ಹರಿತಲೇಖನಿ ದಿನಕ್ಕೊಂದು ಕಥೆ: ಪರಿವರ್ತನೆ| Daily Story

Daily Story: ಒಂದೂರಿನಲ್ಲಿ ಒಬ್ಬ ರಾಜನಿದ್ದ. ಈ ಅರಸ ಬಹಳ ಹೃದಯವಂತ; ಆದರೆ, ಅಷ್ಟೇ ಸೋಮಾರಿ. ತನ್ನ ‘ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಡುವುದಿರಲಿ, ಸ್ವತಃ ಪ್ರಜೆಗಳನ್ನೂ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ.

ಅರಸ ಮಾಡುತ್ತಿದ್ದುದು ಎರಡೇ ಕೆಲಸ. ಒಂದು ತಿನ್ನುವುದು, ಇನ್ನೊಂದು ಮಲಗುವುದು. ಬರ ಬರುತ್ತಾ ಅವನ ಆರೋಗ್ಯ ಹದಗೆಡತೊಡಗಿತು. ದೇಹದಲ್ಲಿ ಬೊಜ್ಜು ತುಂಬಿ ಅನಾರೋಗ್ಯ ಪೀಡಿತನಾದ. ಎದ್ದೇಳಲೂ ಆಗದಂತಹ ಪರಿಸ್ಥಿತಿ ಬಂತು.

ತನ್ನ ಮಂತ್ರಿಯನ್ನು ಕರೆದು ಅರಮನೆಗೇ ವೈದ್ಯರನ್ನು ಕರೆಯಲು ಆಜ್ಞೆ ಮಾಡಿದ. ಆದರೆ ಯಾವ ವೈದ್ಯರೂ ರಾಜನ ಬಳಿ ಬರಲಿಲ್ಲ. ಆಗ ಒಬ್ಬ ಪ್ರಜೆ ಬಂದು ರಾಜನ ಬಳಿ ಹೀಗೆ ಹೇಳಿದ:

‘ಪ್ರಭುಗಳೇ, ಇಲ್ಲೇ ಎರಡು ಕಿಲೋ ಮೀಟರ್ ದೂರದಲ್ಲಿ ಒಬ್ಬ ಸಾಧು ಇದ್ದಾನೆ. ಆತ ಬೊಜ್ಜಿನಿಂದ ಬರುವ ಕಾಯಿಲೆಗೆ ಒಳ್ಳೆಯ ಔಷಧಿ ಕೊಡುತ್ತಾನೆ. ಆತ ಕೊಡುವ ಮದ್ದಿನಿಂದ ಬೊಜ್ಜು ಕರಗಿ ಬೇಗನೆ ಕಾಯಿಲೆ ವಾಸಿಯಾಗುತ್ತದೆ’ ಎಂದ.

‘ಆ ಸಾಧು ಸಂತನನ್ನು ಅರಮನೆಗೆ ಬರಹೇಳು’ ಎಂದು ಆಜ್ಞೆ ಮಾಡಿದ ಮಹಾರಾಜ.

‘ಪ್ರಭುಗಳೇ, ಆ ಸಾಧು ಸಂತ ಅರಮನೆಗೆ ಬರಲಾರ; ತಾವೇ ಅಲ್ಲಿಗೆ ದಯಮಾಡಿಸಬೇಕು. ಅದೂ ಕೂಡ ಯಾವುದೇ ವಾಹನದಲ್ಲಿ ಹೋಗುವಂತಿಲ್ಲ; ಕಾಲ್ನಡಿಗೆಯಲ್ಲೇ ಹೋಗಬೇಕು. ಹಾಗಿದ್ದರೆ ಮಾತ್ರ. ಆತ ಚಿಕಿತ್ಸೆ ಕೊಡುತ್ತಾನೆ’ ಎಂದ.

ಕೊನೆಗೂ ರಾಜ ಹೇಗೋ ಪ್ರಯಾಸಪಟ್ಟು ನಡೆದುಕೊಂಡೇ ಸಾಧು ಸಂತನ ಆಶ್ರಮಕ್ಕೆ ಹೋದ. ಆದರೆ ಅಲ್ಲಿ ಆ ಸಾಧು ಸಂತ ಇರಲೇ ಇಲ್ಲ. ಮರುದಿನ ಪುನಃ ರಾಜ ನಡೆದುಕೊಂಡೇ ಚಿಕಿತ್ಸೆಗಾಗಿ ತೆರಳಿದ. ಮಾರನೆ ದಿನವೂ ಸಾಧುಸಂತ ಕಣ್ಮರೆ.

ಮೂರನೆ ದಿನ, ನಾಲ್ಕನೆ ದಿನ… ಹೀಗೆ ಒಂದು ತಿಂಗಳು ಪೂರ್ತಿ ಎರಡೆರಡು ಕಿಲೋ ಮೀಟರ್ ನಡೆದುಕೊಂಡೇ ಆಶ್ರಮಕ್ಕೆ ಹೋಗಿ ಬಂದ ಆ ಮಹಾರಾಜ. ಒಂದು ತಿಂಗಳು ಕಳೆದು ಮತ್ತೊಂದು ದಿನ ಮಹಾರಾಜ ಆಶ್ರಮಕ್ಕೆ ಬಂದಾಗ ಸಾಧು ಸಂತ ಪ್ರತ್ಯಕ್ಷನಾದ.

ಅಷ್ಟು ಹೊತ್ತಿಗೆ ಮಹಾರಾಜನ ಬೊಜ್ಜು ಕರಗಿ ತೂಕವೂ ಬಹಳಷ್ಟು ಇಳಿದು ಹೋಗಿತ್ತು. ಅರಸನ ಆರೋಗ್ಯ ಸಾಕಷ್ಟು ಸುಧಾರಿಸತೊಡಗಿತ್ತು.

ಕೊನೆಯ ದಿನ ಮಹಾರಾಜನನ್ನು ಪರೀಕ್ಷೆ ಮಾಡಿದ ಸಾಧು ಸಂತ, ‘ಪ್ರಭು… ನೀವು ಬರೀ ತಿಂದು ಮಲಗಿದರೆ ಇದೇ ರೀತಿ ತೂಕ ಏರಿ ಬೊಜ್ಜು ತುಂಬಿ ಆರೋಗ್ಯ ಹದಗೆಡುತ್ತದೆ. ಅದಕ್ಕಾಗಿ ದಿನ ನಿತ್ಯ ಐದೈದು ಕಿಲೋಮೀಟರ್ ನಡೆಯಬೇಕು.
ನೀವು ಬೊಜ್ಜು ಕರಗಿಸಿಕೊಳ್ಳಬೇಕು ಎಂದೇ ನಾನು ಒಂದು ತಿಂಗಳು ನೀವು ಬರುವ ಹೊತ್ತಿನಲ್ಲಿ ಮರೆಯಲ್ಲಿ ಇರುತ್ತಿದ್ದೆ. ಆದರೆ ನಿಮ್ಮ ದೈಹಿಕ ಸ್ಥಿತಿಯನ್ನು ಗಮನಿಸುತ್ತಲೇ ಇದ್ದೆ. ಈಗ ನೀವು ಆರಾಮವಾಗಿದ್ದೀರಿ. ಪ್ರತಿನಿತ್ಯ ಬರೀ ತಿಂದು ಮಲಗುವುದನ್ನು ಬಿಟ್ಟು ರಾಜ್ಯದ ಜನರ ಹಿತಾಸಕ್ತಿ ಗಮನಿಸಿ. ಆರೋಗ್ಯದ ಕಡೆ ನಿಗಾ ವಹಿಸಿ, ನಡಿಗೆಯನ್ನು ಸತತವಾಗಿ ಮಾಡಿ. ನೀವು ದೀರ್ಘಕಾಲ ಬಾಳುವಿರಿ..’ ಎಂದು ಸಲಹೆ ಕೊಟ್ಟ.

ರಾಜ ಸೋಮಾರಿತನ ಬಿಟ್ಟ. ಸಾಧುಸಂತನ ಮಾತನ್ನು ಚಾಚೂ ತಪ್ಪದೆ ಪಾಲಿಸತೊಡಗಿದ. ಬೇಗ ಆರೋಗ್ಯವಂತನಾದ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಒಂದೇ ತಿಂಗಳಲ್ಲಿ ಸಾಕಷ್ಟು ಮನ ಪರಿವರ್ತನೆ ಮಾಡಿಕೊಂಡ. ಪ್ರಜೆಗಳ ಕಷ್ಟ ಸುಖ ವಿಚಾರಿಸತೊಡಗಿದ. ಉತ್ತಮ ಆಡಳಿತ ನೀಡಿದ. ಪ್ರಜೆಗಳೆಲ್ಲರಿಗೂ ಖುಷಿ, ಸಮಾಧಾನವಾಯಿತು.p

ರಾಜಕೀಯ

ನಾಳೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: ಮತಗಟ್ಟೆಗೆ ತೆರಳಿದ ಅಧಿಕಾರಿಗಳು

ನಾಳೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: ಮತಗಟ್ಟೆಗೆ ತೆರಳಿದ ಅಧಿಕಾರಿಗಳು

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ (Bashettihalli town panchayat election) ಹಾಗೂ ದೊಡ್ಡಬಳ್ಳಾಪುರ ನಗರಸಭೆಯ 21ನೇ ವಾರ್ಡ್ ನ ಹೇಮಾವತಿಪೇಟೆ ಉಪ ಚುನಾವಣೆ ಡಿ.21ರಂದು ನಡೆಯಲಿದ್ದು, ಚುನಾವಣಾ ಆಯೋಗ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ ಪಟ್ಟಣ

[ccc_my_favorite_select_button post_id="117576"]
ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ಕಲಾವಿದರಾದ ಉಮೇಶ್, ರಾಮಚಂದ್ರಯ್ಯ ಅವರಿಗೆ ದೊಡ್ಡಬಳ್ಳಾಪುರದಲ್ಲಿ ನುಡಿನಮನ

ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಚಲನಚಿತ್ರ ಹಾಸ್ಯ ನಟ ಉಮೇಶ್ (Umesh) ಮತ್ತು ಜಾನಪದ ಕಲಾವಿದ ಶ್ಯಾಕಲದೇವನಪುರ ರಾಮಚಂದ್ರಯ್ಯ (Ramachandraiah) ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. 

[ccc_my_favorite_select_button post_id="117539"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ದೊಡ್ಡಬಳ್ಳಾಪುರದ ಎಂ.ಆ‌ರ್.ಜಾಹ್ನವಿಗೆ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ

ಇಲ್ಲಿನ ನಿಸರ್ಗ ಯೋಗ ಕೇಂದ್ರದ ಯೋಗಪಟು ಎಂ. ಆರ್. ಜಾಹ್ನವಿ (M.R. Jahnavi) ಅವರಿಗೆ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ 2023-24ನೇ ಸಾಲಿಗೆ ನೀಡಲಾಗುವ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ಬಾಲ

[ccc_my_favorite_select_button post_id="117462"]
ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ದೊಡ್ಡಬಳ್ಳಾಪುರ: ನೀರಿಲ್ಲದ ಪಾಳು ಬಾವಿಗೆ ಬಿದ್ದು ವ್ಯಕ್ತಿ ಸಾವು..!

ಸುಮಾರು 40 ಅಡಿ ಆಳದ ಪಾಳು ಬಾವಿಗೆ (Water well) ಬಿದ್ದು ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ್ದು, ಶನಿವಾರ ಬೆಳಕಿಗೆ ಬಂದಿದೆ.

[ccc_my_favorite_select_button post_id="117569"]
ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ದೊಡ್ಡಬಳ್ಳಾಪುರ; ಕಂಟೇನರ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು..

ಕಂಟೇನರ್ (container) ಚಾಲಕ ನಿರ್ಲಕ್ಷ್ಯದಿಂದ ಏಕಾಏಕಿ ತಿರುವ ಪಡೆದ ವೇಳೆ ಎದುರು ರಸ್ತೆಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ‌ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ (Bike) ಸವಾರ ಸಾವನಪ್ಪಿರುವ ಘಟನೆ ಕನ್ನಮಂಗಲ ಗೇಟ್ ಬಳಿ

[ccc_my_favorite_select_button post_id="117565"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]
error: Content is protected !!