Daily story: Known for his grumpiness

Daily story ಹರಿತಲೇಖನಿ ದಿನಕ್ಕೊಂದು ಕಥೆ: ಕೋಪ ಬಂದಾಗ

Daily story: ಒಬ್ಬ ತಂದೆಗೆ ಒಬ್ಬನೇ ಮುದ್ದಿನ ಮಗನಿದ್ದ. ಮಗನಿಗೆ ಬೇಕಾದಷ್ಟು ಆಸ್ತಿ ಮಾಡಿದ್ದ. ಆತ ಸಂಪಾದನೆ ಮಾಡುವ ಅಗತ್ಯವಿರಲಿಲ್ಲ. ಅವನಿಗೆ ಹೇಳಿಕೊಳ್ಳುವಂತಹ ವಿದ್ಯೆ, ಕೆಲಸ ಇರಲಿಲ್ಲ. ಹೀಗಾಗಿ ಸೋಮಾರಿಯಾಗಿ ಬೆಳೆದ.

ಅವನು ಕೇಳುವುದು ಹೆಚ್ಚೊ, ಕೊಡಿಸುವುದು ಹೆಚ್ಚೊ, ಎಂಬಂತೆ, ಬಾಯಲ್ಲಿ ಬರುತ್ತಿದ್ದ ಹಾಗೆ ಎಲ್ಲವೂ ಅವನ ಕಣ್ಣು ಮುಂದೆ ಇರುತ್ತಿತ್ತು. ಇದೇ ಅವನ ಅಭ್ಯಾಸವಾಗಿತ್ತು. ಸಿಗದಿದ್ದರೆ ವಿಪರೀತ ಸಿಟ್ಟು ಮಾಡಿಕೊಳ್ಳುತ್ತಿದ್ದ. ಏನೂ ಮಾಡದೆ ಉಂಡಾಡಿ ಗುಂಡನ ಹಾಗೆ ಇರುತ್ತಿದ್ದ.

ಒಂದು ದಿನ ಯಾರೋ ಒಬ್ಬರು ಇವನನ್ನು ತಮಾಷೆ ಮಾಡಬೇಕೆಂದು, ನಿಮ್ಮ ಹೆಂಡತಿ ಉದ್ಯಾನವನದಲ್ಲಿ ಅವಳ ಪ್ರಿಯಕರನೊಡನೆ ಸಲ್ಲಾಪ ನಡೆಸುತ್ತಿದ್ದಾಳೆ. ನೀವಿಲ್ಲಿ ಸುಮ್ಮನೆ ಕುಳಿತಿದ್ದೀರಲ್ಲ ಎಂದರು.

ಇವನಿಗೆ ಸಿಟ್ಟು ಬಂತು. ತಕ್ಷಣ ಕೈಯಲ್ಲಿ ಬಂದೂಕು ಹಿಡಿದು ಉದ್ಯಾನವನದ ಕಡೆ ಹೊರಟ ಉದ್ಯಾನವನವೆಲ್ಲಾ ಹುಡುಕಿದ. ಅಲ್ಲೆಲ್ಲೋ ಇವನ ಹೆಂಡತಿ ಅವಳ ಪ್ರೇಮಿ ಕಾಣಿಸಲಿಲ್ಲ. ರೊಚ್ಚಿಗೆದ್ದು ಎಲ್ಲಾ ಕಡೆ ಹುಡುಕಾಡುತ್ತಿದ್ದ.

ಆಗ ಇವನ ಕುಟುಂಬಕ್ಕೆ ಹತ್ತಿರವಾದ ಹಿರಿಯರೊಬ್ಬರು ಈತನನ್ನು ಕಂಡು ಯಾಕೋ ಕೈಯಲ್ಲಿ ಕೋವಿ ಹಿಡಿದು ಏನು ಹುಡುಕುತ್ತಿದ್ದಿ…? ಎಂದು ಕೇಳಿದರು.

ನನ್ನ ಹೆಂಡತಿ ಇಲ್ಲಿ ಅವಳ ಪ್ರೇಮಿಯೊಂದಿಗೆ ಸಲ್ಲಾಪದಲ್ಲಿ ತೊಡಗಿದ್ದಾಳೆಂದು ಯಾರೋ ತಿಳಿಸಿದರು. ಅವಳನ್ನು ಹಾಗೂ ಅವಳ ಪ್ರೇಮಿಯನ್ನು ಹುಡುಕುತ್ತಿದ್ದೇನೆ ಸಿಕ್ಕರೆ ಇಬ್ಬರನ್ನು ಅಲ್ಲಿಯೇ ಸುಟ್ಟು ಹಾಕುತ್ತೇನೆ ಎಂದು ಬುಸುಗುಟ್ಟುತ್ತ ಹೇಳಿದ.

ಆ ಹಿರಿಯರು ಆಶ್ಚರ್ಯದಿಂದ ಅರೆ ನಿನಗೆ ಯಾವಾಗ ಮದುವೆಯಾಯಿತು‌..? ನಿನ್ನ ಹೆಂಡತಿ ಯಾರು.? ಎಂದು ಕೇಳಿದರು. ಅವನಿಗೆ ಇನ್ನೂ ಮದುವೆಯಾಗಿರಲಿಲ್ಲ. ಮುಂಗೋಪದಲ್ಲಿ ಪ್ರಜ್ಞೆ ಕಳೆದುಕೊಂಡ ಅರಿವಾಯಿತು ಬಂದೂಕನ್ನು ತೆಗೆದುಕೊಂಡು ಮನೆಗೆ ಮರಳಿದ.

ಉಪನ್ಯಾಸದಲ್ಲಿ ಇಂತಹ ಕಥೆಯನ್ನು ಕೇಳಿದ ಭಕ್ತರೊಬ್ಬರು ಗುರುಗಳೇ, ನನಗೂ ಹೀಗೆ ಸಿಟ್ಟು ಬರುತ್ತದೆ. ನನ್ನಿಂದ ಮಾಡಬಾರದ್ದನ್ನೆಲ್ಲ ಮಾಡಿಸುತ್ತದೆ. ನನಗೇನಾದರೂ ಒಂದು ಮಾರ್ಗ ತೋರಿಸಿ ಗುರೂಜಿ ಎಂದು ಕೇಳಿದರು.

ಆಗ ಗುರುಗಳು ಸ್ವಯಂ ನಿಯಂತ್ರಣ ಅಥವಾ ಮನೋವೈದ್ಯರ ಹತ್ತಿರ ಸಲಹೆ ಪಡೆಯಲು ತಿಳಿಸಿದರು.

ಆಗ ಭಕ್ತರು ಸ್ವಯಂ ನಿಯಂತ್ರಣ ನನ್ನಿಂದ ಆಗದ ಕೆಲಸ ಮತ್ತು ನಮ್ಮ ಮನೋವೈದ್ಯರಿಗೆ ನನಗಿಂತ ಸಿಟ್ಟು ಜಾಸ್ತಿ. ಅವರೂ ಪ್ರಯೋಜನವಿಲ್ಲ ನೀವೇ ಏನಾದರೂ ಮಂತ್ರ, ತಂತ್ರ ಮಾಡಿಕೊಡಬೇಕು ಎಂದು ಪ್ರಾರ್ಥಿಸಿದರು.

ಗುರುಗಳು ಎಷ್ಟೇ ಸಲಹೆ ಉಪಾಯಗಳನ್ನು ಹೇಳಿದರೂ ಕೇಳಲಿಲ್ಲ. ಆಗ ಗುರುಗಳು ಯೋಚನೆ ಮಾಡಿ ಭಕ್ತನ ಕೈಯಲ್ಲಿದ್ದ ಉಂಗುರವನ್ನು ಕೇಳಿ ಪಡೆದುಕೊಂಡು, ತಮ್ಮ ಬಲ ಮುಷ್ಟಿಯಲ್ಲಿ ಇಟ್ಟುಕೊಂಡು ಕಣ್ಣು ಮುಚ್ಚಿ ಕೆಲ ನಿಮಿಷ ಧ್ಯಾನಸ್ಥರಾಗಿ ನಂತರ ಉಂಗುರವನ್ನು ಭಕ್ತನಿಗೆ ಕೊಟ್ಟು ಇದನ್ನು ಮಂತ್ರಿಸಿ ಕೊಟ್ಟಿದ್ದೇನೆ.

ನಿಮ್ಮ ದೇವರ ಮನೆಯಲ್ಲಿ ಇಡು, ನಿನಗೆ ಯಾವಾಗ ಸಿಟ್ಟುಬಂದರೂ ದೇವರ ಮನೆಗೆ ಹೋಗಿ ಉಂಗುರಕ್ಕೆ ಹನ್ನೊಂದು ಸಾರಿ ಸುತ್ತು ಪ್ರದಕ್ಷಣೆ ನಮಸ್ಕಾರ ಮಾಡು. ಆಗ ಈ ಉಂಗುರವು ನಿನ್ನ ಕೋಪ ತಾಪದಿಂದ ಆಗುವ ಅನಾಹುತಗಳನ್ನು ತಪ್ಪಿಸುತ್ತದೆ ಎಂದು ಹೇಳಿ ಕಳುಹಿಸಿದರು. ಭಕ್ತನು ಸಂತೋಷದಿಂದ ಉಂಗುರ ತೆಗೆದುಕೊಂಡು ಹೋದನು.

ಇದನ್ನೆಲ್ಲಾ ನೋಡುತ್ತಿದ್ದ ಮತ್ತೊಬ್ಬ ಭಕ್ತನು ಎದ್ದು ಬಂದು, ಮಂತ್ರಿಸಿದ ಉಂಗುರಕ್ಕೆ ಹನ್ನೊಂದು ಸಾರಿ ನಮಸ್ಕಾರ ಹಾಕಿದರೆ ಅನಾಹುತ ತಪ್ಪುತ್ತದೆಯೇ..? ಎಂದು ಕೇಳಿದಾಗ, ಗುರುಗಳು ಹೇಳಿದರು, ಸಿಟ್ಟು ಬಂದಾಗ ಆತ ದೇವರ ಮನೆಗೆ ಹೋಗಿ ಉಂಗುರವನ್ನು ತೆಗೆದು ಅದಕ್ಕೆ ಹನ್ನೂಂದು ಸಾರಿ ನಮಸ್ಕಾರ ಮಾಡಿ ಹಿಂತಿರುಗಿ ಬರಲು 10-15 ನಿಮಿಷ ಬೇಕಾಗುತ್ತದೆ. ಅಷ್ಟರಲ್ಲಿ ಆತನ ಕೋಪದ ತೀವ್ರತೆ ಸಹಜವಾಗಿ ಕಮ್ಮಿಯಾಗಿರುತ್ತೆ. ಆಗ ಆತನಿಂದ ಆಗುವ ಅನಾಹುತ ತಪ್ಪುತ್ತದೆ.

ಇದರಲ್ಲಿ ಯಾವ ಮಂತ್ರ ತಂತ್ರ ಇಲ್ಲ ಎಂದರು. ಯಾವುದೇ ವ್ಯಕ್ತಿ ಸಿಟ್ಟು ಬಂದಾಗ ಐದು ನಿಮಿಷ ಒಂದೇ ಕಡೆ ಸುಮ್ಮನೆ ಕುಳಿತು ಯೋಚಿಸಿ ಕೆಲಸ ಮಾಡಿದರೆ ಯಾವ ಮಂತ್ರ ತಂತ್ರದ ಉಂಗುರವು ಬೇಡ. ಇನ್ನೊಬ್ಬರನ್ನು ಕೇಳುವ ಅಗತ್ಯವೂ ಇರುವುದಿಲ್ಲ.

ಕೃಪೆ: ಆಶಾ ನಾಗಭೂಷಣ. (ಸಾಮಾಜಿಕ ಜಾಲತಾಣ)

ರಾಜಕೀಯ

ಜೆಡಿಎಸ್‌ನವರು ಏನೇ ಹೇಳಿದರೂ ಮಾತಾಡಬೇಡಿ; ಬಿ.ವೈ.ವಿಜಯೇಂದ್ರ

ಜೆಡಿಎಸ್‌ನವರು ಏನೇ ಹೇಳಿದರೂ ಮಾತಾಡಬೇಡಿ; ಬಿ.ವೈ.ವಿಜಯೇಂದ್ರ

ಜೆಡಿಎಸ್‌ನವರು (JDS) ಏನೇ ಹೇಳಿದರೂ ಮಾತಾಡಬೇಡಿ ಎಂದು ನಮ್ಮವರಿಗೆ ಹೇಳಿದ್ದೇನೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D. Kumaraswamy) ಮಾತನಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ತಿಳಿಸಿದರು.

[ccc_my_favorite_select_button post_id="119469"]
ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಮೈಸೂರು ಸ್ಯಾಂಡಲ್‌ ಪ್ರಚಾರ ರಾಯಭಾರಿಯಾಗಿ ಬಂದ ಚೆಲುವೆ ತಮನ್ನಾ

ಅಲ್ಲಿ ಇದ್ದಿದ್ದು ಕಣ್ಣು ಕೋರೈಸುತ್ತಿದ್ದ ಲೇಸರ್ ಬೆಳಕಿನ ಲೀಲೆ; ಅದರ ಝಗಮಗದ ನಡುವೆ ಹಿಂಬಾಗಿಲ ಮೂಲಕ ಕಾಣಿಸಿಕೊಂಡಿದ್ದು ಖ್ಯಾತ ನಟಿ ತಮನ್ನಾ ಭಾಟಿಯಾ (Tamannaah Bhatia). ಹಾಲ್ಬಣ್ಣದ ಈ ಚೆಲುವೆಯ ಸೌಂದರ್ಯಕ್ಕೆ ಮೆರುಗು ನೀಡಿದ್ದು

[ccc_my_favorite_select_button post_id="119304"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಹಾಸ್ಟೆಲ್‌ನಿಂದ ಬಿದ್ದು ಗೀತಂ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ..!

ಹಾಸ್ಟೆಲ್‌ನಿಂದ ಬಿದ್ದು ಗೀತಂ ವಿವಿ ವಿದ್ಯಾರ್ಥಿನಿ ಆತ್ಮಹತ್ಯೆ..!

ಗೀತಂ ವಿಶ್ವವಿದ್ಯಾಲಯದಲ್ಲಿ (Geetham University) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ (Suicide) ಪ್ರಕರಣಗಳಿಗೆ ಕೊನೆ ಇಲ್ಲವೇ ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿದ್ದು, ವಿದ್ಯಾರ್ಥಿಗಳ ಆಕಸ್ಮಿಕ ಸಾವು, ಆತ್ಮಹತ್ಯೆ ಕುರಿತಂತೆ ಪದೇ ಪದೇ ದೂರು ದಾಖಲಾಗುತ್ತಿದೆ.

[ccc_my_favorite_select_button post_id="119472"]
ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ಭೀಕರ ಅಪಘಾತ: ದೊಡ್ಡಬಳ್ಳಾಪುರದ 5 ಯುವಕರು ಸಾವು

ನೆಲಮಂಗಲ ಹೆದ್ದಾರಿಯ ಜಿಂದಾಲ್ ಮೇಲ್ಸೇತುವೆ ಬಳಿ ಸಂಭವಿಸಿದ ಕೆಎಸ್ ಆರ್ ಟಿಸಿ ಬಸ್​​ (KSRTC Bus) ಮತ್ತು ಇಂಡಿಕ ಕಾರಿನ (Indica Car) ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ದೊಡ್ಡಬಳ್ಳಾಪುರದ ಐವರು ಯುವಕರು

[ccc_my_favorite_select_button post_id="119422"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!