Harithalekhani; psyche

ಹರಿತಲೇಖನಿ ದಿನಕ್ಕೊಂದು ಕಥೆ: ಮನಸ್ಸು

Harithalekhani: ಸಮರ್ಥ ರಾಮದಾಸ ಸ್ವಾಮೀಜಿಯವರು ಒಬ್ಬ ಶ್ರೇಷ್ಠ ಸಂತರಿದ್ದರು. ಅವರು ಹಳ್ಳಿಹಳ್ಳಿಗಳಿಗೆ ಸಂಚರಿಸಿ ಮನೆಮನೆಯಿಂದ ಭಿಕ್ಷೆ ಪಡೆಯುತ್ತಿದ್ದರು. ಅವರು ಭಿಕ್ಷೆ ಕೇಳುವಾಗ, ಆ ಮನೆಯ ಮುಂದೆ ಹೋಗಿ ‘ಓಂ ಭವತಿ ಭಿಕ್ಷಾಂ ದೇಹಿ’ (ತಾಯಿ, ಭಿಕ್ಷೆ ನೀಡು) ಎಂದು ಹೇಳುತ್ತಿದ್ದರು. ಅವರು ಭಿಕ್ಷೆ ಕೇಳುವಾಗ ಕೆಲವರು ಅವರನ್ನು ಅವಮಾನಿಸಿದರೆ, ಕೆಲವರು ಅವರನ್ನು ಸ್ವಾಗತಿಸುತ್ತಿದ್ದರು.

ಕೆಲವು ಜನರು ಭಿಕ್ಷೆಯನ್ನು ಸಂತೋಷದಿಂದ ನೀಡಿದರೆ ಅಥವಾ ಕೆಲವರು ಒಲ್ಲದ ಮನಸ್ಸಿನಿಂದ ನೀಡುತ್ತಿದ್ದರು. ಕೆಲವು ಸ್ಥಳದಲ್ಲಿ ಆ ಮನೆಯ ಜನರ ದುರಹಂಕಾರ ಬಹಿರಂಗವಾಗುತ್ತಿತ್ತು. ಕೆಲವೊಮ್ಮೆ ಅವರಿಗೆ ಭಿಕ್ಷೆ ದೊರಕುತ್ತಿತ್ತು, ಕೆಲವೊಮ್ಮೆ ದೊರಕುತ್ತಿರಲಿಲ್ಲ; ಆದರೆ ರಾಮದಾಸ ಸ್ವಾಮೀಜಿಯವರು ಯಾವಾಗಲೂ ಆನಂದದಿಂದ ಇರುತ್ತಿದ್ದರು.

ಒಂದು ದಿನ ಒಂದು ಹಳ್ಳಿಯಲ್ಲಿ ಅವರಿಗೆ ಭಿಕ್ಷೆಯಲ್ಲಿ ಏನೂ ಸಿಗಲಿಲ್ಲ. ಆದರೆ ಸಮರ್ಥರಿಗೆ ಸ್ವಲ್ಪವೂ ಕೋಪ ಬರಲಿಲ್ಲ. ಭಿಕ್ಷೆಯಲ್ಲಿ ಇಂದು ಏನು ದೊರಕದಿದ್ದರೂ ಸರಿ. ಪ್ರಭು ಶ್ರೀರಾಮನ ಇಚ್ಛೆಯಂತೆ ಆಗಲಿ. ಇದು ಸಹ ದೇವರ ಕೊಡುಗೆಯೇ ಇದೆ, ಇದರಲ್ಲಿ ನೊಂದುಕೊಳ್ಳುವಂತಹದು ಏನಿದೆ ! ಅದರಲ್ಲಿ ಕಷ್ಟಕರ ಏನಿದೆ ಎಂದು ಅವರು ರಾಮನಾಮ ಜಪಿಸುತ್ತ ಅಲ್ಲಿಂದ ಮುಂದಿನ ಗ್ರಾಮವನ್ನು ತಲುಪಿದರು.

ಅಲ್ಲಿ ಅವರು ಒಂದು ಬಹಳ ದೊಡ್ಡ ಮನೆಯ ಮುಂದೆ ಬಂದು ನಿಂತರು. ಆ ಮನೆಯಲ್ಲಿ ವಾಸಿಸುವ ಜನರೆಲ್ಲರೂ ಅಹಂಕಾರಿಗಳಾಗಿದ್ದರು. ಸಮರ್ಥರು ಭಿಕ್ಷೆಗಾಗಿ ಅಲ್ಲಿಗೆ ಹೋದರು. ‘ಓಂ ಭವತಿ ಬಿಕ್ಷಾಂ ದೇಹಿ’ ಎಂಬ ಧ್ವನಿಯನ್ನು ಕೇಳಿದ ಮಹಿಳೆಯೊಬ್ಬಳು ಉತ್ತಮ ಖಾದ್ಯವನ್ನು ತಂದು ನೀಡಿದಳು.

ಮಹಿಳೆ ಸೊಕ್ಕಿನವಳಾಗಿದ್ದಳು. ಸಮರ್ಥರಿಗೆ ಇದು ತಿಳಿದಿತ್ತು. ಸಮರ್ಥರು ಮನಸ್ಸಿನಲ್ಲಿಯೇ ನಗುತ್ತಾ, ‘ಶ್ರೀ ರಾಮಾ, ಈ ಮಹಿಳೆಗೆ ಸದ್ಬುದ್ಧಿ ನೀಡಿರಿ’ ಎಂದು ಹೇಳಿದರು. ನಂತರ ಆ ಭಿಕ್ಷೆಯನ್ನು ಸ್ವೀಕರಿಸಿ ನೇರವಾಗಿ ನದಿಯ ಕಡೆಗೆ ಹೋದರು.

ಮಕ್ಕಳೇ ಸಮರ್ಥರು ಭಿಕ್ಷೆಯಲ್ಲಿ ದೊರೆತ ಅನ್ನವನ್ನು ನದಿ ನೀರಿನಿಂದ ತೊಳೆಯುತ್ತಿದ್ದರು. ಅವರಿಗೆ ಸಿಹಿ, ಖಾರ, ಹುಳಿ, ಮಸಾಲೆಯುಕ್ತ ಪದಾರ್ಥಗಳ ಯಾವುದೇ ರುಚಿ ಅಗತ್ಯವಿರಲಿಲ್ಲ. ಭಿಕ್ಷೆಯಲ್ಲಿ ಪಡೆದ ಆಹಾರದ ಪೂರ್ಣ ರುಚಿ ಅದು ನದಿಯ ನೀರಿನಲ್ಲಿ ತೊಳೆದು ಹೋಗುವ ತನಕ, ಭಿಕ್ಷೆಯ ಚೀಲವನ್ನು ನದಿಯ ನೀರಿನಲ್ಲಿ ಮುಣುಗಿಸಿಡುತ್ತಿದ್ದರು, ಅನಂತರವೇ ಅದನ್ನು ತಿನ್ನುತ್ತಿದ್ದರು

ಒಂದು ದಿನ ಆ ಮಹಿಳೆ ಸಮರ್ಥರು ಇಷ್ಟು ದಿನಗಳಿಂದ ಇಲ್ಲಿಗೆ ಬರುತ್ತಿದ್ದಾರೆ, ನಾನು ಅವರಿಗೆ ಭಿಕ್ಷೆ ನೀಡುತ್ತಿದ್ದೇನೆ. ಈಗ ಅವರು ನನಗೆ ಏನಾದರೂ ಉಪದೇಶ ನೀಡಬೇಕು ಎಂದು ಅಂದುಕೊಂಡಳು. ಮಕ್ಕಳೇ, ಜನರು ದೇವರೊಂದಿಗೆ, ಸಂತರೊಂದಿಗೂ ಕೊಡುಕೊಳ್ಳುವ ಭಾಷೆಯಲ್ಲಿ ಮಾತನಾಡುತ್ತಾರೆ.

‘ಭಗವಂತಾ, ನೀನು ನನಗೆ ಇದನ್ನು ಕೊಡು, ನಾನು ನಿನಗೆ ಅದನ್ನು ಕೊಡುತ್ತೇನೆ’ ಎಂಬ ಲೆಕ್ಕಚಾರ ಮಾಡುತ್ತಾರೆ. ನಮ್ಮಿಂದ ಏನನ್ನಾದರೂ ಪಡೆಯಲೆಂದು ದೇವರು ಹಸಿದಿರುತ್ತಾರೆಯೇ ? ಇಡೀ ಜಗತ್ತನ್ನೇ ಸ್ವತಃ ಪೋಷಿಸುವ ದೇವರು, ನಮ್ಮ ಸಂಪತ್ತು ಮತ್ತು ಇತರ ವಸ್ತುಗಳನ್ನು ಪಡೆಯಲು ಬಯಸುತ್ತಾರೆಯೇ? ಆದರೆ ಅಹಂಕಾರಿಗಳು ‘ತಮ್ಮಿಂದಲೇ ಎಲ್ಲವೂ ನಡೆಯುತ್ತಿದೆ’ ಎಂದು ಭಾವಿಸುತ್ತಾರೆ. ಹಾ, ಆ ಮಹಿಳೆ ‘ಈ ತಪಸ್ವಿಗೆ ನಾನು ಪ್ರತಿದಿನ ಭಿಕ್ಷೆ ನೀಡುತ್ತೇನೆ’ ಭಾವಿಸಿದ್ದಳು, ‘ಆದ್ದರಿಂದ ಅವರು ನನಗೆ ಉಪದೇಶಿಸುವುದು ನನ್ನ ಹಕ್ಕು’ ಎಂದು ವಿಚಾರ ಮಾಡಿದಳು.

ಮರುದಿನ, ಭಿಕ್ಷೆ ಕೇಳಲು ಸಮರ್ಥರು ಮನೆಗೆ ತಲುಪಿದಾಗ, ಆ ಮಹಿಳೆ, ‘ನಾನು ನಿಮಗೆ ಪ್ರತಿದಿನ ಭಿಕ್ಷೆ ನೀಡುತ್ತೇನೆ, ಆದ್ದರಿಂದ ಇಂದು ನೀವು ನನಗೆ ಏನಾದರೂ ಉಪದೇಶ ನೀಡಬೇಕು’ ಎಂದು ಪಟ್ಟು ಹಿಡಿದಳು. ಆಗ ಸಮರ್ಥರು ನಕ್ಕರು, ‘ಸಮಯ ಬಂದಾಗ ಹೇಳುತ್ತೇನೆ’ ಎಂದರು.

ಇದನ್ನು ಕೇಳಿದ ಮಹಿಳೆಗೆ ಅವಮಾನ ಅನಿಸಿತು. ‘ನಾನು ಪ್ರತಿದಿನ ಸಮರ್ಥರಿಗೆ ಭಿಕ್ಷೆ ನೀಡುತ್ತೇನೆ ಮತ್ತು ನಾನು ಏನನ್ನಾದರೂ ಕೇಳುತ್ತಿದ್ದರೆ, ಸಮಯ ಬಂದಾಗ ಎಂದು ಹೇಳುತ್ತಾರೆ. ಇದರ ಅರ್ಥವೇನು? ನನಗೆ ಅಧಿಕಾರವಿದೆ. ನಾನು ಭಿಕ್ಷೆ ನೀಡುತ್ತಿದ್ದೇನೆ, ಅವರು ನನ್ನ ಕಾಲಿನ ಹತ್ತಿರ ಕುಳಿತು ಸುಮ್ಮನೆ ನನಗೆ ಉಪದೇಶಿಸಬೇಕು. ನಾನು ಅವರ ಕಾಲಿನ ಹತ್ತಿರ ಕುಳಿತುಕೊಳ್ಳುವುದಿಲ್ಲ! ಎಲ್ಲರೂ ಅವರನ್ನು ಸಂತರು ಎಂದು ಕರೆಯುತ್ತಾರೆ, ಆದರೆ ಅವರು ನನ್ನ ಕಾಲಿನ ಹತ್ತಿರ ಕುಳಿತು ನನಗೆ ಉಪದೇಶಿಸಬೇಕು’ ಎಂಬ ವಿಚಾರದಿಂದ ಹಠ ಹಿಡಿದಳು.

ಸಮರ್ಥರು ಮತ್ತೆ, ‘ಇಲ್ಲ ತಾಯಿ. ಸಮಯ ಬಂದಾಗ ನಾನು ಉಪದೇಶ ಕೊಡುತ್ತೇನೆ’ ಎಂದರು. ಮಹಿಳೆ ಮತ್ತೆ ಆಗ್ರಹ ಮಾಡಿದಾಗ ಅವರು, ‘ತಾಯಿ, ಈಗ ಮಧ್ಯಾಹ್ನವಾಗಿದೆ. ಇದು ನನ್ನ ಊಟದ ಸಮಯ. ನಾಳೆ ನಾನು ಖಂಡಿತವಾಗಿಯೂ ನಿಮಗೆ ಹೇಳಿಕೊಡುತ್ತೇನೆ’ ಎಂದು ಹೇಳಿದರು.

ಅದಕ್ಕೆ ಅವಳು ಒಪ್ಪಿದಳು. ‘ಆ ಸನ್ಯಾಸಿಯನ್ನು ನನ್ನ ಮಾತು ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಅವಳು ತುಂಬಾ ಸಂತೋಷಪಡುತ್ತ, ಮನೆಮಂದಿಗೆಲ್ಲ ಈ ವಿಷಯವನ್ನು ಹೇಳಿದಳು.

ಮರುದಿನ, ಮಹಿಳೆಯ ಮನೆಗೆ ಹೋಗುವ ಮೊದಲು ಸಮರ್ಥರು ತಮ್ಮ ಬಟ್ಟಲಿನಲ್ಲಿ ಮಣ್ಣು ಮತ್ತು ಸ್ವಲ್ಪ ಸಗಣಿ ತುಂಬಿದರು. ಅವರು ಆ ಬಟ್ಟಲನ್ನು ತೆಗೆದುಕೊಂಡು ಆ ದೊಡ್ಡ ಮನೆಯ ಅಂಗಳದಲ್ಲಿ ನಿಂತು, ‘ಜೈ ಜೈ ರಘುವೀರ ಸಮರ್ಥ ! ತಾಯಿ ಭಿಕ್ಷೆ ನೀಡಿ ! ಭವತಿ ಭಿಕ್ಷಾಂ ದೇಹಿ !’ ಎಂದು ಕೂಗಿದರು.

ಮಹಿಳೆ ಹೊರಗೆ ಬಂದಳು. ಇಂದು ಅವಳಿಗೆ ಉಪದೇಶ ಸಿಗುತ್ತದೆ, ಆದ್ದರಿಂದ ಅವಳು ತುಂಬಾ ಸಂತೋಷವಾಗಿದ್ದಳು. ಬಾದಾಮಿ, ಒಣದ್ರಾಕ್ಷಿ, ಕೇಶರ ಇತ್ಯಾದಿಗಳನ್ನು ಸೇರಿಸಿ ರುಚಿಕರವಾದ ಪಾಯಸ ತಯಾರಿಸಿದಳು. ಸಮರ್ಥ ರಾಮದಾಸ ಸ್ವಾಮೀಜಿ ತಮ್ಮ ಬಟ್ಟಲನ್ನು ಮುಂದಿಟ್ಟರು.

ಸನ್ಯಾಸಿಯ ಬಟ್ಟಲಿನಲ್ಲಿ ಮಣ್ಣು ಮತ್ತು ಸಗಣಿ ಇರುವುದನ್ನು ಮಹಿಳೆ ನೋಡಿದಳು. ಆ ಮಹಿಳೆ ಅವರಿಗೆ, “ಏನಯ್ಯಾ, ಏನಿದು! ಈ ಬಟ್ಟಲಿನಲ್ಲಿ ಕೆಸರು ಇದೆ, ನನ್ನ ಪಾಯಸ ವ್ಯರ್ಥವಾಗುತ್ತದೆ” ಎಂದು ರೇಗಿದಳು. ಸಮರ್ಥರು, ‘ಪರವಾಗಿಲ್ಲ ತಾಯಿ, ನೇವು ಪಾಯಸ ಸುರಿಯಿರಿ’ ಎಂದು ಹೇಳಿದರು.

ಹೀಗೆ ಇದು ಒಂದೆರಡು ಬಾರಿ ಅಲ್ಲ, ಹತ್ತು ಬಾರಿ ಸಂಭವಿಸಿತು. ಆಗ ಆ ಮಹಿಳೆಯು, “ನೀನು ನನಗೆ ಯಾಕೆ ಹೀಗೆ ಮಾಡುತ್ತಿದ್ದೀಯಾ?” ಎಂದು ಕೂಗಿ ಆ ಪಾಯಸದ ಪಾತ್ರೆಯನ್ನು ಬದಿಗಿಟ್ಟಳು. ಸಮರ್ಥರ ಕೈಯಿಂದ ಬಟ್ಟಲನ್ನು ಕಿತ್ತು, ‘ಈ ಹೊಲಸಿನಲ್ಲಿ ಪಾಯಸ ಹೇಗೆ ನೀಡುವುದು? ಮೊದಲು ಈ ಬಟ್ಟಲನ್ನು ತೊಳೆದು, ಅದನ್ನು ಸ್ವಚ್ಛಗೊಳಿಸಿ ತಂದುಕೊಡು’ ಎಂದಳು.

ಆಗ ಸಮರ್ಥರು ಬಟ್ಟಲನ್ನು ಸ್ವಚ್ಛಗೊಳಿಸಿ ಅದನ್ನು ಮಹಿಳೆಯ ಮುಂದೆ ತಂದಿಟ್ಟರು. ಅವಳು ಪಾಯಸವನ್ನು ನೀಡಲು ಹೊರಟಿದ್ದಳು, ಅಷ್ಟರಲ್ಲಿ ಅವರು ಬಟ್ಟಲನ್ನು ಹಿಂದಕ್ಕೆ ತೆಗೆದುಕೊಂಡರು. ಅವರು, ‘ನಿಮಗೆ ಧರ್ಮೋಪದೇಶ ಬೇಕು, ಅಲ್ಲವೇ’ ಎಂದರು. ಮಹಿಳೆ ತುಂಬಾ ಸಂತೋಷಗೊಂಡಳು.

ಸಮರ್ಥರು, ‘ನೋಡಿ ಈ ಬಟ್ಟಲಿನಲ್ಲಿ ತುಂಬಾ ಹೊಲಸು ಇತ್ತು; ಅದಕ್ಕಾಗಿಯೇ ನೀವು ಆ ಪಾಯಸವನ್ನು ನೀಡಲಿಲ್ಲ. ನಾನು ಆ ಬಟ್ಟಲನ್ನು ಸ್ವಚ್ಛಗೊಳಿಸಿ ತಂದಾಗ, ಅದರಲ್ಲಿ ನೀವು ಪಾಯಸ ಹಾಕಲು ಸಿದ್ಧರಾದಿರಿ. ಅದೇ ರೀತಿಯಲ್ಲಿ, ನಿಮ್ಮ ಮನಸ್ಸಿನಲ್ಲಿರುವ ಅಹಂಕಾರದ ‘ನಾನು’ ಎಂಬ ಹೊಲಸು ತುಂಬಿದೆ, ಅದನ್ನು ಹೊರಹಾಕುವ ತನಕ, ನಿಮ್ಮ ಮನಸ್ಸಿನಲ್ಲಿ ನಾನು ಉಪದೇಶದ ಪಾಯಸವನ್ನು ಹೇಗೆ ಹಾಕಲಿ?’

ಇದನ್ನು ಕೇಳಿದ ತಕ್ಷಣ ಮಹಿಳೆ ನಡುಗಿದಳು. ಅವಳಿಗೆ ನಿಂತ ಭೂಮಿಯೇ ಕುಸಿದಂತಾಯಿತು. ಕಣ್ಣುಗಳಿಂದ ಕಣ್ಣೀರು ಹರಿಯಲಾರಂಭಿಸಿತು. ಅವಳು ಸಮರ್ಥರ ಕಾಲಿಗೆ ಬಿದ್ದು ನಮಸ್ಕರಿಸಿದಳು.

“ಮಹಾರಾಜರೇ, ನನ್ನಿಂದ ತಪ್ಪಾಗಿದೆ!” ಎಂದು ಅವಳು ಹೇಳಿದಳು. ಅವಳ ದುರಹಂಕಾರ ಆ ಕಣ್ಣೀರಿನೊಂದಿಗೆ ಹರಿದು ಹೋಯಿತು. ಸಮರ್ಥರು, “ತಾಯಿ, ಮನಸ್ಸನ್ನು ಸ್ವಲ್ಪ ಶುದ್ಧೀಕರಿಸಿರಿ ! ಸ್ವಲ್ಪ ಆ ಅಹಂಕಾರವನ್ನು ತೆಗೆದುಹಾಕಿ. ನನ್ನ ಉಪದೇಶವನ್ನು ಮನಸ್ಸಿನಲ್ಲಿಡಿ. ನಿಮ್ಮ ಅಂತಃಕರಣದಲ್ಲಿ ಸ್ವಲ್ಪ ಜಾಗವನ್ನು ಮಾಡಿ. ಆಗ ನಾನು ಉಪದೇಶಿಸುತ್ತೇನೆ !” ಎಂದು ಹೇಳಿ ಹೊರಟು ಹೋದರು.

ಈ ರೀತಿ ಸಮರ್ಥ ರಾಮದಾಸರು ಆ ಮಹಿಳೆಯ ಅಹಂಕಾರದ ಮನಸ್ಸನ್ನು ಶುದ್ಧ ಮನಸ್ಸಾಗಿ ಪರಿವರ್ತಿಸಿ ಎಲ್ಲರಿಗೂ ತೋರಿಸಿದರು. ಮನಸ್ಸು ಸ್ವಚ್ಛವಾಗಿದ್ದರೆ ಎಲ್ಲವೂ ಪವಿತ್ರ ಗಂಗೆ ಎಂದು ಎಲ್ಲರಿಗೂ ತೋರಿಸಿಕೊಟ್ಟರು !

ಕೃಪೆ: ಹಿಂದೂ ಜಾಗೃತಿ (ಸಾಮಾಜಿಕ ಜಾಲತಾಣ)

ರಾಜಕೀಯ

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ: ನಾರಾ ಲೋಕೇಶ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್

“ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ” ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ (Nara

[ccc_my_favorite_select_button post_id="115011"]

ಬೆದರಿಕೆ ಕರೆ.. Video ಪೋಸ್ಟ್ ಮಾಡಿದ ಸಚಿವ

[ccc_my_favorite_select_button post_id="115009"]

300 ರೂ. ಊಟ ಕೊಟ್ಟು 300 ಕೋಟಿ

[ccc_my_favorite_select_button post_id="114973"]

Bihar Election; ಬಿಜೆಪಿ ಪಟ್ಟಿ ಬಿಡುಗಡೆ

[ccc_my_favorite_select_button post_id="114963"]
ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ: Cm ಸಿದ್ದರಾಮಯ್ಯ ಎಚ್ಚರಿಕೆ

ಪ್ರಾಣಿ ಸಂಪತ್ತು ಇಲ್ಲದೆ ಅರಣ್ಯ ಸಂಪತ್ತಿಗೆ ಮೌಲ್ಯವೇ ಇಲ್ಲ. ಹೀಗಾಗಿ ಪ್ರಾಣಿ ಸಂಪತ್ತನ್ನು ಕೊಲ್ಲುವವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಅವರು ಸ್ಪಷ್ಟ ಎಚ್ಚರಿಕೆ ನೀಡಿದರು.

[ccc_my_favorite_select_button post_id="114725"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ಯೋಗ ಚಾಂಪಿಯನ್‌ಶಿಪ್: ವಿ.ವರ ಪ್ರಸಾದ್‌ಗೆ ಚಿನ್ನದ ಪದಕ

ನಿಸರ್ಗ ಯೋಗ ಕೇಂದ್ರದ ಹಾಗೂ ರಾಜ್ಯ ಬಾಲಕರ ಯೋಗ ತಂಡದ ನಾಯಕ ವಿ.ವರ ಪ್ರಸಾದ್ (V. Vara Prasad) 50ನೇ ಗೋಲ್ಡನ್‌ ಜುಬ್ಲಿ ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್ (Yoga Championship) ನಲ್ಲಿ ಭಾಗವಹಿಸಿ ಚಿನ್ನದ

[ccc_my_favorite_select_button post_id="114944"]
ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ದೊಡ್ಡಬಳ್ಳಾಪುರ: ಅರಸಮ್ಮ ದೇವಾಲಯದಲ್ಲಿ ಕಳವು

ಅರಸಮ್ಮ ದೇವಾಲಯದ (Arasamma Temple) ಬಾಗಿಲಿನ ಬೀಗ ಹೊಡೆದು ಹುಂಡಿ ಹಾಗೂ ದೇವರ ಆಭರಣಗಳನ್ನು ಕಳವು ಮಾಡಿರುವ ಪ್ರಕರಣ ಭಾನುವಾರ ರಾತ್ರಿ ನಡೆದಿದೆ.

[ccc_my_favorite_select_button post_id="114950"]
ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರದಲ್ಲಿ ಸತತ 3ನೇ ಅಪಘಾತ..! ಬೈಕ್ ಸವಾರನ ಸ್ಥಿತಿ ಗಂಭೀರ

ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆ 9.15 ರ ವರೆಗೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸತತ 3ನೇ ಅಪಘಾತ (Accident) ಪ್ರಕರಣ ವರದಿಯಾಗುತ್ತಿದೆ.

[ccc_my_favorite_select_button post_id="114999"]

ಆರೋಗ್ಯ

ಸಿನಿಮಾ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ದಿನ ಭವಿಷ್ಯ: ಈ ರಾಶಿಯವರಿಂದು ಅತಿಯಾದ ಒತ್ತಡಕ್ಕೆ ಸಿಲುಕದಿರಿ

ರಾಹುಕಾಲ: 07:30AM ರಿಂದ 09:00AM, ಗುಳಿಕಕಾಲ: 01:30PM ರಿಂದ 03:00PM, ಯಮಗಂಡಕಾಲ: 10:30AM ರಿಂದ 12:00PM, Astrology

[ccc_my_favorite_select_button post_id="114397"]
error: Content is protected !!