Excessive use of urea is fatal to sustainable agriculture; Assistant Director of Agriculture P. Raghavendra

ಅತಿಯಾದ ಯುರಿಯಾ ಬಳಕೆಯಿಂದ ಸುಸ್ಥಿರ ಕೃಷಿಗೆ ಮಾರಕ; ಸಹಾಯಕ ಕೃಷಿ ನಿರ್ದೇಶಕ ಪಿ. ರಾಘವೇಂದ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ಶೇ.95 ರಷ್ಟು ಬಿತ್ತನೆ ಕಾರ್ಯವೂ ಸಹ ಮುಕ್ತಾಯಗೊಂಡಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ. ರಾಘವೇಂದ್ರ (P. Raghavendra) ತಿಳಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬೆಳೆಯುವ ಬೆಳೆಯೆಂದರೆ ಪ್ರಮುಖವಾಗಿ ರಾಗಿಯಾಗಿದ್ದು, ಕುಂಟೆಯೊಡಯುವ ಹಂತದಿಂದ ತೆಂಡೆ ಹೊಡೆಯುವ ಹಂತದವರೆಗಿನ ಬೆಳೆಯನ್ನು ಕಾಣಬಹುದಾಗಿದೆ.

ರೈತರು ಕಳೆ ತೆಗೆದ ನಂತರ ತೆಂಡೆ ಹೊಡೆಯುವ ಹಂತದಲ್ಲಿ ಶೇ. 50 % ಹರಳು ರೂಪದ ಯೂರಿಯಾವನ್ನು ಮೇಲುಗೊಬ್ಬರವಾಗಿ ಬಳಸುತ್ತಿರುವುದು ವೈಜ್ಞಾನಿಕ ಶಿಫಾರಸ್ಸಾಗಿರುತ್ತದೆ.

ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ರವರ ಶಿಫಾರಸ್ಸಿನ ಪ್ರಕಾರ (20:15:16) ಒಂದು ಎಕೆರೆ ಖುಷ್ಕಿ ರಾಗಿ ಬೆಳೆಗೆ 20 ಕೆ.ಜಿ. ಯಷ್ಟು ಸಾರಜನಕ ಬೇಕಾಗಿದ್ದು, ಶೇ 50 ರಷ್ಟು ಮೂಲಗೊಬ್ಬರವಾಗಿ 10 ಕೆ.ಜಿ ಬಿತ್ತನೆ ಸಮಯದಲ್ಲಿ ಉಳಿದ 10 ಕೆ.ಜಿ ಸಾರಜನಕ ಬಿತ್ತನೆ ಮಾಡಿದ 6-7 ವಾರಗಳ ನಂತರ ಮೇಲುಗೊಬ್ಬರವಾಗಿ ಕೊಡುವುದು. ಒಂದು ಯೂರಿಯಾ (45 ಕೆ.ಜಿ) ಚೀಲದಲ್ಲಿ ಶೇ.46 ರಷ್ಟು ಅಂದರೆ 20.7 ಕೆ.ಜಿಯಷ್ಟು ಸಾರಜನಕವಿದ್ದು, ಮೂಲಗೊಬ್ಬರಕ್ಕೆ 10 ಕೆ.ಜಿ ಸಾರಜನಕವನ್ನು ಒದಗಿಸುತ್ತದೆ. ಉಳಿದ 10 ಕೆ.ಜಿ ಯ ಸಾರಜನಕವನ್ನು ನೀಗಿಸಲೂ ಸಹ ಈ ಒಂದು ಚೀಲ ಯೂರಿಯಾ ಸಾಕಾಗುತ್ತದೆ.

ಮುಂದುವರೆದು ಒಂದು ಎಕೆರೆಗೆ ಒಂದು ಯೂರಿಯಾ ಚೀಲದಂತೆ ರೈತರು ಶಿಫಾರಸ್ಸು ಪ್ರಮಾಣಕ್ಕಿಂತ ಮಿತಿಮೀರಿ ಹರಳು ರೂಪದ ಯೂರಿಯಾ ಬಳಸುತ್ತಿದ್ದು, ಬೆಳೆಯ ಅವಶ್ಯಕಿಂತ ಹೆಚ್ಚಿಗೆ ಬಳಸಿದ ಯೂರಿಯ ಅಂಶವು ಮಣ್ಣಿನ ಆರೋಗ್ಯವನ್ನು ಹದಗೆಡುವುದಲ್ಲದೇ ಕುತ್ತಿಗೆ ಬೆಂಕಿ ರೋಗ, ಕೀಟಭಾದೆ ಮತ್ತು ಅಸಮತೋಲನ ಬೆಳವಣಿಗೆಯಿಂದ ಕಟಾವಿನ ಸಮಯದಲ್ಲಿ ನೆಲಕ್ಕುರುಳಿ ತೆನೆ ಮತ್ತು ಹುಲ್ಲು ನಷ್ಟವಾಗುತ್ತದೆ. ಅತಿಯಾದ ಯೂರಿಯಾ ಬಳಸುವುದರ ಮೂಲಕ ಬೆಳೆಗಳಲ್ಲಿ ನೈಟ್ರೇಟ್ ಅಂಶದಲ್ಲಿನ ಬದಲಾವಣೆಗಳಿಂದ ಆಹಾರ ಪಧಾರ್ಥಗಳಲ್ಲಿ ನೈಟ್ರೇಟ್ ಪ್ರಮಾಣ ಅಧಿಕವಾಗಿ ಕಾನ್ಸರ್ ರೋಗಕ್ಕೂ ಕಾರಣಾವಾಗಬಹುದಾಗಿದೆ.

ನದಿ-ಕೆರೆ ಜಲಮೂಲಗಳಿಗೆ ನೈಟ್ರೇಟ್ ಅಂಶಗಳು ಸೇರಿ ಕುಡಿಯುವ ನೀರಿನ ಗುಣಮಟ್ಟದಲ್ಲಿ ಏರುಪೇರಾಗಿ ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ.
ಈ ಅಪಾಯವನ್ನು ತಡೆಗಟ್ಟಲು ರಾಗಿ ಬೆಳೆಗೆ ಅವಶ್ಯಕತೆಯಿರುವಷ್ಟು ಅಂದರೆ ಪೋಟಾಷ್ ಅಂಶವುಳ್ಳ ಸಂಯುಕ್ತ ಗೊಬ್ಬರಗಳಾದ 15:15:15, 19:19:19 ನಂತಹ ಗೊಬ್ಬರಗಳನ್ನು ರೈತರೂ ಬಳಸಬಹುದಾಗಿದೆ.

ಇದರಿಂದ ಉತ್ತಮವಾದ ಬೆಳೆ ಬೆಳೆಯುವುದರೊಂದಿಗೆ ಮಣ್ಣಿನ ಹಾಗೂ ಜನರ ಆರೋಗ್ಯವನ್ನು ಕಾಪಾಡಬಹುದಾಗಿದೆ. ಹರಳು ರೂಪದ ಪರ್ಯಾಯವಾಗಿ ನಾನ್ಯೊ ಯೂರಿಯಾ ಬಳಕೆಯಿಂದ ಉತ್ಪಾದನೆ ಹೆಚ್ಚಾಗುವುದರೊಂದಿಗೆ ಬೆಳೆ ಬೆಳೆಯುವ ಖರ್ಚೂ ಸಹ ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ನಾನ್ಯೋ ಯೂರಿಯಾ ಅಂದರೇನು?;

ನಾನ್ಯೋ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದೆ.ಇದು ಸಾಂಪ್ರದಾಯಕ ಹರಳು ರೂಪದ ಯೂರಿಯಾ ಗೊಬ್ಬರಕ್ಕಿಂತ 8-10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತ ಪೋಷಕಾಂಶಗಳನ್ನು ನೀಡುತ್ತದೆ.

ನಾನ್ಯೋ ಯೂರಿಯಾದಿಂದಾಗುವ ಅನುಕೂಲಗಳು

ರಾಸಾಯನಿಕ ಬಳಕೆ ಕಡಿಮೆಯಾಗುತ್ತದೆ.
ನಾನ್ಯೋ ಯೂರಿಯಾ ಪರಿಣಾಮಕಾರಿಯಾಗಿದ್ದು, ಉತ್ಪಾದನೆ ಹೆಚ್ಚಳ.
ಮಣ್ಣಿನ ಆರೋಗ್ಯ ಸುಧಾರಣೆ ಆಗುತ್ತದೆ.
ರಸಗೊಬ್ಬರದ ಖರ್ಚು ಕಡಿಮೆ ಆಗುತ್ತದೆ.

ರಾಜಕೀಯ

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ ಶಾಂತಿಯುತ.. ಬಿ.ಸಿ. ಆನಂದ್ ಕುಮಾರ್ ಹಿಡಿತ.. ಬಿಜೆಪಿಗೆ ತಳಮಳ.!?

ಬಾಶೆಟ್ಟಿಹಳ್ಳಿ ಪ.ಪಂ. ಚುನಾವಣೆ ಶಾಂತಿಯುತ.. ಬಿ.ಸಿ. ಆನಂದ್ ಕುಮಾರ್ ಹಿಡಿತ.. ಬಿಜೆಪಿಗೆ ತಳಮಳ.!?

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ (Bashettihalli town panchayat election) ರಚನೆಯಾದ ನಂತರ ಇದೇ ಪ್ರಥಮ ಬಾರಿಗೆ ಇಂದು ನಡೆದ ಮತದಾನದಲ್ಲಿ, ಸಣ್ಣ ಪುಟ್ಟ ಮಾತಿನ ಚಕಮಕಿಗಳ ಹೊರತುಪಡಿಸಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಶೇ.81.34 ರಷ್ಟು

[ccc_my_favorite_select_button post_id="117650"]
ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ (Umesh) ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ರಾಮಚಂದ್ರಯ್ಯ (Ramachandraiah) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

[ccc_my_favorite_select_button post_id="117539"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಸುಮಾರು 40 ಅಡಿ ಆಳದ ಪಾಳು ಬಾವಿಗೆ (Water well) ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ಶನಿವಾರ ಬೆಳಕಿಗೆ ಬಂದಿದೆ.

[ccc_my_favorite_select_button post_id="117569"]
ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ಕಂಟೇನರ್ (container) ಚಾಲಕ ನಿರ್ಲಕ್ಷ್ಯದಿಂದ ಏಕಾಏಕಿ ತಿರುವ ಪಡೆದ ವೇಳೆ ಎದುರು ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ‌ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ (Bike) ಸವಾರ ಸಾವನಪ್ಪಿರುವ ಘಟನೆ ಕನ್ನಮಂಗಲ ಗೇಟ್ ಬಳಿ

[ccc_my_favorite_select_button post_id="117565"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]
error: Content is protected !!