ಬೆಂಗಳೂರು: ಈಗಾಗಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡು, ಆಡಳಿತರೂಢ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿರುವ ಬಿಜೆಪಿ (BJP) ಶಾಸಕರು ಎಸ್.ಟಿ.ಸೋಮಶೇಖರ್ (S.T.Somasekhar) ಹಾಗೂ ಶಿವರಾಂ ಹೆಬ್ಬಾರ್ (Shivaram Hebbar) ಅವರನ್ನು ಎಲ್ಲಾ ಮುಜುಗರ ಅನುಭವಿಸಿದ ಬಳಿಕ ಈಗ ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದೆ.
ಕಳೆದ ವಿಧಾನ ಸಭಾ ಪರಿಷತ್ ಸದಸ್ಯರ ಚುನಾವಣೆ ವೇಳೆ ಬಿಜೆಪಿ ನೀಡಿದ್ದ ವಿಪ್ ಉಲ್ಲಂಘಿಸಿ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದ ಇಬ್ಬರು ಶಾಸಕರು, ಅನೇಕ ವೇದಿಕೆಗಳಲ್ಲಿ ಕಾಂಗ್ರೆಸ್ ನಾಯಕರನ್ನು ಬೆಂಬಲಿಸಿ, ಸಮರ್ಥಿಸಿ, ಕೊಂಡಾಡುವ ಮೂಲಕ ಬಿಜೆಪಿ ಪಕ್ಷವನ್ನು ನಿಂದಿಸುವ ಮೂಲಕ ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದರು.
ಇವರ ವಿರುದ್ದ ರಾಜ್ಯ ಬಿಜೆಪಿ ಹೈಕಮ್ಯಾಂಡ್ ಗೆ ದೂರು ನೀಡಿತ್ತು. ಇದಾದ ಒಂದು ವರ್ಷದ ಬಳಿಕ ದೂರನ್ನು ಪರಿಗಣಿಸಿರುವ ಬಿಜೆಪಿ ಹೈಕಮ್ಯಾಂಡ್ ಈ ಇಬ್ಬರನ್ನೂ ಸಹ ಉಚ್ಚಾಟಿಸಿ ಆದೇಶ ಹೊರಡಿಸಿದೆ.
ಅಲ್ಲದೆ ಮುಂದೆ ಬಿಜೆಪಿ ಪಕ್ಷ, ಚಿಹ್ನೆ ಹಾಗೂ ನಾಯಕರೊಂದಿಗೆ ಇಬ್ಬರೂ ಗುರುತಿಸಿಕೊಳ್ಳುವಂತಿಲ್ಲ ಎಂದು ಹೇಳಲಾಗಿದೆ.
ಈ ಉಚ್ಚಾಟನೆಯಿಂದ ಈ ಶಾಸಕರ ಸ್ಥಾನಕ್ಕೆ ಯಾವುದೇ ಬಾಧೆಯಿಲ್ಲ ಎಂದು ಹೇಳಲಾಗಿದೆ.