್ಪಣೆ ಮಾಡಿ, ಪಕ್ಷಕ್ಕೆ ಅನೇಕ ಮಾಜಿ ಶಾಸಕರ ಸೇರ್ಪಡೆ ಮಾಡಿ ಪಕ್ಷವನ್ನು ತಳಹಂತದಿಂದ ಸಂಘಟನೆ ಮಾಡ್ತಾ ಇದ್ದೀನಿ.

ಪಕ್ಷದ ಚುನಾವಣೆಗಳು ಸಂವಿಧಾನ ಪೂರಕವಾಗಿ ಆಗಬೇಕು. ಆಂತರಿಕ ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡಬೇಕಾಗುತ್ತೆ, ಆದರೆ ಯಾವುದೇ ಚುನಾವಣೆಯನ್ನು ಮಾಡಿಲ್ಲ.

ಇವತ್ ಒಂದು ಗಂಟೆಗೆ ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಏಕ ಚಕ್ರಾಧಿಪತ್ಯದ ರೀತಿಯಲ್ಲಿ, ನನ್ನದು ನಡೆಯುತ್ತೆ, ತಮ್ಮ ಹಿಂದೆ ಮುಂದೆ ಓಡಾಡುವ ಯೆಸ್ ಬಾಸ್, ಜೀ ಹುಜೂರು ಅನ್ನೋರನ್ನು ನೇಮಕ ಮಾಡಿಕೊಳ್ಳೋದು, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಾಗಳ ನೇಮಕ ಮಾಡಿಕೊಳ್ಳುವ ಕೆಲಸ ಆಗುತ್ತಿದೆ.

ಮಿಸ್ಟರ್ ಬಿವೈ ವಿಜಯೇಂದ್ರ ಅವರು ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದೀರಲ್ಲ ಇವರ ಧೋರಣೆ ಅನೇಕ ನಾಯಕರಿಗೆ ನೋವನ್ನು ತಂದಿದೆ. ಇವರ ದರ್ಪ, ಅಹಂಕಾರ, ಕಾರ್ಯವೈಖರಿಯಿಂದ ಯಾರನ್ನೂ ವಿಶ್ವಾಸಕ್ಕೆ ತಗೊಂಡು ಹೋಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿಯಾಗಿದ್ದಾರೋ, ಅದಕ್ಕಿಂತ ಮೇಲಿದ್ದರೇನೋ ಗೊತ್ತಿಲ್ಲ, ಇವರ ಬಳಿ ಸಾವಿರಾರು ಕೋಟಿ ಇರಬಹುದೇನೋ ಗೊತ್ತಿಲ್ಲ. ಸೌಜನ್ಯಕ್ಕಾದರೂ ನನ್ನ ಜೊತೆ ವಿಜಯೇಂದ್ರ ಚರ್ಚೆ ಮಾಡಿಲ್ಲ.

ಸೋಲಿಸಲು ಹಾಲಿ ಶಾಸಕರ ಪ್ರಯತ್ನ

ಬಿಜೆಪಿ ಇಲ್ಲದ ಮರುಭೋಮಿಲಿ, ಕಾಂಗ್ರೆಸ್ ಸರ್ಕಾರದ ಅವಧಿಯ ನಡುವೆಯೂ ಉತ್ತಮ ಮತಗಳ ಅಂತರದಲ್ಲಿ ವಿಜೇತನಾದೆ..

ಇವರ ಹಿಂಬಾಲಕರು ಡಾಕ್ಟರ್ ನ ಸೋಲಿಸಬೇಕೆಂದು, ಟಿಕೆಟ್ ಯಿಂದ ಹಿಡಿದು ಚುನಾವಣೆಯಲ್ಲಿ ಏನೇ ಮಾಡಿ ಸೋಲಿಸಬೇಕು ಅಂತ ಹಾಲಿ ಶಾಸಕರು.. ಇವರ ಹಿಂಬಾಲಕರು.. ಅವರು ತಗೊಂಡಿದಕ್ಕಿಂತ ಜಾಸ್ತಿ ತಗೊಂಡೆ ಅದ್ ಬೇರೆ ವಿಚಾರ.‌ ಅದು ನಮ್ಮ ರಾಜಕೀಯ, ನಮ್ಮ ಅನುಭವ, ಜನರ ವಿಶ್ವಾಸ.

ಸೌಜನ್ಯಕ್ಕೂ ಮಾತಾಡಿಲ್ಲ, ನಾನು ಫೋನ್ ಮಾಡಿದ್ರು ರೆಸ್ಪಾಂಡ್ ಮಾಡಲ್ಲ, ಮೆಸೇಜ್ ಗೂ ರಿಪ್ಲೇ ಮಾಡಲ್ಲ. ಎರಡು ಸರಿ ಅಪಾಯಿಂಟ್ ಮೆಂಟ್ ಕೊಟ್ಟಿದ್ದು ಮುಂದಕ್ಕೆ ಹಾಕಿದ್ದಾರೆ, ಭೇಟಿಗೂ ಅವಕಾಶ ಕೊಡಲ್ಲ, ಆದರೆ ನಡ್ಡಾ ನನಗೆ ಅವಕಾಶ ಕೊಡ್ತಾರೆ. ಆರ್‌ಎಸ್ಎಸ್ ನಾಯಕರು ನಮಗೆ ಭೇಟಿಗೆ‌ ಸಮಯ ಕೊಡ್ತಾರೆ, ಸಮಾಲೋಚನೆ ಮಾಡ್ತಾರೆ.. ಅದರೆ ಇವರಲ್ಲಿ ಯಾವುದು ಇಲ್ಲ ಎಂದು ಅಸಮಧಾನ ಹೊರಹಾಕಿದರು.

ಬಿಜೆಪಿ ನಿಮ್ಮ ಸ್ವಂತ ಆಸ್ತಿನಾ? ಬನ್ನಿ ನೋಡೋಣ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಸೀಟ್ ಗೆಲ್ಲಿಸಿ ನೋಡೋಣ ಎಂದು ಚಾಲೆಂಜ್ ಮಾಡ್ತೀನಿ.

ನಮ್ಮನ್ನು ತುಳಿಯೋಕೆ, ಸಮಾಧಿ ಮಾಡೋಕೆ‌ ಹೊರಟಿದ್ದೀರಾ..? ಬಿಜೆಪಿಯಲ್ಲಿರುವ ಎಲ್ಲಾ‌ ಹಿರಿಯರನ್ನು ಮುಗಿಸುವ ಕೆಲಸ ಮಾಡ್ತಿದ್ದೀರಿ. ನಾನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೆ‌ ತಂದಿದ್ದೇನೆ. ಯಾವುದೇ ಕಾರಣಕ್ಕೂ ಇದನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿರಿಯ ಸಂಸದರಾದ‌ ಗೋವಿಂದ ಕಾರಜೋಳರನ್ನು ಹೊಡೆಯಲು ಹೋದವರನ್ನು ಅಧ್ಯಕ್ಷರಾಗಿ ಮಾಡಲು ಹೊರಟಿದ್ದೀರಿ. ಸಿಟಿ ರವಿ, ಬೊಮ್ಮಾಯಿ, ಯತ್ನಾಳ್, ರಮೇಶ್ ಜಾರಕಿಹೊಳಿ ನಿಮಗೆ ಯಾವ ಹಿರಿಯ ನಾಯಕರನ್ನು ಬಿಡುತ್ತಿಲ್ಲ. ರಮೇಶ್ ಜಾರಕಿಹೊಳಿಯನ್ನು ಮುಗಿಸಿದ್ರಿ, ನನ್ನ ಸಮಧಾನ ಮಾಡುವ ಪ್ರಯತ್ನ ಮುಗಿದಿದೆ, ಇನ್ನೂ ಏನಿದ್ರು ನಿಮ್ಮ ವಿರುದ್ಧ ಯುದ್ದ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೀವು ನೇಮಕ ಮಾಡಿರೋರು ರಿಯಲ್ ಎಸ್ಟೇಟ್ ನಿಂದ ಸ್ವಲ್ಪ ದುಡ್ಡು ತಂದು ಕೊಡಬಹುದು, ಆದರೆ ಅವರಿಂದ ಪಕ್ಷ ಗೆಲ್ಲಲು ಸಾಧ್ಯವಾಗೋದಿಲ್ಲ. ನನ್ನನ್ನು ಸೋಲಿಸಲು ಕಾರಣರಾದ ಸಂದೀಪ್ ರೆಡ್ಡಿಯನ್ನು ಅಧ್ಯಕ್ಷರಾಗಿ ಮಾಡಿದ್ದೀರಿ ಎಂದು ವಿಜಯೇಂದ್ರ‌ ವಿರುದ್ಧ ಸುಧಾಕರ್ ಹಿಗ್ಗಾ ಮುಗ್ಗಾ‌ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವತ್ತೆ ಹೇಳಿದ್ರು ಬಳಸಿ ಬಿಸಾಕ್ತಾರೆ ಅಂತ. ಆದಾಗ್ಯೂ ಇವರಿಗಾಗಿ ಬಂದರೆ ನಮ್ಮನ್ನು ಈ ಸ್ಥಿತಿಗೆ ತಂದಿದ್ದಾರೆ. ಆದರೆ ಜನರ ಆಶಿರ್ವಾದ ಇದೆ. ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ‌ರನ್ನು ಭೇಟಿಯಾಗುತ್ತೇನೆ. ಇವರ ಎಲ್ಲಾ ಬಂಡವಾಳವನ್ನು‌ ಅಮಿತ್ ಶಾ‌ ಬಳಿ‌ ಬಿಚ್ಚಿಡ್ತೀನಿ.

ಯಡಿಯೂರಪ್ಪ ಮತ್ತೆ ವಿಜಯೇಂದ್ರ‌ ಹೋಲಿಕೆಯೇ‌ ಬೇರೆ, ಯಡಿಯೂರಪ್ಪರ ಆದರ್ಶ ಮತ್ತೆ ಯೋಚನೆಯೇ‌ ಬೇರೆ.. ನಿಮ್ಮದು‌ ಹಠ ಮತ್ತೆ ದ್ವೇಷದ ರಾಜಕಾರಣ. ನಿಮ್ಮ ಧೋರಣೆಗೆ ನನ್ನ ಧಿಕ್ಕಾರ, ಇವರ ಅಹಂಕಾರಕ್ಕೆ ನನ್ನ ಧಿಕ್ಕಾರ, ಇವರ ಮನಸ್ಥಿತಿಗೆ ನನ್ನ ಧಿಕ್ಕಾರ, ವರಿಷ್ಠರಲ್ಲಿ ಮನವಿ ಇಷ್ಟೇ ಇವರ ಧೋರಣೆ ಬದಲಿಸುವಂತೆ ಅಥವ ಇವರನ್ನೇ ಬದಲಿಸುವಂತೆ ಮನವಿ ಮಾಡ್ತಿನಿ.

ಎಷ್ಟೆ ನೋವಾದ್ರು ಸಹಿಸಿದೆ, ನಮ್ಮ ಶಿಸ್ತನ್ನು ವೀಕ್ನೆಸ್ ಅಂದ್ಕೊಂಡ್ರು, ನಮ್ಮ ಒಳ್ಳೆತನವನ್ನ ಬಲಹೀನತೆ ಅಂದ್ಕೊಂಡ್ರೆ.. ನಮ್ ಶಕ್ತಿ ತೋರಿಸಬೇಕಾಗುತ್ತೆ ಎಂದ ಸುಧಾಕರ್ ಅವರು ವಿಜಯೇಂದ್ರ ವಿರುದ್ಧ ಹರಿಹಾಯ್ದರು.

ರಾಜಕೀಯ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಪ್ರತಿಪಕ್ಷದ ವೈಫಲ್ಯವೇ ಆಡಳಿತ ಪಕ್ಷಕ್ಕೆ ಲಾಭ: ವಿಜಯೇಂದ್ರ ವಿರುದ್ಧ ಯತ್ನಾಳ್ ವಾಗ್ದಾಳಿ

ಅಬಕಾರಿ ಹಗರಣದ ಬಗ್ಗೆ ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಏನೂ ಮಾತನಾಡಿಲ್ಲ. ಹೋರಾಟ ತಾರ್ಕಿಕ ಅಂತ್ಯ ಕಂಡಿಲ್ಲ. ವಿರೋಧ ಪಕ್ಷದ ವೈಫಲ್ಯದ ಲಾಭಆಡಳಿತ ಪಕ್ಷಕ್ಕೆ ಸಿಕ್ಕಿದೆ ಎಂದು ಶಾಸಕ ಬಸನಗೌಡ

[ccc_my_favorite_select_button post_id="119407"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೇಮ ವೈಪಲ್ಯ: ಬಾಡಿಬಿಲ್ಡರ್ ಆತ್ಮಹತ್ಯೆ..!

ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗುತ್ತಿದ್ದಾಳೆಂದು ಮನನೊಂದ ಪ್ರೇಮಿಯೋರ್ವ ಆತ್ಮಹತ್ಯೆಗೆ (Suicide) ಶರಣಾಗಿರುವ (Crime) ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

[ccc_my_favorite_select_button post_id="119241"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!