Krishna weighed on a basil leaf

ಹರಿತಲೇಖನಿ ದಿನಕ್ಕೊಂದು ಕಥೆ; ತುಳಸಿ ದಳವೊಂದಕ್ಕೆ ತೂಗಿದ ಕೃಷ್ಣ..!

Harithalekhani: ಒಮ್ಮೆ ಸತ್ಯಭಾಮೆಯು ನಾರದರನ್ನು ಕುರಿತು “ಮಹರ್ಷಿಗಳೇ, ಜನ್ಮಜನ್ಮಾಂತರಕ್ಕೂ ಶ್ರೀಕೃಷ್ಣನೇ ನನಗೆ ಗಂಡನಾಗಬೇಕೆಂಬ ಹಂಬಲವಿದೆ; ಅದು ಈಡೇರಲು ಏನಾದರೂ ದಾರಿಯಿದೆಯೆ” ಎಂದು ಕೇಳಿದಳು.

ಅದಕ್ಕೆ ನಾರದರು, “ಓಹೋ, ಇದೆ ತಾಯೆ, ನೀನು ಪುಣ್ಯಕವೆಂಬ ವ್ರತವನ್ನಾಚರಿಸಿ, ಅದರ ಮುಕ್ತಾಯದಲ್ಲಿ ಶ್ರೀಕೃಷ್ಣನನ್ನು ಯಾರಾದರೂ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟುಬಿಡು. ಆಗ ನಿನ್ನ ಹಂಬಲಕ್ಕೆ ಬೆಂಬಲ ದೊರಕುತ್ತದೆ” ಎಂದರು.

ಸರಿ ಆ, ವ್ರತ ನಡೆದೆ ಹೋಯಿತು. ಆ ಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ನಾರದರಿಗೆ ಪತಿದೇವರನ್ನು ದಾನಮಾಡಿದ್ದೂ ಆಗಿ ಹೋಯಿತು.

ಆಗ ಶ್ರೀಕೃಷ್ಣನು ನಾರದರನ್ನು ಕುರಿತು, “ಈಗ ನಾನು ಏನು ಮಾಡಬೇಕು ಸ್ವಾಮಿ” ಎಂದು ಕೇಳಿದನು. ಅದಕ್ಕೆ ನಾರದರು, “ಏನು ಮಾಡಬೇಕು ಎನ್ನುತ್ತೀಯಲ್ಲಪ್ಪಾ, ಇನ್ನು ಅರಮನೆಯಲ್ಲಿ ಇರು ವಂತಿಲ್ಲ, ಹಿಡಿದುಕೋ ಈ ತಂಬೂರಿ, ನಡೆ ಹಾಡುತ್ತ ನನ್ನ ಹಿಂದೆ, ನೀನಿನ್ನು ನನ್ನ ಅನುಚರನಲ್ಲವೆ”? ಎಂದರು.

ಆಗ ಸತ್ಯಭಾಮೆಗೆ ಸಿಡಿಲೆರಗಿದಂತಾಯಿತು, ದಿಕ್ಕು ತೋರದಾಯಿತು.

“ಇದೆಂತಹ ಕೆಲಸ ಮಾಡಿಬಿಟ್ಟೆ” ಎಂದು ತನ್ನ ತಪ್ಪಿನ ಅರಿವಾಯಿತು. “ಈಗ ನೀವೇ ಏನಾದರೂ ಮಾರ್ಗವನ್ನು ತೋರಿಸಿ ನಾರದರೇ, ಸ್ವಾಮಿಯನ್ನು ಕಳೆದುಕೊಳ್ಳಲುಂಟೇ” ಎಂದು ಅಂಗಲಾಚಿದಳು.

ಆಗ ನಾರದರು “ನಾನೇನೋ ಕೃಷ್ಣನನ್ನು ನಿನಗೇ ಮರಳಿಸಿಬಿಡುತ್ತೇನೆ. ಆದರೆ ದಾನವಾಗಿ ಕೊಟ್ಟುದನ್ನು ಮರಳಿ ಪಡೆದರೆ ‘ದತ್ತಾಪಹಾರ’ ಎಂಬ ದೋಷ ನಿನಗೆ ಅಂಟಿಕೊಳ್ಳುತ್ತದೆಯಲ್ಲ, ಅದಕ್ಕೇನು ಮಾಡುತ್ತೀಯೆ ತಾಯೆ” ಎಂದರು.

“ಅದಕ್ಕೂ ನೀವೇ ಏನಾದರೂ ಪರಿಹಾರ ಸೂಚಿಸಬೇಕು ನಾರದರೆ” ಎಂದು ಸತ್ಯಭಾಮೆ ಅವರಿಗೆ ಶರಣಾದಳು.

ಆಗ ನಾರದರು “ತಾಯೆ, ತುಲಾಭಾರದ ಮೂಲಕ ಕೃಷ್ಣನ ತೂಕಕ್ಕೆ ಸಮನಾಗುವ ನಿನ್ನ ಆಭರಣಗಳನ್ನು ತೂಗಿಸಿ ನನಗೆ ದಾನಮಾಡು, ನಾನು ನಿನಗೆ ಕೃಷ್ಣನನ್ನು ಹಿಂದಕ್ಕೆ ಕೊಡುತ್ತೇನೆ. ಆಗ ದೋಷವೆಲ್ಲ ಪರಿಹಾರವಾಗುತ್ತದೆ” ಎಂದು ಸಲಹೆ ಕೊಟ್ಟರು.

ಸತ್ಯಭಾಮೆಗೆ ಹೋದಜೀವ ಬಂದಂತಾಯಿತು. ಲಗುಬಗೆಯಿಂದ ಕೃಷ್ಣನನ್ನು ತಕ್ಕಡಿಯ ಒಂದು ತಟ್ಟೆಯಲ್ಲಿ ಕೂರಿಸಿ, ತನ್ನ ಆಭರಣಗಳನ್ನೆಲ್ಲ ತಂದು ಇನ್ನೊಂದು ತಟ್ಟೆಗೆ ಅಡಕಿದಳು. ಅವಳ ಆಭರಣವೆಲ್ಲ ಬರಿದಾಯಿತೇ ಹೊರತು, ಕೃಷ್ಣನ ತೂಕಕ್ಕೆ ಅದು ಸಮನಾಗಲಿಲ್ಲ.

“ಈಗ ನೀವೇ ಏನಾದರೂ ಮಾಡಬೇಕು ನಾರದರೇ” ಎಂದು ಸತ್ಯಭಾಮೆಯು ತಲೆಯ ಮೇಲೆ ಕೈಹೊತ್ತು ಕುಳಿತುಬಿಟ್ಟಳು.

ಆಗ ನಾರದರು, “ರುಕ್ಮಿಣಿಯನ್ನೊಮ್ಮೆ ಕೇಳಿ ನೋಡು ತಾಯೆ, ಅವಳ ಆಭರಣಗಳನ್ನೂ ತೂಗಿಸು” ಎಂದರು. ಸತ್ಯಭಾಮೆಗೆ ಅದು ಇಷ್ಟವಿಲ್ಲದಿದ್ದರೂ ಪತಿದೇವರನ್ನು ಕಳೆದುಕೊಳ್ಳಬೇಕಲ್ಲಾ ಎಂಬ ಸಂಕಟದಿಂದ ಅಸಹಾಯಕಳಾಗಿ “ನೀನೂ ಬಾ ರುಕ್ಮಿಣಿ, ಸಹಾಯ ಮಾಡು” ಎಂದಳು.

ಆಗ ರುಕ್ಮಿಣಿಯು “ಹದಿನಾಲ್ಕು ಲೋಕಗಳ ಸಂಪತ್ತನ್ನೆಲ್ಲ ತಂದು ಸುರಿದರೂ ಈ ಸ್ವಾಮಿಗೆ ಸಮನಾಗಿ ಅದು ತೂಗಬಲ್ಲದೇ? ಅಕ್ಕ, ಜಗತ್ತಿಗೆಲ್ಲ ಸೇರಿದ ಅವನನ್ನು ನಾನೇ ಕಟ್ಟಿ ಹಾಕಿಕೊಳ್ಳುತ್ತೇನೆಂದರೆ, ಅದು ನಡೆಯುವುದುಂಟೆ? ಅಕ್ಕ, ಅದೆಲ್ಲ ಈಗ ಬೇಡ” ಎನ್ನುತ್ತ ರುಕ್ಮಿಣಿಯು ಒಂದು ತುಳಸಿ ದಳದ ಮೇಲೆ ‘ಶ್ರೀಕೃಷ್ಣ’ ಎಂದು ಬರೆದು, ಸತ್ಯಭಾಮೆಯ ತಟ್ಟೆಯೊಳಕ್ಕೆ ಹಾಕುತ್ತ “ದೇವ ದೇವೋತ್ತಮನೆ, ದೇವತಾ ಸಾರ್ವಭೌಮ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನೇ ನನಗೆ ನಿನ್ನ ಮೇಲೆ ಭಕ್ತಿ ನನ್ನ ಹೃದಯದಲ್ಲೇನಾದರೂ ಇದ್ದರೆ, ನೀನು ಸಮನಾಗಿ ತೂಗಿಬಿಡು ಸ್ವಾಮಿ” ಎಂದು ನಮಸ್ಕರಿಸಿದಳು.

ಒಂದು ಕೃಷ್ಣನಾಮವೇ ಸಾಕಾಗಿ, ತಕ್ಕಡಿ ಸಮನಾಗಿ ತೂಗಿಬಿಟ್ಟಿತು, ಆಗಲೇ ಸತ್ಯಭಾಮೆಯ ಗರ್ವವು ಇಳಿಯಿತು, ಭಗವಂತನನ್ನು ಸಿರಿ ಸಂಪತ್ತಿನಿಂದ ತೂಗಲು ಎಂದು ಸಾಧ್ಯವಿಲ್ಲ ನಿಜ ಭಕ್ತಿಗೆ ಅವನು ಒಲಿಯುತ್ತಾನೆ ಎಂಬ ನಿಜ ವಾಸ್ತವ ಸತ್ಯಭಾಮೆಗೆ ಅಂದು ಅರ್ಥವಾಯಿತು.

ಕೃಪೆ: ವಂದಗದ್ದೆ ಗಣೇಶ (ಸಾಗರ) ಪೌರಾಣಿಕ ಕಥೆಗಳು

ರಾಜಕೀಯ

ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ

ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ

ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್‌ ಸರ್ಕಾರ ತನಗೆ ಬೇಕಾದಂತೆ ಬೆಂಗಳೂರನ್ನು ವಿಭಜನೆ ಮಾಡಿದೆ: ಆರ್‌.ಅಶೋಕ (R. Ashok) ಹೇಳಿದರು.

[ccc_my_favorite_select_button post_id="111673"]
ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ಬಿಜೆಪಿ ಹಾಗೂ ಜೆಡಿಎಸ್‌ನ್ನು ಕಂಗೆಡಿಸಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು, ಬಿಜೆಪಿ ಹಾಗೂ ಜೆಡಿಎಸ್‌ನ್ನು ಕಂಗೆಡಿಸಿದೆ: ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಅಪವಾದಗಳನ್ನು ಮಾಡುವ ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ? Cmsiddaramaiah

[ccc_my_favorite_select_button post_id="111451"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ: ದೊಡ್ಡಬಳ್ಳಾಪುರದ ಕ್ರೀಡಾಪಟುಗಳು ಆಯ್ಕೆ

ಜು.25ರಿಂದ 28ರವರೆಗೆ ನಡೆಯಲಿರುವ ಪುರುಷರ ಸೀನಿಯರ್ -ನ್ಯಾಷನಲ್ಸ್ ಕಬಡ್ಡಿ ಚಾಂಪಿಯನ್‌ಶಿಪ್(Kabaddi Championship) ಪಂದ್ಯಾವಳಿ

[ccc_my_favorite_select_button post_id="111553"]
ಕರ್ತವ್ಯ ಲೋಪ: PDO ಅಮಾನತ್ತು

ಕರ್ತವ್ಯ ಲೋಪ: PDO ಅಮಾನತ್ತು

ಕರ್ತವ್ಯ ಲೋಪ ಹಾಗೂ ಅಧಿಕಾರ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಅಮಾನತ್ತು (suspended) ಮಾಡಲಾಗಿದೆ.

[ccc_my_favorite_select_button post_id="111621"]
ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಕ್ಯಾಂಟರ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು..!

ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಧುರೆ ರಸ್ತೆಯಲ್ಲಿನ ಖಾಸಗಿ

[ccc_my_favorite_select_button post_id="111623"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!