Ghost Town Dhanushkodi

ಹರಿತಲೇಖನಿ ದಿನಕ್ಕೊಂದು ಕಥೆ: ಘೋಸ್ಟ್ ಟೌನ್ ಧನುಷ್ಕೋಡಿ

Harithalekhani; ಭಾರತದ ದಕ್ಷಿಣ-ಪೂರ್ವ ದಿಕ್ಕಿನ ತುದಿಯಲ್ಲಿರುವ ಹಿಂದೂಗಳ ಒಂದು ಪವಿತ್ರ ತೀರ್ಥಕ್ಷೇತ್ರವೆಂದರೆ ಧನುಷ್ಕೋಡಿ (Dhanushkodi) ! ಈ ಸ್ಥಾನವು ಪವಿತ್ರ ರಾಮಸೇತುವಿನ ಉಗಮಸ್ಥಾನವಾಗಿದೆ.

ಕಳೆದ 50 ವರ್ಷಗಳಿಂದ ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರದ ಸ್ಥಿತಿ ಧ್ವಂಸಗೊಂಡ ಒಂದು ನಗರದಂತಾಗಿದೆ. 22 ಡಿಸೆಂಬರ್ 1964 ರಂದು ಈ ನಗರವು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು.

ಅನಂತರ ಕಳೆದ 50 ವರ್ಷಗಳಲ್ಲಿ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು.

ಅದು ಭಾರತದ ಭಯಾನಕ ಸ್ಥಳ..ಅದನ್ನ ಘೋಸ್ಟ್ ಟೌನ್ ಅಂತಲೇ ಕರೀತಾರೆ.. ಪ್ರಕೃತಿಯ ಸೊಬಗಿನಿಂದ ಕೂಡಿರುವ ಸ್ಥಳ ಇವತ್ತಿಗೆ ಹಾಳು ಕೊಂಪೆಯಾಗಿದೆ..ಅದು ಧನುಷ್ಕೋಡಿ.. ರಾಮೇಶ್ವರಂ ದ್ವೀಪದ ದಕ್ಷಿಣದ ತುತ್ತತುದಿಯಲ್ಲಿರುವ ಒಂದು ಗ್ರಾಮವಾಗಿದ್ದು, ಭಾರತದ ತಮಿಳುನಾಡು ರಾಜ್ಯದ ಪೂರ್ವ ತೀರದಲ್ಲಿದೆ ..ನಮ್ಮ ಸರ್ಕಾರಕ್ಕೆ ಈ ಜಾಗವನ್ನು ಪುನರ್ ನಿರ್ಮಿಸುವ ಈರ್ಷೆ ಇಲ್ಲ..ಇಲ್ಲಿಗೆ ಪ್ರವಾಸಿಗರು ಬರುತ್ತಾರಾದರೂ ರಾತ್ರಿ ಹೊತ್ತು ಉಳಿದುಕೊಳ್ಳುವ ಧೈರ್ಯ ಮಾಡಲ್ಲ.. !

ರಾಮಸೇತು ಸೇತುವೆ ಗೊತ್ತಲ್ಲ ? ಅದು ಶುರುವಾಗೋದು ಧನುಷ್ಕೋಡಿಯಿಂದಲೆ.. ಧನುಷ್ಕೋಡಿಯು ಶ್ರೀಲಂಕಾದ ತಲೈಮನ್ನಾರ್ ನ ಪಶ್ಚಿಮದಿಂದ ಸುಮಾರು 18 ಮೈಲಿಗಳ ಅಂತರದಲ್ಲಿದೆ..

ಈ ಊರು ಭಾರತ ಮತ್ತು ಶ್ರೀಲಂಕಾಕ್ಕೆ ಕೊಂಡಿಯಂತಿದೆ..ಅವತ್ತು ರಾಮ ಲಂಕೆಗೆ ಹೋಗೋವಾಗ ಈ ಸೇತುವೆ ದಾಟಿ ಹೋಗಿದ್ದನಂತೆ.. ಈ ಧನುಷ್ಕೋಡಿ ರಾಮೇಶ್ವರಂನ ಕಟ್ಟ ಕಡೆಯ ಊರು ಎಂದು ಗುರುತಿಸಿಕೊಂಡಿದೆ

ಈ ಘಟನೆಗೆ 50 ವರ್ಷಗಳು ಪೂರ್ಣಗೊಂಡ ನಿಮಿತ್ತ ಬಂಗಾಲ, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಇತ್ಯಾದಿ ರಾಜ್ಯಗಳ ಹಿಂದುತ್ವವಾದಿ ಸಂಘಟನೆಗಳ ಮುಖಂಡರ ಒಂದು ಸಮೂಹವು ಧನುಷ್ಕೋಡಿಗೆ ಭೇಟಿ ನೀಡಿತು.

ಅದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿ ಸಹ ಭಾಗವಹಿಸಿದ್ದರು. ಈ ಭೇಟಿಯಲ್ಲಿ ಗಮನಕ್ಕೆ ಬಂದಿರುವ ಧನುಷ್ಕೋಡಿಯ ಭೀಕರ ವಾಸ್ತವವನ್ನು ಈ ಲೇಖನದ ಮೂಲಕ ಮಂಡಿಸುತ್ತಿದ್ದೇನೆ.

ತಮಿಳುನಾಡು ರಾಜ್ಯದ ಪೂರ್ವದಡದಲ್ಲಿ ರಾಮೇಶ್ವರಮ್ ಈ ತೀರ್ಥಕ್ಷೇತ್ರವಿದೆ. ರಾಮೇಶ್ವರಮ್‌ನ ದಕ್ಷಿಣದಲ್ಲಿ 11 ಕಿ. ಮೀ. ದೂರದಲ್ಲಿ ಧನುಷ್ಕೋಡಿ ನಗರವಿದೆ. ಇಲ್ಲಿಂದ ಶ್ರೀಲಂಕಾ ಕೇವಲ 18 ಮೈಲು (ಸುಮಾರು 20 ಕಿ.ಮೀ.) ದೂರದಲ್ಲಿದೆ !

ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಪವಿತ್ರ ಸಂಗಮದಲ್ಲಿ ನೆಲೆಸಿದ ಕೇವಲ 50 ಗಜ (ಸುಮಾರು 150 ಅಡಿ) ಅಗಲವಿರುವ ಧನುಷ್ಕೋಡಿಯು ಮರಳಿನಿಂದ ತುಂಬಿದ ಸ್ಥಾನವಾಗಿದೆ.

ಉತ್ತರಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ, ದಕ್ಷಿಣ ಭಾರತದಲ್ಲಿ ರಾಮೇಶ್ವರಮ್‌ಗೆ ಅಷ್ಟೇ ಮಹತ್ವ ಇದೆ. ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಮ್ ಸಹ ಒಂದು ಧಾಮವಾಗಿದೆ.

ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳಿಗನುಸಾರ ಕಾಶಿಯ ಶ್ರೀ ವಿಶ್ವೇಶ್ವರನ ಯಾತ್ರೆಯು ಶ್ರೀ ರಾಮೇಶ್ವರಮ್‌ನ ದರ್ಶನವಾಗದೆ ಪೂರ್ಣಗೊಳ್ಳುವುದಿಲ್ಲ.

ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದಲ್ಲಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಕಾಶಿಯ ತೀರ್ಥಯಾತ್ರೆಯು ಪೂರ್ಣಗೊಳ್ಳುತ್ತದೆ.

ರಾಮೇಶ್ವರಮ್ ಮತ್ತು ಧನುಷ್ಕೋಡಿ ಇವುಗಳ ಧಾರ್ಮಿಕ ಮಹಾತ್ಮೆ!

ಉತ್ತರಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ, ದಕ್ಷಿಣ ಭಾರತದಲ್ಲಿ ರಾಮೇಶ್ವರಮ್‌ಗೆ ಅಷ್ಟೇ ಮಹತ್ವ ಇದೆ. ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಮ್ ಸಹ ಒಂದು ಧಾಮವಾಗಿದೆ.

ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳಿಗನುಸಾರ ಕಾಶಿಯ ಶ್ರೀ ವಿಶ್ವೇಶ್ವರನ ಯಾತ್ರೆಯು ಶ್ರೀ ರಾಮೇಶ್ವರಮ್‌ನ ದರ್ಶನವಾಗದೆ ಪೂರ್ಣಗೊಳ್ಳುವುದಿಲ್ಲ.

ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದಲ್ಲಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಕಾಶಿಯ ತೀರ್ಥಯಾತ್ರೆಯು ಪೂರ್ಣಗೊಳ್ಳುತ್ತದೆ.

ಧನುಷ್ಕೋಡಿಯ ಇತಿಹಾಸ ಮತ್ತು ರಾಮಸೇತುವೆಯ ಪ್ರಾಚೀನತೆ !

ರಾಮಸೇತುವಿನ ಈಚೆಗಿನ ಭಾಗಕ್ಕೆ ಧನುಷ್ಕೋಡಿ (‘ಕೋಡಿ’ ಅಂದರೆ ಧನುಷ್ಯದ ತುದಿ) ಎಂದು ಹೇಳುತ್ತಾರೆ; ಏಕೆಂದರೆ ಹದಿನೇಳುವರೆ ಲಕ್ಷ ವರ್ಷಗಳ ಹಿಂದೆ ರಾವಣನ ಲಂಕೆಗೆ (ಶ್ರೀಲಂಕಾಗೆ) ಪ್ರವೇಶ ಮಾಡಲು ಶ್ರೀರಾಮನು ತನ್ನ ‘ಕೋದಂಡ’ ಧನುಷ್ಯದ ತುದಿಯಿಂದ ಸೇತುವೆಯನ್ನು ನಿರ್ಮಿಸಲು ಈ ಸ್ಥಾನವನ್ನು ಆಯ್ದುಕೊಂಡನು.

ಅಲ್ಲಿ ರಾಮಸೇತುವಿನ ಭಗ್ನಾವಶೇಷದ ರೂಪದಲ್ಲಿ ದೊಡ್ಡ ದೊಡ್ಡ ಬಂಡೆಕಲ್ಲುಗಳು ದ್ವೀಪಗಳಂತೆ ಇಂದಿಗೂ ಕಾಣಲು ಸಿಗುತ್ತವೆ. ರಾಮಸೇತುವೆ ನಳ ಮತ್ತು ನೀಲ ಇವರ ವಾಸ್ತುಶಾಸ್ತ್ರದ ಒಂದು ಅದ್ಭುತ ಮಾದರಿಯಾಗಿದೆ.

ಈ ರಾಮಸೇತುವಿನ ಅಗಲ ಮತ್ತು ಉದ್ದ ಇವುಗಳ ಪ್ರಮಾಣ ಒಂದಕ್ಕೆ ಹತ್ತರಷ್ಟಿದೆ, ಎಂಬ ಸವಿಸ್ತಾರ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿದೆ. ಪ್ರತ್ಯಕ್ಷ ಅಳೆದಾಗಲೂ ಅವುಗಳ ಅಗಲ 3.5 ಕಿ. ಮೀ. ಇದ್ದು ಮತ್ತು ಉದ್ದ 35 ಕಿ.ಮೀ.ನಷ್ಟಿದೆ.

ಶ್ರೀರಾಮ-ರಾವಣರ ಮಹಾಯುದ್ಧದ ಮೊದಲು ಧನುಷ್ಕೋಡಿ ನಗರದಲ್ಲಿಯೇ ರಾವಣನ ತಮ್ಮನಾದ ವಿಭೀಷಣನು ಪ್ರಭು ರಾಮಚಂದ್ರನಿಗೆ ಶರಣಾಗಿದ್ದನು. ಶ್ರೀಲಂಕಾದ ಯುದ್ಧ ಸಮಾಪ್ತಿಯಾದ ನಂತರ ಇದೇ ನಗರದಲ್ಲಿ ಪ್ರಭು ರಾಮಚಂದ್ರನು ವಿಭೀಷಣನನ್ನು ಶ್ರೀಲಂಕಾದ ಸಾಮ್ರಾಟನೆಂದು ರಾಜ್ಯಾಭಿಷೇಕ ಮಾಡಿದ್ದನು.

ಇದೇ ಸಮಯದಲ್ಲಿ ಲಂಕಾಧಿಪತಿ ವಿಭೀಷಣನು ಪ್ರಭು ರಾಮಚಂದ್ರನಿಗೆ ‘ಭಾರತದ ಶೂರ-ಪರಾಕ್ರಮಿ ರಾಜರು ರಾಮಸೇತುವಿನ ಮೂಲಕ ಪದೇ ಪದೇ ಶ್ರೀಲಂಕಾದ ಮೇಲೆ ಆಕ್ರಮಣ ಮಾಡಿ ಶ್ರೀಲಂಕಾದ ಸ್ವಾತಂತ್ರ್ಯವನ್ನು ನಾಶ ಮಾಡುವರು. ಆದ್ದರಿಂದ ತಾವು ಈ ಸೇತುವೆಯನ್ನು ನಾಶಗೊಳಿಸಿರಿ’, ಎಂದು ಹೇಳಿದನು.

ಆಗ ತನ್ನ ಭಕ್ತನ ಪ್ರಾರ್ಥನೆಯನ್ನು ಕೇಳಿ ಕೋದಂಡಧಾರಿ ಪ್ರಭು ರಾಮಚಂದ್ರ ರಾಮಸೇತುವಿನ ಮೇಲೆ ಬಾಣ ಹೊಡೆದು ಅದನ್ನು ನೀರಿನಲ್ಲಿ ಮುಳುಗಿಸಿದನು. ಆದ್ದರಿಂದ ಈ ಸೇತುವೆ 2 – 3 ಅಡಿ ನೀರಿನ ಕೆಳಗೆ ಹೋಯಿತು. ಇಂದು ಕೂಡ ಯಾರಾದರೂ ರಾಮಸೇತುವಿನ ಮೇಲೆ ನಿಂತರೆ ಅವರ ಸೊಂಟದ ವರೆಗೆ ನೀರು ಇರುತ್ತದೆ.

ಬ್ರಿಟೀಷರ ಕಾಲದಲ್ಲಿ ಧನುಷ್ಕೋಡಿ ಒಂದು ದೊಡ್ಡ ಪಟ್ಟಣವಾಗಿತ್ತು ಹಾಗೂ ರಾಮೇಶ್ವರಮ್ ಒಂದು ಸಣ್ಣ ಗ್ರಾಮವಾಗಿತ್ತು. ಅಲ್ಲಿಂದ ಶ್ರೀಲಂಕಾಗೆ ಹೋಗಿ ಬರಲು ದೋಣಿಯ ವ್ಯವಸ್ಥೆ ಇತ್ತು.

ಆ ಕಾಲದಲ್ಲಿ ಶ್ರೀಲಂಕಾಗೆ ಹೋಗಲು ಪಾಸ್‌ಪೋರ್ಟ್ ಬೇಕಾಗಿರಲಿಲ್ಲ. ಧನುಷ್ಕೋಡಿಯಿಂದ ಥಲಾಯಿಮನ್ನಾರ (ಶ್ರೀಲಂಕಾ) ಹೀಗೆ ನೌಕೆಯ ಪ್ರವಾಸದ ಟಿಕೇಟ್ ಕೇವಲ 17 ರೂಪಾಯಿಗಳಿದ್ದವು. ಈ ನೌಕೆಗಳ ಮೂಲಕ ವ್ಯಾಪಾರಿ ವಸ್ತುಗಳ ಕೊಡುಕೊಳ್ಳುವಿಕೆಯೂ ನಡೆಯುತ್ತಿತ್ತು.

‘1793 ರಲ್ಲಿ ಅಮೇರಿಕಾದ ಧರ್ಮಸಂಸತ್ತಿಗಾಗಿ ಹೋಗಿದ್ದ ಸ್ವಾಮಿ ವಿವೇಕಾನಂದರು ಶ್ರೀಲಂಕಾದ ಮಾರ್ಗದಿಂದ ಭಾರತಕ್ಕೆ ಹಿಂತಿರುಗಿದರು. ಅವರು ಈ ಧನುಷ್ಕೋಡಿಯ ಭೂಮಿಯಲ್ಲಿಯೇ ಇಳಿದಿದ್ದರು.

1964 ರ ವರೆಗೆ ಧನುಷ್ಕೋಡಿ ಒಂದು ಪ್ರಖ್ಯಾತ ಪ್ರವಾಸೀ ಸ್ಥಳ ಹಾಗೂ ತೀರ್ಥಕ್ಷೇತ್ರವಾಗಿತ್ತು. ಭಕ್ತರಿಗಾಗಿ ಅಲ್ಲಿ ಹೊಟೇಲ್‌ಗಳು, ಬಟ್ಟೆಯ ಅಂಗಡಿಗಳು ಹಾಗೂ ಧರ್ಮಶಾಲೆಗಳಿದ್ದವು. ಆ ಸಮಯದಲ್ಲಿ ಅಲ್ಲಿ ಹಡಗು ನಿರ್ಮಾಣ ಕೇಂದ್ರ, ರೈಲು ನಿಲ್ದಾಣ, ರೈಲ್ವೆಯ ಸಣ್ಣ ಆಸ್ಪತ್ರೆ, ಅಂಚೆ ಕಚೇರಿ ಮತ್ತು ಮೀನು ಸಾಕಣೆಯಂತಹ ಕೆಲವು ಸರಕಾರೀ ಕಚೇರಿಗಳಿದ್ದವು.

1964ರ ಚಂಡಮಾರುತದ ಮೊದಲು ಚೆನೈ ಮತ್ತು ಧನುಷ್ಕೋಡಿಯ ನಡುವೆ ಮದ್ರಾಸ್ ಎಗ್ಮೋರದಿಂದ ಬೋಟ್ ಮೇಲ್ ಹೆಸರಿನ ರೈಲು ಸೇವೆ ಇತ್ತು. ಅಲ್ಲಿಂದ ದೋಣಿ ಮೂಲಕ ಶ್ರೀಲಂಕಾಗೆ ಹೋಗುವ ಪ್ರವಾಸಿಗಳಿಗೆ ಅದು ಉಪಯುಕ್ತವಾಗುತ್ತಿತ್ತು.

1964 ರಲ್ಲಿ ಭೀಕರ ಚಂಡಮಾರುತದಿಂದಾಗಿ ಧನುಷ್ಕೋಡಿ ಧ್ವಂಸವಾಯಿತು. 17 ಡಿಸೆಂಬರ್ 1964 ರಂದು ದಕ್ಷಿಣ ಅಂಡಮಾನ ಸಮುದ್ರದಲ್ಲಿ 5 ಡಿಗ್ರಿ ಪೂರ್ವದಲ್ಲಿ ಅದರ ಕೇಂದ್ರವಿತ್ತು. ಡಿಸೆಂಬರ್ 19ರಂದು ಅದು ಚಂಡಮಾರುತದ ರೂಪ ಧಾರಣೆ ಮಾಡಿ ಪ್ರಚಂಡ ವೇಗದಲ್ಲಿ ಡಿಸೆಂಬರ್ 22 ರಂದು ರಾತ್ರಿ ಗಂಟೆಗೆ 270 ಕಿ. ಮೀ. ವೇಗದಲ್ಲಿ ಶ್ರೀಲಂಕಾವನ್ನು ದಾಟಿಕೊಂಡು ಅದು ಧನುಷ್ಕೋಡಿಯ ತೀರದಲ್ಲಿ ಬಂದು ಅಪ್ಪಳಿಸಿತು.

ಈ ಚಂಡಮಾರುತದ ಜೊತೆಗೆ 20 ಅಡಿಗಳಷ್ಟು ಎತ್ತರದ ತೆರೆ ಧನುಷ್ಕೋಡಿ ನಗರದ ಪೂರ್ವದಿಕ್ಕಿನಲ್ಲಿರುವ ಪವಿತ್ರ ಸಂಗಮದ ಮೇಲಿಂದ ನಗರದ ಮೇಲೆ ಆಕ್ರಮಣ ಮಾಡಿ ಸಂಪೂರ್ಣ ಧನುಷ್ಕೋಡಿ ನಗರವನ್ನು ನಾಶಗೊಳಿಸಿತು.

ಕೃಪೆ: ಶ್ರೀ ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿ

ಆಧಾರ: ಸಾಪ್ತಾಹಿಕ ಸನಾತನ ಪ್ರಭಾತ

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!