Daily story Worry about tomorrow

Daily story: ಹರಿತಲೇಖನಿ ದಿನಕ್ಕೊಂದು ಕಥೆ: ನಾಳೆಯ ಚಿಂತೆ

Daily story: ಹಲವರಿಗೆ ಜೀವನ ನಿರ್ವಹಣೆಯ ಚಿಂತೆಯಾದರೆ, ಮತ್ತೆ ಕೆಲವರಿಗೆ ಜೀವನವೇ ಚಿಂತೆಯಾಗಿರುತ್ತದೆ. ನಾಳೆ ಏನು ನಾಡಿದ್ದು ಏನು ಎನ್ನುವ ಚಿಂತೆಯಲ್ಲಿ, ಕಣ್ಣೆದುರು ಇರುವ ಖುಷಿಯನ್ನೇ ಮರೆತುಬಿಡುತ್ತಾರೆ.

ನಿರೀಕ್ಷೆ ಇರಬೇಕು. ಆದರೆ ಮಿತಿಮೀರಿ ಸಂಪತ್ತ ಮಾಡಬೇಕು ಎಂಬ ಹೆಬ್ಬಯಕೆಯಿಂದ ಮಾಡ ಹೊರಟರೆ, ಚಿಂತೆಯಲ್ಲಿ ಮುಪ್ಪಾಗುತ್ತಾರೆ.
ಕೂಡಿಟ್ಟ ಸಂಪತ್ತು ಪರರ ಪಾಲಾಗುತ್ತದೆ.

ಈ ಕುರಿತು ಬುದ್ಧನ ಒಂದು ಕಥೆ

ಒಬ್ಬ ಆಗರ್ಭ ಶ್ರೀಮಂತನಿದ್ದ. ಅವನು ಎರಡ್ಮೂರು ತಲೆಮಾರಿಗಾಗುವಷ್ಟು ಆಸ್ತಿಯನ್ನು ಮಾಡಿದ್ದ. ಅವನ ವ್ಯಾಪಾರ- ವಹಿವಾಟು ಒಂದೆರಡಾಗಿರದೆ ನಾನಾ ಮೂಲಗಳಾಗಿದ್ದವು.

ಅವನು ಅಷ್ಟು ಶ್ರೀಮಂತನಾಗಿದ್ದರೂ ಇನ್ನಷ್ಟು ಗಳಿಸುವ ಚಿಂತೆ ಕಾಡುತ್ತಿತ್ತು. ಏಕೆಂದರೆ ಅವನು ಮಾತ್ರವಲ್ಲದೆ ಅವನ ಮಕ್ಕಳು, ಮೊಮ್ಮಕ್ಕಳು ಕೂತು ಉಂಡರೂ ಕರಗದಷ್ಟು ಆಸ್ತಿ ಮಾಡಬೇಕು. ಮತ್ತು ಆಹಾರ, ವಸ್ತ್ರ ,ಧನ – ಧಾನ್ಯಗಳು ಎಂದಿಗೂ ಕೊರತೆಯಾಗಬಾರದು ಎಂಬುದು ಅವನ ಯೋಚನೆ.

ಈ ಚಿಂತೆಯಲ್ಲಿಯೇ ಒಂದು ದಿನ ತನ್ನ ಗುಮಾಸ್ತನನ್ನು ಕರೆದು, ನನ್ನ ಆಸ್ತಿ ಒಟ್ಟು ಎಷ್ಟು ಇದೆ, ಅದು ಎಷ್ಟು ತಲೆಮಾರಿನ ತನಕ ಬರುತ್ತದೆ, ಅದನ್ನು ವಿವರವಾಗಿ ತಿಳಿಸು ಆನಂತರ ನಾನು ಮತ್ತಷ್ಟುಗಳಿಸಬೇಕೋ, ಬೇಡವೋ ಯೋಚಿಸುತ್ತೇನೆ.

ಗುಮಾಸ್ತನು, ಸ್ವಲ್ಪ ದಿನಗಳಲ್ಲೆ, ಶ್ರೀಮಂತನ ಆಸ್ತಿ ಎಲ್ಲೆಲ್ಲಿ ಎಷ್ಟೆಷ್ಟು ಇದೆ ಎಂದು ಲೆಕ್ಕ ಮಾಡಿ, ಶ್ರೀಮಂತನ ಬಳಿ ಬಂದು, ಸರ್, ನಾನು ನಿಮ್ಮ ಆಸ್ತಿ ಎಲ್ಲವನ್ನು ಲೆಕ್ಕ ಹಾಕಿದ್ದೇನೆ.

ನೀವು ಈಗ ಖರ್ಚು ಮಾಡುತ್ತಿರುವ ಲೆಕ್ಕವನ್ನೂ ಸೇರಿಸಿ, ಎಷ್ಟಿದೆ ಎಂದರೆ, ನೀವು ಇನ್ನು ಮುಂದೆ ಸಂಪಾದನೆ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ ನಿಮ್ಮ ಹಾಗೂ ನಿಮ್ಮ ಎರಡು ತಲೆಮಾರು ಕೂತುಂಡರೂ ಕರಗದಷ್ಟು ಆಸ್ತಿ ಇದೆ.

ನೀವು ಏನು ಚಿಂತಿಸದೆ ಆರಾಮವಾಗಿ ಜೀವನ ಮಾಡಿ ಎಂದನು. ಆದರೆ ಆ ಶ್ರೀಮಂತನು, ಯೋಚಿಸಿ ಹ್ಞಾಂ ಏನಂದೆ ಕೇವಲ ಎರಡು ತಲೆಮಾರಿಗಾಗುವಷ್ಟು ಮಾತ್ರ ಆಸ್ತಿ ಇದೆಯೇ ಮತ್ತೆ ಅದರ ಮುಂದಿನ ಎರಡು ತಲೆಮಾರುಗಳು ಗತಿ ಏನು.‌?

ತಲೆಮಾರುಗಳಿಗಾಗಿ ನಾನು ಮತ್ತಷ್ಟು ಗಳಿಸಬೇಕು ಎಂದುಕೊಂಡು ಕಾರ್ಯಪ್ರವೃತ್ತನಾದನು.

ದಿನ ಬೆಳಗಾದರೆ, ಮೂರು ಮತ್ತು ನಾಲ್ಕು ತಲೆಮಾರುಗಳ ಬಗ್ಗೆ ಯೋಚಿಸ ತೊಡಗಿದನು, ಶ್ರಮಪಟ್ಟು ಸಂಪಾದಿಸಲು, ತನ್ನ ಆಹಾರ, ನೀರು, ವಿಶ್ರಾಂತಿ, ನಿದ್ರೆ, ಸೇರಿದಂತೆ ಎಲ್ಲಾ ಸಂಬಂಧಗಳನ್ನು ಮರೆತು ಗಳಿಸತೊಡಗಿದನು.

ಆಯಾಸ ಮತ್ತು ಚಿಂತೆಯಿಂದ ಕಾಯಿಲೆ ಬಿದ್ದನು. ಯಾವ ಔಷಧಿಗಳು ಉಪಚಾರಗಳು ಉಪಯೋಗಕ್ಕೆ ಬರಲಿಲ್ಲ. ಅವನು ಇಷ್ಟುಗಳಿಸಿದರು ಸಾಲದು ಎಂದೇ ಅವನಿಗೆ ಅನಿಸುತ್ತಿತ್ತು.

ಈ ಚಿಂತೆಯಲ್ಲಿ ಅವನ ಸುಂದರ ಯೌವ್ವನವೆಲ್ಲ ಹೋಯಿತು. ದೇಹ ಮುಖ ಸುಕ್ಕು ಬಿದ್ದಿತು. ಯೋಚಿಸಿ ಯೋಚಿಸಿ ಬೆನ್ನು ಬಗ್ಗಿತು. ಕೆಲವೆ ವರ್ಷಗಳ ಕೆಳಗೆ ನೋಡಿದವರು ಈಗ ಅವನನ್ನು ನೋಡಿದರೆ ಗುರುತು ಸಿಗದಷ್ಟು ಬದಲಾಗಿದ್ದನು.

ಗೆಳೆಯನ ಭೇಟಿ

ಹೀಗಿರುವಾಗ ಒಂದು ದಿನ ಅವನನ್ನು ನೋಡಲು ಆತ್ಮೀಯ ಗೆಳೆಯ ಬಂದನು. ತಲೆ ಮೇಲೆ ಕೈಹೊತ್ತು ಚಿಂತೆ ಮಾಡುತ್ತಾ ಕುಳಿತಿದ್ದ ವ್ಯಕ್ತಿಯನ್ನು ನೋಡಿ ಯಾರಿರಬಹುದು ಎಂದು ಯೋಚಿಸುತ್ತಿದ್ದಾಗ, ಎಲ್ಲವನ್ನು ತಿಳಿದು ಅವನಿಗೆ ಇವನೇ ತನ್ನ ಗೆಳೆಯ ಎಂದು ಗೊತ್ತಾಯಿತು.

ಆ ವ್ಯಾಪಾರಿ, ಬಂದ ಗೆಳೆಯನ ಜೊತೆಗೂ, ಗೆಳೆಯಾ ನಾನು ಗಳಿಸಿದ ಸಂಪತ್ತು ನನ್ನ ಮುಂದಿನ ಎರಡು ತಲೆಮಾರಿಗಾಗುವಷ್ಟು ಮಾತ್ರ ಇದೆ.

ಮತ್ತೆ ಮುಂದಿನ ಎರಡು ತಲೆಮಾರುಗಳ ಚಿಂತೆ ಕಾಡುತ್ತಿದೆ, ಅವರಿಗೆ ಆಸ್ತಿ ಮಾಡಬೇಕು ಹೇಗೆ ಮಾಡಲಿ..? ಇದನ್ನು ಕೇಳಿ ಗೆಳೆಯನು ಮೂಕನಾಗಿ, ನಗಬೇಕೊ, ಅಳಬೇಕೊ ಅವನಿಗೆ ತಿಳಿಯಲಿಲ್ಲ.

ಆಡುವ ಮಾತನ್ನು ನಿಲ್ಲಿಸಿದನು. ಸ್ವಲ್ಪ ಹೊತ್ತು ಬಿಟ್ಟು, ನೋಡು ಸ್ನೇಹಿತ ನಿನ್ನ ಚಿಂತೆ ನನಗೆ ಅರ್ಥವಾಗಿದೆ. ಅದಕ್ಕೊಂದು ಪರಿಹಾರವಿದೆ.

ನಮ್ಮ ಊರಿನ ಹೊರವಲಯದಲ್ಲಿ ಒಬ್ಬ ಸಾಧುಗಳು ಇದ್ದಾರೆ. ಅವರು ಯಾರಿಗೆ ಎಂತಹದೇ ಸಮಸ್ಯೆ ಇದ್ದರೂ ಅದನ್ನು ಕ್ಷಣಮಾತ್ರದಲ್ಲಿ ಪರಿಹರಿಸುತ್ತಾರೆ.

ಅವರ ಬಳಿ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ನೀನು ಅವರ ಬಳಿ ಹೋಗುವಾಗ ಅವರಿಗೆ ಊಟವನ್ನು ತೆಗೆದುಕೊಂಡು ಹೋಗಬೇಕು ಎಂದನು.

ಗೆಳೆಯನ ಮಾತಿನಂತೆ, ಮರುದಿನವೇ ಒಳ್ಳೆಯ ಊಟವನ್ನು ತೆಗೆದುಕೊಂಡು ಸಾಧುಗಳ ಬಳಿಗೆ ಬಂದನು.

ಆಹಾರವನ್ನು ನೋಡಿ ಸಾಧುಗಳ ಕೈಮುಗಿದು ಅವರ ಶಿಷ್ಯರಿಗೆ ಹೇಳಿದರು, ನೋಡಿ ಈ ಮನುಷ್ಯ ನಿಮಗೆ ಊಟವನ್ನು ತಂದಿದ್ದಾರೆ ಸ್ವೀಕರಿಸಿ ಎಂದರು.

ಆದರೆ ಆ ಶಿಷ್ಯ, ಗುರುಗಳೇ ಇಂದು ನಮಗೆ ಮುಂಜಾನೆಯೇ ಒಬ್ಬರು ಊಟ ತಂದುಕೊಟ್ಟಿದ್ದಾರೆ ನಮ್ಮ ಊಟ ಆಗಿದೆ ಎಂದನು.

ಆಗ ಸಾಧು ಶ್ರೀಮಂತನಿಗೆ, ನಮ್ಮನ್ನು ಕ್ಷಮಿಸಿ, ನೀವು ತಂದ ಊಟವನ್ನು ನಾವು ಸ್ವೀಕರಿಸುವುದಿಲ್ಲ ಏಕೆಂದರೆ ಯಾರೋ ಒಬ್ಬರು ನಮಗೆ ಊಟ ತಂದುಕೊಟ್ಟಿದ್ದಾರೆ ಎಂದರು.

ಅದಕ್ಕೆ ಶ್ರೀಮಂತನು, ಅವರು ಊಟ ಕೊಟ್ಟರೆ ಕೊಡಲಿ ಜೊತೆಗೆ ಇದನ್ನು ತೆಗೆದುಕೊಳ್ಳಿ ಎಂದನು. ಅದು ಸಾಧ್ಯವಿಲ್ಲ ಏಕೆಂದರೆ ನಾವು ದಿನಕ್ಕೆ ಒಂದು ಸಲ ಮಾತ್ರ ಊಟ ಸೇವಿಸುತ್ತೇವೆ ಎಂದರು.

ಮತ್ತೆ ಶ್ರೀಮಂತನು, ಆದರೇನಂತೆ ಇದನ್ನು ತೆಗೆದು ಇಟ್ಟುಕೊಳ್ಳಿ ನಾಳೆಗೆ ಆಗುತ್ತದೆ ಎಂದನು. ಅದಕ್ಕೆ ಸಾಧು ಹೇಳಿದರು ನಾವು ನಾಳೆಯ ಕುರಿತು ಎಂದೂ ಚಿಂತಿಸುವುದಿಲ್ಲ.

ಅದಕ್ಕೆ ಶ್ರೀಮಂತನು, ಇವತ್ತು ಸಿಕ್ಕಂತೆ ನಾಳೆ ಯಾರೂ ನಿಮಗೆ ಊಟ ಕೊಡದಿದ್ದರೆ ಏನು ಮಾಡುತ್ತೀರಿ? ಆಗ ಸಾಧು ಹೇಳಿದನು.

ನಾಳೆಯ ಚಿಂತೆ ನಮಗಿಲ್ಲ ಸಿಕ್ಕರೆ ತಿನ್ನುತ್ತೇವೆ ಇಲ್ಲದಿದ್ದರೆ ಇಲ್ಲ ಹುಟ್ಟಿಸಿದ ದೇವರು, ಹುಲ್ಲು ಮೇಯಿಸದೆ ಇರಲಾರನು.

ಈ ದಿನ ಸಿಕ್ಕ ಹಾಗೆ ನಾಳೆಯೂ ಊಟ ಸಿಗಬಹುದು ಸಿಗದೇ ಇದ್ದರೂ ಇರಬಹುದು. ಆದರೆ ನಾಳೆ ಹೊತ್ತಿಗೆ ನಾವು ಇರುತ್ತೇವೆ ಎಂದು ಹೇಳುವುದಾದರೂ ಹೇಗೆ? ಆದುದರಿಂದ ನಾಳಿನ ಊಟದ ಕುರಿತು ಯೋಚಿಸುವುದಿಲ್ಲ.

ಈ ಹೊತ್ತಿನ ತನಕವೂ ಭಗವಂತ ನಮಗೆ ಊಟ ಕೊಟ್ಟಿದ್ದಾನೆ ಎಂದನು. ಶ್ರೀಮಂತನು ಸನ್ಯಾಸಿಗೆ
ನಮಸ್ಕರಿಸಿ ಮನೆಗೆ ಹೊರಟನು.

ಮಾರ್ಗದಲ್ಲಿ ಯೋಚಿಸಿದನು. ಸಾಧು ಮತ್ತು ಶಿಷ್ಯರಿಗೆ ನಾಳೆ ಊಟವಿಲ್ಲ ಆದರೆ ಚಿಂತೆ ಮಾಡುತ್ತಿಲ್ಲ. ಎರಡು ತಲೆ ಮಾರಿಕಾಗೋವಷ್ಟು ಆಸ್ತಿ ನನ್ನ ಬಳಿ ಇದ್ದರೂ, ಅದರ ಮುಂದಿನ ತಲೆಮಾರಿಗೆ ಆಗುವ ಆಸ್ತಿಯ ಬಗ್ಗೆ ಚಿಂತಿಸುತ್ತಾ ಈಗಿರುವ ಸುಖ ಸಂತೋಷಗಳನ್ನೆಲ್ಲ ಕಳೆದುಕೊಂಡಿದ್ದೇನೆ.

ಇಷ್ಟು ವರ್ಷಗಳವರೆಗೂ ಮುಂದಿನದನ್ನೆ ಚಿಂತಿಸುತ್ತಾ ಕಳೆದೆ, ಯಾವ ಸಂತೋಷ ನನಗೆ ಸಿಕ್ಕಿತ್ತೋ, ಅದನ್ನು ಅನುಭವಿಸಲಿಲ್ಲ.

ಇನ್ನು ಮುಂದಾದರೂ ಸಾಧುಗಳ ಮಾತಿನಂತೆ ನಾಳೆಯ ಚಿಂತೆಯನ್ನು ಬಿಟ್ಟು, ಭಗವಂತ ಏನು ಕೊಡುತ್ತಾನೋ ಅದನ್ನು ಸ್ವೀಕರಿಸಬೇಕು.

ಆಗ ಮಾತ್ರ ಇನ್ನು ಬೇಕು ಮತ್ತಷ್ಟು, ಮಗದಷ್ಟು ಬೇಕು ಎಂಬ ಯಾವ ಚಿಂತೆಯು ಕಾಡುವುದಿಲ್ಲ ಎಂದುಕೊಂಡನು.

ಬರಹ: ಆಶಾ ನಾಗಭೂಷಣ, (ಸಾಮಾಜಿಕ ಜಾಲತಾಣ) ಸಾಂದರ್ಭಿಕ ಚಿತ್ರ ಬಳಸಲಾಗಿದೆ.

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]