ಮದನಪಲ್ಲಿ: ತಿರುಪತಿ ತಿಮ್ಮಪ್ಪ ದರುಶನ ಪಡೆದು ಹಿಂತಿರುಗುತ್ತಿದ್ದ ಭಕ್ತರಿದ್ದ ಟಿಟಿ ವಾಹನ ಭೀಕರ ಅಪಘಾತಕ್ಕೆ (Accident) ಒಳಗಾಗಿ, ಮೂವರು ಸ್ಥಳದಲ್ಲಿಯೇ ಸಾವನಪ್ಪಿರುವ ಆಘಾತಕಾರಿ ಘಟನೆ ಆಂದ್ರಪ್ರದೇಶದ ಮದನಪಲ್ಲಿಯ ಕುರುಬಲಕೋಟ ಮಂಡಲಂ ಚೆನ್ನಾಮರ್ರಿ ಮಿಟ್ಟ ಬಳಿ ಸಂಭವಿಸಿದೆ.
ಭೀಕರ ಅಪಘಾತದಲ್ಲಿ ಕರ್ನಾಟಕದ ಮೂವರು ಭಕ್ತರು ಸ್ಥಳದಲ್ಲೇ ಸಾವನಪ್ಪಿದ್ದು, 9 ಜನರಿಗೆ ಗಂಭೀರ ಗಾಯಗೊಂಡಿದ್ದಾರೆ.
ಮೃತ ದುರ್ದೈವಿಗಳನ್ನು ಬಾಗೇಪಲ್ಲಿಯ ಮೇಘರ್ಷ್ (17 ವರ್ಷ), ಚರಣ್(17 ವರ್ಷ) ಹಾಗೂ ಶ್ರಾವಣಿ (28 ವರ್ಷ)ಮೃತ
ಅಪರಿಚಿತ ಬೃಹತ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಘಟನೆ ಸಂಭವಿಸಿದೆ.
ಬಾಗೇಪಲ್ಲಿ ಯಿಂದ ತಿರುಪತಿ ಗೆ ತೆರಳಿ ಹಿಂತಿರುಗಿ ಬರುವಾಗ ಮಾರ್ಗ ಮದ್ಯದಲ್ಲಿನ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಚೆನ್ನಾಮರ್ರಿ ಮಿಟ್ಟ ಬಳಿ ಈ ದುರ್ಘಟನೆ ವರದಿಯಾಗಿದೆ.