ದೊಡ್ಡಬಳ್ಳಾಪುರ: ತಾಲೂಕಿನ ರಾಜಘಟ್ಟ ಗ್ರಾಮದ ಮಾರುತಿ ಪ್ರೌಢಶಾಲೆ ಮತ್ತು ಕೋಮರ್ಲ ಗಂಗಾ ಶೆಟ್ಟಿ ಭಾಗ್ಯಲಕ್ಷ್ಮಮ್ಮ ಪಬ್ಲಿಕ್ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಇಂಟರ್ ಹೈಸ್ಕೂಲ್ ಇಂಗ್ಲಿಷ್ ಡಿಬೇಟ್ ಕಾಂಪಿಟೇಶನ್ ನಲ್ಲಿ ನಗರದ ಹೊರವಲಯದ ಕೊಡಿಗೇಹಳ್ಳಿಯಲ್ಲಿರುವ ಶ್ರೀ ಸಾಯಿ ಸಾಧನಾ ಶಾಲೆಯ ವಿದ್ಯಾರ್ಥಿನಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸೋಮವಾರ ರಾಜಘಟ್ಟದ ಕೋಮರ್ಲ ಗಂಗಾ ಶೆಟ್ಟಿ ಭಾಗ್ಯಲಕ್ಷ್ಮಮ್ಮ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ, ಶ್ರೀ ಸಾಯಿ ಸಾಧನಾ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಇಂಚರ ಕೆ ಸತೀಶ್ ಮತ್ತು ಚಿಂತನ ಎಂ.ಎ. ಭಾಗವಹಿಸಿದ್ದರು.

ಈ ಸ್ಪರ್ಧೆಯಲ್ಲಿ ಇಂಚರ ಕೆ ಸತೀಶ್ ಪ್ರಥಮ ಬಹುಮಾನ ಮತ್ತು ಚಿಂತನ ಎಂಎ ರವರು ತೃತೀಯ ಬಹುಮಾನವನ್ನು ಪಡೆದಿರುತ್ತಾರೆ. ಅಲ್ಲದೆ ಇಂಟರ್ ಹೈಸ್ಕೂಲ್ ಇಂಗ್ಲಿಷ್ ಡಿಬೇಟ್ ಕಾಂಪಿಟೇಶನ್ ನ ಶೀಲ್ಡ್ ಅನ್ನು ಸಹ ಬಹುಮಾನವಾಗಿ ಪಡೆದಿರುತ್ತಾರೆ.
ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಸಾಯಿ ಸಾಧನಾ ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಮಧು ಎಸ್.ಪಿ., ಕಾರ್ಯದರ್ಶಿ ಸತೀಶ್ ಕೆ.ಎನ್., ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಸೇರಿದಂತೆ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.