Love Reddy| ದರ್ಶನ್ ಬಗ್ಗೆ ಮಾತಾಡಲು ನಿನಗೇನ್ ಅರ್ಹತೆ ಇದೆ..?; ಲೈವ್‌ನಲ್ಲೆ ಜಗದೀಶ್ಗೆ ಹಿಗ್ಗಾಮುಗ್ಗಾ ತರಾಟೆ| video

ಬೆಂಗಳೂರು: ಲವ್ ರೆಡ್ಡಿ (Love Reddy) ಸಿನಿಮಾದ ಪ್ರಮೋಷನ್ ವೇಳೆ ಅನಾವಶ್ಯಕವಾಗಿ ನಟ ದರ್ಶನ್ ಹೆಸರನ್ನು ಪದೇ ಪದೇ ಪ್ರಸ್ತಾಪಿಸಿದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ಗೆ ನೇರ ಪ್ರಸಾರದಲ್ಲಿಯೇ ಲವ್ ರೆಡ್ಡಿ ಸಿನಿಮಾ ನಿರ್ಮಾಪಕ ರವೀಂದ್ರ ರೆಡ್ಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓದಲ್ಲಿ ಬಂದಲ್ಲಿ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಗದೀಶ್ ಅವರಿಗೆ ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ.

ತೆಲುಗಿನ ಹಿಟ್ ಸಿನಿಮಾ Love Reddy ಇಂದು (ನ.22) ಕನ್ನಡದಲ್ಲಿ ಬಿಡುಗಡೆಯಾಗುತ್ತಿದೆ.
ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಯಲ್ಲಿ ನಡೆದ ನೈಜ ಘಟನೆಯಾಧಾರಿತ ಚಿತ್ರ ‘ಲವ್ ರೆಡ್ಡಿ’ ಸಿನಿಮಾ ತೆಲುಗಿನಲ್ಲಿ ಹಿಟ್ ಆಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ್ದೂ ಅಲ್ಲದೇ ಸ್ಟಾರ್​ ನಟರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದೆ.

ಕನ್ನಡದಲ್ಲಿ Love Reddy ಸಿನಿಮಾ ಬಿಡುಗಡೆ ಕುರಿತು ಸಿನಿಮಾ ತಂಡ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿದ್ದು, ವಿವಿಧ ಮಾಧ್ಯಮಗಳಿಗೆ ಸರಣಿ ಸಂದರ್ಶನ ನೀಡುತ್ತಿದೆ.

ಈ ಪ್ರಮೋಷನ್ ವೇಳೆ ಸಂದರ್ಶಕನಾಗಿ ಭಾಗವಹಿಸಿದ್ದ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಮುಜುಗರಕ್ಕೆ ಒಳಗಾದ ಘಟನೆ ನಡೆದಿದ್ದು, ದರ್ಶನ್ ವಿಚಾರದಲ್ಲಿ ಅನಾವಶ್ಯಕವಾಗಿ ಪದೇ ಪದೇ ಮೂಗು ತೂರಿಸುವ ಅರ್ಹತೆ ನಿನಗೇನಿದೆ ಎಂದು Love Reddy ಸಿನಿಮಾ ನಿರ್ಮಾಪಕ ನೇರ ಸಂದರ್ಶನದಲ್ಲಿಯೇ ಜಾಡಿಸಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪ್ರಮೋಷನ್ ವೇಳೆ Love Reddy ಸಿನಿಮಾ ನಾಯಕ ನಟ ಅಂಜನ್ ರಾಮಚಂದ್ರ, ನಟಿ ಶ್ರಾವಣಿ ರೆಡ್ಡಿ ಹಾಗೂ ಸಿನಿಮಾ ನಿರ್ಮಾಪಕ ರವಿಂದ್ರ ರೆಡ್ಡಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂದರ್ಶಕ ಜಗದೀಶ್ ಪದೇ ಪದೇ ನಟ ದರ್ಶನ್ ಅವರ ಹೆಸರನ್ನು ಅನಾವಶ್ಯಕವಾಗಿ ಉಲ್ಲೇಖಿಸಿದ್ದು ನಿರ್ಮಾಪಕ ರವೀಂದ್ರ ರೆಡ್ಡಿ ಅವರನ್ನು ಕೆರಳಿಸಿದೆ. ನೇರ ಸಂದರ್ಶನದಲ್ಲಿಯೇ ಸಿಡಿದೆದ್ದಿರುವ ರವೀಂದ್ರ ರೆಡ್ಡಿ, ದರ್ಶನ್ ಹೆಸರು ಬೇಡ ಸರ್ ಪಾಪಾ ಅವರ ಕಷ್ಟದಲ್ಲಿ ಅವರಿದ್ದಾರೆ. ಅವರ ಹೇಸರೇನುಕ್ ಇಲ್ ತರ್ತೀರಿ ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ಫೇಸ್‌ಬುಕ್‌ ಸೇರಿದಂತೆ ಓದಲ್ಲಿ ಒಂದಲ್ಲಿ ದರ್ಶನ್ ಹೆಸರನ್ನು ಏತಕ್ಕೆ ಪ್ರಸ್ತಾಪ ಮಾಡ್ತಿರಿ ನಿಮಗೇನ್ ಅರ್ಹತೆ, ಹಕ್ಕಿದೆ ಎಂದಿದ್ದಾರೆ. ಈ ವೇಳೆ ಜಗದೀಶ್ ಅವರು ದರ್ಶನ್ ಏನ್ ನಿನ್ ಪ್ರಾಪರ್ಟಿನಾ..? ದರ್ಶನ್ ಹೆಸರು ನಿನ್ ಜಿಪಿಎ ಮಾಡ್ಕೊಂಡಿದ್ದೀಯ…? ಈ ರೀತಿ ಮಾತಾಡಿದರೆ ಇಂಟರ್ ವ್ಯೂ ಮಾಡಬೇಕಾ ಬೇಡವಾ ಅನಿಸ್ತಾ ಇದೆ ಎಂದಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ರವೀಂದ್ರ ರೆಡ್ಡಿ, ನಿನ್ ಇಂಟರ್ ವ್ಯೂ ಮಾಡದಿದ್ದರೆ ಬೇಡ, ನೀನ್ ಏನುಕ್ ಅನಾವಶ್ಯವಾಗಿ ದರ್ಶನ್ ಹೆಸರು ಪ್ರಸ್ತಾಪ ಮಾಡ್ತಿಯಾ..? ನಿನಗೇನ್ ಅರ್ಹತೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ನಾಯಕನಟ ಅಂಜನ್ ರಾಮಚಂದ್ರ ಮಧ್ಯ ಪ್ರವೇಶಿಸಿದ್ದು, ಜಗದೀಶ್ ಅವರನ್ನು ಕುಳ್ಳರಿಸಿ, ರವೀಂದ್ರ ರೆಡ್ಡಿ ಅವರನ್ನು ಸಮಾಧಾನಿಸಲು ಪಯತ್ನಿಸಿದರಾದರು, ಇಂಟರ್ ವ್ಯೂ ಬೇಡವೆಂದು ರವೀಂದ್ರ ರೆಡ್ಡಿ ಹೊರನಡೆದಿದ್ದಾರೆ.

ಇದರಿಂದ ಮುಜುಗರಕ್ಕೀಡಾದ ಜಗದೀಶ್ ಓಗ್ಲಿ ಬನ್ರಿ ಬನ್ರಿ ಎಂದರಾದರು, ಬೇಕಿಲ್ಲ ಓಗ್ರಿ ಎಂದು ದಿಕ್ಕರಿಸಿ ರವೀಂದ್ರ ರೆಡ್ಡಿ ನಡೆದಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

ನಂತರ ಮುಂದುವರಿದ ಸಂದರ್ಶನದಲ್ಲಿ ಸಿನಿಮಾ ತಂಡದ ಕ್ಷಮೆ ಕೋರಿರುವ ಜಗದೀಶ್, ದರ್ಶನ್ ಬಗ್ಗೆ ನನಗೂ ಅಭಿಮಾನವಿದೆ. ನಾನು ಅಭಿಮಾನಿಯೇ.. ನೋಡಿ ದರ್ಶನ್ ಅವರ ಅಭಿಮಾನಿಗಳು ಎಲ್ ಎಲ್ ಇದ್ದಾರೆ. ಅವರೊಂದು ಹಿರಿಯ ನಟ, ಅವರ ಸಲಹೆ ನಮಗೆಲ್ಲ ಬೇಕು, ದರ್ಶನ್ ಆಕಾಶದಲ್ಲಿ ಸೂರ್ಯ ಇದ್ದಂತೆ ಎಂದು ತೇಪೆ ಹಚ್ಚಲು ಮುಂದಾದರು.

ಜಗದೀಶ್ ಮಾತಿಗೆ ಬ್ರೇಕ್ ಹಾಕಿದ ತಡೆದ ನಟ ಅಂಜನ್ ರಾಮಚಂದ್ರ, ಜನರನ್ನು ತಲುಪು ಸಲುವಾಗಿ ನಿಮ್ಮ ಮೂಲಕ ಈ ಪ್ರಮಖಷನ್ ಭಾಗವಹಿಸಿದ್ದೇವೆ. ಆದರೆ ನೀವು ಪದೇ ಪದೇ ದರ್ಶನ್ ಸರ್ ಅವರ ಹೆಸರು ಬಳಸಿದ್ದು ಎಲ್ಲಿಂದ ಎಲ್ಲಿಗೋ ಹೋಗುತ್ತದೆ.

ನಮಗೆ ದರ್ಶನ್ ಸರ್ ಅಂದರೆ ಅಪಾರ ಪ್ರೀತಿ ದಯವಿಟ್ಟು ಇಲ್ಲಿಂದ ಬಿಟ್ಟು ಬಿಡಿ ಎಂದಿದ್ದಾರೆ.

ರಾಜಕೀಯ

ಮಹಾರಾಷ್ಟ್ರ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ

ಮಹಾರಾಷ್ಟ್ರ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಗೆಲುವು: ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ

ಮಹಾರಾಷ್ಟ್ರದ ಪ್ರತಿಷ್ಠಿತ ಬೃಹತ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಪುಣೆ, ನಾಗಪೂರ ಸೇರಿದಂತೆ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಬಿಜೆಪಿ (BJP) ಮತ್ತು ಶಿವಸೇನೆ (ಏಕನಾಥ ಸಿಂಧೆ ಬಣ) ದೊಡ್ಡ ಪ್ರಮಾಣದಲ್ಲಿ ಜಯಗಳಿಸಿದ್ದಾರೆ.

[ccc_my_favorite_select_button post_id="118518"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರ ಸಾವು..!

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಗಾಳಿಪಟ ಹಾರಿಸುವ ಮಾಂಜಾ ದಾರ (Maanja thread) ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ನಡೆದಿದೆ.

[ccc_my_favorite_select_button post_id="118471"]
ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ದೊಡ್ಡಬಳ್ಳಾಪುರ: 2 ಪ್ರತ್ಯೇಕ ಕಾರು ಅಪಘಾತ.. ಗಾಯಾಳುಗಳು ಆಸ್ಪತ್ರೆಗೆ

ಇಂದು ಸಂಭವಿಸಿದ ಎರಡು ಪ್ರತ್ಯೇಕ ಕಾರುಗಳ ಅಪಘಾತದಲ್ಲಿ (Accident) ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ.

[ccc_my_favorite_select_button post_id="118357"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!