A story for the day: A loan brought by a monkey

ಹರಿತಲೇಖನಿ ದಿನಕ್ಕೊಂದು ಕಥೆ: ಮಂಗ ತಂದ ಸಾಲ

Harithalekhani Daily Story; ಒಂದು ಮಂಗ (Monkey) ಮದುವೆಯಾಯಿತು. ಮಕ್ಕಳಾದವು. ಹರಕು ‘ಮುರುಕು ಮನೆಯೊಂದನ್ನು ಕಟ್ಟಿತು. ಮಳೆಗಾಲದಲ್ಲಿ ರಭಸದಿಂದ ಮಳೆ ಸುರಿಯುವಾಗ ಮನೆಯಿಡೀ ಸೋರುತ್ತಿತ್ತು.

ಹೆಣ್ಣು ಮಂಗ ಸಿಟ್ಟಿನಿಂದ. ‘ಎಂಥ ಸೋಮಾರಿ ನೀನು! ಒಳ್ಳೆಯ ಮನೆಯನ್ನೂ ಕಟ್ಟಲಿಲ್ಲ. ಮಳೆಗೆ ನೆನೆಯುವ ಶಿಕ್ಷೆಯ ಜೊತೆಗೆ ತಿನ್ನಲು ಏನೂ ಆಹಾರವಿಲ್ಲ. ಏನಾದರೂ ಸಂಪಾದಿಸಿ ತರದಿದ್ದರೆ ಮಕ್ಕಳೊಂದಿಗೆ ನಾನು ಉಪವಾಸ ಸಾಯುತ್ತೇನೆ. ಹೋಗು, ಎಲ್ಲಿಂದಾದರೂ ಅಕ್ಕಿಯಿದ್ದರೆ ತೆಗೆದುಕೊಂಡು ಬಾ’ ಎಂದು ಕೋಪದಿಂದಲೇ ಹೇಳಿತು.

ಗಂಡು ಮಂಗನಿಗೆ ದುಡಿಯಲು ಮನಸ್ಸಿಲ್ಲ. ರೈತರು ಬೆಳೆದ ಕಾಯಿಪಲ್ಲೆಯೋ ಹಗ್ಗೋ ಸಿಗುವುದೇ ಎಂದು ಹುಡುಕಿಕೊಂಡು ಹೊರಟಿತು. ಏನೂ ಸಿಗಲಿಲ್ಲ. ಆಗ ಅದಕ್ಕೆ ಕೋಳಿಯ ನೆನಪಾಯಿತು.

ಬೇಸಿಗೆ ಕಾಲದಲ್ಲಿ ಕೋಳಿ ತಿಪ್ಪೆಯನ್ನು ಕೆದಕಿ ಕೆದಕಿ ಒಂದೊಂದೇ ಕಾಳು ಆರಿಸಿ ಮಳೆಗಾಲದಲ್ಲಿ ಮಕ್ಕಳು ಮರಿಗಳಿಗೆ ತಿನ್ನಲು ಜೋಪಾನ ಮಾಡುತ್ತದೆ. ಅದರ ಬಳಿಗೆ ಹೋಗಿ ಸಾಲ ಕೇಳಿ ತರುವುದೆಂದು ಕೋಳಿಯ ಮನೆಗೆ ಹೋಯಿತು. ‘ಕೋಳಿಯಕ್ಕಾ, ಒಂದು ಸೇರಕ್ಕಿ ಸಾಲ ಕೊಡುತ್ತೀಯಾ?’ ಎಂದು ಅಂಗಲಾಚಿತು.

ಕೋಳಿಯು, ‘ಸಾಲ ಕೊಡುತ್ತೇನೆ. ಆದರೆ ನಾಳೆ ಮಧ್ಯಾಹ್ನ ಹನ್ನೆರಡು ಗಂಟೆಗೆ ನಿನ್ನ ಮನೆಗೆ ಬಂದು ಕೇಳಿದಾಗ ಬಡ್ಡಿ ಸಹಿತ ಮರಳಿ ಕೊಡಬೇಕು, ಆಗಬಹುದೆ?’ ಎಂದು ಕೇಳಿತು. ‘ಅಯ್ಯೋ ದೇವರೇ, ಹೇಳಿದ ಮಾತಿಗೆ ತಪ್ಪುವುದುಂಟೆ? ನಾನು ಕೊಟ್ಟಿ ಸಾಲದ ಅಕ್ಕಿ ಬೇಕಾದಷ್ಟು ಇದೆ.

ಮೂಟೆಗಟ್ಟಲೆ ಅಕ್ಕಿ ಈ ದಿನ ಸಂಜೆಯೊಳಗೆ ನನ್ನ ಮನೆಗೆ ಮರಳಿ ಬರುತ್ತದೆ’ ಎಂದು ಮಂಗ ಮೀಸೆ ತಿರುವಿತು. ಕೋಳಿ ಕೊಟ್ಟ ಅಕ್ಕಿಯ ಗಂಟನ್ನು ಮನೆಗೆ ಸಾಗಿಸಿತು. ಬಳಿಕ ನರಿಯ ಮನೆಗೆ ಹೋಯಿತು. ನರಿ ಬೇಸಿಗೆಯಲ್ಲಿ ಹೊಲಗಳಿಗೆ ಹೋಗಿ ಕದ್ದು ಗಳಿಸಿದ ಅಕ್ಕಿಯನ್ನು ಜೋಪಾನ ಮಾಡುವುದು ಅದಕ್ಕೆ ಗೊತ್ತಿತ್ತು. ‘ನರಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುವೆಯಾ?’ ಎಂದು ಹೇಳಿತು.

‘ಸಾಲ ಕೊಡುತ್ತೇನೆ. ಆದರೆ ಬಡ್ಡಿ ಕೊಡಬೇಕು. ಈಗಿನ ಕಾಲದಲ್ಲಿ ಯಾರನ್ನಾದರೂ ನಂಬುವುದು ಕಷ್ಟ. ನಾಳೆ ಮಧ್ಯಾಹ್ನ ಹನ್ನೆರಡೂವರೆ ಗಂಟೆಗೆ ನಿನ್ನ ಮನೆಗೆ ವಸೂಲಿಗೆ ನಾನು ಬರುತ್ತೇನೆ. ಆಗ ಮರಳಿ ಕೊಡದೆ ಇರಬಾರದು’ ಎಂದಿತು ನರಿ. ‘ಛೇ ಛೇ, ಹಾಗೆ ಮೋಸ ಮಾಡುವುದುಂಟೆ? ಒಂದಕ್ಕೆರಡು ಪಾಲು ಕೊಡುತ್ತೇನೆ. ಈ ದಿನ ಸಂಜೆ ನನ್ನ ಮನೆಗೆ ಎಷ್ಟು ಅಕ್ಕಿ ಬರುತ್ತದೋ ನೀನೇ ನೋಡು’ ಎಂದು ಮಂಗವು ನರಿಗೆ ಹೇಳಿತು. ಅದು ಕೊಟ್ಟ ಅಕ್ಕಿಯನ್ನು ಮನೆಗೆ ತಂದಿತು.

ಮಂಗ ಮತ್ತೆ ನಾಯಿಯ ಮನೆಗೆ ಸಾಗಿತು. ನಾಯಿ ಕುರಿಗಳನ್ನು ತೋಳಗಳಿಂದ ರಕ್ಷಿಸಲು ಕಾವಲು ಕಾದು ಯಜಮಾನ ಕೊಟ್ಟ ಅಕ್ಕಿಯನ್ನು ಸಂಗ್ರಹಿಸಿಡುವುದು ಅದಕ್ಕೆ ಗೊತ್ತಿತ್ತು. ‘ನಾಯಿಯಣ್ಣ, ಒಂದು ಸೇರಕ್ಕಿ ಸಾಲ ಕೊಡುತ್ತೀಯಾ? ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದು ಗಂಟೆಗೆ ತಂದು ಕೊಡುತ್ತೇನೆ’ ಎಂದು ಬೇಡಿತು.

ನಾಯಿಯು ಅಕ್ಕಿಯನ್ನು ಕೊಟ್ಟಿತು. ‘ನೀನು ತಂದು ಕೊಡುವೆ ಎಂಬ ಮಾತಿನಲ್ಲಿ ನನಗೆ ನಂಬಿಕೆಯಿಲ್ಲ. ನಾಳೆ ಒಂದು ಗಂಟೆಗೆ ನಾನೇ ನಿನ್ನ ಮನೆಗೆ ಬರುತ್ತೇನೆ’ ಎಂದಿತು.

ಮಂಗ ಅಕ್ಕಿಯನ್ನು ತಂದು ಹೆಂಡತಿಗೆ ಕೊಟ್ಟು ಹುಲಿಯ ಗುಹೆಗೆ ಹೋಯಿತು. ‘ಹುಲಿಯಣ್ಣ, ಮರ್ಯಾದೆ ಹೋಗುತ್ತದೆ. ಒಂದು ಸೇರಕ್ಕಿ ಸಾಲ ಬೇಕಿತ್ತು. ಬಡ್ಡಿಯೊಂದಿಗೆ ನಾಳೆ ಮಧ್ಯಾಹ್ನ ಒಂದೂವರೆ ಗಂಟೆಗೆ ವಾಪಾಸು ಕೊಡುತ್ತೇನೆ’ ಎಂದು ಕೇಳಿತು.

ದಾರಿಯಲ್ಲಿ ಹೋಗುವ ವ್ಯಾಪಾರಿಗಳನ್ನು ಹೆದರಿಸಿ ಹುಲಿ ಮಳೆಗಾಲಕ್ಕಾಗಿ ಅಕ್ಕಿಯನ್ನು ಸಂಗ್ರಹಿಸಿ ಇಡುತ್ತಿತ್ತು. ಅದರಿಂದ ಮಂಗನಿಗೆ ಸಾಲ ಕೊಟ್ಟಿತು. ‘ನಾಳೆ ಮಧ್ಯಾಹ್ನ ನಿನ್ನ ಮನೆಗೆ ಬರುತ್ತೇನೆ. ಆಗ ಏನೂ ನೆಪ ಹೇಳದೆ ಮರಳಿ ಕೊಡದಿದ್ದರೆ ಕೊಂದು ಹಾಕಿಯೇನು’ ಎಂದು ಎಚ್ಚರಿಸಿತು. ಮಂಗ ಅಕ್ಕಿಯನ್ನು ಮನೆಗೆ ತಂದಿತು. ಹೆಂಡತಿ ಮಕ್ಕಳೊಂದಿಗೆ ಹಬ್ಬದ ಊಟ ಮಾಡಿತು.

ಮರುದಿನ ಮಂಗ ಮಕ್ಕಳೊಂದಿಗೆ ಹೆಂಡತಿಯನ್ನು ತವರುಮನೆಗೆ ಹೋಗಿ ಬರಲು ಕಳುಹಿಸಿತು. ತಾನು ಒಂದು ಕಂಬಳಿ ಹೊದ್ದುಕೊಂಡು ಮಂಚದ ಮೇಲಿನ ಹಾಸಿಗೆಯಲ್ಲಿ ನರಳುತ್ತ ಕುಳಿತುಕೊಂಡಿತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಸಾಲ ವಸೂಲಿಗೆ ಕೋಳಿ ಬಂದಿತು. ಹೊರಗಿನಿಂದ, ‘ಮಂಗಣ್ಣಾ ಮಂಗಣ್ಣಾ, ಸಾಲ ಮರಳಿ ತಾ’ ಎಂದು ಕರೆಯಿತು.

ಮಂಗ ನರಳುತ್ತ, ‘ನನಗಿಲ್ಲಿ ಜ್ವರದಿಂದ ಪ್ರಾಣ ಹೋಗುತ್ತಿದೆ. ಸಾಲವೂ ಇಲ್ಲ, ಗೀಲವೂ ಇಲ್ಲ. ಹೋಗಾಚೆ’ ಎಂದು ಗದರಿಸಿತು. ಕೋಳಿಗೆ ಕೋಪ ಬಂತು. ‘ಏನಂದೆ, ಕೊಟ್ಟ ಮಾತಿಗೆ ತಪ್ಪಿದರೆ ಬಿಡುತ್ತೇನಾ?’ ಎನ್ನುತ್ತ ಒಳಗೆ ಬಂದಿತು. ಆಗ ಹೊರಗಿನಿಂದ, ‘ಮಂಗಣ್ಣಾ, ನನ್ನ ಸಾಲ ಹಿಂದೆ ಕೊಡು’ ಎಂದು ನರಿಯ ಧ್ವನಿ ಕೇಳಿಸಿತು. ನರಿ ಬಂದಿರುವುದು ಕೋಳಿಗೆ ಗೊತ್ತಾಯಿತು.

‘ಅಯ್ಯೋ, ನೀನು ಸಾಲ ಮರಳಿ ಕೊಡುವುದು ಬೇಡ. ನರಿಯಿಂದ ನನ್ನನ್ನು ಬಚಾವು ಮಾಡು’ ಎಂದು ಕೋರಿತು. ಮಂಗ ಕೋಳಿಯನ್ನು ಹಾಸಿಗೆಯ ಕೆಳಗೆ ಬಚ್ಚಿಟ್ಟಿತು. ‘ಸಾಲ ಮರಳಿ ಕೊಡೋದಿಲ್ಲ. ನನಗೆ ಜ್ವರ ಬರುತ್ತಿದೆ’ ಎಂದು ನರಿಗೆ ಮಂಗ ಕೂಗಿ ಹೇಳಿತು. ‘ಕೊಡದಿದ್ದರೆ ಸುಮ್ಮನೆ ಬಿಡುತ್ತೇನಾ?’ ಎಂದು ನರಿ ಒಳಗೆ ಬಂದಿತು.

ಆಗ ಹೊರಗೆ ನಾಯಿ ಕರೆಯುವ ಧ್ವನಿ ನರಿಗೆ ಕೇಳಿಸಿತು. ‘ಅಯ್ಯೋ ದೇವರೇ, ನಾಯಿ ಬಂದ ಹಾಗಿದೆ. ನೀನು ಸಾಲ ಮರಳಿಸಬೇಕಾಗಿಲ್ಲ. ನನ್ನ ಜೀವ ಕಾಪಾಡು’ ಎಂದಿತು ನರಿ, ಮಂಗ ನರಿಯನ್ನು ಹಾಸಿಗೆಯ ಕೆಳಗೆ ಅಡಗಿಸಿತು. ನಾಯಿಗೆ, ‘ಹೋಗೋ, ನಿನ್ನ ಸಾಲ ಮರಳಿಸೋದೇ ಇಲ್ಲ’ ಎಂದಿತು.

ನಾಯಿ ಒಳಗೆ ಬರುವಾಗ ಹೊರಗೆ ಹುಲಿಯ ಕರೆ ಕೇಳಿಸಿತು. ನಾಯಿ, ‘ಹುಲಿ ಬಂದ ಹಾಗಿದೆ. ನನ್ನ ಜೀವ ಕಾಪಾಡು. ನಿನ್ನ ಸಾಲ ಮರಳಿಸಬೇಕಾಗಿಲ್ಲ’ ಎಂದು ಕೇಳಿತು. ಮಂಗ ನಾಯಿಯನ್ನು ಹಾಸಿಗೆಯ ಕೆಳಗೆ ಅಡಗಿಸಿಟ್ಟಿತು. ‘ಲೋ ಹುಲಿ, ನಿನ್ನ ಅಕ್ಕಿ ಮರಳಿಸೋದಿಲ್ಲ. ಒಳಗೆ ಬಾ. ಇಲ್ಲಿರುವ ನನ್ನ ಸ್ನೇಹಿತರು ನಿನ್ನನ್ನು ಸೀಳಿ ಹಾಕುತ್ತಾರೆ’ ಎಂದು ಅಬ್ಬರಿಸಿತು.

ಹುಲಿಯನ್ನು ಸೀಳುವ ಸ್ನೇಹಿತರು ಯಾರು ಎಂದು ನೋಡಲು ಹುಲಿ ಒಳಗೆ ಬಂದು ಮಂಚದ ಮೇಲೆ ನೆಗೆಯಿತು. ಮಂಚ ಮುರಿದು ಬಿದ್ದಿತು. ಅದರೊಳಗಿದ್ದ ಕೋಳಿ ಹೊರಗೆ ಬಂದಿತು. ಕೋಳಿಯನ್ನು ಬೆನ್ನಟ್ಟಿ ನರಿ ಓಡಿತು. ನರಿಯನ್ನು ಕಂಡು ನಾಯಿ ಬೆಂಬತ್ತಿತು.

ಮಂಗ ಸದ್ದಿಲ್ಲದೆ ಮನೆಯಿಂದ ಹೊರಗೆ ಜಿಗಿದು ಮರವೇರಿ ಕುಳಿತಿತು. ಹುಲಿಯ ಭಯದಿಂದಾಗಿ ಅದು ಮತ್ತೆ ಮನೆ ಕಟ್ಟಿಕೊಳ್ಳದೆ ಮರವನ್ನು ಮನೆ ಮಾಡಿಕೊಂಡು ಅಲ್ಲೇ ವಾಸಿಸಿತು. (ಬ್ರೆಜಿಲ್ ಕಥೆ)

ಕೃಪೆ: ಪ.ರಾಮಕೃಷ್ಣ ಶಾಸ್ತ್ರಿ (ಸಾಮಾಜಿಕ ಜಾಲತಾಣ)

ಓದುಗರಿಂದ ಪ್ರೋತ್ಸಾಹ ಸಿಗದ ಕಾರಣ ಕೆಲ ದಿನಗಳಿಂದ ನಿಲ್ಲಿಸಲಾಗಿದ್ದ ಹರಿತಲೇಖನಿ ದಿನಕ್ಕೊಂದು ಕಥೆಯನ್ನು, ಮತ್ತೆ ಹರಿತಲೇಖನಿ ಓದುಗ ತಾಯಂದಿರ ಒತ್ತಾಯದ ಮೇರೆಗೆ ಆರಂಭಿಸಲಾಗಿದೆ.

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!