ಗುಂಟೂರು: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್.ಆರ್.ಜಗನ್ ಮೋಹನ್ ರೆಡ್ಡಿ (Jagan Mohan Reddy) ಗುಂಟೂರಿನಲ್ಲಿ ನಡೆದ ರೋಡ್ ಶೋ ವೇಳೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು, ನೂಕಾಟದಲ್ಲಿ ಕೆಳಕ್ಕೆ ಬಿದ್ದ ವೃದ್ದ ಅಭಿಮಾನಿಯೊಬ್ಬರ ತಲೆಯ ಮೇಲೆಯೇ ಜಗನ್ ಅವರ ಐಶಾರಾಮಿ ಕಪ್ಪು ಕಾರಿನ ಮುಂಬದಿ ಚಕ್ರ ಹರಿದಿದೆ.
ಗಂಭೀರವಾಗಿ ಗಾಯಗೊಂಡ ಅಭಿಮಾನಿ ಸಾವನ್ನಪ್ಪಿದ್ದಾರೆ.
ಜಗನ್ ಅವರು ಪಲ್ನಾಡು ಜಿಲ್ಲೆಗೆ ಭೇಟಿ ನೀಡಿದ್ದಾಗ ಗುಂಟೂರು ಜಿಲ್ಲೆಯ ಎಟುಕುರು ಬಳಿಯ ಲಾಲ್ಕುರಂ ಹೆದ್ದಾರಿಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ರ್ಯಾಲಿಯಲ್ಲಿ ಅವಘಡವಾಗಿದೆ.
ಜಗನ್ ಪ್ರಯಾಣಿಸುತ್ತಿದ್ದ ಕಪ್ಪು ಬಣ್ಣದ ಕಾರು ಕೆಳಕ್ಕೆ ಬಿದ್ದ ಅಭಿಮಾನಿಯ ತಲೆಯ ಮೇಲೆಯೇ ಹರಿದಿದ್ದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡರು. ಅವರನ್ನು ಸ್ಥಳೀಯರು ಸಮೀಪದ ಗುಂಟೂರು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಜಗನ್ ಅಭಿಮಾನ ಚಿಕಿತ್ಸೆಗೆ ಸ್ಪಂದಿಸದೇ ಆಸುನೀಗಿದರು. ಸಾವನ್ನಪ್ಪಿದ ವೃದ್ಧನನ್ನು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಚೀಲಿ ಸಿಂಘಯ್ಯ ಎಂದು ಗುರುತಿಸಲಾಗಿದೆ.
ಸಿಂಘಯ್ಯ ಕಾರಿನ ಚಕ್ರಕ್ಕೆ ಸಿಲುಕಿದಾಗ ಜನರು ಕೂಗಿದ್ದರಿಂದ ಚಾಲಕ ಕಾರನ್ನು ನಿಲ್ಲಿಸಿದ್ದಾರೆ. ಆಗೆ ಎಡಬದಿ ಬಾಗಿಲು ತೆರೆದು ಹೊರಬಂದ ಜಗನ್ ರೆಡ್ಡಿ, ಅವಘಡದ ಅರಿವೇ ಇಲ್ಲದೇ, ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು.
ಅಭಿಮಾನಿಗಳು ಕೂಡ ಕಾರಿನ ಚಕ್ರದಡಿ ವೃದ್ಧರೊಬ್ಬರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರೂ ಲೆಕ್ಕಿಸದೇ ಜಗನ್ ಅವರನ್ನು ಮುಟ್ಟಲು, ಹತ್ತಿರದಿಂದ ನೋಡಲು ನುಗ್ಗಿ ಬರುತ್ತಿದ್ದರು.
⚠️Warning Disturbing content ⚠️
⚠️Warning ⚠️
— Incognito (@Incognito_qfs) June 22, 2025
Disturbing content.
Former Andhra CM Jagan Mohan Reddy’s car crushed & dragged 70-year-old Singiah. Singiah was declared dead at the hospital later.
Singiah was a big supporter of Jagan Reddy. But Jagan didn't care about him and he continued the rally.
These… pic.twitter.com/Yr6Ed13nAW
ಈ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.