'Shatrughna' of the Ramayana

ಹರಿತಲೇಖನಿ ದಿನಕ್ಕೊಂದು ಕಥೆ: ರಾಮಾಯಣದ ‘ಶತ್ರುಘ್ನ’

ಅಯೋಧ್ಯೆಯ ರಾಜಾ ದಶರಥನಿಗೆ ಕೌಶಲ್ಯ, ಸುಮಿತ್ರಾ, ಕೈಕೇಯಿ ಎಂಬ ಮೂವರು ಪತ್ನಿಯರು ಅವರಿಂದ ನಾಲ್ಕು ಮಂದಿ ಪುತ್ರರು. ಅವರ ಹೆಸರು ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ಎಂಬ ವಿಚಾರವನ್ನು ನಾವು ರಾಮಾಯಣದ (Ramayana) ಕಥೆಗಳಲ್ಲಿ ಸಹಸ್ರಾರು ಬಾರಿ ಓದಿರುತ್ತೇವೆ ಅಥವಾ ಕೇಳಿರುತ್ತೇವೆ.

ರಾಮ ಕೌಶಲ್ಯಳ, ಭರತ ಕೈಕೇಯಿಯ ಹಾಗೂ ಲಕ್ಷ್ಮಣ, ಶತ್ರುಘ್ನ ಇವರು ಸುಮಿತ್ರಾಳ ಸುಪುತ್ರರು. ಆದರೆ ನಿಮಗೆ ರಾಮ, ಲಕ್ಷ್ಮಣ, ಭರತರ ಬಗ್ಗೆ ತಿಳಿದಿರುವಷ್ಟು ಶತ್ರುಘ್ನನ ಬಗ್ಗೆ ತಿಳಿದಿದೆಯೇ ಎಂಬುದೇ ನನ್ನ ಪ್ರಶ್ನೆ.

ಆತ ರಾಮಾಯಣದಲ್ಲಿ ಎಷ್ಟು ಪ್ರಸ್ತುತ ಎಂಬ ವಿಷಯ ಕೆಲವು ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಕೇಳಿ ಕಂಡುಕೊಂಡೆ. ಅದರಲ್ಲಿ ಭಾಗವಹಿಸಿದ ಒಬ್ಬನಂತೂ ಹಿಂದಿ ಚಿತ್ರರಂಗದ ಶತ್ರುಘ್ನ ಸಿನ್ಹಾ ಬಗ್ಗೆ ತಿಳಿದಷ್ಟು ವಿಷಯ ರಾಮಾಯಣದ ಶತ್ರುಘ್ನನ ಬಗ್ಗೆ ತಿಳಿದಿಲ್ಲ ಎಂದು ಬಿಟ್ಟ.

ಇದು ನಮ್ಮ ಮಾಹಿತಿ ಕೊರತೆಯೋ ಅಥವಾ ನಾವು ನೋಡಿದ ರಾಮಾಯಣ ಧಾರವಾಹಿಯ ಪ್ರಭಾವವೋ ತಿಳಿಯದು. ದಶರಥನ ಮೂರು ಮಕ್ಕಳಿಗೆ ಇರುವಷ್ಟು ಮಹತ್ವ ಶತ್ರುಘ್ನನಿಗೆ ಇಲ್ಲದೇ ಹೋದರೂ, ಆತನು ರಾಮಾಯಣದಲ್ಲಿ ಸದಾಕಾಲ ತನ್ನ ಛಾಪನ್ನು ಬೀರುತ್ತಲೇ ಇರುತ್ತಾನೆ.

ಶತ್ರುಘ್ನ ಹಾಗೂ ಲಕ್ಷ್ಮಣ ಅವಳಿ ಜವಳಿಗಳು. ಆದರೆ ಶತ್ರುಘ್ನನಿಗೆ ಸಲುಗೆ ಇದ್ದುದು ಕೈಕೇಯಿಯ ಮಗ ಭರತನ ಜೊತೆ. ಆದರೆ ಆತ ಲಕ್ಷ್ಮಣನಂತೆ ಮುಂಗೋಪಿಯೂ, ಉತ್ತಮ ಧನುರ್ಧಾರಿಯೂ ಆಗಿದ್ದ.

ಮಿತಭಾಷಿಯೂ, ಸರಳ ಜೀವಿಯೂ, ಹಠವಾದಿಯೂ, ತೇಜಸ್ವಿಯೂ ಆಗಿದ್ದ ಆತ ಬಾಲ್ಯದಿಂದಲೂ ಭರತನ ಜೊತೆ ಕಾಲಕಳೆಯುವುದನ್ನು ಇಷ್ಟ ಪಡುತ್ತಿದ್ದ. ಈ ಕಾರಣದಿಂದಲೇ ಎಲ್ಲಾ ಸಹೋದರರ ವಿವಾಹವಾದ ಬಳಿಕ ಭರತ ತನ್ನ ಮಾವನಾದ ಯುಧಾಜಿತ್ತುವಿನ ಅರಮನೆಗೆ ಹೋಗುವಾಗಲೆಲ್ಲಾ ಶತ್ರುಘ್ನನೂ ಹೋಗುತ್ತಿದ್ದ.

ಇದೇ ಕಾರಣದಿಂದ ದಶರಥನು ರಾಮನ ಪಟ್ಟಾಭಿಷೇಕಕ್ಕೆ ತಯಾರಿ ಮಾಡುತ್ತಿರುವಾಗ ಭರತ ಹಾಗೂ ಶತ್ರುಘ್ನರು ಅರಮನೆಯಲ್ಲಿರಲಿಲ್ಲ. ತನ್ನ ಮಗ ಭರತ ರಾಜನಾಗಬೇಕೆಂಬ ಏಕೈಕ ಉದ್ದೇಶದಿಂದ ಕೈಕೇಯಿ, ದಶರಥನ ಹಿಂದೆ ನೀಡಿದ್ದ ಮಾತನ್ನು ನೆನಪಿಸಿಕೊಳ್ಳುತ್ತಾಳೆ. ಇದರಿಂದ ರಾಜಾ ದಶರಥ ಚಿಂತೆಗೀಡಾಗುತ್ತಾನೆ. ಅಪ್ಪನ ಮಾತನ್ನು ಉಳಿಸಲು ರಾಮ ವನವಾಸಕ್ಕೆ ತೆರಳಿದಾಗ ಆತನ ಜೊತೆ ಸೀತೆ ಹಾಗೂ ಲಕ್ಷ್ಮಣರೂ ಹೋಗುತ್ತಾರೆ. ಈ ನೋವಿನಿಂದ ದಶರಥ ಕೊನೆಯುಸಿರೆಳೆಯುತ್ತಾನೆ.

ಭರತ ಹಾಗೂ ಶತ್ರುಘ್ನರು ಮರಳಿ ಅಯೋಧ್ಯೆಗೆ ಬಂದಾಗ ಅಲ್ಲಿ ದಶರಥನ ನಿಧನ ವಾರ್ತೆ ಹಾಗೂ ರಾಮ ಕಾಡಿಗೆ ಹೋದ ವಿಚಾರ ತಿಳಿದು ಬರುತ್ತದೆ. ಈ ಎಲ್ಲಾ ಸಂಚಿನ ಹಿಂದೆ ಇರುವುದು ಕೈಕೇಯಿಯ ಆಪ್ತ ಸಹಾಯಕಿ ಮಂಥರೆ ಎನ್ನುವ ವಿಚಾರ ಶತ್ರುಘ್ನನಿಗೆ ತಿಳಿದು ಬರುತ್ತದೆ.

ಆತ ಕೂಡಲೇ ಮಂಥರೆಯ ಮುಡಿಯನ್ನು ತನ್ನ ಕೈಯಲ್ಲಿ ಹಿಡಿದು ಅವಳನ್ನು ಎಳೆದು ತಂದು, ಆಕೆಯನ್ನು ವಧೆ ಮಾಡಿ ಬಿಡುತ್ತೇನೆ ಎಂದಾಗ ಭರತ ಸಮಾಧಾನ ಮಾಡುತ್ತಾನೆ. ನಿನ್ನ ಕೈಯಿಂದ ಈಕೆ ಹತಳಾದರೆ ಅಣ್ಣನಾದ ರಾಮನು ಕೂಡಾ ನಿನ್ನನ್ನು ಕ್ಷಮಿಸಲಿಕ್ಕಿಲ್ಲ, ಆತ ನಮ್ಮ ಜೊತೆ ಮಾತನಾಡುವುದನ್ನೇ ಬಿಟ್ಟು ಬಿಡುತ್ತಾನೆ ಎಂದು ಹೇಳಿ ಮಂಥರೆಯನ್ನು ಶತ್ರುಘ್ನನ ಕೈಯಿಂದ ಬಿಡಿಸುತ್ತಾನೆ.

ನಂತರ ಕಾಡಿನಲ್ಲಿದ್ದ ರಾಮನ ಮನವೊಲಿಸಿ ವಾಪಾಸು ಕರೆತರಲು ಭರತ ಹೋಗುವಾಗ ಆತನ ಜೊತೆ ಶತ್ರುಘ್ನ ಸಹಾ ಹೋಗುತ್ತಾನೆ. ಆದರೆ ಈ ಸಂಧಾನ ಯಶಸ್ವಿಯಾಗದೇ ಭರತನೇ ರಾಜ್ಯವಾಳಬೇಕು ಎಂದು ರಾಮನು ಅಂದಾಗ, ನೀವು ಕುಳಿತುಕೊಳ್ಳಬೇಕಾದ ಸಿಂಹಾಸನದಲ್ಲಿ ನಾನೆಂದೂ ಕುಳಿತುಕೊಳ್ಳಲಾರೆ ಎಂದು ಭರತ ರಾಮನ ಪಾದುಕೆಯನ್ನು ತರುತ್ತಾನೆ.

ಅವರೆಲ್ಲಾ ಕಾಡಿನಿಂದ ಹಿಂದಿರುಗುವ ಸಮಯದಲ್ಲಿ ರಾಮನು ಶತ್ರುಘ್ನನನ್ನು ಪ್ರತ್ಯೇಕವಾಗಿ ಕರೆದು, ‘ ನೀನು ಕೈಕೇಯಿ ಮಾತೆಯ ಮೇಲೆ ಕೋಪಿಸಿಕೊಳ್ಳಬಾರದು, ಅವಳ ಸೇವೆ ಮಾಡಿಕೊಂಡಿರಬೇಕು ಎಂದು ಸೀತೆಯ ಮೇಲೆ ಪ್ರಮಾಣ ಮಾಡಿ ಕೇಳಿಕೊಳ್ಳುತ್ತೇನೆ’ ಎಂದು ಆಣೆ ಮಾಡಿಸಿಕೊಳ್ಳುತ್ತಾನೆ. ಏಕೆಂದರೆ ರಾಮನಿಗೆ ಶತ್ರುಘ್ನ ಸಹಾ ಲಕ್ಷ್ಮಣನಂತೆಯೇ ಶೀಘ್ರವಾಗಿ ಕೋಪಗೊಳ್ಳುವವನೆಂದು ತಿಳಿದಿತ್ತು.

ರಾಮನ ಪಾದುಕೆಯನ್ನು ಮುಂದಿಟ್ಟು ಭರತ ರಾಜ್ಯಭಾರ ಮಾಡುವಾಗ ಇಡೀ ರಾಜ್ಯದ ಜವಾಬ್ದಾರಿಯನ್ನು ಶತ್ರುಘ್ನ ನೋಡಿಕೊಳ್ಳುತ್ತಿದ್ದನಂತೆ. ನಂತರ ರಾವಣನ ವಧೆ ನಡೆದು, ರಾಮನ ಪಟ್ಟಾಭಿಷೇಕವಾದ ಬಳಿಕ ಒಂದು ದಿನ ಲವಣಾಸುರ ಎಂಬ ದಾನವನ ಉಪಟಳ ಪ್ರಾರಂಭವಾಗುತ್ತದೆ.

ಆತನ ವಧೆಗಾಗಿ ಯಾರನ್ನು ಕಳಿಸುವುದು ಎಂದು ಪ್ರಸ್ತಾಪ ಬಂದಾಗ ಶತ್ರುಘ್ನ ತಾನೇ ಮುಂದೆ ಬರುತ್ತಾನೆ. ‘ನೀವು (ರಾಮ ಲಕ್ಷ್ಮಣ) ಈಗಷ್ಟೇ ಕಾಡಿನಿಂದ ಬಂದಿರುವಿರಿ, ಅಣ್ಣ ಭರತ ರಾಜ್ಯಭಾರ ಹಾಗೂ ರಾಮನ ಅಗಲುವಿಕೆಯಲ್ಲಿ ಬಳಲಿದ್ದಾನೆ. ಅದಕ್ಕಾಗಿ ನಾನೇ ಹೋಗಿ ಲವಣಾಸುರನ ವಧೆ ಮಾಡಿ ಬರುವೆ’ ಎನ್ನುತ್ತಾನೆ ಶತ್ರುಘ್ನ.

ಅದಕ್ಕೆ ರಾಮ ‘ಸರಿ ಹಾಗಾದರೆ ನೀನು ಲವಣಾಸುರನನ್ನು ಕೊಂದು ಅವನ ನಗರಿಗೆ ರಾಜನಾಗು’ ಎಂದು ನುಡಿಯುತ್ತಾನೆ. ನೀವೆಲ್ಲಾ ನನ್ನ ಹಿರಿಯ ಅಣ್ಣಂದಿರು ಇರುವಾಗ ನಾನು ರಾಜನಾಗುವುದು ಸರಿಯಲ್ಲ ಎನ್ನುವ ಶತ್ರುಘ್ನ, ನಿಮ್ಮಿಂದ ದೂರವಿರುವುದೇ ನನ್ನ ದುರ್ಗತಿ ಎಂದು.

ರಾಮನು ಅವನನ್ನು ಸಮಾಧಾನ ಮಾಡಿ ‘ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿಯಲೇ ಬೇಕು ಶತ್ರುಘ್ನ’ ಸ್ವಲ್ಪ ಸಮಯ ನೀನು ಅಲ್ಲಿ ರಾಜ್ಯಭಾರ ಮಾಡಿ ನಂತರ ಇಲ್ಲಿಗೆ ಬಾ’ ಎನ್ನುತ್ತಾನೆ.

ಅದೇ ರೀತಿ ಶತ್ರುಘ್ನನು ಲವಣಾಸುರನನ್ನು ಕೊಂದು ಅವನ ನಗರವನ್ನು ಮಧುರಾಪುರ ಎಂಬ ಸುಂದರ ನಗರವನ್ನಾಗಿಸಿ ಹನ್ನೆರಡು ವರ್ಷಗಳ ಕಾಲ ಆಳಿ ಅಯೋಧ್ಯೆಗೆ ಮರಳುತ್ತಾನೆ.

ರಾಮನನ್ನು ಕಂಡು ‘ನಿನ್ನ ಮಾತಿನಂತೆ ನಾನು ನಡೆದುಕೊಂಡಿದ್ದೇನೆ ಇನ್ನಾದರೂ ನಿನ್ನ ಜೊತೆ ಇರಿಸಿಕೋ’ ಎನ್ನುತ್ತಾನೆ ಶತ್ರುಘ್ನ. ಅದಕ್ಕೆ ರಾಮ ಹೇಳುತ್ತಾನೆ ‘ರಾಜನಾದವನು ಜವಾಬ್ದಾರಿಗಳಿಂದ ಓಡಿ ಹೋಗಬಾರದು. ನೀನು ಪ್ರಜೆಗಳ ಪಾಲನೆ ಮಾಡುತ್ತಾ, ಆಗಾಗ ಇಲ್ಲಿಗೆ ಬಂದು ನಮ್ಮ ಜೊತೆ ಇದ್ದು ಹೋಗು, ಯಾವತ್ತೂ ರಾಜಧರ್ಮದಿಂದ ಹಿಂದೆ ಸರಿಯಬೇಡ’ ಎನ್ನುತ್ತಾನೆ. ಈ ಮಾತಿನಿಂದ ಶತ್ರುಘ್ನನ ಕಣ್ಣು ತೆರೆಯುತ್ತದೆ. ತನ್ನ ಅಣ್ಣನ ಮಾತನ್ನು ಶಿರಸಾವಹಿಸಿ ಆತ ಮರಳಿ ಮಧುರಾಪುರಕ್ಕೆ ತೆರಳಿ ಅಲ್ಲಿ ರಾಜ್ಯಭಾರ ನಡೆಸುತ್ತಾನೆ.

ಈ ರೀತಿ ಶತ್ರುಘ್ನನಿಗೆ ತನ್ನ ಅಣ್ಣನಾದ ರಾಮನ ಮಾತಿಗೆ ಗೌರವ ನೀಡಬೇಕೆಂಬ ಪರಿಜ್ಞಾನ ಇತ್ತು. ಅದೇ ಸಮಯ ಆತನ ಜೊತೆ ಇರಬೇಕೆಂಬ ಸಹೋದರತೆಯ ಮಮಕಾರದ ಗುಣವೂ ಇತ್ತು.

ರಾಮಾಯಣದಲ್ಲಿ ಶತ್ರುಘ್ನ ಎಂಬ ಪಾತ್ರವು ಅತೀ ಕಡಿಮೆ ಪ್ರಸ್ತಾಪವಾದರೂ ಕೆಲವೊಂದು ಮಹತ್ವದ ಸಂದೇಶವನ್ನು ನೀಡಲು ಸಫಲವಾಗಿದೆ. ಅವುಗಳೆಂದರೆ ಗುರು ಹಿರಿಯರಲ್ಲಿ ವಿಧೇಯತೆ, ಸರಳತೆ, ಅನುಕಂಪ. ಈ ಕಾರಣದಿಂದ ಶತ್ರುಘ್ನನಿಲ್ಲದ ರಾಮಾಯಣವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ (News channel) ಧರ್ಮಸ್ಥಳ ಪ್ರಕರಣ ಸಂಬಂಧಿಸಿ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ

[ccc_my_favorite_select_button post_id="119114"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!