Hihgg

ಹರಿತಲೇಖನಿ ದಿನಕ್ಕೊಂದು ಕಥೆ: ಬಚ್ಚಿಟ್ಟದ್ದು

Hidden: ಒಂದೂರಿನಲ್ಲಿ ಒಬ್ಬ ಶ್ರೀಮಂತನಿದ್ದ. ಬಡವರಿಗೆ ಸಾಲ ಕೊಡುತ್ತಾ ಅದಕ್ಕೆ ಪ್ರತಿಯಾಗಿ ಹೆಚ್ಚಿನ ಹಣವನ್ನು ಅವರಿಂದ ವಸೂಲಿ ಮಾಡಿ ಧನಿಕನಾಗಿದ್ದ.

ಮಹಾ ಜಿಪುಣನಾಗಿದ್ದ ಆತ ಯಾರಿಗೂ ಕೈಯೆತ್ತಿ ಒಂದು ಪೈಸೆಯನ್ನೂ ದಾನ ಮಾಡುತ್ತಿರಲಿಲ್ಲ. ಗಳಿಸಿದ ಹಣವನ್ನೆಲ್ಲ ಮನೆಯಲ್ಲಿಟ್ಟರೆ ಎಲ್ಲಿ ಕಳ್ಳರು ಕದ್ದುಕೊಂಡು ಹೋಗುತ್ತಾರೋ ಎಂಬ ಭಯದಿಂದ ಊರಾಚೆ ಇರುವ ತನ್ನ ಹೊಲದಲ್ಲಿ ಒಂದು ಬನ್ನಿ ಗಿಡದ ಕೆಳಗೆ ಮಣ್ಣು ಅಗೆದು ಅದರೊಳಗೆ ಹಣ, ಒಡವೆಗಳನ್ನೆಲ್ಲ ಹುಗಿದಿಟ್ಟಿದ್ದ.

ಪ್ರತಿ ರಾತ್ರಿ ಊರೆಲ್ಲ ಮಲಗಿದ ಮೇಲೆ ಒಬ್ಬನೇ ಕಂದಿಲು ಹಿಡಿದು ಬನ್ನಿ ಗಿಡದ ಬಳಿ ತೆರಳಿ ಮಣ್ಣು ಅಗೆದು ಹಣ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು ಬರುತ್ತಿದ್ದ.

ಆ ಊರಿನ ಕಡು ಬಡವನೊಬ್ಬ ಇದೇ ಶ್ರೀಮಂತನ ಬಳಿ ಮಗಳ ಮದುವೆಗೆ ಸಾಲ ಮಾಡಿಕೊಂಡಿದ್ದ. ಆತ ಎಷ್ಟು ದುಡಿದರೂ ಸಾಲ ತೀರಲಿಲ್ಲ. ಶ್ರೀಮಂತ ಒಂದೆರಡು ಬಾರಿ ಬಡವನಿಗೆ ಸಾಲ ತೀರಿಸುವ ಬಗ್ಗೆ ಎಚ್ಚರಿಕೆ ಕೊಟ್ಟಿದ್ದ.

ಒಂದು ದಿನ ಆತ ಬಡವನ ಮನೆಗೆ ಹೋಗಿ ಕೊಟ್ಟ ಹಣ ಮರಳಿ ಕೊಡದೆ ಹೋದರೆ ಮನೆ ಹರಾಜು ಹಾಕುವುದಾಗಿ ತಾಕೀತು ಮಾಡಿ ಬಂದ. ಬಡವ ತನ್ನ ಹೀನ ಸ್ಥಿತಿಗೆ ಬೇಸತ್ತು ನೇಣು ಹಾಕಿಕೊಳ್ಳಲು ಶ್ರೀಮಂತನ ಬನ್ನಿ ಗಿಡದ ಹತ್ತಿರ ಹೋದ.
ಆತ ಮರದ ಮೇಲೆ ಹತ್ತಿ ಹಗ್ಗ ಬಿಗಿಯಬೇಕು ಎನ್ನುವಷ್ಟರಲ್ಲಿ ದೂರದಲ್ಲಿ ಕಂದೀಲು ಬೆಳಕು ತನ್ನೆಡೆಗೆ ಸಾಗಿ ಬರುತ್ತಿರುವದು ಕಾಣಿಸಿತು. ಭಯಗೊಂಡ ಆತ ಮರದ ಮೇಲೆಯೇ ಮೌನವಾಗಿ ಕುಳಿತ.

ಎಂದಿನಂತೆ ಶ್ರೀಮಂತ ಮರದ ಕೆಳಗೆ ಮಣ್ಣು ಅಗೆದು ಬಚ್ಚಿಟ್ಟಿದ್ದ ದುಡ್ಡು, ಒಡವೆಗಳನ್ನೆಲ್ಲ ಕಣ್ಣಿಗೊತ್ತಿಕೊಂಡು ಮತ್ತೆ ಅಲ್ಲಿಯೇ ಇರಿಸಿ ಮಣ್ಣು ಮುಚ್ಚಿ ಮನೆಗೆ ತೆರಳಿದ. ಇದನ್ನು ಮರದ ಮೇಲೆ ನೋಡುತ್ತಾ ಕುಳಿತಿದ್ದ ಬಡವ, ಶ್ರೀಮಂತ ಹೋದ ಬಳಿಕ ಕೆಳಗಿಳಿದು ಅವಿತಿಟ್ಟಿದ್ದ ಅಪಾರ ದುಡ್ಡು, ಬಂಗಾರದ ಒಡವೆಗಳನ್ನೆಲ್ಲ ತೆಗೆದುಕೊಂಡು ದೇವರಿಗೆ ಮನದಲ್ಲಿಯೇ ವಂದಿಸುತ್ತ ಖುಷಿಯಿಂದ ಸಾಗಿದ.

ಮಾರನೆಯ ದಿನ ಶ್ರೀಮಂತನಿಗೆ ಸಾಲದ ಹಣ ಕೊಟ್ಟು ಉಳಿದ ಹಣವನ್ನು ತನ್ನಂತೆ ತಾಪತ್ರಯದಲ್ಲಿ ಇರುವ ಬಡವರಿಗೆ ಹಂಚಿದ.

ಅದೇ ದಿನ ರಾತ್ರಿ ಆ ಶ್ರೀಮಂತ ಎಂದಿನಂತೆ ಬನ್ನಿ ಗಿಡದ ಕೆಳಗೆ ಬಂದು ನೋಡಿದರೆ ಅಲ್ಲಿಟ್ಟಿದ್ದ ಹಣ, ಒಡವೆಯೆಲ್ಲ ಕಣ್ಮರೆಯಾಗಿದ್ದವು. ಆತ ಎದೆ ಬಡಿದುಕೊಂಡು, ದೊಡ್ಡ ದನಿಯಲ್ಲಿ ಕಿರುಚುತ್ತಾ ಗೋಳಾಡತೊಡಗಿದ. ಅದಕ್ಕೆ ಹಿರಿಯರು ಹೇಳೋದು ‘ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ’.

ಕೃಪೆ: ಸಾಮಾಜಿಕ ಜಾಲತಾಣ

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!