ಹರಿತಲೇಖನಿ ದಿನಕ್ಕೊಂದು ಕಥೆ: ಶ್ರೀಕೃಷ್ಣ ಮರಣ ವೃತ್ತಾಂತ

Harithalekhani story: ಮಹಾಭಾರತ ಯುದ್ಧವನ್ನು ಮಹಾ ಯುದ್ಧವೆಂದರೆ ತಪ್ಪಾಗಲಾರದು. ಯಾಕೆಂದರೆ ಇದು ಒಂದೆರೆಡು ದಿನಗಳ ಕಾಲ ನಡೆದ ಯುದ್ಧವಲ್ಲ. ಬರೋಬ್ಬರಿ 18 ದಿನಗಳ ಕಾಲ ನಡೆದ ಯುದ್ಧ ಇದಾಗಿದೆ. ಮಹಾಭಾರತದ ಯುದ್ಧದ ಕುರಿತು ಇಂದಿಗೂ ಜನರಿಗೆ ತಿಳಿಯದ ರಹಸ್ಯಗಳು ಸಾಕಷ್ಟಿದೆ. ಅವುಗಳಲ್ಲಿ ಶ್ರೀಕೃಷ್ಣನ ಮರಣ ವೃತ್ತಾಂತವು ಒಂದು.

ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ ಏನೆಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಆದರೆ ಶ್ರೀಕೃಷ್ಣ ಮರಣ ಹೊಂದಿದ್ದಾದರೂ ಹೇಗೆನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ.

ಮಹಾಭಾರತ ಯುದ್ಧದ ನಂತರ ಶ್ರೀಕೃಷ್ಣನು ಸಾವನ್ನಪ್ಪುತ್ತಾನೆ. ಕೃಷ್ಣನ ಸಾವಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ ಅನೇಕ ದಂತಕಥೆಗಳು ಮತ್ತು ಕಥೆಗಳಿವೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಕೃಷ್ಣನ ಸಾವು ಹೇಗಾಯಿತೆನ್ನುವುದರ ಕಥೆ ಇಲ್ಲಿದೆ.

ಮಹಾಭಾರತ ಯುದ್ಧದ ಸಮಯದಲ್ಲಿ ದುರ್ಯೋಧನನು ಹತನಾದಾಗ ಆತನ ತಾಯಿ ಗಾಂಧಾರಿಯು ತನ್ನ ಮಗನನ್ನು ಕಳೆದುಕೊಂಡು ಚಿಂತೆಗೆ ಒಳಗಾಗುತ್ತಾಳೆ. ದುರ್ಯೋಧನನ ಸಾವನ್ನು ನೆನೆದು ದುಃಖಿಸುತ್ತಿರುತ್ತಾಳೆ.

ಅದೇ ಸಮಯಕ್ಕೆ ಶ್ರೀಕೃಷ್ಣ ಹಾಗೂ ಪಾಂಡವರು ಗಾಂಧಾರಿಯಿದ್ದ ಅರಮನೆಗೆ ಬರುತ್ತಾರೆ. ಗಾಂಧಾರಿಯು ತನ್ನ ಪುತ್ರನ ಸಾವಿಗೆ ಕಾರಣರಾದ ಪಾಂಡವರನ್ನು ಕಂಡು ಕೋಪಗೊಳ್ಳುತ್ತಾಳೆ.

ಗಾಂಧಾರಿಯನ್ನು ಸಮಾಧಾನಿಸಲು ಕೃಷ್ಣ ಮುಂದಾದಾಗ ಗಾಂಧಾರಿಯು ಕೃಷ್ಣನನ್ನು ಕುರಿತು, ನನ್ನ 100 ಗಂಡುಮಕ್ಕಳು ಸಾಯುತ್ತಿರುವಾಗ ಭಗವಾನ್‌ ಶ್ರೀಕೃಷ್ಣನಾದ ನೀವಾದರೂ ಈ ಯುದ್ಧವನ್ನು ತಪ್ಪಿಸಬಹುದಿತ್ತಲ್ಲವೇ..? ಇದೇ ನಿಮ್ಮ ದೈವಿಕ ಗುಣವೇ..? ಎಂದು ಕೋಪದಿಂದ ಕೃಷ್ಣನನ್ನು ಕೇಳುತ್ತಾಳೆ.

ತನ್ನ 100 ಪುತ್ರರನ್ನು ಕಳೆದುಕೊಂಡು ಶೋಕದ ಸಮುದ್ರದಲ್ಲಿ ಮುಳುಗಿದ್ದ ಗಾಂಧಾರಿಯು ಕೋಪದಿಂದ ಶ್ರೀಕೃಷ್ಣನಿಗೆ ಇಂದಿನಿಂದ 36 ವರ್ಷದೊಳಗೆ ನೀವು ಸಾಯಬೇಕೆಂದು ಶಾಪವನ್ನು ನೀಡುತ್ತಾಳೆ.

ನಿಮ್ಮ ಪ್ರೀತಿಯ ದ್ವಾರಕ ನಗರವು ಪ್ರವಾಹಕ್ಕೆ ತುತ್ತಾಗಲಿ, ಯಾದವ ವಂಶದವರು ಅಥವಾ ಯದು ವಂಶದವರು ಹಾಗೂ ಕುರು ವಂಶದವರು ಹೊಡೆದಾಡಿಕೊಂಡೇ ಸಾಯಲಿ, ಒಬ್ಬರು ಇನ್ನೊಬ್ಬರನ್ನು ಕೊಲ್ಲುವುದರ ಮೂಲಕ ನಿಮ್ಮ ಎರಡೂ ವಂಶವು ನಿರ್ನಾಮವಾಗಲಿ ಎಂದು ಶಾಪವನ್ನು ನೀಡುತ್ತಾಳೆ.

ಯಾದವ ವಂಶದವರನ್ನು ಬೇರಾವ ವಂಶದವರಿಗೂ ಕೊಲ್ಲಲು ಸಾಧ್ಯವಾಗದ ಕಾರಣ ಪರಸ್ಪರ ಅವರೊಳಗೆ ಕಲಹಗಳುಂಟಾಗಿ ಒಬ್ಬರನ್ನೊಬ್ಬರು ಹೊಡೆದು ಸಾಯಿಸುವಂತಾಗಲಿ ಎಂದು ಆಕೆ ನುಡಿದಳು.

ಅ ಸಮಯದಲ್ಲಿ ಯಾದವ ಕುಲವು ಅಭಿವೃದ್ಧಿ ಹೊಂದುತ್ತಿರುವ ಕುಲವಾದರೂ ತಮ್ಮ ಅಧಿಕಾರದ ಮದದಿಂದ ಮಾದಕ ವ್ಯಸನಕ್ಕೆ ಒಳಗಾಗಿತ್ತು. ಸಣ್ಣ ಪುಟ್ಟ ವಿಷಯಕ್ಕೂ ಸಹೋದರರ ನಡುವೆ ಜಗಳವುಂಟಾಗಿ ಅದು ದೊಡ್ಡ ಯುದ್ಧಕ್ಕೆ ಕಾರಣವಾಯಿತು. ಯಾದವರು ಯುದ್ಧ ಭೂಮಿಯಲ್ಲಿ ಗಾಂಧಾರಿಯ ಶಾಪದಂತೆ ಪರಸ್ಪರ ಹೊಡೆದಾಡಿಕೊಂಡು ಸಾವನ್ನಪ್ಪಿದರು. ಹಾಗೂ ಇದರಲ್ಲಿ ಶ್ರೀಕೃಷ್ಣನ ಮಗ ಪ್ರದ್ಯುಮ್ನನು ಕೂಡ ಸಾಯುತ್ತಾನೆ.

ಯದು ವಂಶದ ವಿನಾಶವನ್ನಿರಿತ ಶ್ರೀಕೃಷ್ಣನು ಬೇಸರಗೊಂಡು ದ್ವಾರಕವನ್ನು ತೊರೆದು ಕಾಡಿಗೆ ಹೋಗಲು ನಿರ್ಧರಿಸುತ್ತಾನೆ. ಶ್ರೀಕೃಷ್ಣನು ಅರ್ಜುನನಿಗೆ ಯದುವಂಶದ ಜವಾಬ್ದಾರಿಯನ್ನು ನೀಡಿ ದ್ವಾರಕದಿಂದ ಹೊರಟು ಹೋಗುತ್ತಾನೆ. ನಂತರ ನೋಡುನೋಡುತ್ತಲೆ ಸಮುದ್ರದ ದೊಡ್ಡ ಅಲೆಯೊಂದು ಬಂದು ದ್ವಾರಕವನ್ನು ಅಪ್ಪಳಿಸಿ ಸಂಪೂರ್ಣ ನಗರವೇ ಜಲಾವೃತವಾಗುವಂತೆ ಮಾಡಿತು.

ಇತ್ತ ಶ್ರೀಕೃಷ್ಣನು ಕಾಡಿಗೆ ತೆರಳಿ ಅಲ್ಲಿ ಧ್ಯಾನಕ್ಕೆಂದು ಕುಳಿತುಕೊಳ್ಳುತ್ತಾನೆ. ಅದೇ ಸಮಯದಲ್ಲಿ ಜರಾ ಎನ್ನುವ ಬೇಟೆಗಾರನೋರ್ವನು ಕೃಷ್ಣನ ಪಾದವನ್ನು ಜಿಂಕೆಯೆಂದು ತಪ್ಪಾಗಿ ಭಾವಿಸಿ ಕೃಷ್ಣನನ್ನು ತನ್ನ ಬಾಣದಿಂದ ಹೊಡೆಯುತ್ತಾನೆ.

ಇದರಿಂದ ಕೃಷ್ಣನು ಧ್ಯಾನದಿಂದ ನೆಲಕ್ಕುರುಳಿದನು. ನಂತರ ಬೇಟೆಗಾರನು ಬಂದು ನೋಡಿದಾಗ ಅದು ಜಿಂಕೆಯಾಗಿರಲಿಲ್ಲ ಬದಲಾಗಿ ಭಗವಾನ್‌ ಶ್ರೀಕೃಷ್ಣನಾಗಿದ್ದನು. ತಕ್ಷಣವೇ ಆತ ಕೃಷ್ಣನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ. ಆದರೆ ಕೃಷ್ಣ ಯಾವುದೇ ಬೇಸರವಿಲ್ಲದೆ ಆತನನ್ನು ಕ್ಷಮಿಸುತ್ತಾನೆ. ನಂತರ ಅದೇ ಸ್ಥಳದಲ್ಲಿ ಶ್ರೀಕೃಷ್ಣನ ಆತ್ಮವು ದೇಹವನ್ನು ತೊರೆದು ಸ್ವರ್ಗವನ್ನು ಸೇರುತ್ತದೆ.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವೇಳೆ ಸುಪ್ರೀಂ ಕೋರ್ಟ್ ಆದೇಶವನ್ನೂ ಪಾಲಿಸಿದಂತಿಲ್ಲ: ಬಿ.ವೈ. ವಿಜಯೇಂದ್ರ

ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಮಾನ್ಯ ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra)

[ccc_my_favorite_select_button post_id="112894"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!