Stupid friends..!

ಹರಿತಲೇಖನಿ ದಿನಕ್ಕೊಂದು ಕಥೆ: ಅವಿವೇಕಿ ಗೆಳೆಯರು..!

Harithalekhani: ಹಳ್ಳಿಯೊಂದರಲ್ಲಿ ನಾಲ್ವರು ಸ್ನೇಹಿತರಿದ್ದರು (Friends). ಒಬ್ಬರನ್ನು ಬಿಟ್ಟು ಮತ್ತೊಬ್ಬರಿರುತ್ತಿರಲಿಲ್ಲ. ಈ ನಾಲ್ವರ ಪೈಕಿ ಮೂವರು ತುಂಬಾ ಬುದ್ಧಿವಂತರು. ನಾನಾ ವಿದ್ಯೆಗಳಲ್ಲಿ ನಿಪುಣರು. ಆದರೆ ಅವರಲ್ಲಿ ಸಾಮಾನ್ಯ ಜ್ಞಾನ, ವಿವೇಕ ಇರಲಿಲ್ಲ.

ಮತ್ತೊಬ್ಬ ಸ್ನೇಹಿತ ಅವರಂತಿರಲಿಲ್ಲ. ಅವನ ಹೆಸರು ಸುಬುದ್ದಿ. ಹೆಸರು ಸುಬುದ್ಧಿಯಾದರೂ ಆತನಿಗೆ ಸರಸ್ವತಿ ಮಾತ್ರ ಒಲಿದಿರಲಿಲ್ಲ. ಆದರೆ ಅವನಿಗೆ ಸಾಮಾನ್ಯ ತಿಳಿವಳಿಕೆ, ಲೋಕಜ್ಞಾನ ಉಳಿದವರಿಗಿಂತ ಚೆನ್ನಾಗಿತ್ತು.

ಸ್ನೇಹಿತರ ವಿದ್ಯಾಭ್ಯಾಸ ಮುಗಿಯಿತು. ಮುಂದೆ ಮಾಡುವುದೇನು? ಸುಮ್ಮನಿದ್ದರೆ ಕಲಿತ ವಿದ್ಯೆಗೆ ಬೆಲೆ ಇರುವುದಿಲ್ಲ. ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದರೆ ಹಣ ಸಂಪಾದಿಸಬೇಕು; ಕೆಲಸ ಮಾಡದೇ ಹಣ ದಕ್ಕುವುದಿಲ್ಲ; ಇಲ್ಲೇ ಕೂತರೆ ಕೆಲಸ ಸಿಗುವುದಿಲ್ಲ-ಎಂದು ತಿಳಿದ ‘ವಿದ್ಯಾವಂತ’ರೆನ್ನಿಸಿಕೊಂಡ ಗೆಳೆಯರು, ಹಳ್ಳಿಯಿಂದ ಪಟ್ಟಣಕ್ಕೆ ತೆರಳಲು ನಿರ್ಧರಿಸಿದರು.

ಹಾಗಾದರೆ ವಿದ್ಯೆ ಒಲಿಯದ ಸ್ನೇಹಿತನನ್ನು ಏನು ಮಾಡುವುದು? ಆತ ತಮ್ಮಷ್ಟು ಬುದ್ದಿವಂತನಲ್ಲ. ಪುಸ್ತಕದ ತಿಳಿವಳಿಕೆಯೂ ಇಲ್ಲ. ಹಾಗಂತ ಅವನನ್ನು ಹಳ್ಳಿಯಲ್ಲಿ ಬಿಟ್ಟು ಹೋಗುವಂತೆಯೂ ಇಲ್ಲ. ಸರಿ ಏನಾದರಾಗಲಿ ಅವನನ್ನೂ ತಮ್ಮೊಟ್ಟಿಗೆ ಕರೆದುಕೊಂಡು ಹೋಗುವ ತೀರ್ಮಾನಕ್ಕೆ ಬಂದರು ಆ ಗೆಳೆಯರು.

ಗೆಳೆಯರೆಲ್ಲ ಒಟ್ಟಾಗಿ ಸಾಗಿದರು. ಒಂದು ದಟ್ಟವಾದ ಅರಣ್ಯ ಎದುರಾಯಿತು. ಅರಣ್ಯದೊಳಗೆ ಅವರಿಗೆ ಮೂಳೆಯ ರಾಶಿಯೊಂದು ಕಾಣಿಸಿತು. ‘ಅರೇ! ಇದೇನಿದು, ಬರೀ ಮೂಳೆಯ ರಾಶಿಯಿದೆಯಲ್ಲಾ!’ ಎಂದು ಅಚ್ಚರಿಪಟ್ಟರು.

ನಾವು ಕಲಿತಿರುವೆ ವಿದ್ಯೆ ಸಾರ್ಥಕವಾಗಬೇಕಾದರೆ ಬಿದ್ದಿರುವ ಮೂಳೆಗಳನ್ನೆಲ್ಲಾ ಸಂಗ್ರಹಿಸಿ ಅದು ಯಾವ ಪ್ರಾಣಿಯದೆಂದು ಪತ್ತೆಮಾಡಬೇಕು. ಆವಾಗಲೇ ನಾವು ಕಲಿತಿದ್ದಕ್ಕೂ ಸಾರ್ಥಕ ಎಂದು ಚರ್ಚಿಸಿ ಮೂಳೆಯ ಸಂಗ್ರಹಕ್ಕೆ ಮುಂದಾದರು.

‘ನಾನು ನನ್ನಲ್ಲಿರುವ ಬುದ್ಧಿಶಕ್ತಿಯನ್ನು ಉಪಯೋಗಿಸಿ ಇದರ ಅಸ್ಥಿಪಂಜರವನ್ನು ಜೋಡಿಸುತ್ತೇನೆ’ ಎಂದ ಮೊದಲನೇ ಸ್ನೇಹಿತ. ಆತ ಮಂತ್ರ ಹೇಳುತ್ತ ಮೂಳೆಗಳನ್ನೆಲ್ಲಾ ಒಟ್ಟುಗೂಡಿಸಿ ಅದಕ್ಕೆ ಅಸ್ಥಿಪಂಜರದ ರೂಪಕೊಟ್ಟ.

ಮತ್ತೊಬ್ಬ ಸ್ನೇಹಿತನೂ ಮಂತ್ರ ಹೇಳುತ್ತ, ಆ ಅಸ್ತಿಪಂಜರವನ್ನು ಸ್ಪರ್ಶಿಸಿದಾಗ ಅದಕ್ಕೆ ರಕ್ತ, ಮಾಂಸಗಳು ಸೇರಿಕೊಂಡು ರೂಪ ಬರತೊಡಗಿತು. ನೋಡು-ನೋಡುತ್ತಗಲೇ ಅದು ಜೀವವಿರದ ಸಿಂಹದಂತೆ ಕಂಡುಬಂದಿತು.

ಈಗ ಮೂರನೇ ಸ್ನೇಹಿತನ ಸರದಿ. ‘ನೋಡುತ್ತೀರಿ, ಅದಕ್ಕೆ ಹೇಗೆ ಜೀವ ಬರುವಂತೆ ಮಾಡುತ್ತೀನಿ’ ಎಂದು ಮಂತ್ರ ಹೇಳಲು ಆತ ಮುಂದಾದಾಗ, ಅಲ್ಲೇ ಇದ್ದ ನಾಲ್ಕನೇ ಸ್ನೇಹಿತ ‘ಏ ಬೇಡ ಕಣೋ, ಇದು ಸಿಂಹದಂತೆ ಕಾಣುತ್ತಿದೆ. ಇದಕ್ಕೇನಾದರೂ ಜೀವ ಬಂದರೆ, ನಾವ್ಯಾರೂ ಉಳಿಯುವುದಿಲ್ಲ. ಇದನ್ನು ಇಲ್ಲಿಗೇ ಬಿಟ್ಟುಬಿಡಿ’ ಎಂದ. ಇದನ್ನು ಕೇಳಲು ತಯಾರಿಸಲಿಲ್ಲ ಆ ಸ್ನೇಹಿತ ‘ಏ ಸುಮ್ಮನಿರೋ ಪೆದ್ದ. ನಿನಗೇನು ಗೊತ್ತು, ನಿನಗೇನಾದರೂ ವಿಜ್ಞಾನ ಗೊತ್ತಿದೆಯಾ?’ ಎಂದು ಜೋರು ಮಾಡಿ ಸುಮ್ಮನಾಗಿಸಿದ.

‘ಸರಿ ನಿಮ್ಮಿಷ್ಟ’ ಎನ್ನುತ್ತಾ ನಾಲ್ಕನೆಯವನು ಸುಮ್ಮನಾದ. ಅದರೆ, ಮೂರನೆಯವನು ಮಂತ್ರ ಉಚ್ಚರಿಸುವ ಮೊದಲೇ ಪಕ್ಕದಲ್ಲಿ ಇದ್ದ ಮರವೇರಿ ಸುರಕ್ಷಿತವಾಗಿ ಕುಳಿತುಕೊಂಡುಬಿಟ್ಟ. ಇದನ್ನು ಕಾಣುತ್ತಲೇ ಗಹಗಹಿಸಿ ನಗುತ್ತಾ ಆತನನ್ನು ಉಳಿದ ಮೂವರೂ ಅಪಹಾಸ್ಯ ಮಾಡಿದರು.

ಮೂರನೆಯವನು ಪಟಪಟನೆ ಮಂತ್ರ ಹೇಳುತ್ತಲೇ ಸಿಂಹಕ್ಕೆ ಜೀವ ಬಂತು. ತಕ್ಷಣ ಸಿಂಹವು ಆ ಮೂವರ ಮೇಲೂ ಆಕ್ರಮಣ ಮಾಡಿತು. ಅವರೆಲ್ಲ ಸಿಂಹಕ್ಕೆ ಬಲಿಯಾದರು.

ಈ ಎಲ್ಲವನ್ನೂ ಮರದ ಮೇಲಿಂದ ವೀಕ್ಷಿಸುತ್ತಿದ್ದ ಸುಬದ್ದಿಗೆ ದುಃಖವಾಯಿತು. ಎಷ್ಟು ಹೇಳಿದರೂ ಅನ್ಯಾಯವಾಗಿ ತನ್ನ ಸ್ನೇಹಿತರು ಪ್ರಾಣ ಕಳೆದುಕೊಂಡರಲ್ಲಾ ಎಂದು ಮರುಕಪಟ್ಟ.

ಸಿಂಹ ಹೊರಟುಹೋದ ಸ್ವಲ್ಪ ಹೊತ್ತಿನ ನಂತರ ಮರದ ಮೇಲಿಂದ ಇಳಿದು ತನ್ನ ಹಳ್ಳಿಗೆ ಹಿಂತಿರುಗಿದ.

ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!