Excessive use of urea is fatal to sustainable agriculture; Assistant Director of Agriculture P. Raghavendra

ಅತಿಯಾದ ಯುರಿಯಾ ಬಳಕೆಯಿಂದ ಸುಸ್ಥಿರ ಕೃಷಿಗೆ ಮಾರಕ; ಸಹಾಯಕ ಕೃಷಿ ನಿರ್ದೇಶಕ ಪಿ. ರಾಘವೇಂದ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ಶೇ.95 ರಷ್ಟು ಬಿತ್ತನೆ ಕಾರ್ಯವೂ ಸಹ ಮುಕ್ತಾಯಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ. ರಾಘವೇಂದ್ರ (P. Raghavendra) ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆಯುವ ಬೆಳೆಯೆಂದರೆ ಪ್ರಮುಖವಾಗಿ ರಾಗಿಯಾಗಿದ್ದು, ಕುಂಟೆಯೊಡಯುವ ಹಂತದಿಂದ ತೆಂಡೆ ಹೊಡೆಯುವ ಹಂತದವರೆಗಿನ ಬೆಳೆಯನ್ನು ಕಾಣಬಹುದಾಗಿದೆ.

ರೈತರು ಕಳೆ ತೆಗೆದ ನಂತರ ತೆಂಡೆ ಹೊಡೆಯುವ ಹಂತದಲ್ಲಿ ಶೇ. 50 % ಹರಳು ರೂಪದ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸುತ್ತಿರುವುದು ವೈಜ್ಞಾನಿಕ ಶಿಫಾರಸ್ಸಾಗಿರುತ್ತದೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರ ಶಿಫಾರಸ್ಸಿನ ಪ್ರಕಾರ (20:15:16) ಒಂದು ಎಕೆರೆ ಖುಷ್ಕಿ ರಾಗಿ ಬೆಳೆಗೆ 20 ಕೆ.ಜಿ. ಯಷ್ಟು ಸಾರಜನಕ ಬೇಕಾಗಿದ್ದು, ಶೇ 50 ರಷ್ಟು ಮೂಲಗೊಬ್ಬರವಾಗಿ 10 ಕೆ.ಜಿ ಬಿತ್ತನೆ ಸಮಯದಲ್ಲಿ ಉಳಿದ 10 ಕೆ.ಜಿ ಸಾರಜನಕ ಬಿತ್ತನೆ ಮಾಡಿದ 6-7 ವಾರಗಳ ನಂತರ ಮೇಲುಗೊಬ್ಬರವಾಗಿ ಕೊಡುವುದು. ಒಂದು ಯೂರಿಯಾ (45 ಕೆ.ಜಿ) ಚೀಲದಲ್ಲಿ ಶೇ.46 ರಷ್ಟು ಅಂದರೆ 20.7 ಕೆ.ಜಿಯಷ್ಟು ಸಾರಜನಕವಿದ್ದು, ಮೂಲಗೊಬ್ಬರಕ್ಕೆ 10 ಕೆ.ಜಿ ಸಾರಜನಕವನ್ನು ಒದಗಿಸುತ್ತದೆ. ಉಳಿದ 10 ಕೆ.ಜಿ ಯ ಸಾರಜನಕವನ್ನು ನೀಗಿಸಲೂ ಸಹ ಈ ಒಂದು ಚೀಲ ಯೂರಿಯಾ ಸಾಕಾಗುತ್ತದೆ.

ಮುಂದುವರೆದು ಒಂದು ಎಕೆರೆಗೆ ಒಂದು ಯೂರಿಯಾ ಚೀಲದಂತೆ ರೈತರು ಶಿಫಾರಸ್ಸು ಪ್ರಮಾಣಕ್ಕಿಂತ ಮಿತಿಮೀರಿ ಹರಳು ರೂಪದ ಯೂರಿಯಾ ಬಳಸುತ್ತಿದ್ದು, ಬೆಳೆಯ ಅವಶ್ಯಕಿಂತ ಹೆಚ್ಚಿಗೆ ಬಳಸಿದ ಯೂರಿಯ ಅಂಶವು ಮಣ್ಣಿನ ಆರೋಗ್ಯವನ್ನು ಹದಗೆಡುವುದಲ್ಲದೇ ಕುತ್ತಿಗೆ ಬೆಂಕಿ ರೋಗ, ಕೀಟಭಾದೆ ಮತ್ತು ಅಸಮತೋಲನ ಬೆಳವಣಿಗೆಯಿಂದ ಕಟಾವಿನ ಸಮಯದಲ್ಲಿ ನೆಲಕ್ಕುರುಳಿ ತೆನೆ ಮತ್ತು ಹುಲ್ಲು ನಷ್ಟವಾಗುತ್ತದೆ. ಅತಿಯಾದ ಯೂರಿಯಾ ಬಳಸುವುದರ ಮೂಲಕ ಬೆಳೆಗಳಲ್ಲಿ ನೈಟ್ರೇಟ್ ಅಂಶದಲ್ಲಿನ ಬದಲಾವಣೆಗಳಿಂದ ಆಹಾರ ಪಧಾರ್ಥಗಳಲ್ಲಿ ನೈಟ್ರೇಟ್ ಪ್ರಮಾಣ ಅಧಿಕವಾಗಿ ಕಾನ್ಸರ್ ರೋಗಕ್ಕೂ ಕಾರಣಾವಾಗಬಹುದಾಗಿದೆ.

ನದಿ-ಕೆರೆ ಜಲಮೂಲಗಳಿಗೆ ನೈಟ್ರೇಟ್ ಅಂಶಗಳು ಸೇರಿ ಕುಡಿಯುವ ನೀರಿನ ಗುಣಮಟ್ಟದಲ್ಲಿ ಏರುಪೇರಾಗಿ ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
ಈ ಅಪಾಯವನ್ನು ತಡೆಗಟ್ಟಲು ರಾಗಿ ಬೆಳೆಗೆ ಅವಶ್ಯಕತೆಯಿರುವಷ್ಟು ಅಂದರೆ ಪೋಟಾಷ್ ಅಂಶವುಳ್ಳ ಸಂಯುಕ್ತ ಗೊಬ್ಬರಗಳಾದ 15:15:15, 19:19:19 ನಂತಹ ಗೊಬ್ಬರಗಳನ್ನು ರೈತರೂ ಬಳಸಬಹುದಾಗಿದೆ.

ಇದರಿಂದ ಉತ್ತಮವಾದ ಬೆಳೆ ಬೆಳೆಯುವುದರೊಂದಿಗೆ ಮಣ್ಣಿನ ಹಾಗೂ ಜನರ ಆರೋಗ್ಯವನ್ನು ಕಾಪಾಡಬಹುದಾಗಿದೆ. ಹರಳು ರೂಪದ ಪರ್ಯಾಯವಾಗಿ ನಾನ್ಯೊ ಯೂರಿಯಾ ಬಳಕೆಯಿಂದ ಉತ್ಪಾದನೆ ಹೆಚ್ಚಾಗುವುದರೊಂದಿಗೆ ಬೆಳೆ ಬೆಳೆಯುವ ಖರ್ಚೂ ಸಹ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ನಾನ್ಯೋ ಯೂರಿಯಾ ಅಂದರೇನು?;

ನಾನ್ಯೋ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ.ಇದು ಸಾಂಪ್ರದಾಯಕ ಹರಳು ರೂಪದ ಯೂರಿಯಾ ಗೊಬ್ಬರಕ್ಕಿಂತ 8-10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ನೀಡುತ್ತದೆ.

ನಾನ್ಯೋ ಯೂರಿಯಾದಿಂದಾಗುವ ಅನುಕೂಲಗಳು

ರಾಸಾಯನಿಕ ಬಳಕೆ ಕಡಿಮೆಯಾಗುತ್ತದೆ.
ನಾನ್ಯೋ ಯೂರಿಯಾ ಪರಿಣಾಮಕಾರಿಯಾಗಿದ್ದು, ಉತ್ಪಾದನೆ ಹೆಚ್ಚಳ.
ಮಣ್ಣಿನ ಆರೋಗ್ಯ ಸುಧಾರಣೆ ಆಗುತ್ತದೆ.
ರಸಗೊಬ್ಬರದ ಖರ್ಚು ಕಡಿಮೆ ಆಗುತ್ತದೆ.

ರಾಜಕೀಯ

CKR – 45 ಅಂಬಾಸಿಡರ್ ಕಾರಿನ ಜತೆ ಬಿಜೆಪಿ ನಾಯಕರ ಒಡನಾಟ: Video ಹಂಚಿಕೊಂಡ ಬಿ.ವೈ. ವಿಜಯೇಂದ್ರ

CKR – 45 ಅಂಬಾಸಿಡರ್ ಕಾರಿನ ಜತೆ ಬಿಜೆಪಿ ನಾಯಕರ ಒಡನಾಟ: Video

ಬಿ.ಎಸ್.ಯಡಿಯೂರಪ್ಪನವರು ಪಕ್ಷದ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಗೊಂಡ ನಂತರದಲ್ಲಿ ಒಂದು ಅಂಬಾಸಿಡರ್ ಕಾರು ಬಳಸುತ್ತಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="113561"]
ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಸಿಎಂ, ಡಿಸಿಎಂ

ಆಲಮಟ್ಟಿಯಯಲ್ಲಿರುವ ಲಾಲ್ ಬಹುದ್ದೂರ್ ಶಾಸ್ತ್ರೀ ಸಾಗರದ ಕೃಷ್ಣೆಯ ಜಲಧಿಗೆ ಗಂಗಪೂಜೆ ಹಾಗೂ ಬಾಗಿನ ವನ್ನು ಅರ್ಪಣೆ CM

[ccc_my_favorite_select_button post_id="113575"]
7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

7 ವರ್ಷಗಳ ಬಳಿಕ ಮೋದಿ ಚೀನಾ ಭೇಟಿ.. ಭಾರತಕ್ಕೆ ದೊರೆತಿದ್ದೇನು..! ವಿಶ್ಲೇಷಣೆ

ಪ್ರಧಾನಿ ನರೇಂದ್ರ ಮೋದಿ (Narendra modi) ಅವರು ತಮ್ಮ 2 ದಿನಗಳ ಚೀನಾ ಭೇಟಿಯನ್ನು ಮುಗಿಸಿ ದೇಶಕ್ಕೆ ಮರಳಿದ್ದಾರೆ. ಇದನ್ನು ಅವರು 'ಉತ್ಪಾದಕ' ಭೇಟಿ ಎಂದು ಬಣ್ಣಿಸಿದ್ದಾರೆ.

[ccc_my_favorite_select_button post_id="113432"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ದೊಡ್ಡಬಳ್ಳಾಪುರ: R.L.ಜಾಲಪ್ಪ ಕಾಲೇಜಿನಲ್ಲಿ ಮೇಜರ್ ಧ್ಯಾನ್‌ ಚಂದ್ ಜನ್ಮದಿನಾಚರಣೆ

ಹಾಕಿ ದಂತಕಥೆ ಮೇಜರ್ ಧ್ಯಾನ್‌ ಚಂದ್ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಗರದ ಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ (R.L. Jalappa Technical College) ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಲಾಯಿತು.

[ccc_my_favorite_select_button post_id="113312"]
ಅಪ್ರಾಪ್ತೆ ಜತೆ ಗ್ರಾಮಪಂಚಾಯಿತಿ ಅಧ್ಯಕ್ಷ ಮದುವೆ..!

ಅಪ್ರಾಪ್ತೆ ಜತೆ ಗ್ರಾಮಪಂಚಾಯಿತಿ ಅಧ್ಯಕ್ಷ ಮದುವೆ..!

ಅಪ್ರಾಪ್ತ ಬಾಲಕಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ (Gram Panchayat President) ವಿವಾಹವಾಗಿರುವ ಘಟನೆ ಜಿಲ್ಲೆಯ

[ccc_my_favorite_select_button post_id="113387"]
Accident; ಲಾರಿಯಡಿ ಸಿಲುಕಿ ಬೈಕ್ ಸವಾರ ರೈತ ಧಾರುಣ ಸಾವು

Accident; ಲಾರಿಯಡಿ ಸಿಲುಕಿ ಬೈಕ್ ಸವಾರ ರೈತ ಧಾರುಣ ಸಾವು

ಲಾರಿಯಡಿ ಸಿಲುಕಿ ಬೈಕ್ ಸವಾರ ರೈತ ಧಾರುಣವಾಗಿ ಸಾವಪ್ಪಿರುವ ಘಟನೆ (Accident) ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಚದುಲಪುರ ಗೇಟ್ ಬಳಿ ಘಟನೆ ನಡೆದಿದೆ.

[ccc_my_favorite_select_button post_id="113528"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!