Daily story: Infatuation that hurts

ಹರಿತಲೇಖನಿ ದಿನಕ್ಕೊಂದು ಕಥೆ: ನೋವನ್ನುಂಟು ಮಾಡುವ ಮೋಹ

Daily story; ಇತ್ತೀಚಿಗೆ ಒಂದು ಬೋಡೊ ಭಾಷೆಯ ಕಥೆಯನ್ನು ಇಂಗ್ಲಿಷ್‌ನಲ್ಲಿ ಓದಿದೆ. ಧುಬಡಿ ಎಂಬ ಊರಿನಲ್ಲಿ ಶಾಲಾ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಯಾದವ ಬೋರಾ ಎಂಬ ವ್ಯಕ್ತಿ ಮುಖ್ಯ ಗುಮಾಸ್ತ.

ಈತನ ಮೇಲೆ ಸಬ್‍ ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಇದ್ದಾರೆ. ಯಾದವ ಬೋರಾ ಕೂರುವುದು ಕಚೇರಿಯ ಒಂದು ಮೂಲೆಯಲ್ಲಿದ್ದ ಕೊಠಡಿಯಲ್ಲಿ. ಹಳೆಯ ಮರದ ಮೇಜು, ಅದರ ಮೇಲೆ ಹಸಿರು ಪ್ಲಾಸ್ಟಿಕ್ ಬಟ್ಟೆ ಹೊದಿಸಿದ್ದಾರೆ.

ಮೇಜಿನ ಮೇಲೆಲ್ಲ ಫೈಲುಗಳು. ಒಂದೆರಡು ಬಳಸಿ, ಬಳಸಿ ನುಣುಪಾದ ಕಲ್ಲುಗಳು ಕಾಗದಗಳು ಹಾರಿ­ಹೋಗ­ದಂತೆ ನೋಡಿಕೊಳ್ಳುತ್ತವೆ.

ಮೇಜಿನ ಮಧ್ಯದಲ್ಲಿರುವುದು ಹೊಳೆಹೊಳೆವ ಕರೆಗಂಟೆ. ಯಾದವ ಬೋರಾನಿಗೆ ಈ ಕರೆಗಂಟೆ ಅಧಿಕಾರದ ಲಾಂಛನ. ಅದು ಬ್ರಿಟಿಷರ ಕಾಲದ ಗಂಟೆ.

ಬೋರಾನ ಅಧಿಕಾರಿಗಳ ಹತ್ತಿರವೂ ಕರೆಗಂಟೆ­ಗಳಿದ್ದರೂ ಅವುಗಳ ಧ್ವನಿ ಇಷ್ಟು ತೀಕ್ಷ್ಣವಾಗಿಲ್ಲ. ಅದಲ್ಲದೇ ಅವು ಹಲ­ವಾರು ಬಾರಿ ಬದಲಾಗಿವೆ. ಆದರೆ, ಬೋರಾನ ಕರೆಗಂಟೆ ಮಾತ್ರ ದಶಕ­ಗಳಿಂದ ಹಾಗೆಯೇ ಇದೆ.

ತಾನು ಎರಡನೇ ದರ್ಜೆ ಗುಮಾಸ್ತನಾಗಿ­ದ್ದಾಗಿ­ನಿಂದ ಈ ಕರೆಗಂಟೆಯನ್ನು ಕೇಳಿದ್ದಾನೆ. ತಾನೂ ಮುಂದೆ ಮುಖ್ಯ ಗುಮಾಸ್ತ­ನಾದ ಮೇಲೆ ತನಗೂ ಆ ಕರೆಗಂಟೆ ಒತ್ತುವ ಅವಕಾಶ ಬರುತ್ತದೆಂದು ಕನಸು ಕಂಡಿದ್ದಾನೆ.

ಅದೇನು ಶಕ್ತಿ ಆ ಕರೆಗಂಟೆಗೆ! ಅದರ ಸ್ಪ್ರಿಂಗ್‌ಗಳನ್ನು ತಿರುಗಿಸಿ ಬಟನ್ ಮೇಲೆ ಬೆರಳಿಟ್ಟು ಒತ್ತಿದರೆ ಇಡೀ ಆಫೀಸಿನ ಮೂಲೆ ಮೂಲೆಗೂ ಅದರ ಧ್ವನಿ ಕೇಳಿಸುತ್ತದೆ. ಅಷ್ಟೇ ಅಲ್ಲ, ಮುಖ್ಯ ಗುಮಾಸ್ತರ ಸೇವೆಗೆಂದು ಇದ್ದ ಮೂವರಲ್ಲಿ ಒಬ್ಬ ಓಡಿ ಬರುತ್ತಾನೆ.

ಕೈ ಕಟ್ಟಿ, ‘ಏನಪ್ಪಣೆ ಬಾಬೂ?’ ಎಂದು ವಿನಯದಿಂದ ಕೇಳುತ್ತಾನೆ. ಆರಡಿ ಎತ್ತರದ ಮನುಷ್ಯ­ನೊಬ್ಬನನ್ನು ತನ್ನ ಧ್ವನಿಯಿಂದ ಓಡಿ ಬರುವಂತೆ ಮಾಡುವ ಕರೆಗಂಟೆಯ ಶಕ್ತಿ ಸಣ್ಣದೇ?

ಇಂದು ಯಾದವ ಬೋರಾ ಕರೆ­ಗಂಟೆಯನ್ನು ಮೇಲಿಂದ ಮೇಲೆ ಬಾರಿಸುತ್ತಿದ್ದಾನೆ. ಸದ್ದು ಕೇಳಿ ಒಳಬಂದ ಸೇವಕನಿಗೆ ಒಂದು ಕೆಲಸ ಹೇಳಿ ಆತ ಕೊಠಡಿಯಿಂದ ಹೊರಡುವ ಮೊದಲೇ ಮತ್ತೊಮ್ಮೆ ಗಂಟೆ ಬಾರಿಸುತ್ತಾನೆ.

ಇವರ ಕೈಕೆಳಗೆ ಕೆಲಸಮಾಡುವ ಮತ್ತೊಬ್ಬ ಗುಮಾಸ್ತ ಕೇಳಿದ, ‘ಬಾಬೂ ಇವತ್ತು ನಿಮ್ಮ ಕರೆಗಂಟೆ ನಿಲ್ಲುವಂತೆ ಕಾಣುವುದಿಲ್ಲ. ಏನು ವಿಶೇಷ?’ ದುಃಖ ತುಂಬಿದ ಧ್ವನಿಯಲ್ಲಿ ಯಾದವ ಬೋರಾ ಹೇಳಿದ, ‘ನಿನಗೆ ಇದರ ಮರ್ಮ ಅರ್ಥವಾಗುವುದಿಲ್ಲ ಮಗೂ. ಇಂದು ನನ್ನ ಸೇವೆಯ ಕೊನೆಯ ದಿನ.

ನಾಳೆಯಿಂದ ನಾನು ಕಚೇರಿಗೆ ಬರುವುದಿಲ್ಲ. ಇಂದೇ ನನ್ನ ಪ್ರೀತಿಯ ಈ ಕರೆಗಂಟೆಯನ್ನು ಬಾರಿಸುವ ಕೊನೆಯ ದಿನ. ನಾಳೆ ನಾನು ಕರೆಗಂಟೆ ಇಲ್ಲದೇ ಹೇಗಿರುತ್ತೇನೋ ತಿಳಿಯದು’. ಹೀಗೆ ಹೇಳಿ ತನ್ನ ಕರವಸ್ತ್ರದಿಂದ ಆ ಕರೆ­ಗಂಟೆಯನ್ನು ನಯವಾಗಿ ಒರೆಸಿ ಅದರ ಮೇಲೆ ಬೆರಳಾಡಿಸಿದ.

ಈ ಮಾತು­ಗಳನ್ನು ಕೇಳುತ್ತಿದ್ದ ಸೇವಕನೊಬ್ಬ ಹೇಳಿದ, ‘ಬಾಬೂ, ನಾವೆಲ್ಲ ಸಾಹೇಬ­ರಿಗೆ ಹೇಳಿ ಈ ಕರೆಗಂಟೆಯನ್ನು ನಿಮಗೇ ಕೊಡುವಂತೆ ಕೇಳುತ್ತೇವೆ. ನೀವು ಮನೆಯಲ್ಲಿ ಕುಳಿತು ಗಂಟೆ ಬಾರಿಸಿದರೆ ನಿಮ್ಮ ಹೆಂಡತಿ, ಮಕ್ಕಳು ಓಡಿ ಬರುತ್ತಾರೆ’. ಎಲ್ಲರೂ ನಕ್ಕರು. ಆದರೆ ಯಾದವ ಬೋರಾ ನಗಲಿಲ್ಲ. ಮರುದಿನ ಯಾದವ ಬೋರಾನಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಆಫೀಸಿನಿಂದ ಹೊರಡುವಾಗ ತಮ್ಮ ಕರೆಗಂಟೆಯನ್ನು ಮೇಜಿನ ಮೇಲೆಯೇ ಇಟ್ಟು ಹೊರಟಾಗ ತುಂಬ ಹತ್ತಿರದವರು ಯಾರೋ ತೀರಿ­ಹೋದಂತೆ ಭಾಸವಾಗಿ ಎದೆ ಭಾರವಾ­ಯಿತು. ಎದೆ ಬಡಿತ ಹೆಚ್ಚಾಯಿತು. ಮನೆಗೆ ಬಂದಾಗ ಹೆಂಡತಿ, ಮಕ್ಕಳು ಸ್ವಾಗತಿಸಿದರು.

ಯಾದವ ಬೋರಾ ಕುರ್ಚಿಯಲ್ಲಿ ಕುಸಿದು ಕುಳಿತರು. ನಾಳೆಯಿಂದ ಅಧಿಕಾರವಿಲ್ಲ, ಅದರ ಸಂಕೇತವಾದ ಕರೆಗಂಟೆಯಿಲ್ಲ ಎಂಬು­ದನ್ನು ಕಲ್ಪಿಸಲೂ ಸಾಧ್ಯವಾಗಲಿಲ್ಲ. ಅಷ್ಟು ಹೊತ್ತಿಗೆ ಆಫೀಸಿನ ಸೇವಕ ಬಂದ. ‘ಬಾಬೂ, ನಮ್ಮ ಸಾಹೇಬರು, ನೀವು ಅಷ್ಟು ಪ್ರೀತಿಸಿದ ಕರೆಗಂಟೆಯನ್ನು ನಿಮಗೇ ಕೊಡಲು ಹೇಳಿ ಕಳುಹಿಸಿದ್ದಾರೆ, ದಯವಿಟ್ಟು ಸ್ವೀಕರಿಸಿ’ ಎಂದು ಹೇಳಿ ಕರೆಗಂಟೆಯನ್ನು ಕೊಟ್ಟು ಹೋದ. ಬೋರಾನಿಗೆ ಸಂತೋಷದ ಕಾಮನ­ಬಿಲ್ಲು ಕಾಣಿಸಿತು, ಅವೇಶ ಗಗನ­ಕ್ಕೇರಿತು, ಉಸಿರಾಡಲು ಅಸಾಧ್ಯ­ವೆನಿಸಿತು.

ಆದರೂ ನಿಧಾನವಾಗಿ ಬಟನ್ ಮೇಲೆ ಬೆರಳಿಟ್ಟು ಒತ್ತಿದ. ಅದರ ತೀಕ್ಷ್ಣ ಶಬ್ದ ಮನೆಯಲ್ಲಿ ಅನುರಣಿಸಿತು. ಮೊದಲೆಂದೂ ಇಂಥ ಶಬ್ದ ಕೇಳಿರದ ಹೆಂಡತಿ ಮಕ್ಕಳು ಓಡಿ ಬಂದರು. ಯಾದವ ಬೋರಾನ ಬೆರಳು ಇನ್ನೂ ಕರೆಗಂಟೆಯ ಬಟನ್ ಮೇಲೆಯೇ ಇತ್ತು. ಆದರೆ ಅತಿಯಾದ ಅವೇಶದ ಹೃದಯಾಘಾತದಿಂದ ಅವನ ಪ್ರಾಣಪಕ್ಷಿ ಮಾತ್ರ ದೇಹದಲ್ಲಿರಲಿಲ್ಲ.

ಮೋಹದಿಂದ ಪಾರಾಗುವುದು ಬಹಳ ಕಷ್ಟ. ಆದರೆ ಅದನ್ನು ಮಿತಿಯಲ್ಲಿ­ಡು­ವುದು ಕ್ಷೇಮ. ಮೋಹಕ್ಕೂ ನೋವಿಗೂ ಅತ್ಯಂತ ನಿಕಟ ಸಂಬಂಧ. ಮೋಹ ಹೆಚ್ಚಾದಷ್ಟೂ ನೋವು ಅದರ ನೆರಳಲ್ಲೇ ಬಲಿಯುತ್ತದೆ. ಯಾವುದೇ ವಸ್ತು, ವ್ಯಕ್ತಿಯ ಜೊತೆಗಿನ ಅತಿಯಾದ ಮೋಹ, ಆ ವಸ್ತು, ವ್ಯಕ್ತಿ ಮರೆಯಾ­ದೊಡನೆ ನೋವಾಗಿ ಅಮರಿಕೊಳ್ಳು­ತ್ತದೆ, ಜೀವ ಹಿಂಡುತ್ತದೆ.

ಸ್ನೇಹಿತರೆ ಯಾವುದೇ ವಸ್ತು, ವ್ಯಕ್ತಿ, ಹೊನ್ನು, ಮಣ್ಣು ಅಥವಾ ಇನ್ನಾವುದೇ ವಸ್ತುವಿನ ಮೇಲೆ ಪ್ರೀತಿ ಇರಲಿ.ಆದರೆ ಅತಿಯಾದ ಮೋಹ ಬೇಡ. ಏನಂತೀರಿ.

ಕೃಪೆ; ಸಾಮಾಜಿಕ ಜಾಲತಾಣ

ರಾಜಕೀಯ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕ ಸೇರಿ ಹಲವು ರಾಜ್ಯಾಧ್ಯಕ್ಷರ ಘೋಷಣೆ: ಬಿ.ವೈ.ವಿಜಯೇಂದ್ರ

ಅತಿ ಶೀಘ್ರವೇ ಕರ್ನಾಟಕವೂ ಒಳಗೊಂಡಂತೆ ಹಲವು ರಾಜ್ಯಾಧ್ಯಕ್ಷರ ಹೆಸರು ಘೋಷಣೆ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ತಿಳಿಸಿದ್ದಾರೆ

[ccc_my_favorite_select_button post_id="109998"]
ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ ಹೆಚ್.ಕೆ.ಪಾಟೀಲ್ ತಿರುಗೇಟು

ಅವರದ್ ಬಿಡ್ರೀ.. ನೀವ್ ಸಿಎಂ ಆಗಿದ್ದಾಗ ವರದಿಗಳನ್ನು ಏನ್ ಮಾಡ್ದೇ ಹೇಳು; ಹೆಚ್‌ಡಿಕೆಗೆ

ಈಗ ಅಕ್ರಮ ಗಣಿಗಾರಿಕೆ ಪತ್ರದ ಮಾತಾಡುವ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಅಭಿಷೇಕ ಮಾಡಿಕೊಂಡು ಕುಳಿತಿದ್ರಾ; ಸಚಿವ ಹೆಚ್.ಕೆ.ಪಾಟೀಲ್ (H.K.Patil)

[ccc_my_favorite_select_button post_id="109884"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

ಲೈವ್ ಬೆತ್ತಲೆ ವಿಡಿಯೋ ಬ್ಯುಸಿನೆಸ್.. ದಂಪತಿಗಳು ಪೊಲೀಸರ ಅತಿಥಿ

HD ಕ್ಯಾಮೆರಾಗಳೊಂದಿಗೆ ದಂಪತಿಗಳು ಲೈವ್ ಬೆತ್ತಲೆ ವಿಡಿಯೋ (Live nude video) ವ್ಯವಹಾರ ನಡೆಸಿ ಪೊಲೀಸರ ಅತಿಥಿಯಾಗಿದ್ದಾರೆ.

[ccc_my_favorite_select_button post_id="109995"]
ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ 297 ಸಾವು..! ಜಿಲ್ಲಾಧಿಕಾರಿ ಕಳವಳ

ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ದಿನೇ ದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಲೇ ಇವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದೆ; ಜಿಲ್ಲಾಧಿಕಾರಿ ಎ.ಬಿ ಬಸವರಾಜು (Deputy Commissioner A.B. Basavaraju)

[ccc_my_favorite_select_button post_id="109939"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]