Love Reddy| ದರ್ಶನ್ ಬಗ್ಗೆ ಮಾತಾಡಲು ನಿನಗೇನ್ ಅರ್ಹತೆ ಇದೆ..?; ಲೈವ್‌ನಲ್ಲೆ ಜಗದೀಶ್ಗೆ ಹಿಗ್ಗಾಮುಗ್ಗಾ ತರಾಟೆ| video

ಬೆಂಗಳೂರು: ಲವ್ ರೆಡ್ಡಿ (Love Reddy) ಸಿನಿಮಾದ ಪ್ರಮೋಷನ್ ವೇಳೆ ಅನಾವಶ್ಯಕವಾಗಿ ನಟ ದರ್ಶನ್ ಹೆಸರನ್ನು ಪದೇ ಪದೇ ಪ್ರಸ್ತಾಪಿಸಿದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ಗೆ ನೇರ ಪ್ರಸಾರದಲ್ಲಿಯೇ ಲವ್ ರೆಡ್ಡಿ ಸಿನಿಮಾ ನಿರ್ಮಾಪಕ ರವೀಂದ್ರ ರೆಡ್ಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓದಲ್ಲಿ ಬಂದಲ್ಲಿ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಗದೀಶ್ ಅವರಿಗೆ ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ.

ತೆಲುಗಿನ ಹಿಟ್ ಸಿನಿಮಾ Love Reddy ಇಂದು (ನ.22) ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.
ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ ‘ಲವ್ ರೆಡ್ಡಿ’ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದೂ ಅಲ್ಲದೇ ಸ್ಟಾರ್​ ನಟರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದೆ.

ಕನ್ನಡದಲ್ಲಿ Love Reddy ಸಿನಿಮಾ ಬಿಡುಗಡೆ ಕುರಿತು ಸಿನಿಮಾ ತಂಡ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿದ್ದು, ವಿವಿಧ ಮಾಧ್ಯಮಗಳಿಗೆ ಸರಣಿ ಸಂದರ್ಶನ ನೀಡುತ್ತಿದೆ.

ಈ ಪ್ರಮೋಷನ್ ವೇಳೆ ಸಂದರ್ಶಕನಾಗಿ ಭಾಗವಹಿಸಿದ್ದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮುಜುಗರಕ್ಕೆ ಒಳಗಾದ ಘಟನೆ ನಡೆದಿದ್ದು, ದರ್ಶನ್ ವಿಚಾರದಲ್ಲಿ ಅನಾವಶ್ಯಕವಾಗಿ ಪದೇ ಪದೇ ಮೂಗು ತೂರಿಸುವ ಅರ್ಹತೆ ನಿನಗೇನಿದೆ ಎಂದು Love Reddy ಸಿನಿಮಾ ನಿರ್ಮಾಪಕ ನೇರ ಸಂದರ್ಶನದಲ್ಲಿಯೇ ಜಾಡಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪ್ರಮೋಷನ್ ವೇಳೆ Love Reddy ಸಿನಿಮಾ ನಾಯಕ ನಟ ಅಂಜನ್ ರಾಮಚಂದ್ರ, ನಟಿ ಶ್ರಾವಣಿ ರೆಡ್ಡಿ ಹಾಗೂ ಸಿನಿಮಾ ನಿರ್ಮಾಪಕ ರವಿಂದ್ರ ರೆಡ್ಡಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂದರ್ಶಕ ಜಗದೀಶ್ ಪದೇ ಪದೇ ನಟ ದರ್ಶನ್ ಅವರ ಹೆಸರನ್ನು ಅನಾವಶ್ಯಕವಾಗಿ ಉಲ್ಲೇಖಿಸಿದ್ದು ನಿರ್ಮಾಪಕ ರವೀಂದ್ರ ರೆಡ್ಡಿ ಅವರನ್ನು ಕೆರಳಿಸಿದೆ. ನೇರ ಸಂದರ್ಶನದಲ್ಲಿಯೇ ಸಿಡಿದೆದ್ದಿರುವ ರವೀಂದ್ರ ರೆಡ್ಡಿ, ದರ್ಶನ್ ಹೆಸರು ಬೇಡ ಸರ್ ಪಾಪಾ ಅವರ ಕಷ್ಟದಲ್ಲಿ ಅವರಿದ್ದಾರೆ. ಅವರ ಹೇಸರೇನುಕ್ ಇಲ್ ತರ್ತೀರಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ಫೇಸ್‌ಬುಕ್‌ ಸೇರಿದಂತೆ ಓದಲ್ಲಿ ಒಂದಲ್ಲಿ ದರ್ಶನ್ ಹೆಸರನ್ನು ಏತಕ್ಕೆ ಪ್ರಸ್ತಾಪ ಮಾಡ್ತಿರಿ ನಿಮಗೇನ್ ಅರ್ಹತೆ, ಹಕ್ಕಿದೆ ಎಂದಿದ್ದಾರೆ. ಈ ವೇಳೆ ಜಗದೀಶ್ ಅವರು ದರ್ಶನ್ ಏನ್ ನಿನ್ ಪ್ರಾಪರ್ಟಿನಾ..? ದರ್ಶನ್ ಹೆಸರು ನಿನ್ ಜಿಪಿಎ ಮಾಡ್ಕೊಂಡಿದ್ದೀಯ…? ಈ ರೀತಿ ಮಾತಾಡಿದರೆ ಇಂಟರ್ ವ್ಯೂ ಮಾಡಬೇಕಾ ಬೇಡವಾ ಅನಿಸ್ತಾ ಇದೆ ಎಂದಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ರವೀಂದ್ರ ರೆಡ್ಡಿ, ನಿನ್ ಇಂಟರ್ ವ್ಯೂ ಮಾಡದಿದ್ದರೆ ಬೇಡ, ನೀನ್ ಏನುಕ್ ಅನಾವಶ್ಯವಾಗಿ ದರ್ಶನ್ ಹೆಸರು ಪ್ರಸ್ತಾಪ ಮಾಡ್ತಿಯಾ..? ನಿನಗೇನ್ ಅರ್ಹತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ನಾಯಕನಟ ಅಂಜನ್ ರಾಮಚಂದ್ರ ಮಧ್ಯ ಪ್ರವೇಶಿಸಿದ್ದು, ಜಗದೀಶ್ ಅವರನ್ನು ಕುಳ್ಳರಿಸಿ, ರವೀಂದ್ರ ರೆಡ್ಡಿ ಅವರನ್ನು ಸಮಾಧಾನಿಸಲು ಪಯತ್ನಿಸಿದರಾದರು, ಇಂಟರ್ ವ್ಯೂ ಬೇಡವೆಂದು ರವೀಂದ್ರ ರೆಡ್ಡಿ ಹೊರನಡೆದಿದ್ದಾರೆ.

ಇದರಿಂದ ಮುಜುಗರಕ್ಕೀಡಾದ ಜಗದೀಶ್ ಓಗ್ಲಿ ಬನ್ರಿ ಬನ್ರಿ ಎಂದರಾದರು, ಬೇಕಿಲ್ಲ ಓಗ್ರಿ ಎಂದು ದಿಕ್ಕರಿಸಿ ರವೀಂದ್ರ ರೆಡ್ಡಿ ನಡೆದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ನಂತರ ಮುಂದುವರಿದ ಸಂದರ್ಶನದಲ್ಲಿ ಸಿನಿಮಾ ತಂಡದ ಕ್ಷಮೆ ಕೋರಿರುವ ಜಗದೀಶ್, ದರ್ಶನ್ ಬಗ್ಗೆ ನನಗೂ ಅಭಿಮಾನವಿದೆ. ನಾನು ಅಭಿಮಾನಿಯೇ.. ನೋಡಿ ದರ್ಶನ್ ಅವರ ಅಭಿಮಾನಿಗಳು ಎಲ್ ಎಲ್ ಇದ್ದಾರೆ. ಅವರೊಂದು ಹಿರಿಯ ನಟ, ಅವರ ಸಲಹೆ ನಮಗೆಲ್ಲ ಬೇಕು, ದರ್ಶನ್ ಆಕಾಶದಲ್ಲಿ ಸೂರ್ಯ ಇದ್ದಂತೆ ಎಂದು ತೇಪೆ ಹಚ್ಚಲು ಮುಂದಾದರು.

ಜಗದೀಶ್ ಮಾತಿಗೆ ಬ್ರೇಕ್ ಹಾಕಿದ ತಡೆದ ನಟ ಅಂಜನ್ ರಾಮಚಂದ್ರ, ಜನರನ್ನು ತಲುಪು ಸಲುವಾಗಿ ನಿಮ್ಮ ಮೂಲಕ ಈ ಪ್ರಮಖಷನ್ ಭಾಗವಹಿಸಿದ್ದೇವೆ. ಆದರೆ ನೀವು ಪದೇ ಪದೇ ದರ್ಶನ್ ಸರ್ ಅವರ ಹೆಸರು ಬಳಸಿದ್ದು ಎಲ್ಲಿಂದ ಎಲ್ಲಿಗೋ ಹೋಗುತ್ತದೆ.

ನಮಗೆ ದರ್ಶನ್ ಸರ್ ಅಂದರೆ ಅಪಾರ ಪ್ರೀತಿ ದಯವಿಟ್ಟು ಇಲ್ಲಿಂದ ಬಿಟ್ಟು ಬಿಡಿ ಎಂದಿದ್ದಾರೆ.

ರಾಜಕೀಯ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ: ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="112771"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!