ಹೊಸಕೋಟೆ: ಮನೆಯಲ್ಲಿ ಜೀವನ ಮಾಡಲು ಕಷ್ಟ ಎಂದು ಮನೆ ಬಿಟ್ಟು ಹೋಗಿದ್ದ ಬಾಲಕನನ್ನು (Boy) ಹೊಸಕೋಟೆ ಪೊಲೀಸರು ಒಂದೂವರೆ ವರ್ಷದ ಬಳಿಕ ಪತ್ತೆ ಹಚ್ಚಿ ಪೋಷಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಕೋಟೆ ನಗರದ ಅಂಬೇಡ್ಕರ್ ಕಾಲೋನಿಯ ಸೋಮಶೇಖರ್ ಎಂಬುವವರ ಪುತ್ರ ಲೋಕಾಯುಕ್ತ(13 ವರ್ಷ) ಮನೆ ಬಿಟ್ಟು ಹೋಗಿದ್ದ ಬಾಲಕ.
ಬಾಲಕ ಲೋಕಾಯುಕ್ತನ ತಾಯಿ ಜ್ಯೋತಿ ಕಳೆದ 12 ವರ್ಷದ ಹಿಂದೆ ತೀರಿಕೊಂಡ ಪರಿಣಾಮವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತಂದೆ ಸೋಮಶೇಖರ್ ಅವರನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದರು.
ಆತನನ್ನು ಅವರ ಚಿಕ್ಕಮ್ಮ ಹೊಸಕೋಟೆ ಸಮಾಜ ಕಲ್ಯಾಣ ಇಲಾಖೆ ವಸತಿ ಶಾಲೆಗೆ ದಾಖಲು ಮಾಡಿದ್ದರು.
2024ರಲ್ಲಿ ಬಾಲಕ ಲೋಕಾಯುಕ್ತ ತಂದೆ ಸೋಮಶೇಖರ್ ಬಂದು ಆತನನ್ನು ನಗರದ ಅಂಬೇಡ್ಕರ್ ಕಾಲೋನಿಯಲ್ಲಿರುವ ಮನೆಗೆ ಕರೆದುಕೊಂಡು ಹೋಗಿದ್ದರು. ಮನೆಗೆ ಹೋಗಿ 3 ದಿನಗಳ ಕಾಲ ಇದ್ದ ಬಾಲಕ ಲೋಕಾಯುಕ್ತ ಮನೆಯಿಂದ ಸೈಕಲ್ ತೆಗೆದುಕೊಂಡು ಹೋದವನು ಸಚಿಜೆಯಾದರೂ ವಾಪಸ್ ಬಂದಿರಲಿಲ್ಲ.
ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದರೂ ಸಹ ಲೋಕಾಯುಕ್ತನ ಸುಳಿವು ಸಿಕ್ಕಿರಲಿಲ್ಲ. ಆಗ ಜನವರಿ 4 ರಂದು ಲೋಕಾಯುಕ್ತ ಣೆಯಾಗಿರುವ ಬಗ್ಗೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿರುತ್ತೆ.
ರೈಲಿನಲ್ಲಿ ಚೆನ್ನೈಗೆ ತೆರಳಿದ್ದ ಬಾಲಕ
ಮನೆಯಿಂದ ಕಾಣೆಯಾಗಿದ್ದ ಬಾಲಕ ಲೋಕಾಯುಕ್ತ ಹೊಸಕೋಟೆಯಿಂದ ಬೆಂಗಳ್ರರಿಗೆ ತೆರಳಿ, ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೇ ನಿಲ್ದಾಣದಿಂದ ಚೆನ್ನೈ ಪ್ರಯಾಣ ಬೆಳೆಸಿದ್ದ. ಮೂರ್ನಾಲ್ಕು ದಿನಗಳ ಕಾಲ ಚೆನ್ನೈ ರೈಲು ನಿಲ್ದಾಣದಲ್ಲೆ ಓಡಾಡುತ್ತಿದ್ದ ಬಾಲಕ ಲೋಕಾಯುಕ್ತನನ್ನು ಚೆನ್ನೈ ರೈಲ್ವೇ ಪೊಲೀಸರು ಹಿಡಿದುಕೊಂಡು ವಿಚಾರಣೆ ಮಾಡಲಾಗಿ ಕರ್ನಾಕಟದವನು ಎಂದು ತಿಳಿದಾಕ್ಷಣ ಆತನನ್ನು ಕರ್ನಾಟಕ ರೈಲ್ವೇ ಪೊಲೀಸರ ಮೂಲಕ ಬೆಂಗಳೂರಿನ ಬಾಲಭವನಕ್ಕೆ ರವಾನೆ ಮಾಡಿದ್ದರು.
ಕಳೆದ ಒಂದೂವರೆ ವರ್ಷದಿಂದ ಲೋಕಾಯುಕ್ತ ಬಾಲಭವನದಲ್ಲೆ ಇದ್ದನು.
ತನ್ನ ಹೆಸರು ಭಾರ್ಗವ ಎಂದು ನಂಬಿಸಿದ್ದ ಲೋಕಾಯುಕ್ತ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನ ಬಾಲಭವನದಲ್ಲಿದ್ದ ಬಾಲಕ ಲೋಕಾಯುಕ್ತ ಮನೆಗೆ ಬಾರಲೇ ಬಾರದೆಂದು ನಿರ್ಧರಿಸಿ ತನ್ನ ಹೆಸರನ್ನು ಭಾರ್ಗವ ಎಂದು ಹೇಳಿ ನಂಬಿಸಿದ್ದ.
ಚೆನ್ನೈ ರೈಲ್ವೇ ಪೊಲೀಸರಿಗೂ ಭಾರ್ಗವ ಎಂದೇ ಹೇಳಿ ನಂಬಿಸಿದ್ದ. ಇತ್ತ ಪ್ರಕರಣ ದಾಖಲು ಮಾಡಿಕೊಂಡಿದ್ದ ಹೊಸಕೋಟೆ ಪೊಲೀಸರು ಸಾಕಷ್ಟು ಹುಡುಕಾಟ ಸಹ ನಡೆಸಿದ್ದರು.
ಬೆಂಗಳೂರಿನ ಬಾಲಭವನದಲ್ಲಿ ಮಕ್ಕಳನ್ನು ಪರಿಶೀಲನೆ ಮಾಡುವ ಸಂಧರ್ಭದಲ್ಲಿ ಭಾರ್ಗವ ಎಂದೇ ಪರಿಚಯ ಮಾಡಿಕೊಂಡಿದ್ದು ಅನುಮಾನ ಬಂದು ಲೋಕಾಯುಕ್ತನ ಫೋಟೋ ಚಹರೆಯನ್ನು ನೋಡಿ ಪ್ರಶ್ನೆ ಮಾಡಿದಾಗ ಮನೆಗೆ ಹೋಗಲೇಬಾರದೆಂದು ತನ್ನ ಹೆಸರನ್ನು ಭಾರ್ಗವ ಎಂದು ಸುಳ್ಳು ಹೇಳಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾನೆ.
ಅಂತಿಮವಾಗಿ ಒಂದೂವರೆ ವರ್ಷದ ಬಳಿಕ ಕಾಣೆಯಾಗಿದ್ದ ಬಾಲಕ ಲೋಕಾಯುಕ್ತನನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸುವಲ್ಲಿ ಹೊಸಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣವನ್ನು ಪತ್ತೆಹಚ್ಚಿದ ಹೊಸಕೋಟೆ ಡಿವೈಎಸ್ಪಿ ಮಲ್ಲೆಶಯ್ಯ, ಇನ್ಸ್ಪೆಕ್ಟರ್ ಗೋವಿಂದ್, ಪೇದೆ ಮಹಾಂತೇಶ್ ಹಾಗೂ ಸಿಬ್ಬಂದಿ ವರ್ಗದವರನ್ನು ಎಸ್ಪಿ ಸಿಕೆ.ಬಾಬಾ ಅಭಿನಂದಿಸಿದ್ದಾರೆ.