Astrology: Likely to be a memorable day

Astrology: ಜ.15 ದಿನ ಭವಿಷ್ಯ: ಈ ರಾಶಿಯವರು ಮಾಟ ಮಂತ್ರ ಪ್ರಯೋಗದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ – ಎನ್ಎಸ್ ಶರ್ಮ

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಬಿದಿಗೆ ಜ.15 2025 ಬುಧವಾರ: ವಿಶೇಷವಾಗಿ ಮಹಾ ವಿಷ್ಣು ವಿನ ದೇವಸ್ಥಾನದಲ್ಲಿ ಅರ್ಚನೆ ಪೂಜೆ ಮಾಡಿಸುವುದರಿಂದ ದಿನವೂ ಶುಭವಾಗುತ್ತದೆ.. Astrology

ಮೇಷ ರಾಶಿ: ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿ ಮುಂದೆ ಬಂದಿದ್ದೀರಾ. ಆದರೆ ಈಗ ಸುಖ ಸಂತೋಷ ನೆಮ್ಮದಿ ಸಿಗಲು ಪ್ರಾರಂಭವಾಗುತ್ತಿದೆ. ಎಲ್ಲವೂ ಸಹ ಅನುಕೂಲವಾಗುತ್ತದೆ ಚಿಂತ ಬೇಡ. (ಪರಿಹಾರಕ್ಕಾಗಿ ಆಂಜನೇಯನ ದೇವಸ್ಥಾನದಲ್ಲಿ ಪೂಜೆ ಮಾಡಿಸಿ)

ವೃಷಭ ರಾಶಿ: ವಂಚನೆ ಮತ್ತು ಸಣ್ಣಪುಟ್ಟ ಮೋಸ ಮಾಡುವವರಿಂದ ದೂರವಿರಿ, ಇದರಿಂದ ತೊಂದರೆ ಸಾಕಷ್ಟಾಗುತ್ತದೆ.. ಎಚ್ಚರಿಕೆ ಬಹಳ ಮುಖ್ಯ, ಅನುಮಾನದಲ್ಲಿ ವ್ಯವಹರಿಸಬೇಡಿ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಆರಾಧನೆ ಮಾಡಿ )

ಮಿಥುನ ರಾಶಿ: ಭಯ ಬೀಳು ಅಗತ್ಯವಿಲ್ಲ. ನಿಮ್ಮ ಕೆಲಸಗಳನ್ನು ಬಲಿಷ್ಠವಾಗಿ ಮಾಡಿದ್ದೀರಿ ಅದರ ಪ್ರತಿಫಲ ನಿಮಗೆ ಸಿಗುತ್ತದೆ. ಹೆಚ್ಚು ಚಿಂತೆ ಬೇಡ ಸುಖವಾಗುತ್ತದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)

ಕಟಕ ರಾಶಿ: ಅಧಿಕವಾದ ತಿರುಗಾಟ, ಮನಸ್ಸಿಗೆ ನೆಮ್ಮದಿ ಇಲ್ಲ.. ಆದರೂ ಕಾರ್ಯವನ್ನು ಮಾಡಬೇಕು, ಎಚ್ಚರಿಕೆವಹಿಸುವುದು ಬಹಳ ಮುಖ್ಯ. ಸ್ವಲ್ಪ ನಿಧಾನವಾದರೂ ಶುಭವಾಗುತ್ತದೆ. (ಪರಿಹಾರಕ್ಕಾಗಿ ದಕ್ಷಿಣ ಮೂರ್ತಿ ಸ್ತೋತ್ರವನ್ನು ಪಾರಾಯಣ ಮಾಡಿಕೊಳ್ಳಿ)

ಸಿಂಹ ರಾಶಿ: ಅತಿಯಾದ ಆಯಾಸ. ಯಾಕೋ ನೆಮ್ಮದಿ ಇಲ್ಲ, ಈ ಜೀವನದಲ್ಲಿ ಎಂಬ ನಿಟ್ಟುಸಿರು‌. ಆದರೆ ಒಂದೇ ಬಾರಿ ಶುಭವಾಗುವುದು ಸ್ವಲ್ಪ ಕಠಿಣವಾಗಿದೆ. ಧನಾಗಮದಲ್ಲಿ ಸ್ವಲ್ಪ ಕೊರತೆ ಏರುಪೇರು, ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕುಂಟಿತ. (ಪರಿಹಾರಕ್ಕಾಗಿ ಶ್ರೀ ಕೃಷ್ಣನ ಸ್ಮರಣೆಯನ್ನು ಮಾಡಿ)

ಕನ್ಯಾ ರಾಶಿ: ಮಾಟ ಮಂತ್ರ ಪ್ರಯೋಗದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.. ಇವುಗಳಿಂದ ನಿಮಗೆ ಏನು ಮಾಡಲು ಸಾಧ್ಯವಾಗುವುದಿಲ್ಲ. ಎಚ್ಚರಿಕೆ ಇರಬೇಕು, ಧೈರ್ಯವನ್ನು ಮಾಡಿ ಇಟ್ಟ ಗುರಿಯನ್ನು ಸಾಧಿಸಿ ಶುಭವಾಗುತ್ತದೆ‌. (ಪರಿಹಾರಕ್ಕಾಗಿ ಸಿದ್ದಲಕ್ಷ್ಮಿ ಸ್ತೋತ್ರವನ್ನು ಪಠಿಸಿ)

ತುಲಾ ರಾಶಿ: ಅವಶ್ಯಕತೆಗೆ ತಕ್ಕಂತೆ ಬದಲಾಗಬಾರದು. ಜೀವನದಲ್ಲಿ ವಿಶೇಷವಾದ ಧ್ಯೇಯ ಉದ್ದೇಶ ಇರಬೇಕು.. ಮಾತಿನಲ್ಲಿ ಹಿಡಿತವಿರಲಿ, ಸಂಕಲ್ಪದಲ್ಲಿ ಮುಂದಿನ ಜೀವನವು ಕಾಣುವಂತೆ ವ್ಯವಸ್ಥೆ ಮಾಡಿ.(ಪರಿಹಾರಕ್ಕಾಗಿ ನರಸಿಂಹ ಗಾಯತ್ರಿಯನ್ನು ಜಪಿಸಿ)

ವೃಶ್ಚಿಕ ರಾಶಿ: ಆರೋಗ್ಯದ ವಿಚಾರದಲ್ಲಿ ಸ್ವಲ್ಪ ತೊಂದರೆ. ಸ್ವಲ್ಪ ಧನದ ಭಾದೆಗಳು, ಮನಸ್ಸಿನಲ್ಲಿ ನೆಮ್ಮದಿ ಇರುವುದಿಲ್ಲ. ದೃಢವಾದ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಕಠಿಣ, ಅತಿಯಾದ ಆಸೆಯನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ದುರ್ಗಾದೇವಿಗೆ ಕುಂಕುಮರ್ಚನೆ ಮಾಡಿಸಿ)

ಧನಸ್ಸು ರಾಶಿ: ಅತಿಯಾದ ಆಲೋಚನೆ.. ದೀರ್ಘವಾದ ಚಿಂತನೆ. ಆದರೆ ಪ್ರಯತ್ನದಲ್ಲಿ ಇರುತ್ತೀರಿ, ಪರ ತೀರ ಕಮ್ಮಿ. ಪ್ರಯತ್ನವೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಪೋಲಾಗುತ್ತಿರುತ್ತದೆ.. ಗಮನಿಸಿ ಒಂದೇ ನೇರವಾದ ರೀತಿಯಲ್ಲಿ ಗುರಿಯಾಗಿರಿಸಿ ಕಾರ್ಯವನ್ನು ಮಾಡಿ, ಶುಭವಾಗುತ್ತದೆ. ( ಪರಿಹಾರಕ್ಕಾಗಿ ಸೂರ್ಯನಾರಾಯಣನ ಸ್ಮರಣೆ ಪೂಜೆ ಮಾಡಿ)

ಮಕರ ರಾಶಿ: ಸುಮ್ಮನೆ ತಿರುಗಾಟ, ಕೆಲಸ ಕಾರ್ಯಗಳಲ್ಲಿ ತೊಂದರೆ. ಜೀವನದಲ್ಲಿ ಇರುವುದಕ್ಕಿಂತ ಇಲ್ಲದೇ ಇರುವುದರ ಮೇಲೆ ವಿಪರೀತವಾದ ಆಸೆ, ಅತಿಯಾದ ನಂಬಿಕೆ. ಆದರೆ ಎಲ್ಲದಕ್ಕೂ ಸಮಯ ಬರಬೇಕು.. ನಿಧಾನವಾಗಿ ಕಾಯಿರಿ ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ದತ್ತಾತ್ರೇಯರ ಆರಾಧನೆ ಮಾಡಿ)

ಕುಂಭ ರಾಶಿ: ಏನು ಲಾಭವಿಲ್ಲ ಎಂದು ಚಿಂತಿಸಬೇಡಿ ನೀವು ಮಾಡುತ್ತಿರುವ ಕೆಲಸದಲ್ಲಿ ಲಾಭವಿದೆ. ಆದರೆ ಸಮಯ ತೆಗೆದುಕೊಳ್ಳುತ್ತದೆ. ನಿಧಾನವಾಗಿ ಆಲೋಚಿಸಿ ಕಾರ್ಯಗಳನ್ನು ಮಾಡಿ, ಯಶಸ್ವಿ ಆಗುತ್ತೀರಾ.. ವಿದ್ಯೆಯಲ್ಲೂ ಅನುಕೂಲ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು. (ಪರಿಹಾರಕ್ಕಾಗಿ ಮಹೇಶ್ವರನನ್ನು ಆರಾಧನೆ ಮಾಡಿ)

ಮೀನ ರಾಶಿ: ಅನಾವಶ್ಯಕ ಯೋಚನೆ, ನನ್ನ ಹಣೆಯ ಬರಹ ಈಗಾಯಿತಲ್ಲ ಎಂಬ ಚಿಂತೆ, ಮಾನಸಿಕ ತಾಳಮಳ, ವಾಪಸ್ ಆಗುವುದಿಲ್ಲ ಎಂಬ ಚಿಂತೆ, ಧನಾರ್ಜನಿಗೆ ಸ್ವಲ್ಪ ತೊಂದರೆ, ವಿದ್ಯಾವಂತರಿಗೆ ಅನುಕೂಲ, ಸ್ವಲ್ಪ ಅನಾರೋಗ್ಯ. (ಪರಿಹಾರಕ್ಕಾಗಿ ಧನ್ವಂತರಿ ಮೂಲ ಮಂತ್ರ ಜಪ ಮಾಡಿ)

ರಾಹುಕಾಲ: 12-೦೦PM ರಿಂದ 1-3೦PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.

ರಾಜಕೀಯ

ಮುಸ್ಲಿಮರು ಹಿಂದೂಗಳಂತೆಯೇ ನಮಗೆ ಪ್ರಿಯರು: ನಿತಿನ್ ಗಡ್ಕರಿ

ಮುಸ್ಲಿಮರು ಹಿಂದೂಗಳಂತೆಯೇ ನಮಗೆ ಪ್ರಿಯರು: ನಿತಿನ್ ಗಡ್ಕರಿ

ಬಿಜೆಪಿ (BJP) ಸಿದ್ಧಾಂತವು ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಕೆಲಸ ಮಾಡುವಂತೆ ಕಲಿಸುತ್ತದೆ ಮತ್ತು ಅದು ಮುಸ್ಲಿಮರ ವಿರುದ್ಧವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.

[ccc_my_favorite_select_button post_id="118311"]
ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ ಕ್ಯಾಲೆಂಡರ್ ಬಿಡುಗಡೆ

ರಾಜ್ಯ ಸರ್ಕಾರಿ ನೌಕರ ಸಂಘದ (State Government Employees Association) 2026ನೇ ವರ್ಷದ ಕ್ಯಾಲೆಂಡರ್ (Calendar) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಬಿಡುಗಡೆ ಮಾಡಿ, ಸರ್ಕಾರಿ ನೌಕರರಿಗೆ ಹೊಸ ವರ್ಷದ ಶುಭಾಶಯ ಕೋರಿದರು.‌

[ccc_my_favorite_select_button post_id="117770"]
ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ, ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎಂಬುದು ಸತ್ಯ. ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.

[ccc_my_favorite_select_button post_id="117699"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ಕ್ರೀಡಾಪಟುಗಳಿಂದ ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ (Athletes) 2025-26ನೇ ಸಾಲಿನಲ್ಲಿ ಪ್ರೋತ್ಸಾಹಧನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ (Applications invited).

[ccc_my_favorite_select_button post_id="118180"]
ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್ ಕುಮಾರಸ್ವಾಮಿ

ಅಸೆಂಬ್ಲಿ ಚುನಾವಣೆ 2028; 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ NDA ಗೆಲ್ಲುತ್ತೆ ಎಂದ ನಿಖಿಲ್

ಮುಂದಿನ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಎನ್ಡಿಎ (NDA) ಮೈತ್ರಿಕೂಟವು 150 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಆ ನಿಟ್ಟಿನಲ್ಲಿ ಎರಡೂ ಪಕ್ಷಗಳು ಸೇರಿ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

[ccc_my_favorite_select_button post_id="118301"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರರಿಗೆ ಗಂಭೀರ ಗಾಯ

ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ (Accident) ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ **** ಹಾಗೂ *** ನಡುವೆ ಸಂಭವಿಸಿದೆ.

[ccc_my_favorite_select_button post_id="118304"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!