ಹರಿತಲೇಖನಿ ದಿನಕ್ಕೊಂದು ಕಥೆ; ಒಬ್ಬರ ಕೂಳು ಇನ್ನೊಬ್ಬರ ಕುತ್ತು

ಹಿಂದೆ ಕಳಿಂಗ ರಾಜ್ಯದಲ್ಲಿ ಯಾರೂ ಯೋಚನೆ ಮಾಡದಷ್ಟು ತೀವ್ರವಾದ ಬರಗಾಲ ಬಂದು, ಅಲ್ಲಿನ ಜನ ಊಟ ತಿಂಡಿಗೆ ಪರಿತಪಿಸುವಂತಾಗಿತ್ತು‌. ಎಲ್ಲರೂ ಆಹಾರ ಹುಡುಕುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಡಲು ಆರಂಭ ಮಾಡಿದರು. ಹೀಗಿರುವಾಗ ರಾಜನ ಒಂಟೆಯೊಂದು ತಪ್ಪಿಸಿಕೊಂಡು ಎತ್ತಲೋ ಮಾಯವಾಗಿ ಹೋಯಿತು. ಆ ಒಂಟೆಯನ್ನು ಹುಡುಕಲು ರಾಜ ತನ್ನ ಭಟರಿಗೆ ಆಜ್ಞೆ ಮಾಡಿದನು.

ರಾಜ ಭಟರು ಒಂಟೆಯನ್ನು ಹುಡುಕಿಕೊಂಡು ಆ ಊರಿನಲ್ಲಿ ವಾಸವಾಗಿದ್ದ ಒಬ್ಬಳು ಹೆಂಗಸಿನ ಮನೆ ಮುಂದೆ ಬಂದರು. ಆ ಹೆಂಗಸಿಗೆ ಮೂವರು ಗಂಡು ಮಕ್ಕಳು. ಅವರಲ್ಲಿ ಮೊದಲನೆಯವನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ಎರಡನೆಯವನು ತನ್ನಲ್ಲಿರುವ ತೋಟ ನೋಡಿಕೊಳ್ಳುತ್ತಿದ್ದ. ಮೂರನೆಯ ಮಗ ಮನೆಯಲ್ಲಿ ಬಟ್ಟೆಗಳನ್ನು ನೇಯ್ಗೆ ಮಾಡುತ್ತಿದ್ದ.

ತಪ್ಪಿಸಿಕೊಂಡು ಬಂದ ಒಂಟೆ ಇವರಿರುವ ಮನೆಯ ಬಳಿ ಬಂದಿತ್ತು. ಅದನ್ನು ನೋಡಿದ ಮೂವರು ಸಹೋದರರು ಒಂಟೆಯನ್ನು ಕಟ್ಟಿಹಾಕಿ ಹೊಡೆದು ಕೊಂದು ಹಾಕಿದ್ದರು.

ಒಂಟೆಯ ಮಾಂಸವನ್ನು ಜಾಡಿನಲ್ಲಿ ಮುಚ್ಚಿಟ್ಟು ಅದರ ಮೂಳೆ–ಚರ್ಮವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕಿದ್ದರು. ಮಕ್ಕಳ ಈ ಗುಣವನ್ನು ಅವರ ತಾಯಿ ಕಣ್ಣಾರೆ ನೋಡುತ್ತಿದ್ದಳು. ಇದನ್ನು ಗಮನಿಸಿದ ಮಕ್ಕಳು ‘ನಮ್ಮ ತಾಯಿ ನಾವು ಮಾಡಿರುವ ಕೆಟ್ಟ ಕೆಲಸವನ್ನು ಯಾರಲ್ಲಾದರೂ ಬಾಯಿಬಿಟ್ಟರೆ ನಮಗೇ ಕಷ್ಟ’ ಎಂದು ಮಾತನಾಡಿಕೊಂಡರು.

ತಾಯಿಯ ಬಾಯಲ್ಲಿ ಯಾವ ಗುಟ್ಟೂ ನಿಲ್ಲುವುದಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ಒಂದು ಉಪಾಯ ಮಾಡಿದರು. ಮೂವರೂ ತಾಯಿ ಬಳಿ ಬಂದು, ‘ಅಮ್ಮ, ಈ ದಿನ ನಾವು ನಿನ್ನನ್ನು ಮದುಮಗಳನ್ನಾಗಿ ಮಾಡುತ್ತೇವೆ. ಅದಕ್ಕೆ ಒಂಟೆಯನ್ನು ಕೊಂದು ಅದರ ಮಾಂಸವನ್ನು ಜಾಡಿಗಳಲ್ಲಿ ಮುಚ್ಚಿಟ್ಟಿದ್ದೇವೆ. ಆ ಮಾಂಸದಿಂದ ನಿನಗೆ ಇಂದು ಔತಣ ಬಡಿಸುತ್ತೇವೆ’ ಎಂದರು. ಆ ತಾಯಿ ಬುದ್ಧಿಮಾಂದ್ಯಳಾಗಿದ್ದಳು. ಮಕ್ಕಳು ಹೇಳಿದ್ದು ಸರಿಯೆಂದು ನಂಬಿದಳು.

ರಾಜ ಭಟರು ಒಂಟೆ ಹುಡುಕಿಕೊಂಡು ಇವರಿರುವ ಮನೆಗೆ ಬಂದರು. ಕೃಷಿಯಲ್ಲಿ ತೊಡಗಿಕೊಂಡಿದ್ದ ಮೊದಲನೆಯವನಲ್ಲಿ, ‘ನಮ್ಮ ರಾಜರ ಒಂಟೆಯೊಂದು ತಪ್ಪಿಸಿಕೊಂಡು ಬಂದಿದೆ. ನಿಮ್ಮ ಹೊಲದ ಬಳಿ ಏನಾದರೂ ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಜೋರು ದನಿಯಲ್ಲಿ ಉತ್ತರಿಸಿದ ಮೊದಲನೆಯವ, ‘ನಿಮಗೆ ಕಾಣಿಸುತ್ತಿಲ್ಲವೇ? ನಾನು ಹೊಲ ಉಳುತ್ತಿದ್ದೇನೆ’ ಎಂದ. ಅವನಿಗೆ ತಮ್ಮ ಮಾತು ಅರ್ಥವಾಗಿಲ್ಲವೆಂದು ತಿಳಿದ ರಾಜ ಭಟರು ಮತ್ತೆ ಅವನಲ್ಲಿ, ‘ಹೌದು, ಕಾಣಿಸುತ್ತಿದೆ. ನಮ್ಮ ರಾಜರ ಒಂಟೆ ತಪ್ಪಿಸಿಕೊಂಡಿದೆ. ಇಲ್ಲಿ ಅದು ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಉತ್ತರವಾಗಿ ಆತ, ‘ಪ್ರತಿದಿನ ಎಷ್ಟು ಎಕರೆ ಹೊಲ ಉಳುತ್ತೇನೆಂದು ಹೇಳಲು ಖಂಡಿತ ಸಾಧ್ಯವಿಲ್ಲ. ಒಂದು ದಿನ ಒಂದು ಎಕರೆ ಉಳುವುದಕ್ಕೆ ಆಗುತ್ತದೆ. ಇನ್ನೊಂದು ದಿನ ಅಷ್ಟು ಆಗುವುದಿಲ್ಲ, ಕಡಿಮೆ ಉಳುತ್ತೇನೆ’ ಎಂದ. ರಾಜ ಭಟರು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಕೊಡದೆ ಅವರನ್ನು ಕಕ್ಕಾಬಿಕ್ಕಿ ಮಾಡಿದ. ಕೊನೆಯಲ್ಲಿ ರಾಜ ಭಟರು ಇವನ್ಯಾರೋ ತಲೆ ಸರಿಯಿಲ್ಲದವನೆಂದು ಭಾವಿಸಿ ಅಲ್ಲಿಂದ ಹೊರಟರು.

ಭಟರು ತೋಟದಲ್ಲಿ ಕೆಲಸ ಮಾಡುತ್ತಿದ್ದವನ ಬಳಿ ಬಂದು, ‘ನಮ್ಮ ರಾಜರ ಒಂಟೆ ಕಾಣೆಯಾಗಿದೆ. ನೀನು ಅದನ್ನು ನೋಡಿದ್ದೀಯಾ’ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಅವನು, ‘ನಿಮಗೆ ಕಾಣಿಸುತ್ತಿಲ್ಲವೇ? ಮರದಿಂದ ಮಾವಿನ ಕಾಯಿ ಇಳಿಸುತ್ತಿದ್ದೇನೆ’ ಎಂದನು.

ರಾಜ ಭಟರು, ‘ನೋಡು, ನಾವು ಮಾವಿನ ಕಾಯಿ ಕೇಳಿಲ್ಲ. ತಪ್ಪಿಸಿಕೊಂಡು ಬಂದ ಒಂಟೆ ಇಲ್ಲಿಗೆ ಬಂದಿದೆಯಾ ಎಂದು ಕೇಳಿದೆವು’ ಎಂದರು. ಅದಕ್ಕೆ ಉತ್ತರವಾಗಿ ಈತ ‘ಈ ಮರದಲ್ಲಿ ಫಸಲು ಕಡಿಮೆ. ಪಕ್ಕದ ಮರದಲ್ಲಿ ದೊಡ್ಡ ದೊಡ್ಡ ಮಾವಿನ ಕಾಯಿಗಳಿವೆ. ಬೇಕೆಂದರೆ ಮರದಿಂದ ಇಳಿಸಿ ಕೊಡುವೆ’ ಎಂದನು. ರಾಜ ಭಟರು ಇವನ ಉತ್ತರ ಕೇಳಿ ಇವನು ಸಹ ಮೊದಲಿನವನಂತೆಯೇ ಮೂರ್ಖನಿರಬೇಕು ಎಂದು ಭಾವಿಸಿ ಅಲ್ಲಿಂದ ಹೊರಟರು.

ಬಟ್ಟೆ ನೇಯುತ್ತಿದ್ದ ಮೂರನೆಯವನ ಬಳಿ ಬಂದ ರಾಜ ಭಟರು, ‘ರಾಜರ ಒಂಟೆ ತಪ್ಪಿಸಿಕೊಂಡು ಹೋಗಿದೆ. ನೀನು ನೋಡಿದಿಯಾ’ ಎಂದು ಪ್ರಶ್ನಿಸಿದರು. ಮೂರನೆಯವ ಸಹ ವಿರುದ್ಧ ಉತ್ತರ ಕೊಡಲು ಪ್ರಾರಂಭ ಮಾಡಿದ. ‘ಕೆಲವೊಮ್ಮೆ ನೇಯ್ಗೆ ಚೆನ್ನಾಗಿರುತ್ತದೆ. ಒಂದೊಂದು ದಿನ ಮಾತು ಮಾತಿಗೂ ತುಂಡಾಗಿ ಹೋಗುತ್ತದೆ’ ಎಂದನು! ರಾಜ ಭಟರು ಅವನ ಮಾತಿಗೆ ಸಿಟ್ಟಾಗಿ ‘ನೀನು ರಾಜನ ಒಂಟೆ ನೋಡಿದಿಯಾ ತಿಳಿಸು. ಇದೇನು ನಿನ್ನ ಉತ್ತರ’ ಎಂದು ಗುಡುಗಿದರು. ಮೂರನೆಯವನು ಆ ಮಾತಿಗೆ, ‘ನನಗೆ ಮದುವೆ ಸಮಯದಲ್ಲಿ ನೇಯ್ಗೆ ಕೆಲಸ ಜಾಸ್ತಿಯಿರುತ್ತದೆ. ಆಗ ಕೈಯಲ್ಲಿ ಸ್ವಲ್ಪ ಹಣವಿರುತ್ತದೆ. ಬೇರೆ ದಿನಗಳಲ್ಲಿ ಜೀವನ ನೆಡೆಸುವುದು ತುಂಬಾ ಕಷ್ಟ. ವರ್ತಕರು ನಮ್ಮನ್ನು ತುಳಿದು ಹಾಕುತ್ತಾರೆ’ ಎಂದನು.

ಇವನು ಸಹ ಉಳಿದಿಬ್ಬರಂತೆಯೇ ತಲೆಕೆಟ್ಟವ ಎಂದು ಭಾವಿಸಿ ಅಲ್ಲಿಯೇ ಇದ್ದ ಈ ಮೂವರ ತಾಯಿಯ ಬಳಿ ಬಂದರು. ‘ಅಮ್ಮಾ, ನಮ್ಮ ಮಹಾರಾಜರ ಒಂಟೆಯನ್ನು ನೋಡಿದ್ದೀರಾ’ ಎಂದು ವಿಚಾರಿಸಿದರು. ಆ ತಾಯಿಯು ‘ಹೌದು, ನೋಡಿದ್ದೇನೆ. ನನ್ನ ಮಕ್ಕಳು ಆ ಒಂಟೆಯನ್ನು ಹೊಡೆದು ಕೊಂದು, ಬಚ್ಚಿಟ್ಟಿದ್ದಾರೆ’ ಎಂದಳು. ರಾಜ ಭಟರಿಗೆ ಅವಳ ಉತ್ತರ ಕೇಳಿ ತವಕ ಹೆಚ್ಚಾಯಿತು. ಮಹಾರಾಜರ ಒಂಟೆ ಬಗ್ಗೆ ಕೊನೆಗೂ ತಿಳಿಯಿತು ಎಂದುಕೊಂಡರು.

‘ಹೌದಾ?! ಎಲ್ಲಿ? ಯಾವಾಗ? ತಿಳಿಸು’ ಎಂದರು. ರಾಜ ಭಟರಿಗೆ ಆ ತಾಯಿಯು ‘ಮೂವರು ಮಕ್ಕಳು ಸೇರಿ ನನ್ನನ್ನು ಮದುಮಗಳಾಗಿ ಮಾಡಿದ ದಿನ!’ ಎಂದಳು. ರಾಜ ಭಟರು ಇಲ್ಲಿರುವ ಜನರೆಲ್ಲಾ ಮೂರ್ಖರಿರಬೇಕೆಂದು, ಅವಳನ್ನು ವಿಚಾರಿಸಿ ಪ್ರಯೋಜನವಿಲ್ಲವೆಂದು ಅಲ್ಲಿಂದ ಮುಂದೆ ಹೊರಟರು. ಎಲ್ಲಿಯೂ ಒಂಟೆಯ ಸುಳಿವು ಸಿಗದೆ ಅರಮನೆ ಕಡೆಗೆ ಪಯಣ ಹೊರಟರು.

ಕೃಪೆ: ವೇದಾವತಿ ( ಸಾಮಾಜಿಕ ಜಾಲತಾಣ)

ರಾಜಕೀಯ

ಆದಿಚುಂಚನಗಿರಿಯಲ್ಲಿ ವಿಜ್ಜಾನಿ ಡಾ. ಸೂರಪ್ಪ ಅವರಿಗೆ ‘ವಿಜ್ಞಾತಂ 2026’ ಪ್ರಶಸ್ತಿ ಪ್ರಧಾನ

ಆದಿಚುಂಚನಗಿರಿಯಲ್ಲಿ ವಿಜ್ಜಾನಿ ಡಾ. ಸೂರಪ್ಪ ಅವರಿಗೆ ‘ವಿಜ್ಞಾತಂ 2026’ ಪ್ರಶಸ್ತಿ ಪ್ರಧಾನ

ಅಭಿವೃದ್ಧಿಯಲ್ಲಿ ರಾಜಕೀಯ ಬೆರೆಸುವ ಅಗತ್ಯವಿಲ್ಲ. ಪರಸ್ಪರ ಟೀಕೆ, ದೋಷಾರೋಪ ಮಾಡಿಕೊಳ್ಳುವ ಅಗತ್ಯವೂ ಇಲ್ಲ. ನಾವೆಲ್ಲರೂ ಸೇರಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯೋಣ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="119645"]
20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

20 ವರ್ಷಗಳಲ್ಲಿ 500 ಹೆಲಿಕಾಪ್ಟರ್ ತಯಾರಿಕೆ: ಎಂ ಬಿ ಪಾಟೀಲ

ಫ್ರಾನ್ಸ್ ಮೂಲದ ಏರ್ ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣೆ ಘಟಕದಲ್ಲಿ ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ

[ccc_my_favorite_select_button post_id="119504"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ರಾಹುಲ್‌ ಗಾಂಧಿಗೆ ಜೀವ ಬೆದರಿಕೆ; ಬಿಜೆಪಿ ಬೆಂಬಲಿಗನ ಬಂಧನ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ವಿರೋಧ ಪಕ್ಷಗಳ 25 ಸಂಸದರ ಮೇಲೆ ಗುಂಡು ಹಾರಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಬೆದರಿಕೆ ಹಾಕಿದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="119595"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಖಾಸಗಿ ಕಾರ್ಖಾನೆಯ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ (Accident), ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ತಾಲೂಕಿನ ಗೊಲ್ಲಹಳ್ಳಿ ಕ್ರಾಸ್ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಇಂದು ಸಂಜೆ

[ccc_my_favorite_select_button post_id="119492"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!