Daily story Maharana Pratapa

ಹರಿತಲೇಖನಿ ದಿನಕ್ಕೊಂದು ಕಥೆ: ಮಹಾರಾಣಾ ಪ್ರತಾಪ

Daily story: ಭಾರತದ ಇತಿಹಾಸದಲ್ಲಿ ರಾಜಸ್ಥಾನದ ಶೂರವೀರ ಮತ್ತು ಸ್ವಾಭಿಮಾನಿ ರಾಜರಾಗಿದ್ದ ಮಹಾರಾಣಾ ಪ್ರತಾಪರ ಹೆಸರು ಅಜರಾಮರವಾಗಿದೆ.

ಜಯಪುರದ ರಾಣಾ ಮಾನಸಿಂಗನು ಅಕ್ಬರನಿಂದ ರಾಜ್ಯಕ್ಕೆ ಕಷ್ಟವಾಗಬಾರದೆಂದು ತನ್ನ ತಂಗಿಯನ್ನು ಅಕಬರನಿಗೆ ಕೊಟ್ಟು ಮದುವೆ ಮಾಡಿದನು. ಒಂದು ಸಲ ತನ್ನ ವೈಭವವನ್ನು ಪ್ರದರ್ಶಿಸಲು ರಾಣಾ ಮಾನಸಿಂಗನು ದೆಹಲಿಗೆ ಹೋಗುವಾಗ ದಾರಿಯಲ್ಲಿ ಮಹಾರಾಣಾ ಪ್ರತಾಪರನ್ನು ನೋಡಲು ಕುಂಭಲಗಢಕ್ಕೆ ಹೋದನು.

ಮಹಾರಾಣಾ ಪ್ರತಾಪರು ಅವರೆಲ್ಲರನ್ನು ಯೋಗ್ಯವಾಗಿ ಸತ್ಕರಿಸಿದರು ಆದರೆ ಜೊತೆಯಲ್ಲಿ ಕುಳಿತು ಊಟ ಮಾಡುವುದಿಲ್ಲ ಎಂದು ತಿಳಿಸಿದರು.

ಏಕೆ ಜೊತೆಯಲ್ಲಿ ಊಟ ಮಾಡುವುದಿಲ್ಲವೆಂದು ರಾಣಾ ಮಾನಸಿಂಗನು ಕೇಳಿದಾಗ ಮಹಾರಾಣಾ ಪ್ರತಾಪರು ಹೇಳುತ್ತಾರೆ, “ರಾಜ್ಯವನ್ನು ಉಳಿಸಿಕೊಳ್ಳಬೇಕೆಂಬ ಕಾರಣದಿಂದ ತನ್ನ ಮನೆಯ ಹೆಣ್ಣು ಮಕ್ಕಳನ್ನು ಮೊಗಲರಿಗೆ ಮದುವೆ ಮಾಡಿಕೊಟ್ಟಂತಹ ಸ್ವಾಭಿಮಾನ ಶೂನ್ಯ ರಾಜಪೂತನೊಂದಿಗೆ ನಾನು ಕುಳಿತು ಊಟ ಮಾಡುವುದಿಲ್ಲ”.

ಮಹಾರಾಣಾ ಪ್ರತಾಪರ ಉತ್ತರವನ್ನು ಕೇಳಿ ಮಾನಸಿಂಗನು ಕೋಪದಿಂದು ಊಟದ ತಟ್ಟೆಯನ್ನು ಅರ್ಧದಲ್ಲಿಯೇ ಬಿಟ್ಟು ಎದ್ದನು ಮತ್ತು ಹೇಳಿದನು, “ಮಹಾರಾಣಾ ಪ್ರತಾಪ! ಯುದ್ಧದಲ್ಲಿ ನಿನ್ನ ಸರ್ವನಾಶ ಮಾಡದಿದ್ದರೆ ನನ್ನ ಹೆಸರು ಮಾನಸಿಂಗನೇ ಅಲ್ಲ!”

ಸ್ವಲ್ಪ ಸಮಯದ ನಂತರ ಮಾನಸಿಂಗನು, ಅಕಬರನ ಮಗ ಸಲೀಂ ಮತ್ತು ಪ್ರಚಂಡ ಸೈನ್ಯದೊಂದಿಗೆ ಮಹಾರಾಣಾ ಪ್ರತಾಪರ ಮೇಲೆ ಯುದ್ಧಕ್ಕಾಗಿ ಹೊರಟನು.

ಸುದ್ದಿ ತಿಳಿದ ಕೂಡಲೇ ಮಹಾರಾಣಾ ಪ್ರತಾಪನು ತತ್ಪರತೆಯಿಂದ ಅರಾವಲಿ ಪರ್ವತದ ಮೇಲಿಂದ ಕೆಳಗೆ ಬರುತ್ತಿದ್ದ ಶತ್ರು ಸೈನ್ಯದ ಮೇಲೆ ದಾಳಿ ಮಾಡಿ ಅವರ ಅಧಿಕಾಂಶ ಸೈನಿಕರನ್ನು ಮಣ್ಣುಪಾಲು ಮಾಡಿದರು. ಮಹಾರಾಣಾ ಪ್ರತಾಪರ ಕತ್ತಿಯಿಂದ ಸಲೀಂನ ವಧೆಯಾಗಬೇಕಿತ್ತು ಆದರೆ ಆ ಹೊಡೆತವು ಸಲೀಂನ ಆನೆಗೆ ಬಿತ್ತು ಮತ್ತು ಸಲೀಂನು ಉಳಿದನು.

ಮಹಾರಾಣಾ ಭಯದಿಂದ ಮಾನಸಿಂಗನು ಸೈನ್ಯದ ಹಿಂದೆ ಅವಿತುಕೊಂಡಿದ್ದನು. ಮಹಾರಾಣಾ ಪ್ರತಾಪನು ತನ್ನ ಹೊಳೆಯುವ ಕತ್ತಿಯ ಸಹಾಯದಿಂದ ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿದ್ದನು. ಅಷ್ಟರಲ್ಲೇ ಶತ್ರುಸೈನಿಕರ ಹೊಡೆತದಿಂದ ಮಹಾರಾಣಾ ಪ್ರತಾಪರ ಕುದುರೆ ‘ಚೇತಕ’ನ ಕಾಲಿಗೆ ಪೆಟ್ಟಾಯಿತು.

ಇಂತಹ ಸ್ಥಿತಿಯಲ್ಲೂ ಸಹ ಆ ಸ್ವಾಮಿನಿಷ್ಟ ಕುದುರೆಯು ತನ್ನ ಸ್ವಾಮಿಯ ಪ್ರಾಣವನ್ನು ಉಳಿಸಲು ಶತ್ರುಗಳ ಜಾಲದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಅಷ್ಟರಲ್ಲೇ ದಾರಿಯಲ್ಲಿ ಒಂದು ಸಣ್ಣನದಿ ಎದುರಾಯಿತು. ಚೇತಕ ಆ ಸ್ಥಿತಿಯಲ್ಲೇ ತನ್ನ ಎಲ್ಲಾ ಶಕ್ತಿಯನ್ನು ಸೇರಿಸಿ ಒಂದೇ ಜಿಗಿತಕ್ಕೆ ನದಿಯನ್ನು ದಾಟಿತು, ಆದರೆ ಹೃದಯ ಬಡಿತವು ನಿಂತಿದ್ದರಿಂದ ಚೇತಕ ಅಲ್ಲೇ ಪ್ರಾಣ ಬಿಟ್ಟಿತು.

ಮಹಾರಾಣಾ ಪ್ರತಾಪರು ಹಿಂದೆ ತಿರುಗಿ ನೋಡಿದಾಗ ಅಕಬರನ ಸೈನ್ಯದಲ್ಲಿ ಸೇರಿದ್ದ ಅವನ ತಮ್ಮ ಶಕ್ತಿಸಿಂಗನು ನಾಲ್ಕು-ಐದು ಮೊಗಲ ಸೈನಿಕರನ್ನು ಹೊಡೆಯುತ್ತಿದ್ದನು. ಇದನ್ನು ನೋಡಿ ಮಹಾರಾಣಾ ಪ್ರತಾಪರು ಆಶ್ಚರ್ಯಚಕಿತರಾದರು.

ಅಷ್ಟರಲ್ಲೇ ಆ ಸೈನಿಕರನ್ನು ಸಾಯಿಸಿದ ಶಕ್ತಿಸಿಂಗನು ಮಹಾರಾಣಾ ಪ್ರತಾಪರ ಬಳಿಗೆ ಬಂದು ಅವರನ್ನು ಆಲಂಗಿಸಿಕೊಂಡು, “ಅಣ್ಣಾ, ನಾನು ಮೊಗಲರ ಸೈನ್ಯದಲ್ಲಿದ್ದೀನಿ, ಆದರೆ ನಿಮ್ಮ ಶೌರ್ಯ, ಪರಾಕ್ರಮದಿಂದ ನೀವೇ ನನ್ನ ಆದರ್ಶರಾಗಿದ್ದೀರಿ. ನಾನು ನಿಮ್ಮ ಕುದುರೆಗಿಂತಲೂ ತುಚ್ಛವಾಗಿದ್ದೇನೆ.”

ಮೇವಾಡದ ಇತಿಹಾಸವನ್ನು ಬರೆದ ಕರ್ನಲ್ ಟಾಂಡ್ ಮಹಾರಾಣಾಾ ಪ್ರತಾಪರ ಬಗ್ಗೆ ಹೇಳುತ್ತಾ, “ಉತ್ಕಟ ಮಹತ್ವಾಕಾಂಕ್ಷಿ, ಶಾಸನ ನಿಪುಣತೆ ಮತ್ತು ಅಪರಿಮಿತ ಸಂಪತ್ತಿನ ಬಲದಿಂದ ಅಕಬರನು ದೃಢ ನಿಶ್ಚಯಿ, ಧೈರ್ಯಶಾಲಿ, ಉಜ್ವಲ ಕೀರ್ತಿಮಾನ ಮತ್ತು ಸಾಹಸಿ ಮಹಾರಾಣಾ ಪ್ರತಾಪರ ಆತ್ಮಬಲವನ್ನು ಬೀಳಿಸಲು ಪ್ರಯತ್ನಿಸಿದನು, ಆದರೆ ಅದು ವಿಫಲವಾಯಿತು”.

ಕೃಪೆ: ಹಿಂದೂ ಜಾಗೃತಿ.

ರಾಜಕೀಯ

ಬಿಹಾರ ಚುನಾವಣೆಯಲ್ಲಿ ಹಿನ್ನಡೆ.. ಜನರ ತೀರ್ಪನ್ನು ಒಪ್ಪಿಕೊಳ್ಳಬೇಕು; ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಹಿನ್ನಡೆ.. ಜನರ ತೀರ್ಪನ್ನು ಒಪ್ಪಿಕೊಳ್ಳಬೇಕು; ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯಾಗಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ (Cmsiddaramaiah) ಜನರ ತೀರ್ಪನ್ನು ಒಪ್ಪಿಕೊಳ್ಳಬೇಕು ಎಂದರು.

[ccc_my_favorite_select_button post_id="116170"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೆಹಲಿ ಕಾರು ಸ್ಫೋಟ: ಕೇಂದ್ರದ ವಿರುದ್ಧ ಆರೋಪ ಮಾಡೋ ಸಮಯ ಇದಲ್ಲ- ಡಿಸಿಎಂ ಡಿ.ಕೆ. ಶಿವಕುಮಾರ್

ದೆಹಲಿ ಕಾರು ಸ್ಫೋಟ: ಕೇಂದ್ರದ ವಿರುದ್ಧ ಆರೋಪ ಮಾಡೋ ಸಮಯ ಇದಲ್ಲ- ಡಿಸಿಎಂ

“ದೆಹಲಿಯಲ್ಲಿ ನಡೆದಿರುವ ಕಾರು ಸ್ಫೋಟ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ದೇಶದ ಐಕ್ಯತೆ, ಸಮಗ್ರತೆ, ಶಾಂತಿ ರಕ್ಷಣೆಗೆ ನಾವು ಉಗ್ರ ಚಟುವಟಿಕೆಗಳ ವಿರುದ್ದ ಬಹಳ ಜಾಗರೂಕರಾಗಿ ಇರಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K.

[ccc_my_favorite_select_button post_id="116009"]
ದೊಡ್ಡಬಳ್ಳಾಪುರ: ನಾಡ ಬಾಂಬ್ ಸ್ಪೋಟ.. ಮಹಿಳೆಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ನಾಡ ಬಾಂಬ್ ಸ್ಪೋಟ.. ಮಹಿಳೆಗೆ ಗಂಭೀರ ಪೆಟ್ಟು..!

ಕಾಡು ಹಂದಿಯ ಬೇಟೆಯಾಡಲು ಅರಣ್ಯ ಪ್ರದೇಶದಲ್ಲಿ ಇಡಲಾಗಿದ್ದ ನಾಡ ಬಾಂಬ್ ಸ್ಪೋಟಿಸಿ (Nada bomb blast) ಮಹಿಳೆಗೆ ಗಂಭೀರ ಪೆಟ್ಟಾಗಿರುವ ಘಟನೆ ತಾಲೂಕಿನ

[ccc_my_favorite_select_button post_id="116061"]
KSRTC ಬಸ್‌ನಿಂದ ಬಿದ್ದು ಯುವತಿ ಸಾವು.. ಕುಟುಂಬಕ್ಕೆ ಪರಿಹಾರ

KSRTC ಬಸ್‌ನಿಂದ ಬಿದ್ದು ಯುವತಿ ಸಾವು.. ಕುಟುಂಬಕ್ಕೆ ಪರಿಹಾರ

ಬಸ್‌ನಲ್ಲಿ ಪಯಣಿಸುತ್ತಿದ್ದ ಭದ್ರಾವತಿ ತಾಲೂಕು ಬೈಪಾಸ್ ರಸ್ತೆ, ಹಳೇ ಭಂಡಾರಹಳ್ಳಿ ಗ್ರಾಮ ವಾಸಿ ಹೇಮಾವತಿ ಎಂಬ 19 ವರ್ಷದ ಯುವತಿಯು KSRTC ಬಸ್‌ನಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

[ccc_my_favorite_select_button post_id="116039"]

ಆರೋಗ್ಯ

ಸಿನಿಮಾ

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಇನ್ನಿಲ್ಲ

ತಿಥಿ ಸಿನಿಮಾದ ಖ್ಯಾತಿಯ ಗಡ್ಡಪ್ಪ (Gaddappa) ಅಲಿಯಾಸ್‌ ಚನ್ನೇಗೌಡ ವಿಧಿವಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

[ccc_my_favorite_select_button post_id="116057"]
error: Content is protected !!