Reason

ಹರಿತಲೇಖನಿ ದಿನಕ್ಕೊಂದು ಕಥೆ: ಕಾರಣ..!

Reason: ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ಹೊರಟು ಎಂಟೂವರೆಗೆ ಆ ಶಾಲೆಯ ಮುಂದೆ ಹಾದು ಹೋಗುವಾಗ ಏನೋ ಗುಂಪು ಸೇರಿದ್ದು ಕಂಡು ಕುತೂಹಲದಿಂದ ಅತ್ತ ನಡೆದೆ. ನೋಡಿದರೆ, ಅಯ್ಯೋ..! ಆ ಮುದಿ ತಾತ ನೆಲಕ್ಕೊರಗಿದ್ದಾರೆ. ಕೆಲವೇ ನಿಮಿಷಗಳಾಗಿರಬಹುದು.

ಕಳೆದೆರೆಡು ದಶಕಗಳಿಂದ, ಈ ತಾತ, ದಿನಾ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಸರಿಯಾಗಿ ಬಂದು, ಆ ಹಳೆಯ ಶಾಲೆಯ ಆವರಣವನ್ನೆಲ್ಲ ಶುಚಿಗೊಳಿಸಿ ಎದುರಿನ ಕಟ್ಟೆಯಲ್ಲಿ ಒಬ್ಬರೇ ಸುಮ್ಮನೇ ಕುಳಿತಿರುತ್ತಿದ್ದರು. ಸಂಜೆ ಆರರ ನಂತರ ಎದ್ದು ಮನೆ ಕಡೆ ಹೊರಡುತ್ತಿದ್ದರು.

ಶಾಲೆಗೆ ಬರುವ ಮಕ್ಕಳನ್ನೆಲ್ಲಾ ಮಾತಾಡಿಸಿ, ಊಟದ ಸಮಯದಲ್ಲಿ ಆ ಮಕ್ಕಳಿಗೆ ಅದೂ ಇದೂ ಸಹಾಯ ಮಾಡಿ, ಚಾಕೋಲೇಟ್, ಐಸ್ಕ್ರೀಂ ಎಲ್ಲ ಕೊಡಿಸುವುದರ ಜೊತೆಗೆ ತಮ್ಮ ಬುತ್ತಿಯನ್ನು ಕೂಡ ಅವರೊಂದಿಗೆ ಹಂಚಿಕೊಂಡು ಇಲ್ಲೇ ಉಣ್ಣುತ್ತಿದ್ದರು.

ಆಟದ ವೇಳೆಯಲ್ಲಂತೂ ಅವರೂ ಮಕ್ಕಳೊಂದಿಗೆ ಕೂಡಿ ಆಡುತ್ತಿದ್ದರು ಎಂದು ಆ ಶಾಲೆಯ ನನ್ನ ಸ್ನೇಹಿತ ಮೇಷ್ಟ್ರು ಹೇಳುತ್ತಿದ್ದರು. ಈಗಂತೂ ಕರೋನಾ ಕಾರಣದಿಂದ ಶಾಲೆ ತೆರೆಯದಿದ್ದರೂ ಸಹ ಇದೇ ಪ್ರವೃತ್ತಿಯನ್ನು ಕಂಡು, ಕುತೂಹಲದಿಂದ ನಾನೊಮ್ಮೆ ಅವರನ್ನೇ ಕೇಳಿದಾಗ ಒಲ್ಲದ ಮನಸ್ಸಿನಿಂದ ಹೇಳಿದ್ದರು.

“ನಿವೃತ್ತ ನೌಕರ ನಾನು. ಇಲ್ಲೇ ಶಾಲೆ ಹತ್ತಿರದಲ್ಲೇ ಕೆಲವು ದಶಕಗಳಿಂದ ಚಿಕ್ಕ ಸ್ವಂತ ಮನೆಯಲ್ಲಿದ್ದೇನೆ. ಬಾಲ್ಯದಲ್ಲಿ ನನ್ನ ಮಕ್ಕಳಿಬ್ಬರೂ ಇದೇ ಶಾಲೆಯಲ್ಲಿ 10ರವರೆಗೆ ಓದುವಾಗ ಆ ಇಬ್ಬರು ಮಕ್ಕಳನ್ನೂ ದಿನಾ ಸೈಕಲ್ನಲ್ಲಿ ಕೂರಿಸಿ ಕರೆದು ಕೊಂಡು ಬಂದು ಶಾಲೆ ಬಿಡುವಾಗ ಪುನಃ ಕರೆದುಕೊಂಡು ಹೋಗುತ್ತಿದ್ದೆ.

ಆ ದಿನಗಳ ಖುಷಿಯಂತೂ ಮರೆಯೋ ಹಾಗಿಲ್ಲ..! ಆವಾಗೆಲ್ಲಾ, ಶಾಲೆ ಬಿಡುವ ಹೊತ್ತಿಗೆ ಇದೇ ಕಟ್ಟೆಯ ಮೇಲೆ ಕುಳಿತು ಕಾಯುತ್ತಿದ್ದೆ. ಬೆಳೆದು ಹೆಚ್ಚಿನ ಓದಿಗೆ ಶಹರಕ್ಕೆ ಹೋಗ ತೊಡಗಿದ ಮೇಲೆ ಅವರ ಒಡನಾಟ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿ, ವಿದೇಶಕ್ಕೆ ಹೋದ ಮೇಲಂತೂ ನಿಂತೇ ಹೋದಂತಾಗಿದೆ.

ಮಕ್ಕಳಿಬ್ಬರೂ ಮಕ್ಕಳೊಂದಿಗೆ ವಿದೇಶದಲ್ಲೇ ನೆಲೆಸಿದ್ದಾರೆ. ಯಾವಾಗಲೋ ಒಮ್ಮೆ ಮನಸ್ಸು ಬಂದರೆ ಮಾತಾಡ್ತಾರೆ ಅಷ್ಟೇ. ನನ್ನವಳೂ ಕೂಡ ಗತಿಸಿ ಕೆಲವು ವರ್ಷಗಳಾಗಿ, ಅವಳಿಚ್ಛೆಯಂತೆ ಕಟ್ಟಿಸಿದ ಮನೆಯಲ್ಲೇ ಇರುಳೆಲ್ಲ ಅವಳ ನೆನಪಿನಲ್ಲೇ ಕಳೆದರೂ.

ಹಗಲು ಸವೆಯಲು, ಬಾಲ್ಯದಲ್ಲಿ ಮಕ್ಕಳು ಆಡಿ ಬೆಳೆದ ಈ ಶಾಲೆಯನ್ನಾದರೂ ನೋಡುತ್ತ ಕುಳಿತಿದ್ದರೆ, ಸಮಯ ಹೋದೀತೆಂದು ದಿನಾ ಬಂದು ಕಳೆಯುತ್ತೇನೆ! ಆಡುವ ಮಕ್ಕಳಲ್ಲಿ ದೂರದಲ್ಲಿರುವ ನನ್ನ ಮಕ್ಕಳು, ಮೊಮ್ಮಕ್ಕಳನ್ನು ಅರಸುತ್ತ, ಕಳೆದ ದಿನಗಳ ನೆನೆದು ಆಯಸ್ಸು ಕಳೆಯುತ್ತಿದ್ದೇನೆ!.

ನನ್ನವಳ, ನನ್ನ ಮಕ್ಕಳ, ಮೊಮ್ಮಕ್ಕಳ ಮಧುರ ನೆನಪು ತರುವ ಈ ಹಳೆಯ ಶಾಲೆ, ಯಾವುದೇ ದೇವಾಲಯಕ್ಕಿಂತ ಪೂಜ್ಯವೆಂದು ಭಾವಿಸಿ, ಶುಚಿಗೊಳಿಸಿ, ಇಲ್ಲೇ ಸಮಯ ಕಳೆಯುತ್ತಿದ್ದೇನೆ.! ಬರುವ ಪಿಂಚಣಿಯಿಂದ ಅಲ್ಪ ಸ್ವಲ್ಪ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸುತ್ತೇನೆ!

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!