ಹರಿತಲೇಖನಿ ದಿನಕ್ಕೊಂದು ಕಥೆ: ಮಾಯಾಮೃಗ

ಬಹಳ ವರ್ಷಗಳ ಹಿಂದೆ ಭಯಂಕರವಾದ ದಟ್ಟಾರಣ್ಯದಲ್ಲಿ ಭೀಕರವಾದ ಮಾಯಾಮೃಗವೊಂದಿತ್ತು. ಅದು ತನ್ನ ಮಾಯಾಶಕ್ತಿಯಿಂದ ಕ್ಷಣಕ್ಷಣಕ್ಕೂ ಒಂದೊಂದು ಬಗೆಯ ಮೃಗವಾಗಿ ಬದಲಾಗುತ್ತಿತ್ತು.

ಒಮ್ಮೆ ಸಿಂಹವಾದರೆ ಇನ್ನೊಮ್ಮೆ ಹುಲಿಯಾಗುತ್ತಿತ್ತು. ಮತ್ತೊಮ್ಮೆ ಆನೆಯಾದರೆ ಮಗದೊಮ್ಮೆ ಚಿರತೆಯಾಗುತ್ತಿತ್ತು. ಹೀಗೆ ಗಳಿಗೆಗೊಂದು ಮೃಗವಾಗಿ ಬದಲಾಗಿ ದಟ್ಟಾರಣ್ಯದಲ್ಲಿದ್ದ ಇತರೇ ಪ್ರಾಣಿಗಳನ್ನು ತನಗೆ ಬೇಕಾದಂತೆ ಬೇಟೆಯಾಡಿ ತಿಂದು ಮುಗಿಸುತ್ತಿತ್ತು.

ಬಹಳ ಕ್ರೂರ ಬುದ್ಧಿಯಿದ್ದ ಇದರ ಹಾವಳಿಗೆ ದಟ್ಟಾರಣ್ಯದಲ್ಲಿದ್ದ ಎಲ್ಲಾ ಪ್ರಾಣಿಗಳೂ ಹೆದರಿ ಹೋಗಿದ್ದವು. ಸ್ವಲ್ಪ ಸದ್ದಾದರೂ ಸಾಕು ಥರ ಥರನೆ ನಡುಗುತ್ತಾ ಅಡವಿಯಲ್ಲಿ ಅಡಗಿಕೊಳ್ಳುತ್ತಿದ್ದವು. ಯಾವ ಕ್ಷ ಣದಲ್ಲಿ ಯಾವ ಪ್ರಾಣಿಯ ರೂಪದಲ್ಲಿ ಬಂದು ತಮ್ಮನ್ನು ಆ ಮಾಯಾಮೃಗ ತಿಂದು ಬಿಡುವುದೋ ಎಂಬ ಆತಂಕದಲ್ಲೇ ಅವು ಜೀವ ಭಯದಲ್ಲಿ ಬದುಕುತ್ತಿದ್ದವು.

‘ಎಷ್ಟು ದಿನಾ ಅಂತ ಹೀಗೆ ಆ ಮಾಯಾಮೃಗಕ್ಕೆ ಹೆದರಿ ಬದುಕುವುದು?’ ಎಂದು ಚಿಂತಿಸುತ್ತಾ ಅನೇಕ ಸಭೆಗಳನ್ನು ನಡೆಸಿ ಕಾಡಿನ ಪ್ರಾಣಿಗಳೆಲ್ಲಾ ಚರ್ಚಿಸಿದವಾದರೂ ಸಮಸ್ಯೆಗೆ ಪರಿಹಾರ ಮಾತ್ರ ದೊರೆಯಲಿಲ್ಲ.

‘ಹೀಗೆಯೇ ನಾವು ಹೆದರಿ ಸುಮ್ಮನಿದ್ದು ಬಿಟ್ಟರೆ ಆ ಮಾಯಾಮೃಗ ಅಡವಿಯಲ್ಲಿ ಒಂದು ಪ್ರಾಣಿಯನ್ನೂ ಬಿಡದಂತೆ ಕೆಲವೇ ದಿನಗಳಲ್ಲಿ ನಮ್ಮೆಲ್ಲರನ್ನೂ ತಿಂದು ತೇಗಿ ಬೀಡುತ್ತದೆ. ಏನಾದರೂ ಮಾಡಿ ಆದಷ್ಟು ಬೇಗ ಅದನ್ನು ಸದೆಬಡಿಯಲೇ ಬೇಕು’ ಎಂದು ಬಹಳ ಬುದ್ಧಿವಂತಿಕೆಯಿಂದ ಗಂಭೀರವಾಗಿ ಯೋಚಿಸಿದ ನರಿಯೊಂದು, ‘ನಮಗೆಲ್ಲಾ ಕಂಟಕವಾಗಿರುವ ಆ ಮಾಯಾಮೃಗವನ್ನು ನಾನು ಸದೆ ಬಡಿಯುತ್ತೇನೆ’ ಎಂದು ಎಲ್ಲಾ ಪ್ರಾಣಿಗಳ ಮುಂದೆ ಎದೆಯುಬ್ಬಿಸಿ ಹೇಳಿತು.

ನರಿಯ ಮಾತಿಗೆ ಒಂದು ಕ್ಷ ಣ ಬೆಚ್ಚಿದ ಎಲ್ಲಾ ಪ್ರಾಣಿಗಳೂ, ‘ಇದು ನೀನು ಬಡಾಯಿ ಕೊಚ್ಚಿಕೊಂಡಷ್ಟು ಸುಲಭದ ಕೆಲಸವಲ್ಲ. ನಮ್ಮ ಕಾಡಿನ ರಾಜ ಸಿಂಹವೇ ತನ್ನಿಂದೇನೂ ಆಗದೆಂದು ಬಾಯಿ ಮುಚ್ಚಿಕೊಂಡಿರುವಾಗ ನೀನು ಬಾಯಿಗೆ ಬಂದಂತೆ ಮಾತನಾಡಬೇಡ’ ಎಂದು ನರಿಗೆ ಎಲ್ಲಾ ಪ್ರಾಣಿಗಳೂ ಒಟ್ಟಾಗಿ ದಬಾಯಿಸಿದವು. ಆದರೆ ನರಿ ಮಾತ್ರ ಇದಕ್ಕೆ ಸುಮ್ಮನಿರದೆ ‘ನೋಡುತ್ತಾ ಇರಿ. ಆ ಮಾಯಾಮೃಗಕ್ಕೊಂದು ಗತಿ ಕಾಣಿಸುತ್ತೇನೆ. ಒಂದು ಪಕ್ಷ ನನ್ನಿಂದ ಈ ಕೆಲಸ ಆಗದಿದ್ದರೆ ಅಡವಿಯನ್ನೇ ಬಿಟ್ಟು ಹೋಗುತ್ತೇನೆ’ ಎಂದು ಗೊಣಗಿಕೊಂಡು ಮಾಯಾಮೃಗವನ್ನು ಹುಡುಕಿಕೊಂಡು ಹೊರಟಿತು.

ಮಾಯಾಮೃಗಕ್ಕಾಗಿ ದಟ್ಟಾರಣ್ಯವನ್ನೆಲ್ಲಾ ಸುತ್ತಾಡಿದ ನರಿ ‘ಏಯ್‌ ದುಷ್ಟ ಮಾಯಾಮೃಗವೇ, ಎಲ್ಲಿ ಅಡಗಿ ಕುಳಿತಿರುವೆ? ಬಾ… ನನ್ನ ಮುಂದೆ ಬಂದು ತೋರಿಸು ನಿನ್ನ ಪೌರುಷವ…’ ಎನ್ನುತ್ತಾ ದಟ್ಟಡವಿ ಪ್ರತಿಧ್ವನಿಸುವಂತೆ ನರಿ ಕೂಗಿತು.

ಎಲ್ಲೋ ಮಲಗಿ ನಿದ್ರಿಸುತ್ತಿದ್ದ ಮಾಯಾಮೃಗ, ನರಿಯ ಕೂಗಿಗೆ ಎಚ್ಚರಗೊಂಡಿತು. ತಕ್ಷಣವೇ ಹೂಂಕರಿಸುತ್ತಾ ಕಾಡುಕೋಣದ ರೂಪದಲ್ಲಿ ನರಿಯ ಮುಂದೆ ಬಂದು ನಿಂತಿತು. ಕೂಡಲೇ ತೋಳವಾಯಿತು, ಕರಡಿಯಾಯಿತು, ಹುಲಿಯಾಯಿತು, ಸಿಂಹವಾಯಿತು, ಆನೆಯಾಯಿತು, ಚಿರತೆಯಾಯಿತು, ಘೇಂಡಾಮೃಗವಾಯಿತು.

ಹೀಗೆ ಒಂದು ಕ್ಷಣದಲ್ಲಿ ಹಲವಾರು ಪ್ರಾಣಿಗಳಾಗಿ ಅದು ಬದಲಾಗಿ ನರಿಯನ್ನು ಹೆದರಿಸಿತು. ಆದರೆ ಮಾಯಾಮೃಗವನ್ನು ಸಾಯಿಸಲೆಂದೇ ನಿರ್ಧರಿಸಿಕೊಂಡು ಬಂದಿದ್ದ ನರಿ ಇದಕ್ಕೆಲ್ಲಾ ಒಂದು ಚೂರೂ ಹೆದರಲಿಲ್ಲ. ಬದಲಿಗೆ ಮತ್ತಷ್ಟು ಧೈರ್ಯ ತಂದುಕೊಂಡು, ‘ಏಯ್‌ ಮಾಯಾವಿ ಮೃಗವೆ, ನಿನ್ನ ಮಾಯಾಜಾಲ ಇನ್ನು ನಡೆಯುವುದಿಲ್ಲ. ನಿನ್ನ ಅಟ್ಟಹಾಸ ಇಂದಿಗೆ ಮುಗಿಯಿತೆಂದು ತಿಳಿದಿಕೊ. ಈ ದಟ್ಟಾರಣ್ಯದ ಪ್ರಾಣಿ ಸಂಕುಲಕ್ಕೆಲ್ಲಾ ತಲೆನೋವಾಗಿರುವ ನಿನ್ನನ್ನು ಕೊಲ್ಲಲೆಂದೇ ನಾನು ಬಂದಿದ್ದೇನೆ… ‘ ಎಂದು ನರಿ ಆರ್ಭಟಿಸಿತು.

‘ಹಾಂ, ನನ್ನನ್ನು ಕೊಲ್ಲಲು ಬಂದಿರುವೆಯಾ? ಎಲೈ ಗುಳ್ಳೆ ನರಿಯೆ, ನಿನಗೆ ಅಷ್ಟೊಂದು ಧೈರ್ಯವಿದೆಯೇ? ಶಕ್ತಿ ಇದೆಯೇ? ನೀನೊಂದು ಅಮಾಯಕ ಜೀವಿ. ನಿನ್ನಿಂದ ಏನಾದೀತು? ಹುಚ್ಚು ಹುಚ್ಚಾಗಿ ಏನೇನೋ ಮಾತನಾಡಿ ನನ್ನನ್ನು ಕೆರಳಿಸಬೇಡ. ‘ನರಿಕೂಗು ಗಿರಿ ಮುಟ್ಟೀತೆ?’ ಎಂಬ ಮಾತನ್ನು ನೀನು ಕೇಳಿರುವೆ ತಾನೆ? ನನ್ನನ್ನು ನೀನು ಕೊಲ್ಲುವುದಿರಲಿ ಮೊದಲು ನೀನು ಬದುಕುಳಿಯುವುದರ ಬಗ್ಗೆ ಯೋಚಿಸು. ನನ್ನ ಮಾಯಾಶಕ್ತಿ ಏನೆಂದು ಈಗ ತಾನೆ ನೀನು ನೊಡಿದೆಯಲ್ಲವೆ? ಹಾಂ, ಮತ್ತಷ್ಟು ನೋಡು… ‘ ಎಂದು ಗಹಗಹಿಸಿ ಘರ್ಜಿಸುತ್ತಾ ಇನ್ನಷ್ಟು ಮೃಗಗಳ ರೂಪದಲ್ಲಿ ಆ ಮಾಯಾಮೃಗ ನರಿಯನ್ನು ಭಯಪಡಿಸಿತು.

ಅದಕ್ಕೆ ಕಿಂಚಿತ್ತೂ ಭಯಪಡದೆ ಪ್ರತಿಯಾಗಿ ನರಿ ಕೂಡ ಧೈರ್ಯವಾಗಿ ಕೇಕೆ ಹಾಕುತ್ತಾ, ‘ನೀನು ಹುಲಿ, ಸಿಂಹ, ಚಿರತೆಯಾದರೆ ಸಾಲದು. ನಿನಗೆ ತಾಕತ್ತಿದ್ದರೆ ಒಂದು ಇಲಿಮರಿಯಾಗಿ ನನ್ನ ಮುಂದೆ ಬಾ… ‘ ಎಂದು ಸವಾಲು ಹಾಕಿ ಬೇಕೆಂದೇ ಮಾಯಾಮೃಗವನ್ನು ನರಿ ಕೆರಳಿಸಿತು. ನರಿಯ ಬುದ್ಧಿವಂತಿಕೆಯ ಮರ್ಮವನ್ನು ಅರಿಯದ ಮಾಯಾಮೃಗ ಥಟ್ಟನೆ ಇಲಿ ಮರಿಯಾಗಿ ನರಿಯ ಮುಂದೆ ಬಂತು.

ಈ ಸಂದರ್ಭಕ್ಕಾಗಿ ಕಾಯುತ್ತಿದ್ದ ನರಿ ತಕ್ಷಣವೇ ಇಲಿಮರಿಯನ್ನು ಹಿಡಿದು ನುಂಗಿಬಿಟ್ಟಿತು. ಅಲ್ಲಿಗೆ ನರಿಯ ಹೊಟ್ಟೆ ಸೇರಿದ ಮಾಯಾಮೃಗದ ಕಥೆ ಮುಗಿಯಿತು.

ಇದನ್ನು ಕಂಡ ದಟ್ಟಾರಣ್ಯದ ಪ್ರಾಣಿಗಳೆಲ್ಲಾ ಸಂತಸದಿಂದ ಕುಣಿದಾಡಿದವು. ನರಿಯ ಧೈರ್ಯ ಹಾಗೂ ಜಾಣ್ಮೆಯನ್ನು ಮೆಚ್ಚಿ ಅಭಿಮಾನದಿಂದ ಅದನ್ನು ಆಲಂಗಿಸಿಕೊಂಡು ಆನಂದಪಟ್ಟವು. ಕಾಡಿನ ರಾಜ ಸಿಂಹ ಕೂಡ ನರಿಯನ್ನು ಸನ್ಮಾನಿಸಿ ಅಭಿನಂದಿಸಿತು.

ಅಂದಿನಿಂದ ನರಿಯನ್ನು ಸಿಂಹವು ತನ್ನ ಪ್ರಧಾನ ಮಂತ್ರಿಯಾಗಿ ನೇಮಿಸಿಕೊಂಡಿತು. ನರಿಯಿಂದಾಗಿ ಮಾಯಾಮೃಗದ ಕಾಟ ತಪ್ಪಿ ಎಲ್ಲಾ ಪ್ರಾಣಿಗಳೂ ನೆಮ್ಮದಿಯಿಂದ ದಟ್ಟಾರಣ್ಯದಲ್ಲಿ ಜೀವಿಸತೊಡಗಿದವು.

ಕೃಪೆ: ಬನ್ನೂರು ಕೆ. ರಾಜು. (ಸಾಮಾಜಿಕ ಜಾಲತಾಣ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsapp, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….</

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!