ದೊಡ್ಡಬಳ್ಳಾಪುರ, (ಏ.27); ತೀವ್ರವಾದ ಬರ, ಬಿಸಿಲಿನ ಬೇಗೆ ನಡುವೆ, ಜಾನುವಾರುಗಳಿಗೆಂದು ಖರೀದಿಸಿ ಬಣವೇ ಮಾಡಲಾಗಿದ್ದ ಒಣ ಮೇವಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸಾವಿರ ರೂ ಮೌಲ್ಯದ ಮೇವು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ಚಿಕ್ಕನಹಳ್ಳಿ ಗ್ರಾಮದ ಮುನಿರಾಜು ಎನ್ನುವವರು ಜಾನುವಾರುಗಳಿಗಾಗಿ ಕಳೆದ ವಾರದ ಹಿಂದೆಯಷ್ಟೇ 300 ರೂಗಳಂತೆ ಒಂದು ಹುಲ್ಲಿನ ಪೆಂಡಿಗೆ ಕೊಟ್ಟು, ಸುಮಾರು 60,000 ಹುಲ್ಲನ್ನು ತಂದು ಬಣವೇ ಮಾಡಿದ್ದರು.
ಆದರೆ ಇಂದು ಇಂದು ತೀವ್ರ ಬಿಸಿಲಿನ ತೀವ್ರ ಶಾಖದ ಜೊತೆ ಆಕಸ್ಮಿಕವಾಗಿ ತಗುಲಿದ ಬೆಂಕಿ, ಮೇವನ್ನು ಸುಟ್ಟ ಪರಿಣಾಮ ರೈತ ಮುನಿರಾಜು ಅವರಿಗೆ ಸಾವಿರಾರು ನಷ್ಟ ಉಂಟಾಗಿದೆ ಎಂದು ಗ್ರಾಮದ ಯುವಕ ಅಜಯ್ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ತೀವ್ರವಾದ ಬರದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮೇವಿನ ಬ್ಯಾಂಕ್ ಸ್ಥಾಪನೆ ಮುಂತಾದ ಬರ ನಿರ್ವಹಣೆ ಕುರಿತು ಅನೇಕ ಘೋಷಣೆ ಮಾಡಿದೆ. ಆದರೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬರ ನಿರ್ವಹಣೆ ಕುರಿತು ಯಾವುದೇ ಕ್ರಮ ತಾಲೂಕು ಆಡಳಿತ ಮಾಡುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--
Latest News
crime
literature
crime
literature
literature
crime
crime
politics
health
crime
crime
politics
politics
politics
literature
politics
politics
education
crime
literature
crime
crime
literature
literature
crime
politics
literature
crime
crime
literature