ದೊಡ್ಡಬಳ್ಳಾಪುರ (Doddaballapura): ತಾಲ್ಲೂಕಿನಲ್ಲಿ 2024-25 ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ರೈತರಿಗೆ ಉಚಿತವಾಗಿ (Free vegetable seed) ₹2,000 ಮೌಲ್ಯದ ತರಕಾರಿ ಬೀಜಗಳನ್ನು (ಬೆಂಡೆ, ಬೀನ್ಸ್ ಮತ್ತು ಮೂಲಂಗಿ)ವಿತರಿಸಲಾಗುತ್ತಿದೆ.
ಎಲ್ಲಾ ವರ್ಗದ ಆಸಕ್ತ ರೈತರು ಅರ್ಜಿ ಸಲ್ಲಿಸಲು ಅವಕಾಶ ಇದೆ.
ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರು ಜಾತಿ ಪ್ರಮಾಣ ಪತ್ರವನ್ನು ತಾಲ್ಲೂಕಿನ ತೋಗಾರಿಕಾ ಇಲಾಖೆಗೆ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.
ತಾಲ್ಲೂಕಿನಲ್ಲಿ 1,125 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಹೂವು ಬರುತ್ತಿರುವ ಹಾಗೂ ಹೂವು ಅರಳುತ್ತಿರುವ ಎರಡೂ ವಿವಿಧ ಮರಗಳಲ್ಲೂ ಕಿಟಗಳ ನಿಯಂತ್ರಣ, ಹೂವು ಬೂದಿ ರೋಗಕ್ಕೆ ತುತ್ತಾಗುವುದನ್ನು ತಡೆಯಲು ಔಷಧಿ ಸಿಂಪರಣೆ ಮುಖ್ಯವಾಗಿದೆ.
ಈ ಬಗ್ಗೆ ಅಗತ್ಯ ಮಾರ್ಗದರ್ಶನವನ್ನು ತೋಟಗಾರಿಕಾ ಇಲಾಖೆ ವತಿಯಿಂದ ನೀಡಲಾಗುತ್ತಿದೆ. ಆಸಕ್ತ ರೈತರು ಹೋಬಳಿ ಮಟ್ಟದಲ್ಲಿನ ತಾಂತ್ರಿಕ ಅಧಿಕಾರಿಗಳು, ಹಿರಿಯ ಸಹಾಯಕ ಅಧಿಕಾರಿಗಳಿಂದ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗೆ 94821 29648, 95354 12975 ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)