Harithalekhani; psyche

ಹರಿತಲೇಖನಿ ದಿನಕ್ಕೊಂದು ಕಥೆ: ಮನಸ್ಸು

Harithalekhani: ಸಮರ್ಥ ರಾಮದಾಸ ಸ್ವಾಮೀಜಿಯವರು ಒಬ್ಬ ಶ್ರೇಷ್ಠ ಸಂತರಿದ್ದರು. ಅವರು ಹಳ್ಳಿಹಳ್ಳಿಗಳಿಗೆ ಸಂಚರಿಸಿ ಮನೆಮನೆಯಿಂದ ಭಿಕ್ಷೆ ಪಡೆಯುತ್ತಿದ್ದರು. ಅವರು ಭಿಕ್ಷೆ ಕೇಳುವಾಗ, ಆ ಮನೆಯ ಮುಂದೆ ಹೋಗಿ ‘ಓಂ ಭವತಿ ಭಿಕ್ಷಾಂ ದೇಹಿ’ (ತಾಯಿ, ಭಿಕ್ಷೆ ನೀಡು) ಎಂದು ಹೇಳುತ್ತಿದ್ದರು. ಅವರು ಭಿಕ್ಷೆ ಕೇಳುವಾಗ ಕೆಲವರು ಅವರನ್ನು ಅವಮಾನಿಸಿದರೆ, ಕೆಲವರು ಅವರನ್ನು ಸ್ವಾಗತಿಸುತ್ತಿದ್ದರು.

ಕೆಲವು ಜನರು ಭಿಕ್ಷೆಯನ್ನು ಸಂತೋಷದಿಂದ ನೀಡಿದರೆ ಅಥವಾ ಕೆಲವರು ಒಲ್ಲದ ಮನಸ್ಸಿನಿಂದ ನೀಡುತ್ತಿದ್ದರು. ಕೆಲವು ಸ್ಥಳದಲ್ಲಿ ಆ ಮನೆಯ ಜನರ ದುರಹಂಕಾರ ಬಹಿರಂಗವಾಗುತ್ತಿತ್ತು. ಕೆಲವೊಮ್ಮೆ ಅವರಿಗೆ ಭಿಕ್ಷೆ ದೊರಕುತ್ತಿತ್ತು, ಕೆಲವೊಮ್ಮೆ ದೊರಕುತ್ತಿರಲಿಲ್ಲ; ಆದರೆ ರಾಮದಾಸ ಸ್ವಾಮೀಜಿಯವರು ಯಾವಾಗಲೂ ಆನಂದದಿಂದ ಇರುತ್ತಿದ್ದರು.

ಒಂದು ದಿನ ಒಂದು ಹಳ್ಳಿಯಲ್ಲಿ ಅವರಿಗೆ ಭಿಕ್ಷೆಯಲ್ಲಿ ಏನೂ ಸಿಗಲಿಲ್ಲ. ಆದರೆ ಸಮರ್ಥರಿಗೆ ಸ್ವಲ್ಪವೂ ಕೋಪ ಬರಲಿಲ್ಲ. ಭಿಕ್ಷೆಯಲ್ಲಿ ಇಂದು ಏನು ದೊರಕದಿದ್ದರೂ ಸರಿ. ಪ್ರಭು ಶ್ರೀರಾಮನ ಇಚ್ಛೆಯಂತೆ ಆಗಲಿ. ಇದು ಸಹ ದೇವರ ಕೊಡುಗೆಯೇ ಇದೆ, ಇದರಲ್ಲಿ ನೊಂದುಕೊಳ್ಳುವಂತಹದು ಏನಿದೆ ! ಅದರಲ್ಲಿ ಕಷ್ಟಕರ ಏನಿದೆ ಎಂದು ಅವರು ರಾಮನಾಮ ಜಪಿಸುತ್ತ ಅಲ್ಲಿಂದ ಮುಂದಿನ ಗ್ರಾಮವನ್ನು ತಲುಪಿದರು.

ಅಲ್ಲಿ ಅವರು ಒಂದು ಬಹಳ ದೊಡ್ಡ ಮನೆಯ ಮುಂದೆ ಬಂದು ನಿಂತರು. ಆ ಮನೆಯಲ್ಲಿ ವಾಸಿಸುವ ಜನರೆಲ್ಲರೂ ಅಹಂಕಾರಿಗಳಾಗಿದ್ದರು. ಸಮರ್ಥರು ಭಿಕ್ಷೆಗಾಗಿ ಅಲ್ಲಿಗೆ ಹೋದರು. ‘ಓಂ ಭವತಿ ಬಿಕ್ಷಾಂ ದೇಹಿ’ ಎಂಬ ಧ್ವನಿಯನ್ನು ಕೇಳಿದ ಮಹಿಳೆಯೊಬ್ಬಳು ಉತ್ತಮ ಖಾದ್ಯವನ್ನು ತಂದು ನೀಡಿದಳು.

ಮಹಿಳೆ ಸೊಕ್ಕಿನವಳಾಗಿದ್ದಳು. ಸಮರ್ಥರಿಗೆ ಇದು ತಿಳಿದಿತ್ತು. ಸಮರ್ಥರು ಮನಸ್ಸಿನಲ್ಲಿಯೇ ನಗುತ್ತಾ, ‘ಶ್ರೀ ರಾಮಾ, ಈ ಮಹಿಳೆಗೆ ಸದ್ಬುದ್ಧಿ ನೀಡಿರಿ’ ಎಂದು ಹೇಳಿದರು. ನಂತರ ಆ ಭಿಕ್ಷೆಯನ್ನು ಸ್ವೀಕರಿಸಿ ನೇರವಾಗಿ ನದಿಯ ಕಡೆಗೆ ಹೋದರು.

ಮಕ್ಕಳೇ ಸಮರ್ಥರು ಭಿಕ್ಷೆಯಲ್ಲಿ ದೊರೆತ ಅನ್ನವನ್ನು ನದಿ ನೀರಿನಿಂದ ತೊಳೆಯುತ್ತಿದ್ದರು. ಅವರಿಗೆ ಸಿಹಿ, ಖಾರ, ಹುಳಿ, ಮಸಾಲೆಯುಕ್ತ ಪದಾರ್ಥಗಳ ಯಾವುದೇ ರುಚಿ ಅಗತ್ಯವಿರಲಿಲ್ಲ. ಭಿಕ್ಷೆಯಲ್ಲಿ ಪಡೆದ ಆಹಾರದ ಪೂರ್ಣ ರುಚಿ ಅದು ನದಿಯ ನೀರಿನಲ್ಲಿ ತೊಳೆದು ಹೋಗುವ ತನಕ, ಭಿಕ್ಷೆಯ ಚೀಲವನ್ನು ನದಿಯ ನೀರಿನಲ್ಲಿ ಮುಣುಗಿಸಿಡುತ್ತಿದ್ದರು, ಅನಂತರವೇ ಅದನ್ನು ತಿನ್ನುತ್ತಿದ್ದರು

ಒಂದು ದಿನ ಆ ಮಹಿಳೆ ಸಮರ್ಥರು ಇಷ್ಟು ದಿನಗಳಿಂದ ಇಲ್ಲಿಗೆ ಬರುತ್ತಿದ್ದಾರೆ, ನಾನು ಅವರಿಗೆ ಭಿಕ್ಷೆ ನೀಡುತ್ತಿದ್ದೇನೆ. ಈಗ ಅವರು ನನಗೆ ಏನಾದರೂ ಉಪದೇಶ ನೀಡಬೇಕು ಎಂದು ಅಂದುಕೊಂಡಳು. ಮಕ್ಕಳೇ, ಜನರು ದೇವರೊಂದಿಗೆ, ಸಂತರೊಂದಿಗೂ ಕೊಡುಕೊಳ್ಳುವ ಭಾಷೆಯಲ್ಲಿ ಮಾತನಾಡುತ್ತಾರೆ.

‘ಭಗವಂತಾ, ನೀನು ನನಗೆ ಇದನ್ನು ಕೊಡು, ನಾನು ನಿನಗೆ ಅದನ್ನು ಕೊಡುತ್ತೇನೆ’ ಎಂಬ ಲೆಕ್ಕಚಾರ ಮಾಡುತ್ತಾರೆ. ನಮ್ಮಿಂದ ಏನನ್ನಾದರೂ ಪಡೆಯಲೆಂದು ದೇವರು ಹಸಿದಿರುತ್ತಾರೆಯೇ ? ಇಡೀ ಜಗತ್ತನ್ನೇ ಸ್ವತಃ ಪೋಷಿಸುವ ದೇವರು, ನಮ್ಮ ಸಂಪತ್ತು ಮತ್ತು ಇತರ ವಸ್ತುಗಳನ್ನು ಪಡೆಯಲು ಬಯಸುತ್ತಾರೆಯೇ? ಆದರೆ ಅಹಂಕಾರಿಗಳು ‘ತಮ್ಮಿಂದಲೇ ಎಲ್ಲವೂ ನಡೆಯುತ್ತಿದೆ’ ಎಂದು ಭಾವಿಸುತ್ತಾರೆ. ಹಾ, ಆ ಮಹಿಳೆ ‘ಈ ತಪಸ್ವಿಗೆ ನಾನು ಪ್ರತಿದಿನ ಭಿಕ್ಷೆ ನೀಡುತ್ತೇನೆ’ ಭಾವಿಸಿದ್ದಳು, ‘ಆದ್ದರಿಂದ ಅವರು ನನಗೆ ಉಪದೇಶಿಸುವುದು ನನ್ನ ಹಕ್ಕು’ ಎಂದು ವಿಚಾರ ಮಾಡಿದಳು.

ಮರುದಿನ, ಭಿಕ್ಷೆ ಕೇಳಲು ಸಮರ್ಥರು ಮನೆಗೆ ತಲುಪಿದಾಗ, ಆ ಮಹಿಳೆ, ‘ನಾನು ನಿಮಗೆ ಪ್ರತಿದಿನ ಭಿಕ್ಷೆ ನೀಡುತ್ತೇನೆ, ಆದ್ದರಿಂದ ಇಂದು ನೀವು ನನಗೆ ಏನಾದರೂ ಉಪದೇಶ ನೀಡಬೇಕು’ ಎಂದು ಪಟ್ಟು ಹಿಡಿದಳು. ಆಗ ಸಮರ್ಥರು ನಕ್ಕರು, ‘ಸಮಯ ಬಂದಾಗ ಹೇಳುತ್ತೇನೆ’ ಎಂದರು.

ಇದನ್ನು ಕೇಳಿದ ಮಹಿಳೆಗೆ ಅವಮಾನ ಅನಿಸಿತು. ‘ನಾನು ಪ್ರತಿದಿನ ಸಮರ್ಥರಿಗೆ ಭಿಕ್ಷೆ ನೀಡುತ್ತೇನೆ ಮತ್ತು ನಾನು ಏನನ್ನಾದರೂ ಕೇಳುತ್ತಿದ್ದರೆ, ಸಮಯ ಬಂದಾಗ ಎಂದು ಹೇಳುತ್ತಾರೆ. ಇದರ ಅರ್ಥವೇನು? ನನಗೆ ಅಧಿಕಾರವಿದೆ. ನಾನು ಭಿಕ್ಷೆ ನೀಡುತ್ತಿದ್ದೇನೆ, ಅವರು ನನ್ನ ಕಾಲಿನ ಹತ್ತಿರ ಕುಳಿತು ಸುಮ್ಮನೆ ನನಗೆ ಉಪದೇಶಿಸಬೇಕು. ನಾನು ಅವರ ಕಾಲಿನ ಹತ್ತಿರ ಕುಳಿತುಕೊಳ್ಳುವುದಿಲ್ಲ! ಎಲ್ಲರೂ ಅವರನ್ನು ಸಂತರು ಎಂದು ಕರೆಯುತ್ತಾರೆ, ಆದರೆ ಅವರು ನನ್ನ ಕಾಲಿನ ಹತ್ತಿರ ಕುಳಿತು ನನಗೆ ಉಪದೇಶಿಸಬೇಕು’ ಎಂಬ ವಿಚಾರದಿಂದ ಹಠ ಹಿಡಿದಳು.

ಸಮರ್ಥರು ಮತ್ತೆ, ‘ಇಲ್ಲ ತಾಯಿ. ಸಮಯ ಬಂದಾಗ ನಾನು ಉಪದೇಶ ಕೊಡುತ್ತೇನೆ’ ಎಂದರು. ಮಹಿಳೆ ಮತ್ತೆ ಆಗ್ರಹ ಮಾಡಿದಾಗ ಅವರು, ‘ತಾಯಿ, ಈಗ ಮಧ್ಯಾಹ್ನವಾಗಿದೆ. ಇದು ನನ್ನ ಊಟದ ಸಮಯ. ನಾಳೆ ನಾನು ಖಂಡಿತವಾಗಿಯೂ ನಿಮಗೆ ಹೇಳಿಕೊಡುತ್ತೇನೆ’ ಎಂದು ಹೇಳಿದರು.

ಅದಕ್ಕೆ ಅವಳು ಒಪ್ಪಿದಳು. ‘ಆ ಸನ್ಯಾಸಿಯನ್ನು ನನ್ನ ಮಾತು ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಅವಳು ತುಂಬಾ ಸಂತೋಷಪಡುತ್ತ, ಮನೆಮಂದಿಗೆಲ್ಲ ಈ ವಿಷಯವನ್ನು ಹೇಳಿದಳು.

ಮರುದಿನ, ಮಹಿಳೆಯ ಮನೆಗೆ ಹೋಗುವ ಮೊದಲು ಸಮರ್ಥರು ತಮ್ಮ ಬಟ್ಟಲಿನಲ್ಲಿ ಮಣ್ಣು ಮತ್ತು ಸ್ವಲ್ಪ ಸಗಣಿ ತುಂಬಿದರು. ಅವರು ಆ ಬಟ್ಟಲನ್ನು ತೆಗೆದುಕೊಂಡು ಆ ದೊಡ್ಡ ಮನೆಯ ಅಂಗಳದಲ್ಲಿ ನಿಂತು, ‘ಜೈ ಜೈ ರಘುವೀರ ಸಮರ್ಥ ! ತಾಯಿ ಭಿಕ್ಷೆ ನೀಡಿ ! ಭವತಿ ಭಿಕ್ಷಾಂ ದೇಹಿ !’ ಎಂದು ಕೂಗಿದರು.

ಮಹಿಳೆ ಹೊರಗೆ ಬಂದಳು. ಇಂದು ಅವಳಿಗೆ ಉಪದೇಶ ಸಿಗುತ್ತದೆ, ಆದ್ದರಿಂದ ಅವಳು ತುಂಬಾ ಸಂತೋಷವಾಗಿದ್ದಳು. ಬಾದಾಮಿ, ಒಣದ್ರಾಕ್ಷಿ, ಕೇಶರ ಇತ್ಯಾದಿಗಳನ್ನು ಸೇರಿಸಿ ರುಚಿಕರವಾದ ಪಾಯಸ ತಯಾರಿಸಿದಳು. ಸಮರ್ಥ ರಾಮದಾಸ ಸ್ವಾಮೀಜಿ ತಮ್ಮ ಬಟ್ಟಲನ್ನು ಮುಂದಿಟ್ಟರು.

ಸನ್ಯಾಸಿಯ ಬಟ್ಟಲಿನಲ್ಲಿ ಮಣ್ಣು ಮತ್ತು ಸಗಣಿ ಇರುವುದನ್ನು ಮಹಿಳೆ ನೋಡಿದಳು. ಆ ಮಹಿಳೆ ಅವರಿಗೆ, “ಏನಯ್ಯಾ, ಏನಿದು! ಈ ಬಟ್ಟಲಿನಲ್ಲಿ ಕೆಸರು ಇದೆ, ನನ್ನ ಪಾಯಸ ವ್ಯರ್ಥವಾಗುತ್ತದೆ” ಎಂದು ರೇಗಿದಳು. ಸಮರ್ಥರು, ‘ಪರವಾಗಿಲ್ಲ ತಾಯಿ, ನೇವು ಪಾಯಸ ಸುರಿಯಿರಿ’ ಎಂದು ಹೇಳಿದರು.

ಹೀಗೆ ಇದು ಒಂದೆರಡು ಬಾರಿ ಅಲ್ಲ, ಹತ್ತು ಬಾರಿ ಸಂಭವಿಸಿತು. ಆಗ ಆ ಮಹಿಳೆಯು, “ನೀನು ನನಗೆ ಯಾಕೆ ಹೀಗೆ ಮಾಡುತ್ತಿದ್ದೀಯಾ?” ಎಂದು ಕೂಗಿ ಆ ಪಾಯಸದ ಪಾತ್ರೆಯನ್ನು ಬದಿಗಿಟ್ಟಳು. ಸಮರ್ಥರ ಕೈಯಿಂದ ಬಟ್ಟಲನ್ನು ಕಿತ್ತು, ‘ಈ ಹೊಲಸಿನಲ್ಲಿ ಪಾಯಸ ಹೇಗೆ ನೀಡುವುದು? ಮೊದಲು ಈ ಬಟ್ಟಲನ್ನು ತೊಳೆದು, ಅದನ್ನು ಸ್ವಚ್ಛಗೊಳಿಸಿ ತಂದುಕೊಡು’ ಎಂದಳು.

ಆಗ ಸಮರ್ಥರು ಬಟ್ಟಲನ್ನು ಸ್ವಚ್ಛಗೊಳಿಸಿ ಅದನ್ನು ಮಹಿಳೆಯ ಮುಂದೆ ತಂದಿಟ್ಟರು. ಅವಳು ಪಾಯಸವನ್ನು ನೀಡಲು ಹೊರಟಿದ್ದಳು, ಅಷ್ಟರಲ್ಲಿ ಅವರು ಬಟ್ಟಲನ್ನು ಹಿಂದಕ್ಕೆ ತೆಗೆದುಕೊಂಡರು. ಅವರು, ‘ನಿಮಗೆ ಧರ್ಮೋಪದೇಶ ಬೇಕು, ಅಲ್ಲವೇ’ ಎಂದರು. ಮಹಿಳೆ ತುಂಬಾ ಸಂತೋಷಗೊಂಡಳು.

ಸಮರ್ಥರು, ‘ನೋಡಿ ಈ ಬಟ್ಟಲಿನಲ್ಲಿ ತುಂಬಾ ಹೊಲಸು ಇತ್ತು; ಅದಕ್ಕಾಗಿಯೇ ನೀವು ಆ ಪಾಯಸವನ್ನು ನೀಡಲಿಲ್ಲ. ನಾನು ಆ ಬಟ್ಟಲನ್ನು ಸ್ವಚ್ಛಗೊಳಿಸಿ ತಂದಾಗ, ಅದರಲ್ಲಿ ನೀವು ಪಾಯಸ ಹಾಕಲು ಸಿದ್ಧರಾದಿರಿ. ಅದೇ ರೀತಿಯಲ್ಲಿ, ನಿಮ್ಮ ಮನಸ್ಸಿನಲ್ಲಿರುವ ಅಹಂಕಾರದ ‘ನಾನು’ ಎಂಬ ಹೊಲಸು ತುಂಬಿದೆ, ಅದನ್ನು ಹೊರಹಾಕುವ ತನಕ, ನಿಮ್ಮ ಮನಸ್ಸಿನಲ್ಲಿ ನಾನು ಉಪದೇಶದ ಪಾಯಸವನ್ನು ಹೇಗೆ ಹಾಕಲಿ?’

ಇದನ್ನು ಕೇಳಿದ ತಕ್ಷಣ ಮಹಿಳೆ ನಡುಗಿದಳು. ಅವಳಿಗೆ ನಿಂತ ಭೂಮಿಯೇ ಕುಸಿದಂತಾಯಿತು. ಕಣ್ಣುಗಳಿಂದ ಕಣ್ಣೀರು ಹರಿಯಲಾರಂಭಿಸಿತು. ಅವಳು ಸಮರ್ಥರ ಕಾಲಿಗೆ ಬಿದ್ದು ನಮಸ್ಕರಿಸಿದಳು.

“ಮಹಾರಾಜರೇ, ನನ್ನಿಂದ ತಪ್ಪಾಗಿದೆ!” ಎಂದು ಅವಳು ಹೇಳಿದಳು. ಅವಳ ದುರಹಂಕಾರ ಆ ಕಣ್ಣೀರಿನೊಂದಿಗೆ ಹರಿದು ಹೋಯಿತು. ಸಮರ್ಥರು, “ತಾಯಿ, ಮನಸ್ಸನ್ನು ಸ್ವಲ್ಪ ಶುದ್ಧೀಕರಿಸಿರಿ ! ಸ್ವಲ್ಪ ಆ ಅಹಂಕಾರವನ್ನು ತೆಗೆದುಹಾಕಿ. ನನ್ನ ಉಪದೇಶವನ್ನು ಮನಸ್ಸಿನಲ್ಲಿಡಿ. ನಿಮ್ಮ ಅಂತಃಕರಣದಲ್ಲಿ ಸ್ವಲ್ಪ ಜಾಗವನ್ನು ಮಾಡಿ. ಆಗ ನಾನು ಉಪದೇಶಿಸುತ್ತೇನೆ !” ಎಂದು ಹೇಳಿ ಹೊರಟು ಹೋದರು.

ಈ ರೀತಿ ಸಮರ್ಥ ರಾಮದಾಸರು ಆ ಮಹಿಳೆಯ ಅಹಂಕಾರದ ಮನಸ್ಸನ್ನು ಶುದ್ಧ ಮನಸ್ಸಾಗಿ ಪರಿವರ್ತಿಸಿ ಎಲ್ಲರಿಗೂ ತೋರಿಸಿದರು. ಮನಸ್ಸು ಸ್ವಚ್ಛವಾಗಿದ್ದರೆ ಎಲ್ಲವೂ ಪವಿತ್ರ ಗಂಗೆ ಎಂದು ಎಲ್ಲರಿಗೂ ತೋರಿಸಿಕೊಟ್ಟರು !

ಕೃಪೆ: ಹಿಂದೂ ಜಾಗೃತಿ (ಸಾಮಾಜಿಕ ಜಾಲತಾಣ)

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ನ್ಯೂಸ್ ಚಾನಲ್ ಚರ್ಚೆ ವೇಳೆ ಕಿರಿಕ್.. ಎಫ್‌ಐಆ‌ರ್

ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ (News channel) ಧರ್ಮಸ್ಥಳ ಪ್ರಕರಣ ಸಂಬಂಧಿಸಿ ನಡೆದಿದ್ದ ಚರ್ಚಾ ಕಾರ್ಯಕ್ರಮದ ವೇಳೆ ದಾಂಧಲೆ ನಡೆಸಿ, ಹಲ್ಲೆಗೆ ಯತ್ನಿಸಿದ್ದ ಆರೋಪದ ಮೇಲೆ ವಸಂತ್ ಗಿಳಿಯಾರ್, ಪುನೀತ್ ಕೆರೆಹಳ್ಳಿ ಹಾಗೂ ಕಿರಿಕ್ ಕೀರ್ತಿ ವಿರುದ್ಧ ಬೆಂಗಳೂರಿನ

[ccc_my_favorite_select_button post_id="119114"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!