Astrology: ಭಾನುವಾರ, ಫೆಬ್ರವರಿ 22, 2026, ದೈನಂದಿನ ರಾಶಿ ಭವಿಷ್ಯ
ಮೇಷ ರಾಶಿ
ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗುತ್ತವೆ. ಕೆಲಸದಲ್ಲಿ ಕಠಿಣವಾದ ಪರಿಶ್ರಮ ವಹಿಸುವುದು ಅವಶ್ಯ. (ವಿಷ್ಣು ದೇವಾಲಯಕ್ಕೆ ತುಳಸಿ ಕೊಡಿ)
ವೃಷಭ ರಾಶಿ
ರಾಜಕೀಯ ವಲಯಗಳು ಏರುಪೇರು ಉಂಟಾಗಲಿದೆ. ಉದ್ಯೋಗದಲ್ಲಿ ಹಠಾತ್ ಬದಲಾವಣೆ ಆಗಬಹುದು. (ವೃದ್ಧರಿಗೆ ಏನಾದರೂ ತಿನ್ನಲು ದಾನ ಮಾಡಿ)
ಮಿಥುನ ರಾಶಿ
ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸುವಿರಿ. ಆರೋಗ್ಯ ಮತ್ತು ಕೌಟುಂಬಿಕವಾದ ಸಮಸ್ಯೆಗಳು ಕಾಡಲಿವೆ. (ಪ್ರಾಣಿಗಳಿಗೆ ಕುಡಿಯಲು ನೀರನ್ನು ಇಡಿ)
ಕಟಕ ರಾಶಿ
ಆದಾಯದ ಮೂಲ ಬಲಪಡಿಸಿಕೊಳ್ಳಿ. ನಂಬಿ ಮೋಸ ಹೋಗದಿರಿ. ಪ್ರಯಾಣದಲ್ಲಿ ಎಚ್ಚರ. (ಗ್ರಾಮ ದೇವತೆ ದರ್ಶನ ಪಡೆಯಿರಿ)
ಸಿಂಹ ರಾಶಿ
ಆಂತರಿಕ ಮತ್ತು ಬಾಹ್ಯ ಒತ್ತಡಗಳು ಹೆಚ್ಚಾಗಲಿವೆ. ವ್ಯಾಪಾರ ವಹಿವಾಟುಗಳಲ್ಲಿ ಅಲ್ಪವಾದ ಲಾಭವಾಗಲಿದೆ. (ಶ್ರೀ ದುರ್ಗಾ ಪರಮೇಶ್ವರಿ ದರ್ಶನ ಪಡೆಯಿರಿ)
ಕನ್ಯಾ ರಾಶಿ
ಸುತ್ತಮುತ್ತಲಿನ ಜನ ಬೆಂಬಲವಾಗಿ ನಿಲ್ಲುತ್ತಾರೆ. ಭೂಮಿಯ ಮೇಲಿನ ಹೂಡಿಕೆ ಲಾಭಕರ. (ಶ್ರೀ ಸುಬ್ರಮಣ್ಯ ಸ್ವಾಮಿ ದರ್ಶನ ಪಡೆಯಿರಿ)
ತುಲಾ ರಾಶಿ
ಸ್ಥಳ ಬದಲಾವಣೆ ನಿಮ್ಮ ನಿರ್ಧಾರದ ಮೇಲೆ ನಿಂತಿದೆ. ಮುಖ್ಯ ವಿಚಾರ ಇತ್ಯರ್ಥವಾಗಲಿದೆ. (ಶ್ರೀ ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆಯಿರಿ)
ವೃಶ್ಚಿಕ ರಾಶಿ
ಹಿರಿಯರ ನೆರವಿನಿಂದ ಉತ್ತಮ ಕಾರ್ಯ ನಡೆಸುವಿರಿ. ತಾಳ್ಮೆಯಿಂದ ಮಾತಾಡಿದರೆ ಕ್ಷೇಮ. (ಮನೆ ದೇವರ ದರ್ಶನ ಪಡೆಯಿರಿ)
ಧನಸ್ಸು ರಾಶಿ
ಕಲಾವಿದರಿಗೆ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. (ಹಸುವಿಗೆ ತಿನ್ನಲು ಏನಾದರೂ ಕೊಡಿ)
ಮಕರ ರಾಶಿ
ಹೆಚ್ಚು ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ಮಕ್ಕಳ ಮಧ್ಯೆ ಇರುವಂತಹ ಭಿನ್ನಾಭಿಪ್ರಾಯ ಹೆಚ್ಚಲಿದೆ. (ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದರ್ಶನ ಪಡೆಯಿರಿ)
ಕುಂಭ ರಾಶಿ
ಹೊಸ ವಸ್ತುಗಳ ಮೇಲೆ ಹಣವನ್ನು ಖರ್ಚು ಮಾಡುತ್ತೀರಿ. ಹೊಸ ಯತ್ನ ಸಫಲವಾಗಲಿದೆ. (ಕೋತಿಗಳಿಗೆ ಏನಾದರೂ ತಿನ್ನಲು ಹಣ್ಣನ್ನು ಕೊಡಿ)
ಮೀನ ರಾಶಿ
ಆರ್ಥಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಚಿನ್ನಾಭರಣ ಗಳನ್ನು ಕೊಳ್ಳುವಂಥ ಯೋಗವಿದೆ. (ಶ್ರೀ ದತ್ತಾತ್ರೇಯ ಸ್ವಾಮಿ ದರ್ಶನ ಪಡೆಯಿರಿ)
ತಿಥಿ: ಪಂಚಮಿ
ನಕ್ಷತ್ರ: ಅಶ್ವಿನಿ ನಕ್ಷತ್ರ.
ರಾಹುಕಾಲ: 04:30PM ರಿಂದ 06:00PM
ಗುಳಿಕಕಾಲ: 03:00PM ರಿಂದ 4:30PM
ಯಮಗಂಡಕಾಲ: 12:00PM ರಿಂದ 01:0?30PM
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ವಿದ್ವಾನ್ ಎಸ್.ನವೀನ್ M.A., ರಾಜ್ಯ ಜಂಟಿ ಕಾರ್ಯದರ್ಶಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ.) ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ದೊಡ್ಡಬಳ್ಳಾಪುರ. ಮೊ: 9620445122