BJP's mudslinging is intense

BJP ಕೆಸರೆರಚಾಟ ತೀವ್ರ; ಸಂಸದ ಡಾ.ಕೆ ಸುಧಾಕರ್‌‌ ವಿರುದ್ಧ ಶಾಸಕ ಎಸ್‌ಆರ್ ವಿಶ್ವನಾಥ್ ವಾಗ್ದಾಳಿ

ಯಲಹಂಕ: ರಾಜ್ಯ ಬಿಜೆಪಿಯಲ್ಲಿ(BJP) ಕೆಸರೆರಚಾಟ ತೀವ್ರವಾಗಿದ್ದು ಸಂಸದ ಡಾ ಕೆ ಸುಧಾಕರ್‌ (Dr K Sudhakar) ವಿರುದ್ಧ ಪ್ರೀತಂ ಗೌಡ (Preetham Gowda)ಬೆನ್ನಲ್ಲೇ, ಯಲಹಂಕ ಶಾಸಕ ಎಸ್‌ಆರ್ ವಿಶ್ವನಾಥ್ (SR Vishwanath) ವಾಗ್ದಾಳಿ ನಡೆಸಿದ್ದು, ಪಕ್ಷದಲ್ಲಿ ಇದ್ರೆ ಇರು, ಇಲ್ಲವಾದ್ರೆ ಹೋಗ್ತಾ ಇರು ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿರುವ ಸಂದೀಪ್ ರೆಡ್ಡಿ ವಿಶ್ವನಾಥ್ ಶಿಷ್ಯ ಅಂತಾರೆ ಆತ ಬಿಜೆಪಿ‌ ಶಿಷ್ಯ. 6 ತಿಂಗಳು ನೋಡಿ, ಕೆಲಸ ಮಾಡುತ್ತಾನೋ ಇಲ್ಲವೋ ನೋಡೋಣ.

ನಾನು ಎಚ್ಚರಿಕೆ ಕೊಡುತ್ತೇನೆ, ಮುಂದೆ ಹೀಗೆ ಮಾತಾಡಿದ್ರೆ ನಾನು ಬೇರೆ ರೀತಿಯಲ್ಲೇ ಮಾತಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನನ್ನ ಬಗ್ಗೆ ‌ನಿನಗಿನ್ನೂ ಗೊತ್ತಿಲ್ಲ.. 45 ವರ್ಷ ಪಾರ್ಟಿ ಕಟ್ಟುವಾಗ ಕೇಸುಗಳನ್ನು ಎದುರಿಸಿಯೇ ಬಂದಿದ್ದೇನೆ.

40 ವರ್ಷದಿಂದ ನಾವು ಇದ್ರೂ ಮಂತ್ರಿ ಬಾಯಿ ಮುಚ್ಕೊಡು ಇದ್ದೀವಿ.. ಏನೇ‌ ಇದ್ರೂ ರಾಷ್ಟ್ರೀಯ ಅಧ್ಯಕ್ಷರ ಜೊತೆ ಮಾತಾಡಿ. ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಒಂದು ಸ್ಥಾನ‌ಗೆದ್ದು ತೋರಿಸಿ ಎಂದಿದ್ದೀರಿ. ಮಿನಿಸ್ಟರ್ ಆಗಿದ್ದವರು ನೀವು, ನೀವೇ ಸೋತಿದ್ದೀರಿ.

ಅವಕಾಶ ಕೊಡಿ ಎಲ್ಲರನ್ನೂ ವಿಶ್ವಾಸಕ್ಕೆ ತಗೊಂಡು ಹೇಗೆ ಸಂಘಟನೆ ಮಾಡುತ್ತೇನೆ ಎಂದು ನಾನು ತೋರಿಸುತ್ತೇನೆ. ನಾನು ಸ್ನೇಹ ಕ್ಕೂ ಸಿದ್ದ,‌ ಸಮರಕ್ಕೂ ಸಿದ್ದ. ನನ್ನ ಬಗ್ಗೆ ‌ನಿನಗಿನ್ನೂ ಗೊತ್ತಿಲ್ಲ.. 45 ವರ್ಷ ಪಾರ್ಟಿ ಕಟ್ಟುವಾಗ ಕೇಸುಗಳನ್ನು ಎದುರಿಸಿಯೇ ಬಂದಿದ್ದೇನೆ.

ಸುಧಾಕರ್ ಒಂದು ಹೆಜ್ಜೆ ಹೊರಗಿಟ್ಟೇ ಈ ರೀತಿ ಮಾತನಾಡುತ್ತಿದ್ದು, ಹೋಗೋದಾದರೆ ಹೋಗಲಿ. ಅವರು ಮಾತನಾಡಿರೋದು ನನಗೆ, ನಮ್ಮ ಕಾರ್ಯಕರ್ತರಿಗೆ ಹಿಡಿಸಲಿಲ್ಲ. ದುರಹಂಕಾರಿ, ‌ಸರ್ವಾಧಿಕಾರಿಯಂತಹ ಹೇಳಿಕೆ‌ ನೀಡಿದ್ದಾರೆ.

ಎರಡೆರಡು ಫೋರ್ಟ್ ಪೊಲಿಯೋ‌ ಕೊಟ್ಟಿದ್ರು

ನನ್ನ ಕ್ಷೇತ್ರದ ವಿಚಾರವಾಗಿಯೂ ಹೇಳಿಕೆ ನೀಡಿದ್ದಾರೆ. ಸುಧಾಕರ್ ಅವರು ನನ್ನಿಂದಲೇ ಸರ್ಕಾರ ರಚನೆ ಆಯ್ತು ಎಂಬ ಹೇಳಿಕೆ‌ ನೀಡಿದ್ದಾರೆ. ಆದ್ರೆ ಮೆಜಾರಿಟಿ‌ ಬಂದ ಮೇಲೆ ಬಂದ ಕೊನೆಯ ಶಾಸಕ‌ ಸುಧಾಕರ್. ನಾನು ಕೂಡ ಇದ್ದೆ, ಎರಡೆರಡು ಫೋರ್ಟ್ ಪೊಲಿಯೋ‌ ಕೊಟ್ಟಿದ್ರು.‌‌ ಸಚಿವರಾಗಿದ್ದವರು ಟಿಕೆಟ್ ಕೊಟ್ರು ಯಾಕೆ ಸೋತ್ರಿ? ಎಂದು ಪ್ರಶ್ನೆ ಮಾಡಿದರು.

ನೀವು ಸಚಿವರಾಗಿದ್ದಾಗ ದುರಂಹಕಾರಿ ಆಗಿರಲಿಲ್ವಾ? ಎಂದು ಸುಧಾಕರ್ ಅವರನ್ನು ಪ್ರಶ್ನೆ ಮಾಡಿದರು. ಚಿಕ್ಕಬಳ್ಳಾಪುರ ‌ಜನರಿಗೆ ಸಿಗುತ್ತಿರಲಿಲ್ಲ, ನಮ್ಮ ಶಾಸಕರ ಫೋನ್ ತೆಗೀತಿರಲಿಲ್ಲ.

ವರಿಷ್ಠರಿಗೆ‌ ಹೇಳಿ ತೀರ್ಮಾನ ತಗೋತೇನೆ‌ ಅಂಥಾ‌ ಹೇಳಿದ್ದೀರಿ. ತಾಕತ್ ಇದ್ರೆ ಪಕ್ಷ ಬಿಟ್ಟು‌ ಚುನಾವಣೆಗೆ ಬಾ ಎಂದು ವಿಶ್ವನಾಥ್ (SR Vishwanath) ಅವರು ಡಾ ಕೆ ಸುಧಾಕರ್ (Dr K Sudhakar) ಅವರಿಗೆ ಸವಾಲು ಹಾಕಿದರು.

ಅಲ್ಲದೆ ಪಕ್ಷದ ಚೌಕಟ್ಟಿನಲ್ಲಿದ್ರೆ ಇರಿ, ಏನೇ ಇದ್ರೂ ವರಿಷ್ಠರ ಜತೆ ಮಾತಾಡಿ. ಇಲ್ಲಾಂದ್ರೆ ಪಕ್ಷ ಬಿಟ್ಟು ಹೋದ್ರೆ ಹೋಗಿ, ನಿಮ್ಮಂಥೋರು ಇಲ್ಲಿರೋ ಬದಲು ಹೋದರೇನೇ ಸರಿ ಎಂದು ವಿಶ್ವನಾಥ್ ಹೇಳಿದರು.

ಕಳೆದ ಚುನಾವಣೆ ವೇಖೆ ಗೌರಿಬಿದನೂರುರಲ್ಲಿ ಯಾರಿಗೆ ಸಪೋರ್ಟ್ ಮಾಡ್ದೆ ಬಿಜೆಪಿಗ್ ಮಾಡ್ದಾ.. ಕಾಂಗ್ರೆಸ್ ಇಂಡಿಪೆಂಡೆಂಟ್ ಕ್ಯಾಂಡಿಡೇಟ್ಗೆ ಸಪೂರ್ಟ್ ಮಾಡಿದ್ದು ಊರಿಗೆಲ್ಲ ಗೊತ್ತು, ಬಾಗೇಪಲ್ಲಿಲ್ ಯಾರಿಗ್ ಮಾಡ್ದೆ, ಹೊಸಕೋಟೆ ಯಾರಿಗ್ ಮಾಡ್ದೆ ಕಾಂಗ್ರೆಸ್ ಕ್ಯಾಂಡಿಡೇಟ್ಗೆ, ದೇವನಹಳ್ಳಿ ಸಪೋರ್ಟ್ ಮಾಡ್ದೆ ಕೆಹೆಚ ಮುನಿಯಪ್ಪಗೆ ಮಾಡ್ದೆ.. ಹೋಗಿ ಅಲ್ಲಿನ ಕಾರ್ಯಕರ್ತರ ಕೇಳು.

ಇಷ್ಟ ಇದ್ದರೆ ಇರು.‌ ನಿನ್ನಂತವರು ಲಕ್ಷಾಂತರ ಜನ ಇದ್ದಾರೆ.. ಹೊಸದಾಗ್ ಪಾರ್ಟಿಗ್ ಬಂದವರು ಮುಚ್ಕೊಂಡ್ ಕೆಲಸ ಮಾಡ್ತಿಲ್ವಾ..? ನಾಲ್ಕು ವರ್ಷ ಮನೇಲ್ ಇರೋಕ್ ಆಗಲ್ಲ ಅಂದೆ.. ಅದುಕ್ ಕಾರ್ಯಕರ್ತರು ಇಷ್ಟೆಲ್ಲ ಕಷ್ಟ ಬೀಳಬೇಕಿತ್ತಾ..?

ಬಿಜೆಪಿ ಅಧಿಕಾರಕ್ಕೆ ಬರದೆ ಇರಲು ಕೋವಿಡ್ ಸಂದರ್ಭದಲ್ಲಿ ಮಾಡಿದ ಹಗರಣ, ಅವ್ಯವಹಾರ ಕಾರಣ… ಕೆಲವೇ ಕೆಲವು ಮಂತ್ರಿ ಏನಿದ್ದೀರಿ.. ಕಾರ್ಯಕರ್ತರ ಹತ್ತಿರಕ್ಕೆ ಬಿಟ್ಕೊಳ್ಳದೆ ಪಕ್ಷಕ್ಕೆ ಅಧಿಕಾರಕ್ಕೆ ಬರದಂತೆ ಮಾಡುದ್ರಿ ಎಂದು ಆರೋಪಗಳ ಸುರಿಮಳೆಗೈದರು.

ರಾಜಕೀಯ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್ ಕಿಡಿ

ಡಿ.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎಂದು ಆದೇಶ ನೀಡಿದ್ದು ಯಾರು?: ಆರ್. ಅಶೋಕ್

"ನಮಸ್ತೇ ಸದಾ ವತ್ಸಲೇ ಮಾತೃಭೂಮೇ" ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ (D.K. Shivakumar) ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ... R. Ashoka

[ccc_my_favorite_select_button post_id="113127"]
RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

RSS ಗೀತೆಯ ಸಾಲು ಉಲ್ಲೇಖ: ಕಾರ್ಯಕರ್ತರ ಕ್ಷಮೆ ಕೋರಿದ ಡಿಸಿಎಂ ಡಿ.ಕೆ.ಶಿವಕುಮಾರ್

ವಿಧಾನಸಭೆಯಲ್ಲಿ ಆರ್ ಎಸ್ಎಸ್ ಗೀತೆಯ ಸಾಲುಗಳನ್ನು ಉಲ್ಲೇಖಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು. ಜೊತೆಗೆ ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ಬಳಸುತ್ತಿರುವವರಿಗೂ ಡಿ.ಕೆ.ಶಿವಕುಮಾರ್ (D.K. Shivakumar) ತಿರುಗೇಟು ನೀಡಿದರು.

[ccc_my_favorite_select_button post_id="113124"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

ದೊಡ್ಡಬಳ್ಳಾಪುರ: ಆಘಾತಕಾರಿ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆ.‌. ಹಲವು ಶಂಕೆ

17 ವರ್ಷದ ಬಾಲಕನ ಶವ ಆಘಾತಕಾರಿ ಸ್ಥಿತಿಯಲ್ಲಿ (shocking condition) ಪತ್ತೆಯಾಗಿರುವ ಘಟನೆ ನಗರದ ಕರೇನಹಳ್ಳಿಯ ಟೆಂಟ್ ಹಿಂಭಾಗದ ಗುಟ್ಟೆಯಲ್ಲಿ ಪತ್ತೆಯಾಗಿದೆ.

[ccc_my_favorite_select_button post_id="113099"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!