A story for the day of the Harithalekhani: God

ಹರಿತಲೇಖನಿ ದಿನಕ್ಕೊಂದು ಕಥೆ: ದೇವರು

Harithalekhani: ಒಂದು ಬಂದರಿನಲ್ಲಿ ದೊಡ್ಡ ಹಡಗೊಂದು ನಿಂತಿತ್ತಂತೆ. ಅದರ ಸ್ಥಂಭದ ಮೇಲೆ ಒಂದು ಹಕ್ಕಿ ಬಂದು ಕುಳಿತಿತ್ತು. ಹಡಗಿನಲ್ಲೂ ಅದಕ್ಕೆ ಕಾಳುಕಡ್ಡಿ ಸಿಗುತ್ತಿದ್ದವು. ಆನಂದವಾಗಿ ಕಾಳುಕಡ್ಡಿ ತಿನ್ನುತ್ತ ಹಡಗಿನ ಪಟಗಳ ಮಧ್ಯೆ ಹಕ್ಕಿ ಹಾರಾಡಿಕೊಂಡಿತ್ತು.

ಈ ಮಧ್ಯೆ ಹಡಗು ಯಾನಕ್ಕೆ ಹೊರಟಿದ್ದು ಅದರ ಗಮನಕ್ಕೆ ಬರಲಿಲ್ಲ. ಎಷ್ಟೋ ಹೊತ್ತಿನ ನಂತರ ಅದು ಮತ್ತೆ ಪಟಸ್ಥಂಭದ ಮೇಲೆ ಬಂದು ಕುಳಿತಾಗ ಅದಕ್ಕೆ ಎಲ್ಲೆಲ್ಲೂ ನೀರೇ ಕಾಣಿಸುತ್ತಿತ್ತು. ದಡ ಕಾಣಿಸಲಿಲ್ಲ. ಅದಕ್ಕೆ ದಡದಲ್ಲಿದ್ದರೆ ತನಗೆ ಇನ್ನೂ ಹೆಚ್ಚು ಕಾಳುಕಡ್ಡಿ ಸಿಗಬಹುದು, ಇನ್ನೂ ಆನಂದವಾಗಿರಬಹುದು ಎನಿಸಿತು.

ಹರೆಯದಲ್ಲಿರುವ ಹಕ್ಕಿಗೆ ತನ್ನ ರೆಕ್ಕೆಗಳ ಮೇಲೆ ಅತೀವ ವಿಶ್ವಾಸ. ದಡವನ್ನು ಹುಡುಕಿಕೊಂಡು ಉತ್ತರದಿಕ್ಕಿಗೆ ಹಾರಿತು.
ರೆಕ್ಕೆಗಳು ಬಳಲುವಷ್ಟು ಹಾರಿದರೂ ದಡ ಕಾಣಲಿಲ್ಲ. ಅದು ಹಿಂದಕ್ಕೆ ಹಾರಿ ಬಂದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಕುಳಿತಿತು. ಸ್ವಲ್ಪ ಹೊತ್ತು ದಣಿವಾರಿಸಿಕೊಂಡ ನಂತರ ದಕ್ಷಿಣ ದಿಕ್ಕಿಗೆ ಹೋದರೆ ದಡ ಸಿಗಬಹುದು ಎಂದುಕೊಂಡು ದಕ್ಷಿಣ ದಿಕ್ಕಿಗೂ ಹೋಯಿತು. ಹಾರಿಹಾರಿ ರೆಕ್ಕೆಗಳು ಬಳಲಿದವು. ಆದರೆ ದಡ ಕಾಣಲಿಲ್ಲ.

ಅದು ಮತ್ತೆ ಹಡಗಿನ ಪಟಸ್ಥಂಭದ ಮೇಲೆಯೇ ಬಂದು ಕುಳಿತಿತು. ಆನಂತರ ಅದು ಪೂರ್ವ ದಿಕ್ಕಿಗೆ ಹೋಗಿ ಬಂತು. ಪಶ್ಚಿಮ ದಿಕ್ಕಿಗೂ ಹೋಗಿ ಬಂತು. ಎಲ್ಲಿಯೂ ದಡ ಕಾಣಲಿಲ್ಲ…!

ಕೊನೆಗೆ ಪಟಸ್ಥಂಭದ ಮೇಲೆಯೇ ಕುಳಿತು ಕೆಳಗೆ ನೋಡಿತು. ಕೆಳಗೂ ಕಾಳು ಕಡ್ಡಿಗಳು ಕಂಡವು. ನಾನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವ ವಸ್ತುಗಳು ಇಲ್ಲಿಯೇ ಇವೆಯಲ್ಲ ಎಂದು ಸಮಾಧಾನಪಟ್ಟುಕೊಂಡು ನಂತರದ ದಿನಗಳನ್ನು ಅಲ್ಲಿಯೇ ಆನಂದವಾಗಿ ಕಳೆಯಿತು.

ಈ ಕತೆಯಲ್ಲಿ ದಡವನ್ನು ಅರಸಿಕೊಂಡು ನಾಲ್ಕೂ ದಿಕ್ಕಿಗೆ ಹಾರಿ ಬಳಲಿ ಮತ್ತೆ ಹಡಗಿಗೇ ಮರಳಿ ಬರುವ ಹಕ್ಕಿಯ ಪರಿಸ್ಥಿತಿ ನಮ್ಮೆಲ್ಲರದ್ದು.!

ನಾವು ಕೂಡ ದೇವರನ್ನು ಅರಸುತ್ತ ಎಲ್ಲ ದಿಕ್ಕುಗಳಿಗೂ ಹೋಗುತ್ತೇವೆ. ಇಲ್ಲಿ ಸಿಗಲಿಲ್ಲ, ಅಲ್ಲಿ ಸಿಗಬಹುದು ಎಂದು ಅಲ್ಲಿಗೆ ಹೋಗುತ್ತೇವೆ. ಅಲ್ಲಿಯೂ ಸಿಗದಿದ್ದರೆ ಮತ್ತೆಲ್ಲಿಯೋ ಸಿಗಬಹುದೆಂದು ಮತ್ತೆಲ್ಲಿಗೋ ಹೋಗುತ್ತೇವೆ. ಆದರೆ ದೇವರು ನಾವೆಲ್ಲಿದ್ದೇವೆಯೋ, ಅಲ್ಲಿಯೇ ನಮಗೆ ಸಿಗುತ್ತಾನೆ! ದೇವರು ಬೇರೆಲ್ಲಿಯೋ ಇದ್ದಾನೆ ಎಂದು ಭಾವಿಸುವ ಮಾನವರು, ದೇವರು ನಾವೆಲ್ಲಿದ್ದೇವೆಯೋ ಅಲ್ಲಿಯೇ ಇದ್ದಾನೆಂದು ಅರಿತು ಕೊಳ್ಳೊಣ ನಾವು ದೇವರನ್ನು ಹುಡುಕುತ್ತಿಲ್ಲ.

ನಾವು ಹುಡುಕುತ್ತಿರುವುದು ಮನಃಶಾಂತಿಯನ್ನು, ತೃಪ್ತಿಯನ್ನು, ಆನಂದವನ್ನೂ ಎನ್ನುವವರು ನಾವಾದರೆ, ಅದನ್ನು ಎಲ್ಲೆಲ್ಲಿಯೋ ಹುಡುಕಿಕೊಂಡು ಹೋಗುವುದರಲ್ಲಿ ಅರ್ಥವಿದೆಯೇ? ನಾವಿರುವಲ್ಲಿಯೇ ಲಭ್ಯವಿರುವ ಅವುಗಳನ್ನು ಎಲ್ಲೆಲ್ಲಿಯೋ ಅರಸಿಕೊಂಡು ಹೋಗುವುದು ವ್ಯರ್ಥವಲ್ಲವೇ?

ಕೃಪೆ: ಲೇಖಕರ ಮಾಹಿತಿ ಲಭ್ಯವಿಲ್ಲ. (ಸಾಮಾಜಿಕತಾಣ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!