'Shatrughna' of the Ramayana

ಹರಿತಲೇಖನಿ ದಿನಕ್ಕೊಂದು ಕಥೆ: ರಾಮಾಯಣದ ‘ಶತ್ರುಘ್ನ’

ಅಯೋಧ್ಯೆಯ ರಾಜಾ ದಶರಥನಿಗೆ ಕೌಶಲ್ಯ, ಸುಮಿತ್ರಾ, ಕೈಕೇಯಿ ಎಂಬ ಮೂವರು ಪತ್ನಿಯರು ಅವರಿಂದ ನಾಲ್ಕು ಮಂದಿ ಪುತ್ರರು. ಅವರ ಹೆಸರು ರಾಮ, ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ಎಂಬ ವಿಚಾರವನ್ನು ನಾವು ರಾಮಾಯಣದ (Ramayana) ಕಥೆಗಳಲ್ಲಿ ಸಹಸ್ರಾರು ಬಾರಿ ಓದಿರುತ್ತೇವೆ ಅಥವಾ ಕೇಳಿರುತ್ತೇವೆ.

ರಾಮ ಕೌಶಲ್ಯಳ, ಭರತ ಕೈಕೇಯಿಯ ಹಾಗೂ ಲಕ್ಷ್ಮಣ, ಶತ್ರುಘ್ನ ಇವರು ಸುಮಿತ್ರಾಳ ಸುಪುತ್ರರು. ಆದರೆ ನಿಮಗೆ ರಾಮ, ಲಕ್ಷ್ಮಣ, ಭರತರ ಬಗ್ಗೆ ತಿಳಿದಿರುವಷ್ಟು ಶತ್ರುಘ್ನನ ಬಗ್ಗೆ ತಿಳಿದಿದೆಯೇ ಎಂಬುದೇ ನನ್ನ ಪ್ರಶ್ನೆ.

ಆತ ರಾಮಾಯಣದಲ್ಲಿ ಎಷ್ಟು ಪ್ರಸ್ತುತ ಎಂಬ ವಿಷಯ ಕೆಲವು ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಕೇಳಿ ಕಂಡುಕೊಂಡೆ. ಅದರಲ್ಲಿ ಭಾಗವಹಿಸಿದ ಒಬ್ಬನಂತೂ ಹಿಂದಿ ಚಿತ್ರರಂಗದ ಶತ್ರುಘ್ನ ಸಿನ್ಹಾ ಬಗ್ಗೆ ತಿಳಿದಷ್ಟು ವಿಷಯ ರಾಮಾಯಣದ ಶತ್ರುಘ್ನನ ಬಗ್ಗೆ ತಿಳಿದಿಲ್ಲ ಎಂದು ಬಿಟ್ಟ.

ಇದು ನಮ್ಮ ಮಾಹಿತಿ ಕೊರತೆಯೋ ಅಥವಾ ನಾವು ನೋಡಿದ ರಾಮಾಯಣ ಧಾರವಾಹಿಯ ಪ್ರಭಾವವೋ ತಿಳಿಯದು. ದಶರಥನ ಮೂರು ಮಕ್ಕಳಿಗೆ ಇರುವಷ್ಟು ಮಹತ್ವ ಶತ್ರುಘ್ನನಿಗೆ ಇಲ್ಲದೇ ಹೋದರೂ, ಆತನು ರಾಮಾಯಣದಲ್ಲಿ ಸದಾಕಾಲ ತನ್ನ ಛಾಪನ್ನು ಬೀರುತ್ತಲೇ ಇರುತ್ತಾನೆ.

ಶತ್ರುಘ್ನ ಹಾಗೂ ಲಕ್ಷ್ಮಣ ಅವಳಿ ಜವಳಿಗಳು. ಆದರೆ ಶತ್ರುಘ್ನನಿಗೆ ಸಲುಗೆ ಇದ್ದುದು ಕೈಕೇಯಿಯ ಮಗ ಭರತನ ಜೊತೆ. ಆದರೆ ಆತ ಲಕ್ಷ್ಮಣನಂತೆ ಮುಂಗೋಪಿಯೂ, ಉತ್ತಮ ಧನುರ್ಧಾರಿಯೂ ಆಗಿದ್ದ.

ಮಿತಭಾಷಿಯೂ, ಸರಳ ಜೀವಿಯೂ, ಹಠವಾದಿಯೂ, ತೇಜಸ್ವಿಯೂ ಆಗಿದ್ದ ಆತ ಬಾಲ್ಯದಿಂದಲೂ ಭರತನ ಜೊತೆ ಕಾಲಕಳೆಯುವುದನ್ನು ಇಷ್ಟ ಪಡುತ್ತಿದ್ದ. ಈ ಕಾರಣದಿಂದಲೇ ಎಲ್ಲಾ ಸಹೋದರರ ವಿವಾಹವಾದ ಬಳಿಕ ಭರತ ತನ್ನ ಮಾವನಾದ ಯುಧಾಜಿತ್ತುವಿನ ಅರಮನೆಗೆ ಹೋಗುವಾಗಲೆಲ್ಲಾ ಶತ್ರುಘ್ನನೂ ಹೋಗುತ್ತಿದ್ದ.

ಇದೇ ಕಾರಣದಿಂದ ದಶರಥನು ರಾಮನ ಪಟ್ಟಾಭಿಷೇಕಕ್ಕೆ ತಯಾರಿ ಮಾಡುತ್ತಿರುವಾಗ ಭರತ ಹಾಗೂ ಶತ್ರುಘ್ನರು ಅರಮನೆಯಲ್ಲಿರಲಿಲ್ಲ. ತನ್ನ ಮಗ ಭರತ ರಾಜನಾಗಬೇಕೆಂಬ ಏಕೈಕ ಉದ್ದೇಶದಿಂದ ಕೈಕೇಯಿ, ದಶರಥನ ಹಿಂದೆ ನೀಡಿದ್ದ ಮಾತನ್ನು ನೆನಪಿಸಿಕೊಳ್ಳುತ್ತಾಳೆ. ಇದರಿಂದ ರಾಜಾ ದಶರಥ ಚಿಂತೆಗೀಡಾಗುತ್ತಾನೆ. ಅಪ್ಪನ ಮಾತನ್ನು ಉಳಿಸಲು ರಾಮ ವನವಾಸಕ್ಕೆ ತೆರಳಿದಾಗ ಆತನ ಜೊತೆ ಸೀತೆ ಹಾಗೂ ಲಕ್ಷ್ಮಣರೂ ಹೋಗುತ್ತಾರೆ. ಈ ನೋವಿನಿಂದ ದಶರಥ ಕೊನೆಯುಸಿರೆಳೆಯುತ್ತಾನೆ.

ಭರತ ಹಾಗೂ ಶತ್ರುಘ್ನರು ಮರಳಿ ಅಯೋಧ್ಯೆಗೆ ಬಂದಾಗ ಅಲ್ಲಿ ದಶರಥನ ನಿಧನ ವಾರ್ತೆ ಹಾಗೂ ರಾಮ ಕಾಡಿಗೆ ಹೋದ ವಿಚಾರ ತಿಳಿದು ಬರುತ್ತದೆ. ಈ ಎಲ್ಲಾ ಸಂಚಿನ ಹಿಂದೆ ಇರುವುದು ಕೈಕೇಯಿಯ ಆಪ್ತ ಸಹಾಯಕಿ ಮಂಥರೆ ಎನ್ನುವ ವಿಚಾರ ಶತ್ರುಘ್ನನಿಗೆ ತಿಳಿದು ಬರುತ್ತದೆ.

ಆತ ಕೂಡಲೇ ಮಂಥರೆಯ ಮುಡಿಯನ್ನು ತನ್ನ ಕೈಯಲ್ಲಿ ಹಿಡಿದು ಅವಳನ್ನು ಎಳೆದು ತಂದು, ಆಕೆಯನ್ನು ವಧೆ ಮಾಡಿ ಬಿಡುತ್ತೇನೆ ಎಂದಾಗ ಭರತ ಸಮಾಧಾನ ಮಾಡುತ್ತಾನೆ. ನಿನ್ನ ಕೈಯಿಂದ ಈಕೆ ಹತಳಾದರೆ ಅಣ್ಣನಾದ ರಾಮನು ಕೂಡಾ ನಿನ್ನನ್ನು ಕ್ಷಮಿಸಲಿಕ್ಕಿಲ್ಲ, ಆತ ನಮ್ಮ ಜೊತೆ ಮಾತನಾಡುವುದನ್ನೇ ಬಿಟ್ಟು ಬಿಡುತ್ತಾನೆ ಎಂದು ಹೇಳಿ ಮಂಥರೆಯನ್ನು ಶತ್ರುಘ್ನನ ಕೈಯಿಂದ ಬಿಡಿಸುತ್ತಾನೆ.

ನಂತರ ಕಾಡಿನಲ್ಲಿದ್ದ ರಾಮನ ಮನವೊಲಿಸಿ ವಾಪಾಸು ಕರೆತರಲು ಭರತ ಹೋಗುವಾಗ ಆತನ ಜೊತೆ ಶತ್ರುಘ್ನ ಸಹಾ ಹೋಗುತ್ತಾನೆ. ಆದರೆ ಈ ಸಂಧಾನ ಯಶಸ್ವಿಯಾಗದೇ ಭರತನೇ ರಾಜ್ಯವಾಳಬೇಕು ಎಂದು ರಾಮನು ಅಂದಾಗ, ನೀವು ಕುಳಿತುಕೊಳ್ಳಬೇಕಾದ ಸಿಂಹಾಸನದಲ್ಲಿ ನಾನೆಂದೂ ಕುಳಿತುಕೊಳ್ಳಲಾರೆ ಎಂದು ಭರತ ರಾಮನ ಪಾದುಕೆಯನ್ನು ತರುತ್ತಾನೆ.

ಅವರೆಲ್ಲಾ ಕಾಡಿನಿಂದ ಹಿಂದಿರುಗುವ ಸಮಯದಲ್ಲಿ ರಾಮನು ಶತ್ರುಘ್ನನನ್ನು ಪ್ರತ್ಯೇಕವಾಗಿ ಕರೆದು, ‘ ನೀನು ಕೈಕೇಯಿ ಮಾತೆಯ ಮೇಲೆ ಕೋಪಿಸಿಕೊಳ್ಳಬಾರದು, ಅವಳ ಸೇವೆ ಮಾಡಿಕೊಂಡಿರಬೇಕು ಎಂದು ಸೀತೆಯ ಮೇಲೆ ಪ್ರಮಾಣ ಮಾಡಿ ಕೇಳಿಕೊಳ್ಳುತ್ತೇನೆ’ ಎಂದು ಆಣೆ ಮಾಡಿಸಿಕೊಳ್ಳುತ್ತಾನೆ. ಏಕೆಂದರೆ ರಾಮನಿಗೆ ಶತ್ರುಘ್ನ ಸಹಾ ಲಕ್ಷ್ಮಣನಂತೆಯೇ ಶೀಘ್ರವಾಗಿ ಕೋಪಗೊಳ್ಳುವವನೆಂದು ತಿಳಿದಿತ್ತು.

ರಾಮನ ಪಾದುಕೆಯನ್ನು ಮುಂದಿಟ್ಟು ಭರತ ರಾಜ್ಯಭಾರ ಮಾಡುವಾಗ ಇಡೀ ರಾಜ್ಯದ ಜವಾಬ್ದಾರಿಯನ್ನು ಶತ್ರುಘ್ನ ನೋಡಿಕೊಳ್ಳುತ್ತಿದ್ದನಂತೆ. ನಂತರ ರಾವಣನ ವಧೆ ನಡೆದು, ರಾಮನ ಪಟ್ಟಾಭಿಷೇಕವಾದ ಬಳಿಕ ಒಂದು ದಿನ ಲವಣಾಸುರ ಎಂಬ ದಾನವನ ಉಪಟಳ ಪ್ರಾರಂಭವಾಗುತ್ತದೆ.

ಆತನ ವಧೆಗಾಗಿ ಯಾರನ್ನು ಕಳಿಸುವುದು ಎಂದು ಪ್ರಸ್ತಾಪ ಬಂದಾಗ ಶತ್ರುಘ್ನ ತಾನೇ ಮುಂದೆ ಬರುತ್ತಾನೆ. ‘ನೀವು (ರಾಮ ಲಕ್ಷ್ಮಣ) ಈಗಷ್ಟೇ ಕಾಡಿನಿಂದ ಬಂದಿರುವಿರಿ, ಅಣ್ಣ ಭರತ ರಾಜ್ಯಭಾರ ಹಾಗೂ ರಾಮನ ಅಗಲುವಿಕೆಯಲ್ಲಿ ಬಳಲಿದ್ದಾನೆ. ಅದಕ್ಕಾಗಿ ನಾನೇ ಹೋಗಿ ಲವಣಾಸುರನ ವಧೆ ಮಾಡಿ ಬರುವೆ’ ಎನ್ನುತ್ತಾನೆ ಶತ್ರುಘ್ನ.

ಅದಕ್ಕೆ ರಾಮ ‘ಸರಿ ಹಾಗಾದರೆ ನೀನು ಲವಣಾಸುರನನ್ನು ಕೊಂದು ಅವನ ನಗರಿಗೆ ರಾಜನಾಗು’ ಎಂದು ನುಡಿಯುತ್ತಾನೆ. ನೀವೆಲ್ಲಾ ನನ್ನ ಹಿರಿಯ ಅಣ್ಣಂದಿರು ಇರುವಾಗ ನಾನು ರಾಜನಾಗುವುದು ಸರಿಯಲ್ಲ ಎನ್ನುವ ಶತ್ರುಘ್ನ, ನಿಮ್ಮಿಂದ ದೂರವಿರುವುದೇ ನನ್ನ ದುರ್ಗತಿ ಎಂದು.

ರಾಮನು ಅವನನ್ನು ಸಮಾಧಾನ ಮಾಡಿ ‘ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿಯಲೇ ಬೇಕು ಶತ್ರುಘ್ನ’ ಸ್ವಲ್ಪ ಸಮಯ ನೀನು ಅಲ್ಲಿ ರಾಜ್ಯಭಾರ ಮಾಡಿ ನಂತರ ಇಲ್ಲಿಗೆ ಬಾ’ ಎನ್ನುತ್ತಾನೆ.

ಅದೇ ರೀತಿ ಶತ್ರುಘ್ನನು ಲವಣಾಸುರನನ್ನು ಕೊಂದು ಅವನ ನಗರವನ್ನು ಮಧುರಾಪುರ ಎಂಬ ಸುಂದರ ನಗರವನ್ನಾಗಿಸಿ ಹನ್ನೆರಡು ವರ್ಷಗಳ ಕಾಲ ಆಳಿ ಅಯೋಧ್ಯೆಗೆ ಮರಳುತ್ತಾನೆ.

ರಾಮನನ್ನು ಕಂಡು ‘ನಿನ್ನ ಮಾತಿನಂತೆ ನಾನು ನಡೆದುಕೊಂಡಿದ್ದೇನೆ ಇನ್ನಾದರೂ ನಿನ್ನ ಜೊತೆ ಇರಿಸಿಕೋ’ ಎನ್ನುತ್ತಾನೆ ಶತ್ರುಘ್ನ. ಅದಕ್ಕೆ ರಾಮ ಹೇಳುತ್ತಾನೆ ‘ರಾಜನಾದವನು ಜವಾಬ್ದಾರಿಗಳಿಂದ ಓಡಿ ಹೋಗಬಾರದು. ನೀನು ಪ್ರಜೆಗಳ ಪಾಲನೆ ಮಾಡುತ್ತಾ, ಆಗಾಗ ಇಲ್ಲಿಗೆ ಬಂದು ನಮ್ಮ ಜೊತೆ ಇದ್ದು ಹೋಗು, ಯಾವತ್ತೂ ರಾಜಧರ್ಮದಿಂದ ಹಿಂದೆ ಸರಿಯಬೇಡ’ ಎನ್ನುತ್ತಾನೆ. ಈ ಮಾತಿನಿಂದ ಶತ್ರುಘ್ನನ ಕಣ್ಣು ತೆರೆಯುತ್ತದೆ. ತನ್ನ ಅಣ್ಣನ ಮಾತನ್ನು ಶಿರಸಾವಹಿಸಿ ಆತ ಮರಳಿ ಮಧುರಾಪುರಕ್ಕೆ ತೆರಳಿ ಅಲ್ಲಿ ರಾಜ್ಯಭಾರ ನಡೆಸುತ್ತಾನೆ.

ಈ ರೀತಿ ಶತ್ರುಘ್ನನಿಗೆ ತನ್ನ ಅಣ್ಣನಾದ ರಾಮನ ಮಾತಿಗೆ ಗೌರವ ನೀಡಬೇಕೆಂಬ ಪರಿಜ್ಞಾನ ಇತ್ತು. ಅದೇ ಸಮಯ ಆತನ ಜೊತೆ ಇರಬೇಕೆಂಬ ಸಹೋದರತೆಯ ಮಮಕಾರದ ಗುಣವೂ ಇತ್ತು.

ರಾಮಾಯಣದಲ್ಲಿ ಶತ್ರುಘ್ನ ಎಂಬ ಪಾತ್ರವು ಅತೀ ಕಡಿಮೆ ಪ್ರಸ್ತಾಪವಾದರೂ ಕೆಲವೊಂದು ಮಹತ್ವದ ಸಂದೇಶವನ್ನು ನೀಡಲು ಸಫಲವಾಗಿದೆ. ಅವುಗಳೆಂದರೆ ಗುರು ಹಿರಿಯರಲ್ಲಿ ವಿಧೇಯತೆ, ಸರಳತೆ, ಅನುಕಂಪ. ಈ ಕಾರಣದಿಂದ ಶತ್ರುಘ್ನನಿಲ್ಲದ ರಾಮಾಯಣವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ಕೃಪೆ: ಸಾಮಾಜಿಕ ಜಾಲತಾಣ.

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!