BJP high command blocked the appointment

ತಾರಕಕ್ಕೇರಿದ ಬಿಜೆಪಿ ಬಣ ಬಡಿದಾಟ.. ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸಂಸದ ಡಾ.ಕೆ ಸುಧಾಕರ್‌

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ನಡೆಯುತ್ತಿರುವ ಬಣ ಬಡಿದಾಟ ತಾರಕಕ್ಕೇರಿದೆ. ಸಂಸದ ಡಾ.ಕೆ.ಸುಧಾಕರ್‌ (Dr K Sudhakar) ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರ ವಿರುದ್ಧ ವಾಗ್ದಾಳಿ ನಡೆಸಿದ್ದು, ವರಿಷ್ಠರಿಗೆ ದೂರನ್ನು ನೀಡಲು ಮುಂದಾಗಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಬಳ್ಳಾಪುರದ ಸಂಸದ ಡಾ ಕೆ ಸುಧಾಕರ್, 2019ರಲ್ಲಿ ಬಿಜೆಪಿಗೆ‌ ಮರಳು ಭೂಮಿಯಂತ ವಾತಾವರಣ ಚಿಕ್ಕಬಳ್ಳಾಪುರದಲ್ಲಿದೆ ಅಲ್ಲಿ ನನ್ನ ಇಡೀ ರಾಜಕೀಯ ಭವಿಷ್ಯವನ್ನು, ನನ್ನ ನಂಬಿರುವ ಸಾವಿರಾರು ಸಹಚರರ ಭವಿಷ್ಯವನ್ನೆಲ್ಲ ಒತ್ತೆ ಇಟ್ಟು ಬಿಜೆಪಿ ಸೇರಿದ್ದೆ ಇದು ಇತಿಹಾಸ.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿಗಳಾಗಿ ಮಾಡಬೇಕೆಂದು, ಅವತ್ತಿನ ಸಂದರ್ಭದಲ್ಲಿ ಸೆಲ್ಪ್ ರೆಸ್ಪೆಕ್ಟ್ ಗಾಗಿ ಹೋರಾಟ ಮಾಡಿ ಈ ಪಕ್ಷಕ್ಕೆ ಬಂದೆ.

ಅವರು ರಾಜೀನಾಮೆ ಕೊಟ್ಟ ನಂತರ ಬೊಮ್ಮಾಯಿ ಅವರನ್ನು ಸಿಎಂ ಆಗಿ ನೇಮಕ ಮಾಡಿದ್ರು. ಅವರ ಜೊತೆಗೂ ನಾನು‌ ಹೆಗಲಿಗೆ ಹೆಗಲ ಕೊಟ್ಟು ಕೆಲಸ ಮಾಡಿಕೊಂಡು ಬಂದಿದ್ದೇನೆ. ಅಂತಿಮವಾಗಿ ನನಗೆ ಪಕ್ಷದ ತತ್ವ, ಸಿದ್ದಾಂತ, ಆದರ್ಶ ಅಷ್ಟೇ ಮುಖ್ಯ.. ಎಂಬಂತೆ ಪಕ್ಷ ಏನ್ ಸೂಚಿಸಿದೆ ಅದನ್ನ ಮಾಡ್ಕೊಂಡ್ ಬಂದಿದ್ದೇನೆ.

ಸೋಲೇ ಇಲ್ಲದೇ ಇರುವ ಚಿಕ್ಕಬಳ್ಳಾಪುರದ ವಾತಾವರಣದಲ್ಲಿ, ಪಕ್ಷದ ನೆಲೆಯೇ ಇಲ್ಲದೆ ಇರುವ ಕಡೆ ನನಗೆ ಒಂದು ಸಾರಿ ಆಘಾತ ಆಯ್ತು. ಅದಕ್ಕೆ ಅನೇಕ ಕಾರಣಗಳಿದೆ.. ಇವತ್ ಪಕ್ಷ ಕಟ್ಟುತ್ತೀನಿ ಅಂತ ಹೊರಟಿರೋರು 2023ರಲ್ಲಿ 15-20 ಜನರನ್ನ ಟಾರ್ಗೆಟ್ ಮಾಡಿ, ಯಾವರೀತಿ ಸೋಲಿಸುವ ಪ್ರಯತ್ನ ಮಾಡಿದ್ದೀರಿ. 2019ರಲ್ಲಿ ನಮ್ಮ ವಿರುದ್ಧ ಎಷ್ಟೇಲ್ಲ ಸುಳ್ಳು ಹಬ್ಬಿಸಿದ್ದರು ತಿಳಿದಿದೆ.

ಇವತ್ತು ಪಕ್ಷದಲ್ಲಿ ಸಂಘಟನಾತ್ಮಕವಾಗಿ ನೇಮಕಾತಿಗಳು ನಡೆಯುತ್ತಿವೆ. ಆಂತರಿಕ ಪ್ರಜಾಪ್ರಭುತ್ವ ನಂಬಿಕೆ ಇಟ್ಟಿರುವ ಪಕ್ಷ ನಮ್ಮದು, ಸ್ವಜನ ಪಕ್ಷಪಾತಕ್ಕೆ ಮಣೆ ಹಾಕೋದಿಲ್ಲ, ವಂಶ ಪಾರಂಪರ್ಯಕ್ಕೆ ರಾಜಕಾರಣಕ್ಕೆ ಮಣೆ ಹಾಕಲ್ಲ ಎಂಬ ಸಿದ್ದಾಂತ ನಮ್ಮ ಪಕ್ಷದಲ್ಲಿ ಇದೆ ಎಂದು ನಾನು ನಂಬಿದ್ದೆ.

ಸಂತೋಷ್, ಪ್ರಹ್ಲಾದ್ ಜೋಷಿ, ಅಶೋಕ್, ಬೊಮ್ಮಾಯಿಯವರ ಆಶೀರ್ವಾದ, ಬೆಂಬಲ ಇದ್ದಿದ್ದರಿಂದ. ಒಂದು ಸೋಲು, ಆಘಾತ ಆದರೂ ಲೋಕಸಭೆ ಚುನಾವಣೆಯಲ್ಲಿ ಸ್ವಾಭಾವಿಕವಾಗಿ ಟಿಕೆಟ್ ನನಗೆ ಬರಬೇಕಿತ್ತು. ಪಕ್ಷಕ್ಕೆ ತನು,ಮನ,ದನ ಅರ್ಪಣೆ ಮಾಡಿ, ಪಕ್ಷಕ್ಕೆ ಅನೇಕ ಮಾಜಿ ಶಾಸಕರ ಸೇರ್ಪಡೆ ಮಾಡಿ ಪಕ್ಷವನ್ನು ತಳಹಂತದಿಂದ ಸಂಘಟನೆ ಮಾಡ್ತಾ ಇದ್ದೀನಿ.

ಪಕ್ಷದ ಚುನಾವಣೆಗಳು ಸಂವಿಧಾನ ಪೂರಕವಾಗಿ ಆಗಬೇಕು. ಆಂತರಿಕ ಪ್ರಜಾಪ್ರಭುತ್ವಕ್ಕೆ ಮನ್ನಣೆ ಕೊಡಬೇಕಾಗುತ್ತೆ, ಆದರೆ ಯಾವುದೇ ಚುನಾವಣೆಯನ್ನು ಮಾಡಿಲ್ಲ.

ಇವತ್ ಒಂದು ಗಂಟೆಗೆ ಚಿಕ್ಕಬಳ್ಳಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಏಕ ಚಕ್ರಾಧಿಪತ್ಯದ ರೀತಿಯಲ್ಲಿ, ನನ್ನದು ನಡೆಯುತ್ತೆ, ತಮ್ಮ ಹಿಂದೆ ಮುಂದೆ ಓಡಾಡುವ ಯೆಸ್ ಬಾಸ್, ಜೀ ಹುಜೂರು ಅನ್ನೋರನ್ನು ನೇಮಕ ಮಾಡಿಕೊಳ್ಳೋದು, ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಉಪಾಧ್ಯಕ್ಷರಾಗಳ ನೇಮಕ ಮಾಡಿಕೊಳ್ಳುವ ಕೆಲಸ ಆಗುತ್ತಿದೆ.

ಮಿಸ್ಟರ್ ಬಿವೈ ವಿಜಯೇಂದ್ರ ಅವರು ನನ್ನನ್ನು ರಾಜಕೀಯ ಸಮಾಧಿ ಮಾಡಲು ಹೊರಟಿದ್ದೀರಲ್ಲ ಇವರ ಧೋರಣೆ ಅನೇಕ ನಾಯಕರಿಗೆ ನೋವನ್ನು ತಂದಿದೆ. ಇವರ ದರ್ಪ, ಅಹಂಕಾರ, ಕಾರ್ಯವೈಖರಿಯಿಂದ ಯಾರನ್ನೂ ವಿಶ್ವಾಸಕ್ಕೆ ತಗೊಂಡು ಹೋಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿಯಾಗಿದ್ದಾರೋ, ಅದಕ್ಕಿಂತ ಮೇಲಿದ್ದರೇನೋ ಗೊತ್ತಿಲ್ಲ, ಇವರ ಬಳಿ ಸಾವಿರಾರು ಕೋಟಿ ಇರಬಹುದೇನೋ ಗೊತ್ತಿಲ್ಲ. ಸೌಜನ್ಯಕ್ಕಾದರೂ ನನ್ನ ಜೊತೆ ವಿಜಯೇಂದ್ರ ಚರ್ಚೆ ಮಾಡಿಲ್ಲ.

ಸೋಲಿಸಲು ಹಾಲಿ ಶಾಸಕರ ಪ್ರಯತ್ನ

ಬಿಜೆಪಿ ಇಲ್ಲದ ಮರುಭೋಮಿಲಿ, ಕಾಂಗ್ರೆಸ್ ಸರ್ಕಾರದ ಅವಧಿಯ ನಡುವೆಯೂ ಉತ್ತಮ ಮತಗಳ ಅಂತರದಲ್ಲಿ ವಿಜೇತನಾದೆ..

ಇವರ ಹಿಂಬಾಲಕರು ಡಾಕ್ಟರ್ ನ ಸೋಲಿಸಬೇಕೆಂದು, ಟಿಕೆಟ್ ಯಿಂದ ಹಿಡಿದು ಚುನಾವಣೆಯಲ್ಲಿ ಏನೇ ಮಾಡಿ ಸೋಲಿಸಬೇಕು ಅಂತ ಹಾಲಿ ಶಾಸಕರು.. ಇವರ ಹಿಂಬಾಲಕರು.. ಅವರು ತಗೊಂಡಿದಕ್ಕಿಂತ ಜಾಸ್ತಿ ತಗೊಂಡೆ ಅದ್ ಬೇರೆ ವಿಚಾರ.‌ ಅದು ನಮ್ಮ ರಾಜಕೀಯ, ನಮ್ಮ ಅನುಭವ, ಜನರ ವಿಶ್ವಾಸ.

ಸೌಜನ್ಯಕ್ಕೂ ಮಾತಾಡಿಲ್ಲ, ನಾನು ಫೋನ್ ಮಾಡಿದ್ರು ರೆಸ್ಪಾಂಡ್ ಮಾಡಲ್ಲ, ಮೆಸೇಜ್ ಗೂ ರಿಪ್ಲೇ ಮಾಡಲ್ಲ. ಎರಡು ಸರಿ ಅಪಾಯಿಂಟ್ ಮೆಂಟ್ ಕೊಟ್ಟಿದ್ದು ಮುಂದಕ್ಕೆ ಹಾಕಿದ್ದಾರೆ, ಭೇಟಿಗೂ ಅವಕಾಶ ಕೊಡಲ್ಲ, ಆದರೆ ನಡ್ಡಾ ನನಗೆ ಅವಕಾಶ ಕೊಡ್ತಾರೆ. ಆರ್‌ಎಸ್ಎಸ್ ನಾಯಕರು ನಮಗೆ ಭೇಟಿಗೆ‌ ಸಮಯ ಕೊಡ್ತಾರೆ, ಸಮಾಲೋಚನೆ ಮಾಡ್ತಾರೆ.. ಅದರೆ ಇವರಲ್ಲಿ ಯಾವುದು ಇಲ್ಲ ಎಂದು ಅಸಮಧಾನ ಹೊರಹಾಕಿದರು.

ಬಿಜೆಪಿ ನಿಮ್ಮ ಸ್ವಂತ ಆಸ್ತಿನಾ? ಬನ್ನಿ ನೋಡೋಣ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಒಂದು ಸೀಟ್ ಗೆಲ್ಲಿಸಿ ನೋಡೋಣ ಎಂದು ಚಾಲೆಂಜ್ ಮಾಡ್ತೀನಿ.

ನಮ್ಮನ್ನು ತುಳಿಯೋಕೆ, ಸಮಾಧಿ ಮಾಡೋಕೆ‌ ಹೊರಟಿದ್ದೀರಾ..? ಬಿಜೆಪಿಯಲ್ಲಿರುವ ಎಲ್ಲಾ‌ ಹಿರಿಯರನ್ನು ಮುಗಿಸುವ ಕೆಲಸ ಮಾಡ್ತಿದ್ದೀರಿ. ನಾನು ಈಗಾಗಲೇ ಕೇಂದ್ರದ ನಾಯಕರ ಗಮನಕ್ಕೆ‌ ತಂದಿದ್ದೇನೆ. ಯಾವುದೇ ಕಾರಣಕ್ಕೂ ಇದನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿರಿಯ ಸಂಸದರಾದ‌ ಗೋವಿಂದ ಕಾರಜೋಳರನ್ನು ಹೊಡೆಯಲು ಹೋದವರನ್ನು ಅಧ್ಯಕ್ಷರಾಗಿ ಮಾಡಲು ಹೊರಟಿದ್ದೀರಿ. ಸಿಟಿ ರವಿ, ಬೊಮ್ಮಾಯಿ, ಯತ್ನಾಳ್, ರಮೇಶ್ ಜಾರಕಿಹೊಳಿ ನಿಮಗೆ ಯಾವ ಹಿರಿಯ ನಾಯಕರನ್ನು ಬಿಡುತ್ತಿಲ್ಲ. ರಮೇಶ್ ಜಾರಕಿಹೊಳಿಯನ್ನು ಮುಗಿಸಿದ್ರಿ, ನನ್ನ ಸಮಧಾನ ಮಾಡುವ ಪ್ರಯತ್ನ ಮುಗಿದಿದೆ, ಇನ್ನೂ ಏನಿದ್ರು ನಿಮ್ಮ ವಿರುದ್ಧ ಯುದ್ದ ಎಂದು ಆಕ್ರೋಶ ಹೊರಹಾಕಿದ್ದಾರೆ.

ನೀವು ನೇಮಕ ಮಾಡಿರೋರು ರಿಯಲ್ ಎಸ್ಟೇಟ್ ನಿಂದ ಸ್ವಲ್ಪ ದುಡ್ಡು ತಂದು ಕೊಡಬಹುದು, ಆದರೆ ಅವರಿಂದ ಪಕ್ಷ ಗೆಲ್ಲಲು ಸಾಧ್ಯವಾಗೋದಿಲ್ಲ. ನನ್ನನ್ನು ಸೋಲಿಸಲು ಕಾರಣರಾದ ಸಂದೀಪ್ ರೆಡ್ಡಿಯನ್ನು ಅಧ್ಯಕ್ಷರಾಗಿ ಮಾಡಿದ್ದೀರಿ ಎಂದು ವಿಜಯೇಂದ್ರ‌ ವಿರುದ್ಧ ಸುಧಾಕರ್ ಹಿಗ್ಗಾ ಮುಗ್ಗಾ‌ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವತ್ತೆ ಹೇಳಿದ್ರು ಬಳಸಿ ಬಿಸಾಕ್ತಾರೆ ಅಂತ. ಆದಾಗ್ಯೂ ಇವರಿಗಾಗಿ ಬಂದರೆ ನಮ್ಮನ್ನು ಈ ಸ್ಥಿತಿಗೆ ತಂದಿದ್ದಾರೆ. ಆದರೆ ಜನರ ಆಶಿರ್ವಾದ ಇದೆ. ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ‌ರನ್ನು ಭೇಟಿಯಾಗುತ್ತೇನೆ. ಇವರ ಎಲ್ಲಾ ಬಂಡವಾಳವನ್ನು‌ ಅಮಿತ್ ಶಾ‌ ಬಳಿ‌ ಬಿಚ್ಚಿಡ್ತೀನಿ.

ಯಡಿಯೂರಪ್ಪ ಮತ್ತೆ ವಿಜಯೇಂದ್ರ‌ ಹೋಲಿಕೆಯೇ‌ ಬೇರೆ, ಯಡಿಯೂರಪ್ಪರ ಆದರ್ಶ ಮತ್ತೆ ಯೋಚನೆಯೇ‌ ಬೇರೆ.. ನಿಮ್ಮದು‌ ಹಠ ಮತ್ತೆ ದ್ವೇಷದ ರಾಜಕಾರಣ. ನಿಮ್ಮ ಧೋರಣೆಗೆ ನನ್ನ ಧಿಕ್ಕಾರ, ಇವರ ಅಹಂಕಾರಕ್ಕೆ ನನ್ನ ಧಿಕ್ಕಾರ, ಇವರ ಮನಸ್ಥಿತಿಗೆ ನನ್ನ ಧಿಕ್ಕಾರ, ವರಿಷ್ಠರಲ್ಲಿ ಮನವಿ ಇಷ್ಟೇ ಇವರ ಧೋರಣೆ ಬದಲಿಸುವಂತೆ ಅಥವ ಇವರನ್ನೇ ಬದಲಿಸುವಂತೆ ಮನವಿ ಮಾಡ್ತಿನಿ.

ಎಷ್ಟೆ ನೋವಾದ್ರು ಸಹಿಸಿದೆ, ನಮ್ಮ ಶಿಸ್ತನ್ನು ವೀಕ್ನೆಸ್ ಅಂದ್ಕೊಂಡ್ರು, ನಮ್ಮ ಒಳ್ಳೆತನವನ್ನ ಬಲಹೀನತೆ ಅಂದ್ಕೊಂಡ್ರೆ.. ನಮ್ ಶಕ್ತಿ ತೋರಿಸಬೇಕಾಗುತ್ತೆ ಎಂದ ಸುಧಾಕರ್ ಅವರು ವಿಜಯೇಂದ್ರ ವಿರುದ್ಧ ಹರಿಹಾಯ್ದರು.

ರಾಜಕೀಯ

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

"ಬಹಿರಂಗವಾಗಿ ನಾನು ಏಕೆ ಮಾತನಾಡಲಿ? ನಾನುಂಟು, ಪಕ್ಷವುಂಟು. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದರು. D.K. Shivakumar

[ccc_my_favorite_select_button post_id="110708"]
ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್‌ ಅವರಿಗೆ ಬಿ.ವೈ.ವಿಜಯೇಂದ್ರ ಸನ್ಮಾನ

ಬಮೂಲ್ (Bamul) ನಿರ್ದೇಶಕ ಸ್ಥಾನಕ್ಕೆ ದೊಡ್ಡಬಳ್ಳಾಪುರದಿಂದ ವಿಜೇತರಾದ ಬಿ.ಸಿ.ಆನಂದ್ ಕುಮಾರ್ (B.C.Ananad Kumar) ಅವರನ್ನು ಬಿ.ವೈ.ವಿಜಯೇಂದ್ರ (B.Y.Vijayendra)

[ccc_my_favorite_select_button post_id="110404"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ ಮಹಿಳೆ

ಗ್ರಾಪಂ ಅಧ್ಯಕ್ಷೆಗೆ I Love You ಎಂದು PDO ಮೆಸೇಜ್..!; ರಾಜೀನಾಮೆಗೆ ಮುಂದಾದ

ಗ್ರಾಮಪಂಚಾಯಿತಿ ಅದ್ಯಕ್ಷೆಗೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಐ ಲವ್ ಯು (I Love You) ಎಂದು ಕಿರುಕುಳ ಆರೋಪ ಹಿನ್ನೆಲೆ, ಮಹಿಳೆಯೋರ್ವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿರುವ

[ccc_my_favorite_select_button post_id="110702"]
ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಬ್ರೇಕ್ ಫೇಲ್: 5 ಬಸ್ಸುಗಳ ನಡುವೆ ಅಪಘಾತ.. 6 ಭಕ್ತರಿಗೆ ಗಂಭೀರ ಪೆಟ್ಟು..!

ಯಾತ್ರೆಗೆ ತೆರಳುತ್ತಿದ್ದ 5 ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿ (Accident) 6 ಮಂದಿ ಭಕ್ತರು ಗಂಭೀರವಾಗಿ ಗಾಯಗೊಂಡಿರುವ ಘಟನೆ

[ccc_my_favorite_select_button post_id="110578"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!