Daily story Maharana Pratapa

ಹರಿತಲೇಖನಿ ದಿನಕ್ಕೊಂದು ಕಥೆ: ಮಹಾರಾಣಾ ಪ್ರತಾಪ

Daily story: ಭಾರತದ ಇತಿಹಾಸದಲ್ಲಿ ರಾಜಸ್ಥಾನದ ಶೂರವೀರ ಮತ್ತು ಸ್ವಾಭಿಮಾನಿ ರಾಜರಾಗಿದ್ದ ಮಹಾರಾಣಾ ಪ್ರತಾಪರ ಹೆಸರು ಅಜರಾಮರವಾಗಿದೆ.

ಜಯಪುರದ ರಾಣಾ ಮಾನಸಿಂಗನು ಅಕ್ಬರನಿಂದ ರಾಜ್ಯಕ್ಕೆ ಕಷ್ಟವಾಗಬಾರದೆಂದು ತನ್ನ ತಂಗಿಯನ್ನು ಅಕಬರನಿಗೆ ಕೊಟ್ಟು ಮದುವೆ ಮಾಡಿದನು. ಒಂದು ಸಲ ತನ್ನ ವೈಭವವನ್ನು ಪ್ರದರ್ಶಿಸಲು ರಾಣಾ ಮಾನಸಿಂಗನು ದೆಹಲಿಗೆ ಹೋಗುವಾಗ ದಾರಿಯಲ್ಲಿ ಮಹಾರಾಣಾ ಪ್ರತಾಪರನ್ನು ನೋಡಲು ಕುಂಭಲಗಢಕ್ಕೆ ಹೋದನು.

ಮಹಾರಾಣಾ ಪ್ರತಾಪರು ಅವರೆಲ್ಲರನ್ನು ಯೋಗ್ಯವಾಗಿ ಸತ್ಕರಿಸಿದರು ಆದರೆ ಜೊತೆಯಲ್ಲಿ ಕುಳಿತು ಊಟ ಮಾಡುವುದಿಲ್ಲ ಎಂದು ತಿಳಿಸಿದರು.

ಏಕೆ ಜೊತೆಯಲ್ಲಿ ಊಟ ಮಾಡುವುದಿಲ್ಲವೆಂದು ರಾಣಾ ಮಾನಸಿಂಗನು ಕೇಳಿದಾಗ ಮಹಾರಾಣಾ ಪ್ರತಾಪರು ಹೇಳುತ್ತಾರೆ, “ರಾಜ್ಯವನ್ನು ಉಳಿಸಿಕೊಳ್ಳಬೇಕೆಂಬ ಕಾರಣದಿಂದ ತನ್ನ ಮನೆಯ ಹೆಣ್ಣು ಮಕ್ಕಳನ್ನು ಮೊಗಲರಿಗೆ ಮದುವೆ ಮಾಡಿಕೊಟ್ಟಂತಹ ಸ್ವಾಭಿಮಾನ ಶೂನ್ಯ ರಾಜಪೂತನೊಂದಿಗೆ ನಾನು ಕುಳಿತು ಊಟ ಮಾಡುವುದಿಲ್ಲ”.

ಮಹಾರಾಣಾ ಪ್ರತಾಪರ ಉತ್ತರವನ್ನು ಕೇಳಿ ಮಾನಸಿಂಗನು ಕೋಪದಿಂದು ಊಟದ ತಟ್ಟೆಯನ್ನು ಅರ್ಧದಲ್ಲಿಯೇ ಬಿಟ್ಟು ಎದ್ದನು ಮತ್ತು ಹೇಳಿದನು, “ಮಹಾರಾಣಾ ಪ್ರತಾಪ! ಯುದ್ಧದಲ್ಲಿ ನಿನ್ನ ಸರ್ವನಾಶ ಮಾಡದಿದ್ದರೆ ನನ್ನ ಹೆಸರು ಮಾನಸಿಂಗನೇ ಅಲ್ಲ!”

ಸ್ವಲ್ಪ ಸಮಯದ ನಂತರ ಮಾನಸಿಂಗನು, ಅಕಬರನ ಮಗ ಸಲೀಂ ಮತ್ತು ಪ್ರಚಂಡ ಸೈನ್ಯದೊಂದಿಗೆ ಮಹಾರಾಣಾ ಪ್ರತಾಪರ ಮೇಲೆ ಯುದ್ಧಕ್ಕಾಗಿ ಹೊರಟನು.

ಸುದ್ದಿ ತಿಳಿದ ಕೂಡಲೇ ಮಹಾರಾಣಾ ಪ್ರತಾಪನು ತತ್ಪರತೆಯಿಂದ ಅರಾವಲಿ ಪರ್ವತದ ಮೇಲಿಂದ ಕೆಳಗೆ ಬರುತ್ತಿದ್ದ ಶತ್ರು ಸೈನ್ಯದ ಮೇಲೆ ದಾಳಿ ಮಾಡಿ ಅವರ ಅಧಿಕಾಂಶ ಸೈನಿಕರನ್ನು ಮಣ್ಣುಪಾಲು ಮಾಡಿದರು. ಮಹಾರಾಣಾ ಪ್ರತಾಪರ ಕತ್ತಿಯಿಂದ ಸಲೀಂನ ವಧೆಯಾಗಬೇಕಿತ್ತು ಆದರೆ ಆ ಹೊಡೆತವು ಸಲೀಂನ ಆನೆಗೆ ಬಿತ್ತು ಮತ್ತು ಸಲೀಂನು ಉಳಿದನು.

ಮಹಾರಾಣಾ ಭಯದಿಂದ ಮಾನಸಿಂಗನು ಸೈನ್ಯದ ಹಿಂದೆ ಅವಿತುಕೊಂಡಿದ್ದನು. ಮಹಾರಾಣಾ ಪ್ರತಾಪನು ತನ್ನ ಹೊಳೆಯುವ ಕತ್ತಿಯ ಸಹಾಯದಿಂದ ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲೇ ಶತ್ರುಸೈನಿಕರ ಹೊಡೆತದಿಂದ ಮಹಾರಾಣಾ ಪ್ರತಾಪರ ಕುದುರೆ ‘ಚೇತಕ’ನ ಕಾಲಿಗೆ ಪೆಟ್ಟಾಯಿತು.

ಇಂತಹ ಸ್ಥಿತಿಯಲ್ಲೂ ಸಹ ಆ ಸ್ವಾಮಿನಿಷ್ಟ ಕುದುರೆಯು ತನ್ನ ಸ್ವಾಮಿಯ ಪ್ರಾಣವನ್ನು ಉಳಿಸಲು ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಅಷ್ಟರಲ್ಲೇ ದಾರಿಯಲ್ಲಿ ಒಂದು ಸಣ್ಣನದಿ ಎದುರಾಯಿತು. ಚೇತಕ ಆ ಸ್ಥಿತಿಯಲ್ಲೇ ತನ್ನ ಎಲ್ಲಾ ಶಕ್ತಿಯನ್ನು ಸೇರಿಸಿ ಒಂದೇ ಜಿಗಿತಕ್ಕೆ ನದಿಯನ್ನು ದಾಟಿತು, ಆದರೆ ಹೃದಯ ಬಡಿತವು ನಿಂತಿದ್ದರಿಂದ ಚೇತಕ ಅಲ್ಲೇ ಪ್ರಾಣ ಬಿಟ್ಟಿತು.

ಮಹಾರಾಣಾ ಪ್ರತಾಪರು ಹಿಂದೆ ತಿರುಗಿ ನೋಡಿದಾಗ ಅಕಬರನ ಸೈನ್ಯದಲ್ಲಿ ಸೇರಿದ್ದ ಅವನ ತಮ್ಮ ಶಕ್ತಿಸಿಂಗನು ನಾಲ್ಕು-ಐದು ಮೊಗಲ ಸೈನಿಕರನ್ನು ಹೊಡೆಯುತ್ತಿದ್ದನು. ಇದನ್ನು ನೋಡಿ ಮಹಾರಾಣಾ ಪ್ರತಾಪರು ಆಶ್ಚರ್ಯಚಕಿತರಾದರು.

ಅಷ್ಟರಲ್ಲೇ ಆ ಸೈನಿಕರನ್ನು ಸಾಯಿಸಿದ ಶಕ್ತಿಸಿಂಗನು ಮಹಾರಾಣಾ ಪ್ರತಾಪರ ಬಳಿಗೆ ಬಂದು ಅವರನ್ನು ಆಲಂಗಿಸಿಕೊಂಡು, “ಅಣ್ಣಾ, ನಾನು ಮೊಗಲರ ಸೈನ್ಯದಲ್ಲಿದ್ದೀನಿ, ಆದರೆ ನಿಮ್ಮ ಶೌರ್ಯ, ಪರಾಕ್ರಮದಿಂದ ನೀವೇ ನನ್ನ ಆದರ್ಶರಾಗಿದ್ದೀರಿ. ನಾನು ನಿಮ್ಮ ಕುದುರೆಗಿಂತಲೂ ತುಚ್ಛವಾಗಿದ್ದೇನೆ.”

ಮೇವಾಡದ ಇತಿಹಾಸವನ್ನು ಬರೆದ ಕರ್ನಲ್ ಟಾಂಡ್ ಮಹಾರಾಣಾಾ ಪ್ರತಾಪರ ಬಗ್ಗೆ ಹೇಳುತ್ತಾ, “ಉತ್ಕಟ ಮಹತ್ವಾಕಾಂಕ್ಷಿ, ಶಾಸನ ನಿಪುಣತೆ ಮತ್ತು ಅಪರಿಮಿತ ಸಂಪತ್ತಿನ ಬಲದಿಂದ ಅಕಬರನು ದೃಢ ನಿಶ್ಚಯಿ, ಧೈರ್ಯಶಾಲಿ, ಉಜ್ವಲ ಕೀರ್ತಿಮಾನ ಮತ್ತು ಸಾಹಸಿ ಮಹಾರಾಣಾ ಪ್ರತಾಪರ ಆತ್ಮಬಲವನ್ನು ಬೀಳಿಸಲು ಪ್ರಯತ್ನಿಸಿದನು, ಆದರೆ ಅದು ವಿಫಲವಾಯಿತು”.

ಕೃಪೆ: ಹಿಂದೂ ಜಾಗೃತಿ.

ರಾಜಕೀಯ

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ

ಮಿಸ್ಟರ್ ನಾರಾಯಣಸ್ವಾಮಿ, ಇಲ್ಲಿದೆ ನೋಡಿ ಲೋಕಾಯುಕ್ತಕ್ಕೆ ನಾನು ಸಲ್ಲಿಸಿರೋ ಅಫಿಡವಿಟ್! ಜವಾಬ್ದಾರಿಯುತ ಸ್ಥಾನದಲ್ಲಿರೋ ನೀವು ನಿಮ್ಮ ಬಾಯಿ ತೆವಲಿಗಾಗಿ ಮನಸ್ಸಿಗೆ ಬಂದಂತೆ ಸುಳ್ಳು ಹೇಳಬಾರದು. ಇದು ನಿಮಗೆ ಘನತೆ ತರುವುದಿಲ್ಲ: D.K. Shivakumar

[ccc_my_favorite_select_button post_id="117059"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!