ಹರಿತಲೇಖನಿ ದಿನಕ್ಕೊಂದು ಕಥೆ: ಶ್ರೀಕೃಷ್ಣ ಮರಣ ವೃತ್ತಾಂತ

Harithalekhani story: ಮಹಾಭಾರತ ಯುದ್ಧವನ್ನು ಮಹಾ ಯುದ್ಧವೆಂದರೆ ತಪ್ಪಾಗಲಾರದು. ಯಾಕೆಂದರೆ ಇದು ಒಂದೆರೆಡು ದಿನಗಳ ಕಾಲ ನಡೆದ ಯುದ್ಧವಲ್ಲ. ಬರೋಬ್ಬರಿ 18 ದಿನಗಳ ಕಾಲ ನಡೆದ ಯುದ್ಧ ಇದಾಗಿದೆ. ಮಹಾಭಾರತದ ಯುದ್ಧದ ಕುರಿತು ಇಂದಿಗೂ ಜನರಿಗೆ ತಿಳಿಯದ ರಹಸ್ಯಗಳು ಸಾಕಷ್ಟಿದೆ. ಅವುಗಳಲ್ಲಿ ಶ್ರೀಕೃಷ್ಣನ ಮರಣ ವೃತ್ತಾಂತವು ಒಂದು.

ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಏನೆಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ಶ್ರೀಕೃಷ್ಣ ಮರಣ ಹೊಂದಿದ್ದಾದರೂ ಹೇಗೆನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ.

ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣನು ಸಾವನ್ನಪ್ಪುತ್ತಾನೆ. ಕೃಷ್ಣನ ಸಾವಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಅನೇಕ ದಂತಕಥೆಗಳು ಮತ್ತು ಕಥೆಗಳಿವೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಕೃಷ್ಣನ ಸಾವು ಹೇಗಾಯಿತೆನ್ನುವುದರ ಕಥೆ ಇಲ್ಲಿದೆ.

ಮಹಾಭಾರತ ಯುದ್ಧದ ಸಮಯದಲ್ಲಿ ದುರ್ಯೋಧನನು ಹತನಾದಾಗ ಆತನ ತಾಯಿ ಗಾಂಧಾರಿಯು ತನ್ನ ಮಗನನ್ನು ಕಳೆದುಕೊಂಡು ಚಿಂತೆಗೆ ಒಳಗಾಗುತ್ತಾಳೆ. ದುರ್ಯೋಧನನ ಸಾವನ್ನು ನೆನೆದು ದುಃಖಿಸುತ್ತಿರುತ್ತಾಳೆ.

ಅದೇ ಸಮಯಕ್ಕೆ ಶ್ರೀಕೃಷ್ಣ ಹಾಗೂ ಪಾಂಡವರು ಗಾಂಧಾರಿಯಿದ್ದ ಅರಮನೆಗೆ ಬರುತ್ತಾರೆ. ಗಾಂಧಾರಿಯು ತನ್ನ ಪುತ್ರನ ಸಾವಿಗೆ ಕಾರಣರಾದ ಪಾಂಡವರನ್ನು ಕಂಡು ಕೋಪಗೊಳ್ಳುತ್ತಾಳೆ.

ಗಾಂಧಾರಿಯನ್ನು ಸಮಾಧಾನಿಸಲು ಕೃಷ್ಣ ಮುಂದಾದಾಗ ಗಾಂಧಾರಿಯು ಕೃಷ್ಣನನ್ನು ಕುರಿತು, ನನ್ನ 100 ಗಂಡುಮಕ್ಕಳು ಸಾಯುತ್ತಿರುವಾಗ ಭಗವಾನ್‌ ಶ್ರೀಕೃಷ್ಣನಾದ ನೀವಾದರೂ ಈ ಯುದ್ಧವನ್ನು ತಪ್ಪಿಸಬಹುದಿತ್ತಲ್ಲವೇ..? ಇದೇ ನಿಮ್ಮ ದೈವಿಕ ಗುಣವೇ..? ಎಂದು ಕೋಪದಿಂದ ಕೃಷ್ಣನನ್ನು ಕೇಳುತ್ತಾಳೆ.

ತನ್ನ 100 ಪುತ್ರರನ್ನು ಕಳೆದುಕೊಂಡು ಶೋಕದ ಸಮುದ್ರದಲ್ಲಿ ಮುಳುಗಿದ್ದ ಗಾಂಧಾರಿಯು ಕೋಪದಿಂದ ಶ್ರೀಕೃಷ್ಣನಿಗೆ ಇಂದಿನಿಂದ 36 ವರ್ಷದೊಳಗೆ ನೀವು ಸಾಯಬೇಕೆಂದು ಶಾಪವನ್ನು ನೀಡುತ್ತಾಳೆ.

ನಿಮ್ಮ ಪ್ರೀತಿಯ ದ್ವಾರಕ ನಗರವು ಪ್ರವಾಹಕ್ಕೆ ತುತ್ತಾಗಲಿ, ಯಾದವ ವಂಶದವರು ಅಥವಾ ಯದು ವಂಶದವರು ಹಾಗೂ ಕುರು ವಂಶದವರು ಹೊಡೆದಾಡಿಕೊಂಡೇ ಸಾಯಲಿ, ಒಬ್ಬರು ಇನ್ನೊಬ್ಬರನ್ನು ಕೊಲ್ಲುವುದರ ಮೂಲಕ ನಿಮ್ಮ ಎರಡೂ ವಂಶವು ನಿರ್ನಾಮವಾಗಲಿ ಎಂದು ಶಾಪವನ್ನು ನೀಡುತ್ತಾಳೆ.

ಯಾದವ ವಂಶದವರನ್ನು ಬೇರಾವ ವಂಶದವರಿಗೂ ಕೊಲ್ಲಲು ಸಾಧ್ಯವಾಗದ ಕಾರಣ ಪರಸ್ಪರ ಅವರೊಳಗೆ ಕಲಹಗಳುಂಟಾಗಿ ಒಬ್ಬರನ್ನೊಬ್ಬರು ಹೊಡೆದು ಸಾಯಿಸುವಂತಾಗಲಿ ಎಂದು ಆಕೆ ನುಡಿದಳು.

ಅ ಸಮಯದಲ್ಲಿ ಯಾದವ ಕುಲವು ಅಭಿವೃದ್ಧಿ ಹೊಂದುತ್ತಿರುವ ಕುಲವಾದರೂ ತಮ್ಮ ಅಧಿಕಾರದ ಮದದಿಂದ ಮಾದಕ ವ್ಯಸನಕ್ಕೆ ಒಳಗಾಗಿತ್ತು. ಸಣ್ಣ ಪುಟ್ಟ ವಿಷಯಕ್ಕೂ ಸಹೋದರರ ನಡುವೆ ಜಗಳವುಂಟಾಗಿ ಅದು ದೊಡ್ಡ ಯುದ್ಧಕ್ಕೆ ಕಾರಣವಾಯಿತು. ಯಾದವರು ಯುದ್ಧ ಭೂಮಿಯಲ್ಲಿ ಗಾಂಧಾರಿಯ ಶಾಪದಂತೆ ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪಿದರು. ಹಾಗೂ ಇದರಲ್ಲಿ ಶ್ರೀಕೃಷ್ಣನ ಮಗ ಪ್ರದ್ಯುಮ್ನನು ಕೂಡ ಸಾಯುತ್ತಾನೆ.

ಯದು ವಂಶದ ವಿನಾಶವನ್ನಿರಿತ ಶ್ರೀಕೃಷ್ಣನು ಬೇಸರಗೊಂಡು ದ್ವಾರಕವನ್ನು ತೊರೆದು ಕಾಡಿಗೆ ಹೋಗಲು ನಿರ್ಧರಿಸುತ್ತಾನೆ. ಶ್ರೀಕೃಷ್ಣನು ಅರ್ಜುನನಿಗೆ ಯದುವಂಶದ ಜವಾಬ್ದಾರಿಯನ್ನು ನೀಡಿ ದ್ವಾರಕದಿಂದ ಹೊರಟು ಹೋಗುತ್ತಾನೆ. ನಂತರ ನೋಡುನೋಡುತ್ತಲೆ ಸಮುದ್ರದ ದೊಡ್ಡ ಅಲೆಯೊಂದು ಬಂದು ದ್ವಾರಕವನ್ನು ಅಪ್ಪಳಿಸಿ ಸಂಪೂರ್ಣ ನಗರವೇ ಜಲಾವೃತವಾಗುವಂತೆ ಮಾಡಿತು.

ಇತ್ತ ಶ್ರೀಕೃಷ್ಣನು ಕಾಡಿಗೆ ತೆರಳಿ ಅಲ್ಲಿ ಧ್ಯಾನಕ್ಕೆಂದು ಕುಳಿತುಕೊಳ್ಳುತ್ತಾನೆ. ಅದೇ ಸಮಯದಲ್ಲಿ ಜರಾ ಎನ್ನುವ ಬೇಟೆಗಾರನೋರ್ವನು ಕೃಷ್ಣನ ಪಾದವನ್ನು ಜಿಂಕೆಯೆಂದು ತಪ್ಪಾಗಿ ಭಾವಿಸಿ ಕೃಷ್ಣನನ್ನು ತನ್ನ ಬಾಣದಿಂದ ಹೊಡೆಯುತ್ತಾನೆ.

ಇದರಿಂದ ಕೃಷ್ಣನು ಧ್ಯಾನದಿಂದ ನೆಲಕ್ಕುರುಳಿದನು. ನಂತರ ಬೇಟೆಗಾರನು ಬಂದು ನೋಡಿದಾಗ ಅದು ಜಿಂಕೆಯಾಗಿರಲಿಲ್ಲ ಬದಲಾಗಿ ಭಗವಾನ್‌ ಶ್ರೀಕೃಷ್ಣನಾಗಿದ್ದನು. ತಕ್ಷಣವೇ ಆತ ಕೃಷ್ಣನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ. ಆದರೆ ಕೃಷ್ಣ ಯಾವುದೇ ಬೇಸರವಿಲ್ಲದೆ ಆತನನ್ನು ಕ್ಷಮಿಸುತ್ತಾನೆ. ನಂತರ ಅದೇ ಸ್ಥಳದಲ್ಲಿ ಶ್ರೀಕೃಷ್ಣನ ಆತ್ಮವು ದೇಹವನ್ನು ತೊರೆದು ಸ್ವರ್ಗವನ್ನು ಸೇರುತ್ತದೆ.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಭವಿಷ್ಯ ನುಡಿಯೋಕೆ ಅವರ‍್ಯಾರು, ಜ್ಯೋತಿಷಿನಾ? – ಡಿ.ಕೆ. ಶಿವಕುಮಾರ್ ವಿರುದ್ಧ ನಿಖಿಲ್‌ ಕುಮಾರಸ್ವಾಮಿ

ಖಾತಾ ಪರಿವರ್ತನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಸರ್ಕಾರದ ಬಳಿ ಗುಂಡಿ ಮುಚ್ಚಲು ಹಣವಿಲ್ಲ, ಹಗಲು ದರೋಡೆ ದಂಧೆ ಮಾಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ (Nikhil

[ccc_my_favorite_select_button post_id="115363"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ದೊಡ್ಡಬಳ್ಳಾಪುರ: ಗುಟ್ಟೆ ನರಸಿಂಹಸ್ವಾಮಿ ದೇವಾಲಯದಲ್ಲಿ ಮತ್ತೆ ಕಳವು..!

ಕಳೆದ ತಿಂಗಳ ಕೊನೆಯ ದಿನ ನಡೆದಿದ್ದ ತಾಲೂಕಿನ ಪ್ರಸಿದ್ಧ ಗುಟ್ಟೆ ಶ್ರೀ ಲಕ್ಷೀನರಸಿಂಹ ಸ್ವಾಮಿ (Gutte Lakshmi Narasimhaswamy Temple) ದೇವಾಲಯದಲ್ಲಿ ಕಳ್ಳತನ (Theft) ಪ್ರಕರಣ ಮತ್ತೆ ಮುಂದುವರಿದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

[ccc_my_favorite_select_button post_id="115220"]
ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ನಡುವೆ ಭೀಕರ ಅಪಘಾತ.. ತಪ್ಪಿದ ಭಾರಿ ಅನಾಹುತ.!

ಕಾರು ಮತ್ತು ಬೊಲೆರೋ ವಾಹನದ ನಡುವೆ ಭೀಕರ ಅಪಘಾತ (Accident) ಉಂಟಾಗಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 44 ರ

[ccc_my_favorite_select_button post_id="115379"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!