ದೊಡ್ಡಬಳ್ಳಾಪುರ: ವಕ್ಫ್ (ತಿದ್ದುಪಡಿ) ಕಾಯ್ದೆ (waqf amendment bill )2025 ರ ವಿರುದ್ಧ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB), ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತ ನಡೆಸುವ ರಾಜ್ಯ, ತಾಲೂಕುಗಳಲ್ಲಿ ವಿಭಿನ್ನ ಪ್ರತಿಭಟನೆ ಆಯೋಜಿಸುತ್ತಿದೆ.
ಇದರ ಅಂಗವಾಗಿ ಇಂದು ಆಲ್ ಇಂಡಿಯಾ ಸುನ್ನತ್ ಉಲ್ ಜಮಾಯತ್ ನ ಕರೆ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ನಗರದಲ್ಲಿರುವ ಮೀನಾ ಮಸೀದಿ ಸೇರಿದಂತೆ ವಿವಿಧೆಡೆ ಇರುವ ಮುಸ್ಲಿಂ ಸಮುದಾಯ ರಾತ್ರಿ 9 ಗಂಟೆಗೆ ‘ಬತ್ತಿ ಗುಲ್’ ಎಂಬ ಹೆಸರಿನಲ್ಲಿ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ದೀಪಗಳನ್ನು ಆರಿಸುವ ಮೂಲಕ ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಪ್ರತಿಭಟನೆ ತೋರಿದೆ.
ಸುಮಾರು 15 ನಿಮಿಷಗಳ ಕಾಲ ದೀಪವನ್ನು ಆರಿಸಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.